Just In
Don't Miss
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Movies "ನನಗೂ ಆರೋಗ್ಯ ತಪ್ಪಿತಲ್ಲ.. ನನ್ನ ಮಗ ಅನಾಥ ಆಗಿಬಿಟ್ಟನಲ್ಲ ಅನಿಸಿತ್ತು" : ರಾಘಣ್ಣ
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಡುಗೆ ಮನೆಯ ವಿಭಿನ್ನ ಕಲೆಗಾರಿಕೆ
*
ಅಕ್ಕಿ
ಅಥವಾ
ಬೇಳೆಯ
ಡಬ್ಬಿಗೆ
ಕೈಹಾಕುವ
ಮೊದಲು
ಕೈ
ಒಣಗಿರಲಿ.
ಹಸಿಕೈಯಿಂದ
ಹಿಡಿದರೆ
ಹುಳ
ಹಿಡಿಯುವುದು
ಖಂಡಿತ.
*
ಅಕ್ಕಿಯಲ್ಲಿ
ನುಸಿಯಾಗದಿರಲು
ಡಬ್ಬಿಯಲ್ಲಿ
ಒಂದು
ಈರುಳ್ಳಿಯನ್ನು
ಹೂತಿಡಿ.
ಹುಳ
ಆಗುವುದಿಲ್ಲ.
*
ಅನ್ನ
ಮಾಡುವ
ಮೊದಲು
ಎರಡನೇ
ಬಾರಿ
ತೊಳೆದ
ಅಕ್ಕಿಯ
ನೀರನ್ನು
ಹಾಗೇ
ಚೆಲ್ಲದೆ,
ಸಕ್ಕರೆ,
ನಿಂಬೆರಸ
ಸೇರಿಸಿ
ಪಾನಕ
ಮಾಡಿ
ಕುಡಿಯಬಹುದು.
ದೇಹಕ್ಕೆ
ಅದು
ತಂಪು
ತಂಪು.
*
ತುಂಡರಿಸಿ
ತಿನ್ನದೇ
ಪ್ರಿಜ್ಜಲ್ಲಿಟ್ಟ
ಸೇಬು
ಕಂದು
ಬಣ್ಣಕ್ಕೆ
ತಿರುಗದಿರಲು
ಉಪ್ಪು
ಲೇಪಿಸಿ.
*
ಡಬ್ಬಿಯಲ್ಲಿ
ಶೇಕರಿಸಿಟ್ಟ
ಸಕ್ಕರೆಗೆ
ಇರುವೆ
ಬಾರದಿರಲು
ಒಂದೆರಡು
ಲವಂಗಗಳನ್ನು
ಸೇರಿಸಿಡಿ.
*
ಈರುಳ್ಳಿ
ಹೆಚ್ಚುವಾಗ
ಕಣ್ಣೀರು
ಬರದಿರಲು
ಅರ್ಧ
ಹೆಚ್ಚಿ
ನೀರಲ್ಲಿ
ಕೆಲಹೊತ್ತು
ನೆನೆ
ಇಡಿ.
*
ಹಾಲಿನ
ಪಾತ್ರೆ
ತಟಪಟ
ಸದ್ದು
ಮಾಡದಿರಲು
ಪಾತ್ರೆಗೆ
ಹಾಲು
ಹಾಕುವ
ಮೊದಲು
ಸ್ವಲ್ಪ
ನೀರು
ಹಾಕಿ.
*
ಹಾಲು
ಕಾಯಿಸದೆ
ಬಹಳ
ಹೊತ್ತು
ಇಟ್ಟಿದ್ದರೆ,
ನಂತರ
ಕಾಸುವಾಗ
ಚಿಟಿಕೆ
ತಿನ್ನುವ
ಸೋಡಾ
ಸೇರಿಸಿ
ಕಾಯಿಸಿ,
ಒಡೆಯುವುದಿಲ್ಲ.
*
ಆಲೂಗಡ್ಡೆ
ಬೇಗನೆ
ಬೇಯಬೇಕಿದ್ದರೆ
ಸ್ವಲ್ಪ
ಹೊತ್ತು
ಉಪ್ಪಿನ
ನೀರಲ್ಲಿ
ನೆನೆಸಿಟ್ಟು
ನಂತರ
ಬೇಯಿಸಿ.
*
ಮೊಸರು
ಹುಳಿಹುಳಿಯಾಗಿದ್ದರೆ
ಅದಕ್ಕೆ
ಸ್ವಲ್ಪ
ನೀರು
ಸೇರಿಸಿ
ಎರಡು
ತಾಸು
ಬಿಡ್ಡು
ನೀರನ್ನು
ಬಸಿದರೆ
ಮೊಸರು
ಮತ್ತೆ
ಸಿಹಿಯಾಗಿರುತ್ತದೆ.
*
ಗೋಬಿ
ಮಂಚೂರಿ
ಮಾಡುವ
ಮೊದಲು
ನೀರಿನಲ್ಲಿ
ಚಿಟಿಕೆ
ಉಪ್ಪು
ಮತ್ತು
ಅರಿಷಿಣ
ಸೇರಿಸಿ
ಹೂಕೋಸು
ತುಣುಕುಗಳನ್ನು
ನೀರಲ್ಲಿ
ಮುಳುಗಿಸಿ.
ಹುಳಗಳು
ಹೂಕೋಸಿಂದ
ಹೊರಬರುತ್ತವೆ.
*
ಉಪ್ಪಿಟ್ಟು,
ಅವಲಕ್ಕಿಯಂಥ
ತಿಂಡಿಗೆ
ಉಪ್ಪು
ಜಾಸ್ತಿಯಾದರೆ
ಇನ್ನಷ್ಟು
ನಿಂಬೆರಸ
ಹಿಂಡಿದರೆ
ಉಪ್ಪಿನಂಶ
ಕಡಿಮೆಯಾಗುತ್ತದೆ.