Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 2 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 2 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 4 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಡುಗೆಮನೆಯಲ್ಲಿ ಗಮನಿಸಬೇಕಾದ ಎಚ್ಚರಿಕೆಗಳು
ಚೊಕ್ಕ ಅಡುಗೆಮನೆಗೆ ಸಿಗುವ ಮೆಚ್ಚುಗೆ ಗೃಹಿಣಿಗೆ ಸಿಗುವ ಅತ್ಯುತ್ತಮ ಸರ್ಟಿಫಿಕೇಟುಗಳಲ್ಲೊಂದು. ಅಡುಗೆಮನೆಯನ್ನು ಒಪ್ಪಓರಣವಾಗಿ ಇಟ್ಟುಕೊಳ್ಳುವುದು ಮಾತ್ರವಲ್ಲ, ಯಾವುದೇ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಕೂಡ ಗೃಹಿಣಿಯ ಅಥವಾ ಗಂಡನ ಪ್ರಾಥಮಿಕ ಕರ್ತವ್ಯಗಳಲ್ಲೊಂದು. ನಮಗೇ ಗೊತ್ತಿಲ್ಲದಂತೆ ಸಂಭವಿಸುವ ಅನೇಕ ಸಣ್ಣಪುಟ್ಟ ಅವಘಡಗಳನ್ನು ತಪ್ಪಿಸುವುದು ಈ ಎಚ್ಚರಿಕೆಯಿಂದ ಸಾಧ್ಯ.
ಆ ಎಚ್ಚರಿಕೆಗಳು ಯಾವುವು?
* ಹಸಿ ಕೈಯಿಂದಲೇ ಅನೇಕ ವಸ್ತುಗಳನ್ನು ಮುಟ್ಟುವ ಅಭ್ಯಾಸ ಕೆಲವರಿಗಿರುತ್ತದೆ. ಕೈ ನೀಟಾಗಿ ಒರೆಸಿಕೊಂಡು ಮುಂದಿನ ಕೆಲಸಕ್ಕೆ ಅಣಿಯಾದರೆ, ಉಪ್ಪಿನಕಾಯಿಯಂಥ ವಸ್ತು ಕೆಡುವುದು, ವಿದ್ಯುತ್ ಶಾಕ್ ಹೊಡೆಯದಿರುವುದನ್ನು ತಪ್ಪಿಸಬಹುದು. ಅದಕ್ಕೊಂದು ಒಣ ಬಟ್ಟೆ ಇಟ್ಟುಕೊಳ್ಳಿ. ಸೀರಿಗೆ ಕೈಯೊರೆಸುವುದು ಕೆಟ್ಟಚಾಳಿ.
* ಅಡುಗೆ ಮಾಡಿದ ನಂತರ ಪಾತ್ರೆ ಬಿಸಿಯಾಗಿರುವಾಗ ಮಕ್ಕಳ ಕೈಗೆ ಸಿಗದಂತೆ ಎತ್ತಿಡಿ. ತಿಳಿಯದೇ ಮುಟ್ಟಿದಾಗ ಪುಟ್ಟ ಕೈಗಳು ಸುಟ್ಟುಹೋದಾವು ಎಚ್ಚರ.
* ಹಾಗೆಯೇ, ಚಾಕು, ಫೋರ್ಕ್, ಕತ್ತರಿ ಮುಂತಾದ ಚೂಪಾದ ಸಾಮಗ್ರಿಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಿ. ಅದರಲ್ಲೂ ಪುಟಾಣಿಗಳ ಲಕ್ಷ್ಯ ಇಂಥ ವಸ್ತುಗಳೆಗೇ ಇರುತ್ತದೆ.
* ತರಕಾರಿ ಸಿಪ್ಪೆ ತೆಗೆಯುವ ಸಾಧನವನ್ನು ಆಗಾಗ ಬದಲಿಸುತ್ತಿರಿ. ಅತ್ಯುತ್ತಮ ಸ್ಟೀಲಿನದು ಆಗಿರದಿದ್ದರೆ ಜಂಗು ಹಿಡಿದಿರುತ್ತದೆ. ಇಂಥವುಗಳನ್ನು ಬಳಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
* ದೋಸೆ ಮಾಡುವ ನಾನ್ ಸ್ಟಿಕ್ ತವಾ, ಚಪಾತಿ ಮಾಡುವ ಹೆಂಚು ಬಹಳ ದಿನಗಳಿಂದ ಉಪಯೋಗಿಸುತ್ತಿದ್ದರೆ ಬದಲಿಸುವುದು ಒಳಿತು. ಅದರಲ್ಲೂ ಕಾದಾಗ ಅಂಚಿನಲ್ಲಿ ಗುಳ್ಳೆಗಳು ಬರುತ್ತಿದ್ದರೆ ಅದನ್ನು ಬದಲಿಸಿ ಹೊಸದನ್ನು ಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯ.
* ನೆಲದ ಮೇಲೆ ಹಾಲು, ಎಣ್ಣೆಯಂಥ ಪದಾರ್ಥಗಳು ಚೆಲ್ಲಿದಾಗ ಎಲ್ಲ ಕೆಲಸ ಬಿಟ್ಟು ಜಿಡ್ಡು ಹೋಗುವ ಹಾಗೆ ನೆಲ ಒರೆಸಿರಿ. ಹಿರಿಜೀವಗಳು ಅಥವಾ ಪುಟ್ಟ ಮಕ್ಕಳು ಓಡಾಡುವಾಗ ಜಾರಿ ಬಿದ್ದಾರು. ಇಂಥ ಪದಾರ್ಥಗಳು ಚೆಲ್ಲಿದಾಗ ಮೊದಲೇ ಎಚ್ಚರಿಸುವುದು ಜಾಣತನ.
* ಅಡುಗೆ ಮಾಡುವಾಗ ಫೋನ್ ಕಾಲ್ ತೆಗೆದುಕೊಳ್ಳುವುದು ಅಥವಾ ಟಿವಿಯನ್ನು ನೋಡುವುದು ಜಾಣ ಗೃಹಿಣಿಯ ಲಕ್ಷಣವಲ್ಲ. ಮೈಮರೆತಾಗ ಏನಾದರೂ ಸಂಭವಿಸಿದರೆ ಅದಕ್ಕೆ ಕಾರಣ ನೀವೇ ಆಗುತ್ತೀರಿ.
* ಎಲ್ಲಕ್ಕಿಂತ ಮಹತ್ವದ್ದೆಂದರೆ, ರಾತ್ರಿ ಮಲಗುವಾಗ ಅಥವಾ ಮನೆಯಿಂದ ಹೊರಗೆ ಹೋಗುವಾಗ ಗ್ಯಾಸ್ ನಾಬ್ ಅನ್ನು ಆಫ್ ಮಾಡಿ ಹೋಗಿರಿ.