Just In
Don't Miss
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುಗಾದಿಗಾಗಿ ನೀರೂರಿಸುವ 10 ಸಿಹಿ ಖಾದ್ಯಗಳು!
ಯುಗಾದಿ ವರ್ಷದ ಪ್ರಾರಂಭ ಸಂಕೇತ. ಕರ್ನಾಟಕ ಹಾಗೂ ಆಂಧ್ರದ ಜನತೆಗೆ ಯುಗಾದಿ ತುಂಬಾ ವಿಶೇಷವಾದ ಹಬ್ಬವಾಗಿದೆ. ಹೊಸ ಯುಗದ ಪ್ರಾರಂಭಕ್ಕಾಗಿ ಹೊಸ ಕಾರ್ಯಗಳನ್ನು ಮಾಡುತ್ತೇವೆ ಈ ಸಮಯದಲ್ಲಿ ಇದನ್ನು ಸಿಹಿಯಿಂದ ಆಚರಿಸುವುದು ವಾಡಿಕೆ. ಆದ್ದರಿಂದಲೇ ಯುಗಾದಿಯ ಮೆನು ಪಟ್ಟಿಯಿಂದ ಸಿಹಿಯನ್ನು ನಮಗೆ ಕೈಬಿಡಲಾಗುವುದಿಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿಗಾಗಿ ರುಚಿಯಾದ ಚನ್ನಾ ಉಸಾಲ್ ರೆಸಿಪಿ
ಈ ಯುಗಾದಿಗಾಗಿ ವಿಭಿನ್ನವಾಗಿ ಹಬ್ಬವನ್ನು ಆಚರಿಸಲು ಬೋಲ್ಡ್ ಸ್ಕೈ 10 ವಿಧದ ಸಿಹಿಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದೆ. ಆಂಧ್ರ ಹಾಗೂ ಕರ್ನಾಟಕದ ಎರಡೂ ರಾಜ್ಯಗಳ ವಿಶೇಷ ಸಿಹಿಯನ್ನು ಈ ಯುಗಾದಿಗಾಗಿ ನಾವು ತಂದಿದ್ದು ಪ್ರತಿಯೊಂದರ ಸಿಹಿಯೂ ವಿಭಿನ್ನ ಮತ್ತು ಸ್ವಾದಪೂರ್ಣವಾಗಿದೆ.
ವಿವಿಧ ಬಗೆಯ ಪಾಯಸ, ಕೀರು, ನೀರೂರಿಸುವ ಮೈಸೂರು ಪಾಕು, ಒಬ್ಬಟ್ಟು ಮುಂತಾದ ಸಿಹಿಗಳು ನಿಮ್ಮ ನಾಲಗೆಯನ್ನು ತಣಿಸಲಿದೆ. ಹಾಗಿದ್ದರೆ ಇನ್ನೇಕೆ ತಡ? ಈ ಪಟ್ಟಿ ಮಾಡಿರುವ 10 ಸಿಹಿ ತಿಂಡಿಗಳನ್ನು ಈ ಯಗಾದಿಗಾಗಿ ವಿಶೇಷವಾಗಿ ತಯಾರಿಸಿ. ಮತ್ತು ವರ್ಷದ ಪ್ರಾರಂಭವನ್ನು ಸಿಹಿಯೊಂದಿಗೆ ಆರಂಭಿಸಿ!
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾವ್! ಮಜ್ಜಿಗೆ ಹುಳಿ: ಯುಗಾದಿ ಸ್ಪೆಶಲ್
ತೆಂಗಿನಕಾಯಿ ಹೂರಣ ಹೋಳಿಗೆ:
ತೆಂಗಿನ ತುರಿಯೊಂದಿಗೆ ಬೆಲ್ಲವನ್ನು ಕರಗಿಸಿ ಮಿಶ್ರ ಮಾಡಿ ಸ್ಟಫ್ಫಿಂಗ್ ರೀತಿಯಲ್ಲಿ ಈ ಹೋಳಿಗೆಯನ್ನು ತಯಾರಿಸುತ್ತಾರೆ.ಈ ತೆಂಗಿನ ಕಾಯಿಯ ಹೂರಣ ಹೋಳಿಗೆಯು ನಿಮ್ಮ ಯುಗಾದಿ ಹಬ್ಬವನ್ನು ನೆನಪಿನಲ್ಲಿರುವಂತೆ ಮಾಡುವುದು ಖಂಡಿತ.
ಹೆಸರು ಬೇಳೆ ಪಾಯಸ:
ಯುಗಾದಿಗಾಗಿ ಸಿದ್ಧಪಡಿಸಲೇಬೇಕಾದ ಡಿಶ್ ಆಗಿದೆ ಹೆಸರು ಬೇಳೆ ಪಾಯಸ. ಹೆಸರು ಬೇಳೆ ಹಾಗೂ ಖರ್ಜೂರದೊಂದಿಗೆ ಇದನ್ನು ತಯಾರಿಸಬಹುದು.
ಮೈಸೂರ್ ಪಾಕ್:
ಶುದ್ಧವಾದ ತಪ್ಪು ಹಾಗೂ ಕಡಲೆಹಿಟ್ಟಿನ ಸಮಪಾಕ ಮೈಸೂರ್ ಪಾಕ್ನ ರುಚಿಯನ್ನು ನಿಮ್ಮ ಬಾಯಲ್ಲಿ ಉಳಿಯುವಂತೆ ಮಾಡುತ್ತದೆ.
ಒಬ್ಬಟ್ಟು:
ಒಬ್ಬಟ್ಟು ಹೆಸರಾಂತ ಯುಗಾದಿ ಸಿಹಿತಿಂಡಿಯಾಗಿದೆ. ಸರಳವಾಗಿ ತಯಾರಿಸಬಹುದಾದ ಈ ಸಿಹಿತಿಂಡಿಯಲ್ಲಿ ಬೆಲ್ಲ ಅತಿ ಮುಖ್ಯ. ಕ್ಯಾಲೋರಿ ರಹಿತ ಪದಾರ್ಥವಾದ ಬೆಲ್ಲ ನಿಮ್ಮ ತೂಕ ಏರಿಕೆ ಚಿಂತೆಯನ್ನು ದೂರಮಾಡುತ್ತದೆ.
ಅವಲಕ್ಕಿ ಪಾಯಸ:
ಈ ಮುಖ್ಯವಾದ ದಿನದಂದು ಪಾಯಸವನ್ನು ಸಿಹಿಯಾಗಿ ತಯಾರಿಸಲೇಬೇಕು. ಅಕ್ಕಿ, ಸೇಮಿಗೆ ಅಥವಾ ಅವಲಕ್ಕಿಯಿಂದ ಕೂಡ ಪಾಯಸವನ್ನು ತಯಾರಿಸಬಹುದು.
ಬೂರೇಲು:
ಯುಗಾದಿಗಾಗಿ ತಯಾರಿಸುವ ಸಿಹಿಖಾದ್ಯವಾಗಿದೆ ಬೂರೇಲು. ಕಡಲೆ ಹಿಟ್ಟು, ಬೆಲ್ಲ ಅಥವಾ ಸಕ್ಕರೆಯಿಂದ ತೆಂಗಿನ ತುರಿ ಬೆರೆಸಿ ಇದನ್ನು ಸಿದ್ಧಪಡಿಸುತ್ತಾರೆ.
ಸೇಮಿಗೆ ಪಾಯಸ:
ಪಾಯಸ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ ಮತ್ತು ಹಾಲಿನಿಂದ ತಯಾರುಮಾಡಲಾದ ಸಿಹಿತಿಂಡಿಯಾಗಿದೆ. ಸೇಮಿಗೆ ಪಾಯಸವನ್ನು ಕೂಡ ಯುಗಾದಿಗೆ ವಿಶೇಷವಾಗಿ ತಯಾರಿಸುತ್ತಾರೆ.
ಅರಿಸೇಲು:
ಆಂಧ್ರ ಹಾಗೂ ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕಾಗಿ ತಯಾರುಮಾಡಲಾಗುವ ಸಿಹಿ ಖಾದ್ಯವಾಗಿದೆ ಅರಿಸೇಲು. ಕಜ್ಜಾಯ, ಅತಿರಸಂ ಮೊದಲಾದ ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಅಕ್ಕಿ ಹಿಟ್ಟು ಮತ್ತು ಬೆಲ್ಲ ಈ ಖಾದ್ಯ ತಯಾರಿಗೆ ಅತ್ಯವಶ್ಯಕ ಸಾಮಾಗ್ರಿಗಳು.
ಪೆಸರಪ್ಪು ಪಾಯಸ:
ಇದು ಮೂಲತಃ ದಕ್ಷಿಣ ಭಾರತದ ಸಿಹಿಯಾಗಿದ್ದು ಪಾಯಸ ಅಥವಾ ಖೀರ್ನಿಂದ ಚಿರಪರಿಚಿತ. ಇದನ್ನು ಹೆಸರುಬೇಳೆಯಿಂದ ತಯಾರಿಸುತ್ತಾರೆ. ಆದ್ದರಿಂದ ಹಳದಿ ಬಣ್ಣವನ್ನು ಈ ಪಾಯಸ ಹೊಂದಿದೆ.
ಡ್ರೈ ಫ್ರುಟ್ಸ್ ಕೇಸರಿ:
ರವೆ, ಅಕ್ಕಿ ಮತ್ತು ಕೇಸರಿಯಿಂದ ತಯಾರು ಮಾಡಲಾಗುವ ವಿಶೇಷ ಸಿಹಿಯಾಗಿದೆ ಡ್ರೈ ಫ್ರುಟ್ಸ್ ಕೇಸರಿ. ಕೇಸರಿ ಬಾತ್ ಎಂಬ ಉಪನಾಮವೂ ಈ ಖಾದ್ಯಕ್ಕಿದೆ.