Just In
Don't Miss
- Movies Puttakkana Makkalu: ಮುರಳಿ ಮೇಲಿನ ಪ್ರೀತಿ ಒಪ್ಪಿಕೊಂಡ ಸಹನಾ; ಇನ್ನಾದ್ರು ತಪ್ಪಿನ ಅರಿವಾಗುತ್ತಾ?
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲಸಿನ ಹಣ್ಣಿನ ಸಿರಾ ಅಥವಾ ಕೇಸರಿ ಭಾತ್
*
ವಾಣಿ,
ಬೆಂಗಳೂರು
ಬೇಕಾಗುವ
ಪದಾರ್ಥಗಳು
:
ರವೆ
1
ಲೋಟ
|
ತುಪ್ಪ
1
ಲೋಟ
|
ಸಕ್ಕರೆ
ಒಂದೂವರೆ
ಲೋಟ
|
ಹಲಸಿನ
ಹಣ್ಣು
ಐದಾರು
|
ಗೋಡಂಬಿ,
ಒಣದ್ರಾಕ್ಷಿ,
ಏಲಕ್ಕಿ
ಪುಡಿ
|
ಕೇಸರಿ
ಬಣ್ಣ
(ಬೇಕಿದ್ದರೆ).
ತಯಾರಿಸುವ ವಿಧಾನ :
ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ರವೆ ಘಮ್ಮನೆ ವಾಸನೆ ಮತ್ತು ತುಸು ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇನ್ನೊಂದು ಪುಟ್ಟ ಬಾಣಲೆಯಲ್ಲಿ ಕಾಲು ಚಮಚ ತುಪ್ಪದಲ್ಲಿ ಗೋಡಂಬಿ, ಒಣದ್ರಾಕ್ಷಿ ಹುರಿದಿಟ್ಟುಕೊಳ್ಳಿ.
ಇದಿಷ್ಟಾದ ನಂತರ ಹಲಸಿನ ಹಣ್ಣನ್ನು (ಲೋಳೆಲೋಳೆ ಇರದ ಹಣ್ಣು) ಮಿಕ್ಸಿಯಲ್ಲಿ ಹಾಕಿ ಸ್ವಲ್ಪೇ ಸ್ವಲ್ಪ ರುಬ್ಬಿಕೊಳ್ಳಬಹುದು ಅಥವಾ ಸಣ್ಣಸಣ್ಣ ಹೋಳಾಗಿ ತುಂಡರಿಸಿಟ್ಟುಕೊಳ್ಳಬಹುದು.
ಒಂದು ಪಾತ್ರೆಯಲ್ಲಿ ರವೆಯ ಎರಡರಷ್ಟು ಅಥವಾ ಎರಡೂವರೆಯಷ್ಟು ನೀರು ಮತ್ತು ಹಾಲು ಮಿಶ್ರಣವನ್ನು ಸ್ಟೌ ಮೇಲೆ ಕುದಿಯಲು ಇಟ್ಟು, ಕುದಿ ಬಂದ ನಂತರ ಹುರಿದಿಟ್ಟುಕೊಂಡ ಗೋಡಂಬಿ, ಒಣದ್ರಾಕ್ಷಿ, ರವೆ ಮತ್ತು ರುಬ್ಬಿಕೊಂಡ ಹಲಸಿನ ಹಣ್ಣನ್ನು ಹಾಕಿ ಕೈಯಾಡಿಸುತ್ತಿರಬೇಕು. ರವೆ ಗಂಟಾಗದಂತೆ ಹೆಚ್ಚಿನ ಎಚ್ಚರವಹಿಸಿ.
ಇದು ಅರ್ಧ ಬೆಂದನಂತರ ಸಕ್ಕರೆಯನ್ನು ಹಾಕಿ ಸಣ್ಣ ಉರಿಯಲ್ಲಿ ಮತ್ತೆ ಕುದಿಯಲು ಬಿಡಿ. ಚೆನ್ನಾಗಿ ಬೆಂದುಬಂದ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಎಲ್ಲ ಹೊಂದಿಕೊಳ್ಳುವಂತೆ ಕೈಯಾಡಿಸಿ. ಕೇಸರಿ ಬಣ್ಣ ಬೇಕಿದ್ದರೆ ಚಿಟಿಕೆಯಷ್ಟು ಕೇಸರಿ ಬಣ್ಣ ಬೆರೆಸಿ. ಬಿಸಿಬಿಸಿಯಾಗಿರುವಾಗಲೇ ಸರ್ವ್ ಮಾಡಿ. ಜೊತೆಗೆ ನೆಚ್ಚಿನ ಬಟಾಣಿಕಾಳಿನ ಉಪ್ಪಿಟ್ಟು ಅಥವಾ ಬಿಸಿಬಿಸಿ ಕಾಂದಾಬಜಿ ಇದ್ದರೆ ಹಲಸಿನ ಹಣ್ಣಿನ ಸಿರಾದ ರುಚಿ ಇನ್ನಷ್ಟು ಹೆಚ್ಚುತ್ತದೆ.