Just In
- 48 min ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 57 min ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ
ಹಲಸಿನಿಂದ ಬಗೆಬಗೆ ತಿನಿಸು ಮಾಡಿದರೂ, ಥಟ್ಟನೆ ನೆನಪಾಗುವುದು ಪಾಯಸ. ಮುಂಚೆಲ್ಲಾ ಮಲೆನಾಡಿನಲ್ಲಿ ಎಲ್ಲಾ ಶುಭ ಸಮಾರಂಭಕ್ಕೂ ಎಲೆ ಮೊದಲಿಗೆ ಖಾಯಂ ಆಗಿರುತ್ತಿದ್ದ ಹಲಸಿನ ಪಾಯಸದ ಸ್ಥಾನವನ್ನು ಕ್ರಮೇಣ ಗೇರುಹಣ್ಣು, ಗೋಡಂಬಿ, ಇತರೆ ಹಣ್ಣುಗಳ ಮಿಶ್ರಣ ಆಕ್ರಮಿಸಿದೆ. ಇರಲಿ, ನಾವು ಹಳೆಯದನ್ನು ಮರೆಯುವಂತಿಲ್ಲ. ಹಲಸಿನ ರುಚಿ ನೋಡದೆ ಬಿಡುವಂತಿಲ್ಲ. ಒಪ್ಪಿಸಿಕೊಳ್ಳಿ
ತಯಾರಿಗೆ ಈ ಪದಾರ್ಥಗಳು ಬೇಕು :
ಹಲಸಿನ
ಹಣ್ಣಿನ
ತೊಳೆಗಳು-20
ಅಥವಾ
ಅಧಿಕ
ಮಾಗಿದ
ಹಣ್ಣು
ಇರಲಿ.
ತುಪ್ಪ-ಒಂದೂವರೆ
ಕಪ್
ಬೆಲ್ಲದ
ತುರಿ-3/4
ಕಪ್,
ತೆಂಗಿನಕಾಯಿ
ತುರಿ-1/2
ಕಪ್,
ಏಲಕ್ಕಿ
ಪುಡಿ:1/4
ಟೀ
ಚಮಚ
ಗೋಡಂಬಿ
ಚೂರುಗಳುಬೇಕಾದಷ್ಟು,
ತಯಾರಿಸುವ
ಬಗೆ
ಹೀಗೆ:
*ತೆಂಗಿನಕಾಯಿತುರಿಗೆ
ಸ್ವಲ್ಪ
ನೀರು
ಸೇರಿಸಿ
ರುಬ್ಬಿಕೊಳ್ಳಿ.
ಎರಡಾವರ್ತಿಕಾಯಿ
ಹಾಲನ್ನು
ತೆಗೆಯಿರಿ.
*ಹಲಸಿನ
ತೊಳೆಗಳಲ್ಲಿರುವ
ಬೀಜಗಳನ್ನು
ತಗೆದು,
ತೊಳೆಗಳನ್ನು
ಸಣ್ಣ
ಚೂರುಗಳನ್ನಾಗಿ
ಕತ್ತರಿಸಿ.
*
ಒಂದು
ಪಾತ್ರೆಯಲ್ಲಿ
ಒಂದು
ಕಪ್
ನೀರನ್ನು
ಬಿಸಿಮಾಡಿ.
ನೀರು
ಕುದಿಯಲು
ಬಿಡಿ.
ನೀರು
ಕುದಿಯತೊಡಗಿದಾಗ
ಅದಕ್ಕೆ
ಹಲಸಿನ
ತೊಳೆಗಳನ್ನು
ಸೇರಿಸಿ,
ಅವು
ತೀರಾ
ಮೆತ್ತಗಾಗುವವರೆಗೂ
ಕುದಿಸಿ.
*
ಕುದಿಯುತ್ತಿರುವ
ನೀರಿಗೆ
ಬೆಲ್ಲದ
ತುರಿ
ಹಾಗೂ
ಕಾಯಿ
ಹಾಲನ್ನು
ಸೇರಿಸಿ.
ಕಾಯಿ
ಹಾಲು
ಬೆರಸುವಾಗ
ಉರಿಯು
ಕಡಿಮೆಯಾಗಿರಲಿ
ಹಾಗೂ
ಬೆಲ್ಲವು
ಸಂಪೂರ್ಣವಾಗಿ
ಕರಗುವಂತೆ
ನೋಡಿಕೊಳ್ಳಿ.
*ಗೋಡಂಬಿಯನ್ನು
ತುಪ್ಪದಲ್ಲಿ
ಹುರಿದಿಟ್ಟುಕೊಳ್ಳಿ.
ತುಪ್ಪವನ್ನು
ಸ್ವಲ್ಪ
ಬಿಸಿ
ಮಾಡಿಕೊಂಡು
ಸೇರಿಸಿ
ನಂತರ
ಪಾಯಸದೊಡನೆ
ಬೆರಸಿ.
ಕುದಿತದಿಂದ
ಒಳ್ಳೆಯ
ಸುವಾಸನೆ
ಬಂದ
ನಂತರ
ಒಲೆಯಿಂದ
ಇಳಿಸಿ.ಎಲ್ಲರಿಗೂ
ಬಡಿಸಿ,
ಆನಂದಿಸಿ.
ಪೂರಕ
ಮಾಹಿತಿ:
ಬಹುಪಯೋಗಿ
ಹಣ್ಣಿನ
ಮರ
-
ಹಲಸು
-
ಕುರಿತು
ರಾಷ್ಟ್ರೀಯ
ಕಾರ್ಯಾಗಾರ
ಮೇ.
21
ಹಾಗೂ
ಮೇ.22
ರಂದು
ಬೆಂಗಳೂರಿನ
ಜಿಕೆವಿಕೆಯ
ಕುವೆಂಪು
ಸಭಾಂಗಣದಲ್ಲಿ
ನಡೆಯಲಿದೆ.
ಈ
ಕಾರ್ಯಾಗಾರದಲ್ಲಿ
ಸುಮಾರು
200
ರೈತರು,
50
ವಿಜ್ಞಾನಿಗಳು
ಹಾಗೂ
50
ಉದ್ದಿಮೆದಾರರು
ರಾಜ್ಯ
ಹಾಗೂ
ಹೊರ
ರಾಜ್ಯಗಳಿಂದ
ಭಾಗವಹಿಸಲಿದ್ದಾರೆ
ಹಾಗೂ
ಕಾರ್ಯಾಗಾರದಲ್ಲಿ
50ಕ್ಕೂ
ಹೆಚ್ಚು
ವಿಷಯಗಳ
ಮಂಡನೆಯಾಗಲಿದೆ.
ಹಲಸಿನ ಹಣ್ಣಿನಲ್ಲಿ ಎ ಮತ್ತು ಸಿ ಜೀವಸತ್ವಗಳು ಹಾಗೂ ಖನಿಜ ಪದಾರ್ಥಗಳಿವೆ. ಇದರಲ್ಲಿ ಪೊಟಾಸಿಯಂ ಅಂಶ ಹೆಚ್ಚಿರುವುದರಿಂದ ರಕ್ತದೊತ್ತಡ ಇರುವವರಿಗೆ ಬಹಳ ಉಪಯುಕ್ತ. ಕೃಷಿ ವಿಶ್ವವಿದ್ಯಾನಿಲಯ ಪ್ರೊ. ರಂಗಣ್ಣ ಅವರ ನೇತೃತ್ವದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾದ ಬಿಸ್ಕತ್, ವಿನೇಗರ್, ಸ್ಕ್ವಾಷ್, ಜ್ಯೂಸ್, ಹಲ್ವ, ವೈನ್, ಸೀಕರಣೆ ತಯಾರಿಸಲಾಗಿದ್ದು ಎರಡು ದಿನ ಪ್ರದರ್ಶನ ಹಾಗೂ ಮಾರಾಟವಿರುತ್ತದೆ.