Just In
- 10 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 11 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 11 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 13 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News India weather: ಈ ಭಾಗಗಳಲ್ಲಿ ಮುಂದಿನ ಐದು ದಿನ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಮುನ್ಸೂಚನೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಎಲೆ ತಂಬುಳಿ ರೆಸಿಪಿ
ಆಯುರ್ವೇದದಲ್ಲಿ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅರಿಶಿಣವು ಸರ್ವರೋಗಗಳನ್ನು ನಿವಾರಿಸಿ ತಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸೌಂದರ್ಯವರ್ಧಕವೂ ಹೌದು, ಆರೋಗ್ಯವರ್ಧಕವೂ ಹೌದು. ಹಾಗಾಗಿ ಗಾಯ ನಿವಾರಕವೂ ಹೌದು, ಅಲರ್ಜಿ ನಿವಾರಕವೂ ಹೌದು. ಇದರ ಪ್ರಯೋಜನಗಳ ಪಟ್ಟಿ ಬಹಳ ಉದ್ದವಿದೆ.
ಅಡುಗೆಯಲ್ಲೂ ಕೂಡ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅಡುಗೆ ಮನೆಯ ಸಾಂಬಾರ ಪದಾರ್ಥಗಳಲ್ಲಿ ಅರಿಶಿಣಕ್ಕೆ ಪ್ರಮುಖ ಸ್ಥಾನ. ಅರಿಶಿಣದ ಗಡ್ಡೆಗಳಿಂದ ತಯಾರಿಸುವ ಪುಡಿ ಮಾತ್ರವಲ್ಲ ಬದಲಾಗಿ ಅರಿಶಿಣದ ಎಲೆಗಳಲ್ಲೂ ಕೂಡ ಬಹಳ ಶಕ್ತಿ ಇದೆ. ಅದರ ಘಮವೇ ಬಹಳ ಉತ್ತಮವಾಗಿರುತ್ತದೆ. ಅರಿಶಿಣದ ಎಲೆಯನ್ನು ಬಳಸಿ ಮಾಡುವ ಕಡುಬು ನೀವು ಕೇಳಿರಬಹುದು.
ಪಾಯಸ ಮಾಡುವಾಗ ಅರಿಶಿಣದ ಎಲೆಯನ್ನು ಪಾಯಸಕ್ಕೆ ಘಮ ಹೆಚ್ಚಿಸುವುದಕ್ಕೆ ಬಳಸಲಾಗುತ್ತದೆ. ಅದೇ ರೀತಿ ಅರಿಶಿಣದ ಎಲೆಯಿಂದ ತಂಬಳಿಯನ್ನೂ ಮಾಡಬಹುದು. ಅರೆ ಅರಿಶಿಣದ ಎಲೆಯ ತಂಬಳಿಯೇ ಎಂದು ಹುಬ್ಬೇರಿಸಬೇಡಿ. ಹೌದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ತಂಬಳಿಯನ್ನು ಮಾಡುವುದು ಹೇಗ ಎಂಬುದನ್ನು ತಿಳಿಯೋಣ ಬನ್ನಿ.
Recipe By: Sushma
Recipe Type: Tambuli
Serves: 3
-
ಬೇಕಾಗುವ ಸಾಮಗ್ರಿಗಳು
ಅರಿಶಿಣದ ಎಲೆಯ ಎಳೆಯ ಕುಡಿಗಳು- ಐದರಿಂದ ಆರು
ಕಾಳುಮೆಣಸು- ಐದಾರು
ಜೀರಿಗೆ- ಒಂದು ಸ್ಪೂನ್
ತೆಂಗಿನ ಕಾಯಿತುರಿ- ಒಂದು ಮುಷ್ಠಿ
ಕಡೆದ ಮಜ್ಜಿಗೆ- ಕಾಲು ಲೀಟರ್
ಬೆಲ್ಲ- ನಾಲ್ಕು ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಬೆಣ್ಣೆ - ನಾಲ್ಕು ಸ್ಪೂನ್
-
ಮಾಡುವ ವಿಧಾನ
ಅರಿಶಿನಣದ ಎಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ನಂತರ ಅದನ್ನು ಚಿಟಿಕೆ ಬೆಣ್ಣೆ ಹಾಕಿ ಹುರಿಯಿರಿ.
ಅದಕ್ಕೆ ಕಾಳುಮೆಣಸು, ಕಾಯಿತುರಿ,ಜೀರಿಗೆ ಹಾಕಿ ಹುರಿಯಿರಿ.
ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಮಿಶ್ರಣದ ಜೊಗಟಿಯನ್ನು ಸೋಸಿಕೊಳ್ಳಿ.
ಸೋಸದೆಯೂ ಬಳಸಬಹುದು. ನಂತರ ಈ ರಸಕ್ಕೆ ಉಪ್ಪು,ಬೆಲ್ಲ ಮತ್ತು ಕಡೆದ ಮಜ್ಜಿಗೆ ಸೇರಿಸಿ ಚೆನ್ನಾಗಿ ಕೈಯಾಡಿ.
ನಂತರ ಬೆಣ್ಣೆಗೆ ಸ್ವಲ್ಪ ಜೀರಿಗೆ ಹಾಕಿ ಒಗ್ಗರಣೆ ಮಾಡಿದರೆ ಅರಿಶಿಣದ ಎಲೆ ತಂಬಳಿ ಸವಿಯಲು ಸಿದ್ಧ.
- ಅರಿಶಿಣದ ಎಲೆಯ ತಂಬಳಿ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಗಾಯವನ್ನು ಗುಣಗೊಳಿಸುವ ಶಕ್ತಿ ಇದಕ್ಕಿದೆ. ಊರಿಯೂತ ತಡೆಯುವ ಶಕ್ತಿ ಇದೆ. ಚರ್ಮದ ಕಾಂತಿ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
- ಕ್ಯಾಲೋರಿ - - 29
- ಪ್ರೊಟೀನ್ - - 0.91ಗ್ರಾಮ್