Just In
- 5 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 5 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 6 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 7 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀತ, ಗಂಟಲು ಕೆರತ ಕಡಿಮೆ ಮಾಡುವ ರಸಂ
ಹುರುಳಿಕಾಳಿನಲ್ಲಿ ಪ್ರೊಟೀನ್ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಳೆ ಮತ್ತು ಚಳಿಗಾಲದಲ್ಲಿ ಇದರಿಂದ ರಸಂ ತಯಾರಿಸಿ ಕುಡಿದರೆ ಹಿಡಿದಿರುವ ಶೀತ, ಗಂಟಲು ಕೆರೆತ ಕಡಿಮೆಯಾಗುವುದು.
ಬನ್ನಿ ಹುರುಳಿಕಾಳಿನ ರಸಂ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ
ಸಾಮಾಗ್ರಿಗಳು
ಹುರುಳಿಕಾಳು
ಅರ್ಧ
ಕಪ್
ಟೊಮೆಟೊ
2
(ಮ್ಯಾಶ್
ಮಾಡಿದ್ದು)
ಬೆಳ್ಳುಳ್ಳಿ
3-4
ಎಸಳು
ಹುಣಸೆ
ಹಣ್ಣಿನ
ರಸ
2
ಚಮಚ
ಅರಿಶಿಣ
ಪುಡಿ
ಅರ್ಧ
ಚಮಚ
ಚಿಟಿಕೆಯಷ್ಟು
ಇಂಗು
ಕರಿ
ಮೆಣಸಿನ
ಪುಡಿ
ಒಂದು
ಚಮಚ
ಸಾಸಿವೆ
ಅರ್ಧ
ಚಮಚ
ಒಣ
ಮೆಣಸು
2
ಸ್ವಲ್ಪ
ಕರಿ
ಬೇವಿನ
ಎಲೆ
ರುಚಿಗೆ
ತಕ್ಕ
ಉಪ್ಪು
ಕೊತ್ತಂಬರಿ
ಸೊಪ್ಪು
ತಯಾರಿಸುವ ವಿಧಾನ:
* ಹುರುಳಿಕಾಳನ್ನು ಬಾಣಲೆಗೆ ಹಾಕಿ ಅದರ ಬಣ್ಣ ಸ್ವಲ್ಪ ಬದಲಾಗುವವರೆಗೆ ಹುರಿಯಿರಿ. ನಂತರ ತಣ್ಣಗಾದ ಮೇಲೆ ತೊಳೆದು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಬೇಯಿಸಲು ತಕ್ಕ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ 2-3 ವಿಶಲ್ ಬರುವವರೆಗೆ ಬೇಯಿಸಿ.
* ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಜೀರಿಗೆ ಹಾಕಿ, ನಂತರ ಬೆಳ್ಳುಳ್ಳಿ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಇಂಗು ಹಾಕಿ, ಒಣ ಮೆಣಸನ್ನು ಮುರಿದು ಹಾಕಿ, ನಂತರ ಕರಿ ಬೇವಿನ ಎಲೆ, ನಂತರ ಟೊಮೆಟೊ ಹಾಕಿ ಮೆತ್ತಗಾದ ಮೇಲೆ, ಮ್ಯಾಶ್ ಮಾಡಿ.
* ನಂತರ ಕರಿ ಮೆಣಸಿನ ಪುಡಿ ಮತ್ತು ಅರಿಶಿಣ ಪುಡಿ ಹಾಕಿ, ಬೇಯಿಸಿದ ಹುರುಳಿಕಾಳು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ, ನಂತರ ಹುಣಸೆ ಹಣ್ಣಿನ ರಸ ಹಾಕಿ ಮತ್ತೆ 5 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹುರುಳಿಕಾಳಿನ ರಸಂ ರೆಡಿ.