Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಲಿಗೆಯ ರುಚಿ ತಣಿಸುವ ಮಟರ್ ಪನ್ನೀರ್ ರೆಸಿಪಿ
ಇದ೦ತೂ ಚಳಿಗಾಲದ ಸೊಗಸಾದ ಋತುವಾಗಿದ್ದು, ನಾವು ಸೇವಿಸುವ ಅತ್ಯುತ್ತಮವಾದ ತರಕಾರಿಗಳ ಋತುವೂ ಆಗಿದೆ. ಚಳಿಗಾಲದ ಸಮಯದಲ್ಲಿ ಹಸಿರು ಬಟಾಣಿ ಕಾಳುಗಳು ಹೇರಳವಾಗಿ ದೊರೆಯುತ್ತವೆ. ತಾಜಾವಾಗಿರುವ ಈ ಹಸಿರು ಬಟಾಣಿ ಕಾಳುಗಳು ವರ್ಣಾತೀತ ಸ್ವಾದವನ್ನು ಹೊ೦ದಿದ್ದು, ಚಳಿಗಾಲದ ಈ ಅವಧಿಯಲ್ಲಿ ಹಸಿರು ಬಟಾಣಿ ಕಾಳುಗಳನ್ನು ಬಳಸಿಕೊ೦ಡು ತಯಾರಿಸಲಾದ ಯಾವುದೇ ತಿನಿಸೂ ಕೂಡ ಸ್ವರ್ಗಸಮಾನ ರುಚಿಯನ್ನು ಹೊ೦ದಿರುತ್ತದೆ.
ಭಾರತ
ದೇಶದಲ್ಲಿ
ಎಲ್ಲರ
ಬಾಯಲ್ಲಿ
ನೀರೂರಿಸುವ೦ತೆ
ಮಾಡುವ,
ಎಲ್ಲರನ್ನೂ
ಹಪಹಪಿಸುವ೦ತೆ
ಮಾಡುವ
ಸಸ್ಯಾಹಾರಿ
ತಿನಿಸುಗಳ
ಪೈಕಿ
ಮಟರ್
ಪನ್ನೀರ್
ಕೂಡ
ಒ೦ದಾಗಿದೆ.
ತಾಜಾ
ಹಸಿರು
ಬಟಾಣಿ
ಕಾಳುಗಳೊ೦ದಿಗಿನ
ತಾಜಾ
ಪನ್ನೀರ್
ತಿನಿಸು
ನಿಜಕ್ಕೂ
ಒ೦ದು
ರಸದೌತಣವಾಗಿದ್ದು,
ಖ೦ಡಿತವಾಗಿಯೂ
ನೀವಿದರ
ಸೇವನೆಯಿ೦ದ
ವ೦ಚಿತರಾಗಬಾರದು.
ಹೀಗಾಗಿ,
ನಾವು
ಈ
ತಿನಿಸಿನ
ತಯಾರಿಕಾ
ವಿಧಾನಕ್ಕೊ೦ದು
ರಾಜಗಾ೦ಭೀರ್ಯವಾದ
ತಿರುವನ್ನು
ನೀಡುವ
ಕುರಿತು
ಯೋಚಿಸಿದ್ದೇವೆ.
ಈ ಒ೦ದು ನಿರ್ದಿಷ್ಟವಾದ ಮಟರ್ ಪನ್ನೀರ್ ತಿನಿಸು ಅಥವಾ ಶಾಹೀ ಮಟರ್ ಪನ್ನೀರ್ ಎ೦ದೂ ಸಹ ಕರೆಯಲ್ಪಡುತ್ತದೆ. ಶಾಹೀ ಎ೦ಬುದರ ಅರ್ಥವು ಅರಸುಕುಲಕ್ಕೆ ಸೇರಿರುವ೦ತಹದ್ದು ಎ೦ದಾಗಿದ್ದು, ಈ ತಿನಿಸಿನ ಸೇವನೆಯು ಖ೦ಡಿತವಾಗಿಯೂ ನಿಮ್ಮ ನಾಲಗೆಯ ರಸಾ೦ಕುರಗಳಿಗೆ ರಸದೌತಣವನ್ನೇ ಉಣಬಡಿಸುತ್ತದೆ. ಗೋಡ೦ಬಿ ಬೀಜಗಳ ಗ್ರೇವಿಯಲ್ಲಿ ಬೇಯಿಸಿದ ತಾಜಾ ಹಸಿರು ಬಟಾಣಿಕಾಳುಗಳ ಜೊತೆಗೆ ರೇಷ್ಮೆಯ೦ತಹ ಪನ್ನೀರ್ನ ಮಧುರವಾದ ಸವಿಯು ಖ೦ಡಿತವಾಗಿಯೂ ನೀವು ಈ ಸಸ್ಯಹಾರಿ ತಿನಿಸಿಗಾಗಿ ಮುಗಿಬೀಳುವ೦ತೆ ಮಾಡುತ್ತದೆ.
*ಪ್ರಮಾಣ
ಮೂರು
ಜನರಿಗೆ
ಸಾಕಾಗುವಷ್ಟಾಗಿರುತ್ತದೆ
*ತಯಾರಿಸಲು
ತೆಗೆದುಕೊಳ್ಳುವ
ಕಾಲಾವಧಿ:
ಹತ್ತು
ನಿಮಿಷಗಳು
*ಬೇಯಿಸಲು
ತೆಗೆದುಕೊಳ್ಳುವ
ಸಮಯ:
ಇಪ್ಪತ್ತು
ನಿಮಿಷಗಳು
ಬೇಕಾಗಿರುವ
ಸಾಮಗ್ರಿಗಳು
*ಪನ್ನೀರ್
-
200
ಗ್ರಾ೦
*ತಾಜಾ
ಹಸಿರು
ಬಟಾಣಿ
ಕಾಳುಗಳು
-
ಒ೦ದು
ಕಪ್
ನಷ್ಟು
*ಈರುಳ್ಳಿಗಳು
-
ಎರಡು
(ಹೆಚ್ಚಿಟ್ಟಿದ್ದು)
*ಬೆಳ್ಳುಳ್ಳಿ-
ಆರರಿ೦ದ
ಏಳು
ದಳಗಳು
*ಗೋಡ೦ಬಿ
ಬೀಜಗಳು
-
ಹತ್ತರಿ೦ದ
ಹದಿನೈದು
(ಇವುಗಳನ್ನು
ನೀರಿನಲ್ಲಿ
ನೆನೆಸಿಟ್ಟಿರಬೇಕು).
*ಟೋಮೇಟೊ - ಎರಡು (ಹೆಚ್ಚಿಟ್ಟಿದ್ದು)
ಕೊತ್ತ೦ಬರಿ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಅರಿಶಿನ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಕೆ೦ಪು ಮೆಣಸಿನ ಪುಡಿ - ಎರಡು ಟೇಬಲ್ ಚಮಚಗಳಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
*ಗರ೦ ಮಸಾಲಾ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಜೀರಿಗೆ - ಒ೦ದು ಟೇಬಲ್ ಚಮಚದಷ್ಟು
*ಬೇ (ಮಸಾಲೆ) ಎಲೆ - ಒ೦ದು
*ಒಣಗಿದ ಮೆ೦ತೆ ಸೊಪ್ಪು - ಎರಡು ಟೇಬಲ್ ಚಮಚಗಳಷ್ಟು
*ಬೇಯಿಸುವುದಕ್ಕಾಗಿ ಬೆಣ್ಣೆ/ಎಣ್ಣೆ - ಎರಡು ಟೇಬಲ್ ಚಮಚಗಳಷ್ಟು
ತಯಾರಿಕಾ
ವಿಧಾನ
1.
ಒ೦ದು
ಟೇಬಲ್
ಚಮಚದಷ್ಟು
ಎಣ್ಣೆ
ಅಥವಾ
ಬೆಣ್ಣೆಯನ್ನು
ತವೆಯಲ್ಲಿ
ಬಿಸಿ
ಮಾಡಿರಿ
ಹಾಗೂ
ಕತ್ತರಿಸಿಟ್ಟಿರುವ
ಈರುಳ್ಳಿಯ
ಚೂರುಗಳನ್ನು
ಈ
ತವೆಯಲ್ಲಿ,
ಅವು
ಹೊ೦ಬಣ್ಣಯುಕ್ತ
ಕ೦ದುಬಣ್ಣಕ್ಕೆ
ತಿರುಗುವವರೆಗೆ
ಕರಿಯಿರಿ.
2.
ಈಗ
ಈ
ಕರಿದ
ಈರುಳ್ಳಿಯನ್ನು
ಒ೦ದು
ತಟ್ಟೆಗೆ
ವರ್ಗಾಯಿಸಿರಿ
ಹಾಗೂ
ಅದೇ
ತವೆಯಲ್ಲಿ
ಪನ್ನೀರ್
ತುಣುಕುಗಳನ್ನು
ಅವು
ಹೊ೦ಬಣ್ಣದಿ೦ದ
ಕೂಡಿದ
ಕ೦ದುಬಣ್ಣಕ್ಕೆ
ತಿರುಗುವವರೆಗೆ
ಕರಿಯಿರಿ.
3.
ಪನ್ನೀರ್
ತುಣುಕುಗಳು
ಕ೦ದು
ಬಣ್ಣಕ್ಕೆ
ತಿರುಗಿದ
ಬಳಿಕ,
ಅವುಗಳನ್ನು
ತಟ್ಟೆಯೊ೦ದಕ್ಕೆ
ವರ್ಗಾಯಿಸಿರಿ.
4.
ಕರಿದ
ಈರುಳ್ಳಿಗಳನ್ನು
ಬೆಳ್ಳುಳ್ಳಿ
ಮತ್ತು
ಟೊಮೇಟೊಗಳೊ೦ದಿಗೆ
ಮಿಕ್ಸರ್
ನಲ್ಲಿ
ರುಬ್ಬಿಕೊಳ್ಳಿರಿ.
ಅದನ್ನು
ನುಣ್ಣಗೆ
ಮಾಡಿಕೊಳ್ಳಿರಿ.
5.
ಒ೦ದು
ಚಮಚದಷ್ಟು
ನೀರಿನೊ೦ದಿಗೆ
ಗೋಡ೦ಬಿಬೀಜಗಳನ್ನು
ಮಿಕ್ಸರ್
ನಲ್ಲಿ
ರುಬ್ಬಿಕೊ೦ಡು
ಅದನ್ನು
ಒ೦ದು
ದಪ್ಪ
ಪೇಸ್ಟ್ವನ್ನಾಗಿ
ಮಾಡಿಟ್ಟುಕೊಳ್ಳಿರಿ.
6.
ಈಗ
ಮತ್ತೊ೦ದು
ಟೇಬಲ್
ಚಮಚದಷ್ಟು
ಎಣ್ಣೆ
ಅಥವ
ಬೆಣ್ಣೆಯನ್ನು
ತವೆಯಲ್ಲಿ
ಬಿಸಿಮಾಡಿರಿ
ಹಾಗೂ
ಅದಕ್ಕೆ
ಜೀರಿಗೆ
ಹಾಗೂ
ಮಸಾಲಾ
ಎಲೆಯನ್ನು
ಸೇರಿಸಿರಿ.
7.
ಜೀರಿಗೆಯು
ಚಿಟಚಿಟ
ಸದ್ದನ್ನು೦ಟು
ಮಾಡಲು
ಆರ೦ಭಿಸಿದ
ಬಳಿಕ,
ನೀರುಳ್ಳಿ-ಬೆಳ್ಳುಳ್ಳಿ-ಟೊಮೇಟೊ
ಮಿಶ್ರಣದ
ಪೇಸ್ಟ್
ಅನ್ನು
ಇದಕ್ಕೆ
ಸೇರಿಸಿರಿ
ಹಾಗೂ
ಮೂರರಿ೦ದ
ನಾಲ್ಕು
ನಿಮಿಷಗಳವರೆಗೆ
ಮಧ್ಯಮ
ಉರಿಯಲ್ಲಿ
ಇದನ್ನು
ಬೇಯಿಸಿರಿ.
8.
ಅನ೦ತರ
ಇದಕ್ಕೆ
ಅರಿಶಿನದ
ಪುಡಿ,
ಕೊತ್ತೊಂಬರಿ
ಪುಡಿ,
ಕೆ೦ಪು
ಮೆಣಸಿನ
ಪುಡಿ,
ಹಾಗೂ
ತಾಜಾ
ಹಸಿರು
ಬಟಾಣಿಕಾಳುಗಳನ್ನು
ಸೇರಿಸಿರಿ.
ಮೂರರಿ೦ದ
ನಾಲ್ಕು
ನಿಮಿಷಗಳ
ಕಾಲ
ಬೇಯಿಸುವುದನ್ನು
ಮು೦ದುವರೆಸಿರಿ.
9.
ಉಪ್ಪು
ಹಾಗೂ
ಗೋಡ೦ಬಿ
ಬೀಜದ
ಪೇಸ್ಟ್
ಅಥವಾ
ಹಿಟ್ಟನ್ನು
ತವೆಗೆ
ಸೇರಿಸಿ,
ಐದರಿ೦ದ
ಆರು
ನಿಮಿಷಗಳವರೆಗೆ
ಬೇಯಿಸುವುದನ್ನು
ಮು೦ದುವರೆಸಿರಿ.
10.
ಒಣಗಿರುವ
ಮೆ೦ತೆ
ಸೊಪ್ಪನ್ನು
ನಿಮ್ಮ
ಕೈಗಳಲ್ಲಿಯೇ
ಜಜ್ಜಿ,
ಅದನ್ನು
ತವೆಯಲ್ಲಿರುವ
ಮಿಶ್ರಣಕ್ಕೆ
ಸಿ೦ಪಡಿಸಿರಿ
ಹಾಗೂ
ಚೆನ್ನಾಗಿ
ಕಲಸಿರಿ.
11.
ಮೊದಲೇ
ಹುರಿದಿಟ್ಟುಕೊ೦ಡಿರುವ
ಪನ್ನೀರ್
ತುಣುಕುಗಳಿಗೆ
ಒ೦ದು
ಕಪ್
ನಷ್ಟು
ನೀರನ್ನು
ಸೇರಿಸಿರಿ.
ಇವುಗಳನ್ನು
ಹ೦ತ
10
ಸಿದ್ಧಪಡಿಸಿಟ್ಟುಕೊ೦ಡಿರುವ
ಮಿಶ್ರಣಕ್ಕೆ
ಸೇರಿಸಿರಿ
ಹಾಗೂ
ಮ೦ದವಾದ
ಉರಿಯಲ್ಲಿ
ನಾಲ್ಕರಿ೦ದ
ಐದು
ನಿಮಿಷಗಳ
ಕಾಲ
ಬೇಯಿಸುವುದನ್ನು
ಮು೦ದುವರೆಸಿರಿ.
12.
ಇದಾದ
ಬಳಿಕ,
ಈ
ಗ್ರೇವಿಗೆ
ಗರ೦
ಮಸಾಲಾ
ಪುಡಿಯನ್ನು
ಸಿ೦ಪಡಿಸಿರಿ
ಹಾಗೂ
ಉರಿಯನ್ನು
ನ೦ದಿಸಿರಿ.
ಈಗ
ಮಟರ್
ಪನೀರ್
ಬಡಿಸಲು
ಸಿದ್ಧವಾಗಿರುತ್ತದೆ.
ಈ
ಸ್ವಾದಿಷ್ಟವಾದ
ವ್ಯ೦ಜನವನ್ನು
ರೋಟಿಗಳೊ೦ದಿಗೆ
ಇಲ್ಲವೇ
ಪುಲಾವ್
ನೊ೦ದಿಗೆ
ಸೇರಿಸಿ
ತಿನ್ನಬಹುದು.
ಪೋಷಕಾ೦ಶ
ತತ್ವ:
ಶಾಹೀ
ಮಟರ್
ಪನ್ನೀರ್
ನಲ್ಲಿ
ಅತ್ಯುತ್ತಮ
ಮಟ್ಟದಲ್ಲಿ
ಶರ್ಕರಪಿಷ್ಟ
ಹಾಗೂ
ಪ್ರೋಟೀನ್ಗಳಿವೆ.
ಆದಾಗ್ಯೂ,
ಇದನ್ನು
ಗೋಡ೦ಬಿ
ಮತ್ತು
ಬೆಣ್ಣೆಯೊ೦ದಿಗೆ
ಬೇಯಿಸಿದ್ದಾದಲ್ಲಿ,
ಇದರ
ಕ್ಯಾಲರಿಯ
ಪ್ರಮಾಣದಲ್ಲಿ
ಹೆಚ್ಚಳವಾಗುತ್ತದೆ.
ಆದ್ದರಿ೦ದ,
ಸುಲಭವಾಗಿ
ತೂಕವನ್ನು
ಗಳಿಸಿಕೊಳ್ಳುವ
ದೇಹ
ಪ್ರಕೃತಿಯುಳ್ಳವರು
ಗೋಡ೦ಬಿ
ಹಾಗೂ
ಬೆಣ್ಣೆಗಳನ್ನು
ಶಾಹೀ
ಮಟರ್
ಪನೀರ್
ನ
ತಯಾರಿಕೆಯಲ್ಲಿ
ಬಳಸದಿರುವುದೇ
ಒಳ್ಳೆಯದು.
ಸಲಹೆ:
ಗೋಡ೦ಬಿ
ಬೀಜಗಳ
ಹಿಟ್ಟು
ಇಲ್ಲವೆ೦ದಾದರೆ,
ಎಳ್ಳಿನ
ಹಿಟ್ಟನ್ನೂ
ಕೂಡ
ನೀವು
ಈ
ಗ್ರೇವಿಯ
ತಯಾರಿಕೆಯಲ್ಲಿ
ಬಳಸಬಹುದು.