Just In
- 2 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 2 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 3 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 4 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರುಚಿಯ ಅಮಲೇರಿಸುವ ಅಮಲ್ದಾರ್ ಉಪ್ಪಿಟ್ಟು
ಜತೆಯಲ್ಲಿ ಊಟಮಾಡೋಣ ಎಂದು ನಾನು ಎಷ್ಟೇ ಕೇಳಿಕೊಂಡರೂ ಅವರು ಜಪ್ಪಯ್ಯ ಎನಲಿಲ್ಲ. ಅದಕ್ಕೆ ಅವರು ಕೊಟ್ಟ ಕಾರಣಗಳು ಎರಡು. ರಾತ್ರಿ ಮನೆಯಲ್ಲಿ ಊಟ ಮಾಡದಿದ್ದರೆ ಅವರ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳು ತರಾಟೆಗೆ ತೆಗೆದುಕೊಳ್ಳುತ್ತಾರಂತೆ. ಎರಡನೆಯದು ಆಕಸ್ಮಾತ್ ಹೊರಗಡೆ ಊಟ ಮಾಡಿಬಿಡೋಣ ಎಂದರೆ ಇವತ್ತು ಅವರ ಮನಸ್ಸು ಒಪ್ಪುತ್ತಿಲ್ಲ. ಕಾರಣ, ಮನೆಯಲ್ಲಿ ವಿಶೇಷ ತಿಂಡಿ ಮಾಡಿದ್ದಾರಂತೆ. ಏನು ವಿಶೇಷ ಎಂದು ಕೇಳಲಾಗಿ ಅವರು ಹೇಳಿದ್ದು ಉಪ್ಪಿಟ್ಟು! ಅಯ್ಯೋ ದೇವರೆ, ಉಪ್ಪಿಟ್ಟು ದಿನಾ ಇದ್ದದ್ದೇ. ಅದರಲ್ಲೇನು ಸ್ಪೆಷಲ್ ಎಂದು ಕೇಳಿದಾಗ ಅವರು ಹೇಳಿದ್ದು ಹೀಗಿತ್ತು.
ಮನೆಯಲ್ಲಿ ಅವರ ಹೆಂಡತಿ ಅಪರೂಪಕ್ಕೆ ವಿಶೇಷ ಉಪ್ಪಿಟ್ಟು ಮಾಡುತ್ತಾರಂತೆ. ಅದರ ಹೆಸರು ಅಮಲ್ದಾರ್ ಉಪ್ಪಿಟ್ಟು! ಹಾಗಂದರೇನು? ನಿಮ್ಮಂತೆ ನನಗೂ ಆಶ್ಚರ್ಯವಾಯಿತು.
ನನ್ನ ಸ್ನೇಹಿತನ ಮಾವನವರು ಆಗಿನ ಕಾಲದಲ್ಲಿ ಅಮಲ್ದಾರ್ ಆಗಿದ್ದರಂತೆ. ಊರಿನ ಜನ ಅವರಿಗೆ ತುಂಬಾ ಗೌರವ ಮತ್ತು ಭಯ ಇಟ್ಟುಕೊಟ್ಟಿದ್ದರಂತೆ. ಅಮಲ್ದಾರ್ ಜಗನ್ನಾಥರಾಯರಿಗೆ ಉಪ್ಪಿಟ್ಟೆಂದರೆ ಪ್ರಾಣ. ಆದರೆ ಖಂಡಿತ ನಾವು ನೀವು ಮಾಡುವ ಉಪ್ಪಿಟ್ಟಲ್ಲ. ದಪ್ಪ ರವೆಯನ್ನು ಚೆನ್ನಾಗಿ ಹುರಿದು(over fry)ಅದಕ್ಕೆ ಯಥಾಪ್ರಕಾರ ಪದಾರ್ಥಗಳನ್ನು ಕಲೆಸಿ ಉಪ್ಪಿಟ್ಟು ಮಾಡುವುದು ಕ್ರಮ. ಆದರೆ, ಉಪ್ಪಿಟ್ಟು ತಯಾರಿಕೆಗೆ ಮನೆಯಲ್ಲೇ ತಯಾರಿಸಿದ ಬೆಣ್ಣೆಕಾಯಿಸಿದ ತುಪ್ಪವನ್ನೇ ಬಳಸಬೇಕು. ತುಪ್ಪವನ್ನು ಯಥೇಶ್ಚವಾಗಿ ಹಾಕಿ ಮಾಡಿದ ಬನ್ಸಿ ರವೆ ಉಪ್ಪಿಟ್ಟು ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಯಾರೂ ಮಾಡುವುದಿಲ್ಲ. ಅದೂನೂವೆ ಮನೆಯಲ್ಲಿ ಕಾಯಿಸಿದ ತುಪ್ಪ. ಛೆ ಛೆ ಎಲ್ಲಾದರೂ ಉಂಟೆ ಅನ್ನಬೇಡಿ.
ನಮ್ಮ ಕಾಲೇಜು ಸೂಪರಿಂಟೆಂಡೆಂಟು ಸೋಮಶೇಖರ್ ಅವರ ಹೆಂಡತಿ ಆಗಾಗ ಅಮಲ್ದಾರ್ ಉಪ್ಪಿಟ್ಟು ತಯಾರಿಸುತ್ತಾರೆ. ಹಾಲು ಕಾಯಿಸಿದ ಕೆನೆಯನ್ನು ನಿತ್ಯ ಜೋಪಾನವಾಗಿ ತೆಗೆದಿಟ್ಟು ಒಂದು ಭಾನುವಾರ ಬೆಣ್ಣೆ ಕಡೆದು ತುಪ್ಪಕಾಯಿಸಿ ಅಮಲ್ದಾರ್ ಉಪ್ಪಿಟ್ಟು ಮಾಡುವುದು ಅವರ ಮನೆಯ ಸ್ಪೆಷಲ್. ಹಾಗಾಗಿ ಸೋಮಣ್ಣನವರು ನಮ್ಮ ಜತೆ ಹೋಟೆಲ್ ಊಟ ಮಾಡಲಿಲ್ಲವೆನ್ನಿ. ಇನ್ನೊಂದು ಅಂಶವೆಂದರೆ, ಅಮಲ್ದಾರ್ ಜಗನ್ನಾಥರಾಯರು ಆಗಾಗ ತುಪ್ಪದ ಗುಣಮಟ್ಟದ ಬಗೆಗೆ ತಮ್ಮದೇ ಆದ ವ್ಯಾಖ್ಯೆ ಕೊಡುತ್ತಿದ್ದರಂತೆ. ಅವರ ಪ್ರಕಾರ, ಮನೆಯಲ್ಲಿ ಮಾಡಿದ ಗಟ್ಟಿಯಾದ ತುಪ್ಪವನ್ನು ಒಂದು ಚಮಚ ಅಂಗೈಮೇಲೆ ಹಾಕಿದರೆ ಅದು ದೇಹದ ಶಾಖಕ್ಕೆ ಕರಗುತ್ತದಂತೆ. ಹಾಗೆ ಕರಗಿದರೆ ಒಳ್ಳೆ ತುಪ್ಪ ಇಲ್ಲದಿದ್ದರೆ ಅದರಲ್ಲೇನೋ ದೋಷವಿದೆ.
ಊರಿಗೆ ವಾಪಸ್ಸು ಬಂದನಂತರ ಸೋಮಣ್ಣನವರು ಹೇಳಿದ ಉಪ್ಪಿಟ್ಟಿನ ಬಗ್ಗೆ ನನ್ನ ಹೆಂಡತಿಗೂ ಹೇಳಿದೆ. ಅವಳು ನಕ್ಕಳು. ನೀನೂ ಮಾಡೆ ಎಂದೆ. ಮಾಡ್ತೀನಿ ಆದರೆ ತುಪ್ಪ ಆಕಳಹಾಲಿನದೋ, ಎಮ್ಮೆ ಹಾಲಿನದೋ ಎಂದು ಕೇಳಿದಳು. ನನಗೆ ಏನೂ ಹೇಳಲು ಗೊತ್ತಾಗದೆ ಸುಮ್ಮನಾಗಿಬಿಟ್ಟೆ.
ದೇವರೇ,
ನಮ್ಮನ್ನು
ಈ
ಉಪ್ಪಿಟ್ಟಿನಿಂದ
ಕಾಪಾಡಪ್ಪಾ...!
ಇದು
ಉಪ್ಪಿಟ್ಟನ್ನು
ಗೇಲಿ
ಮಾಡೋರಿಗೆ
ಮಾತ್ರ!
ಡಬ್ಬಲ್
ಡಿಲೈಟ್
ಉಪ್ಪಿಟ್ಟು
ರೊಟ್ಟಿ
ಸಾಬೂದಾಣಿ
ಖಿಚಡಿ
:
ಇದು
ಏಕಾದಶಿ
ಪರಿಹಾರ