Just In
Don't Miss
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲಂಗಾಣ ಸ್ಟೈಲ್ ರೆಸ್ಟೋರೆಂಟ್
ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಆಂಧ್ರ ಸ್ಟೈಲ್ ಫುಡ್, ಆಂಧ್ರ ಸ್ಟೈಲ್ ರೆಸ್ಟೋರೆಂಟು ಮತ್ತು ಹೋಟೆಲುಗಳಿವೆ. ಇಲ್ಲಿ ವಿಶೇಷವಾಗಿ ನಂದಿನಿ ಹೋಟೆಲುಗಳ ಸಮೂಹನ್ನು ಹೆಸರಿಸಬಹುದಾಗಿದೆ. ಬಾಳೆ ಎಲೆ ಮೇಲೆ ಫುಲ್ ಮೀಲ್ಸ್ ಸಸ್ಯಾಹಾರ ಮತ್ತು ಮಾಂಸಾಹಾರದ ರುಚಿಗಳನ್ನು ಬಡಿಸುವ ಪದ್ದತಿ ಆರಂಭಿಸಿದ್ದು ಇವೇ ಹೋಟೆಲುಗಳು.
ಈ ಹೋಟೆಲುಗಳು ಮೊದಮೊದಲು ಜನತೆಯನ್ನು ಆಕರ್ಷಿಸಿದರೂ ಈಚೆಗೆ ಅರ್ಧ ಬೆಂದ ಅನ್ನ ಮತ್ತು ಚಪ್ಪೆಚಪ್ಪೆ ಬಿರಿಯಾನಿ ಊಟ ಹಾಕುತ್ತಿರುವುದರಿಂದ ಜನ ಬೇಸತ್ತಿದ್ದಾರೆ. ಸದ್ಯಕ್ಕೆ ವಿಷಯ ಅದಲ್ಲ. ಪ್ರತ್ಯೇಕ ತೆಲಂಗಾಣ ರಾಜ್ಯ ವಿದ್ಯುಕ್ತವಾಗಿ ಅನಾವರಣಗೊಂಡರೆ ಬೆಂಗಳೂರಿನಲ್ಲಿ ತೆಲಂಗಾಣ ಹೋಟೆಲುಗಳು ಕಾಣಿಸುಕೊಳ್ಳುತ್ತವೆಯೇ ಎಂಬುದು ನಮ್ಮ ಕುತೂಹಲ. ಹಾಗೊಮ್ಮೆ ತೆಲಂಗಾಣ ರೆಸ್ಟೋರೆಂಟುಗಳು ಆರಂಭಗೊಂಡರೆ ಆಂಧ್ರ ಸ್ಟ್ಯೈಲ್ ಹೋಟೆಲುಗಳಿಗೆ ಸಖತ್ ಕಾಂಪಿಟಿಷನ್ ಒಡ್ಡುವುದು ಖಂಡಿತ.
ಕುತೂಹಲ ತಣಿಸಿಕೊಳ್ಳಲು ನಮ್ಮ ದಟ್ಸ್ ತೆಲುಗು ಡಾಟ್ ಕಾಂನ ಸಂಪಾದಕ ಶಾಂತಾರಾಂ ಅವರನ್ನು ಸಂಪರ್ಕಿಸಲಾಯಿತು. ಈ ಬಗ್ಗೆ ಅಧಿಕೃತವಾಗಿ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಕೈಚೆಲ್ಲಿದ್ದಾರೆ. ಇಂದು ಬೆಳಗಿನ ಜಾವವಷ್ಟೇ ಚಂದ್ರಶೇಖರರಾವ್ ಅವರು ಎಳನೀರು ಬ್ರೇಕ್ ಫಾಸ್ಟ್ ಮಾಡಿದ್ದಾರೆ. ನಂತರದ ಬೆಳವಣಿಗೆಗಳನ್ನು ಆನಂತರ ಈಮೇಲಿನಲ್ಲಿ ಕಳಿಸಲಾಗುವುದು ಎಂದಷ್ಟೇ ಹೇಳಿ ಅವರು ಫೋನ್ ಅಫ್ ಮಾಡಿದರು.