Just In
Don't Miss
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Movies ಪುಟ್ಟಕ್ಕನ ಮನೆಗೆ ಕುಡಿದು ಬಂದ ಮುರಳಿಗೆ ಶಾಕ್; ಅಮ್ಮ ಅರೆಸ್ಟ್.. ಸಹನಾ ಮೇಲೆ ಗೂಬೆ ಕೂರಿಸಿದ ಪತಿ
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೋಟೀನು ಜಾಸ್ತಿಯಿರುವ ಕಡಲೆಬೀಜದ ಖಾರಾ ಚಟ್ನಿ
* ಶಾಂತಲಾ, ವಿವಿ ಪುರಂ
ಪದಾರ್ಥಪಟ್ಟಿ : ಒಳ್ಳೆ ಜಾತಿ ಕಡಲೆ ಬೀಜ 1 ಕಪ್. ಕೆಂಪು ಮೆಣಸಿನಕಾಯಿ 8-10, ಬೆಳ್ಳುಳ್ಳಿ ಎರಡು ಎಸಳು. ನಿಂಬೆ ರಸ ಅಥವಾ ಹುಣಿಸೆಹಣ್ಣಿನ ರಸ ನಾಲಕ್ಕು ಚಮಚ. ರುಚಿಗೆ ಹೊಂದುವಷ್ಟು ಉಪ್ಪು.
ವಿಧಾನ : ಕಡಲೆಕಾಯಿ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಬೀಜ ಸ್ಪಲ್ಪ ಮಟ್ಟಿಗೆ ಕೆಂಪಾಗುವ ರೀತಿಯಲ್ಲಿ ಹುರಿದಿರಬೇಕು. ಹುರಿದ ನಂತರ ಬೀಜವನ್ನು ಹಗುರವಾಗಿ ಹಿಚುಕಿದರೆ ಸಿಪ್ಪೆ ಬಿಟ್ಟುಕೊಳ್ಳುತ್ತದೆ. ಮನೆಯಲ್ಲಿ ಮರ ಇದ್ದರೆ ಕೇರಿ ಸಿಪ್ಪೆಯನ್ನು ತೆಗೆಯಿರಿ. ಮರ ಇಲ್ಲದಿದ್ದರೆ ತಟ್ಟೆ ಅಥವಾ ಸ್ಟೀಲ್ ಮರದಲ್ಲಿ ಬೀಜವನ್ನು ಕೇರಿ ಉಫ್ ಎಂದು ಊದಿ ಎಳ್ಳು ಬೆಲ್ಲಕ್ಕೆ ಮಾಡಿಕೊಂಡಂತೆ ಬೀಜ ಸಿದ್ಧಪಡಿಸಿಟ್ಟುಕೊಳ್ಳಿರಿ.
ಕೆಂಪುಮೆಣಸಿನಕಾಯಿಯನ್ನು ಇದೇ ರೀತಿ ಚೂರೇಚೂರು ಎಣ್ಣೆಯಲ್ಲಿ ಗರಿಗರಿಯಾಗುವತನಕ ಹುರಿಯಬೇಕು. ಆನಂತರ ಹುರಿದ ಬೀಜ, ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ರುಬ್ಬಿರಿ. ತೀರ ನುಣ್ಣಗಾಗಬಾರದು, ತೀರಾ ತರಿತರಿ ಇರಬಾರದು. ರುಬ್ಬುವಾಗಲೇ ಉಪ್ಪು ಹಾಕಿದರೆ ಚೆನ್ನಾಗಿ ಕೂಡಿಕೊಳ್ಳುತ್ತದೆ.
ಇದಕ್ಕೆ ನಿಂಬೆ ರಸ ಅಥವಾ ಹುಣಿಸೆರಸ ಬೆರಸಿ, ಸಾಸಿವೆ ಮತ್ತು ಕರಿಬೇವು ಒಗ್ಗರಣೆ ಸಿಂಪಡಿಸಿರಿ. ಚಪಾತಿ ಜತೆಗೆ ಚೆನ್ನಾಗಿರುತ್ತದೆ. ಅರ್ಜೆಂಟ್ ಅರ್ಜೆಂಟಾಗಿ ಕೆಲಸಕ್ಕೆ ಧಾವಿಸುವವರು ಚಪಾತಿ, ಕಡಲೆಬೀಜದ ಚಟ್ನಿಯ ರೋಲ್ ಮಾಡಿಕೊಂಡು ಹೋದರೆ ಕಾರಿನಲ್ಲಿ ಅಥವಾ ಆಟೋದಲ್ಲಿ ತಿಂದುಕೊಂಡು ಕೆಲಸಕ್ಕೆ ಹೋಗಬಹುದು.