Just In
Don't Miss
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Movies ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆರಿಗೆಯ ವೇಳೆ ಎಷ್ಟೇ ಧೈರ್ಯ ಮಾಡಿಕೊಂಡರೂ, ಕಾಡುವ ಭಯ....
ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ..ಆದರೂ ಆಕೆಗೆ ಆ ಅನಿರೀಕ್ಷಿತ ವಿಷಯಗಳ ಭಯ ಇದ್ದೇ ಇರುತ್ತದೆ
ಮಹಿಳೆಯರಿಗೆ ಜೀವನದಲ್ಲಿ ಅತೀ ದೊಡ್ಡ ಸವಾಲೆಂದರೆ ಗರ್ಭಧಾರಣೆ ಮತ್ತು ಮಗುವಿಗೆ ಜನ್ಮ ನೀಡುವುದು. ಮಗುವಿಗೆ ಜನ್ಮ ನೀಡುವ ವೇಳೆ ಮಹಿಳೆಯು ಮತ್ತೊಂದು ಜನ್ಮವನ್ನು ಪಡೆದಂತೆ. ಯಾಕೆಂದರೆ ಆ ನೋವು ಸಹಿಸಲು ಅಸಾಧ್ಯವಾಗಿರುವಂತದ್ದಾಗಿರುತ್ತದೆ.
ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ. ಪ್ರೀತಿಪಾತ್ರರು ಹಾಗೂ ಸಂಬಂಧಿಕರು ಆಕೆಗೆ ಬೆಂಬಲವಾಗಿ ನಿಂತುಕೊಂಡು ಹೆರಿಗೆಯ ಪ್ರಕ್ರಿಯೆಯು ಸುಲಭವಾಗಿ ಆಗುವಂತೆ ನೋಡಿಕೊಳ್ಳಬೇಕು. ಹೆರಿಗೆ ವೇಳೆ ಆಗುವಂತಹ ಕೆಲವೊಂದು ಅನಿರೀಕ್ಷಿತ ವಿಷಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಹೆರಿಗೆ ಬಳಿಕ ಬಾಣಂತಿಯರಿಗೆ ಕಾಡುವ ಆ ನರಕಯಾತನೆ...
ಪ್ರತಿಯೊಬ್ಬ
ಮಹಿಳೆಯು
ಸಾಮಾನ್ಯ
ಹೆರಿಗೆಯಾಗಬೇಕೆಂದು
ಬಯಸುತ್ತಾ
ಇರುತ್ತಾಳೆ.
ಆದರೆ
ಕೆಲವೊಂದು
ಸಂದರ್ಭಗಳಲ್ಲಿ
ಅಂತಿಮವಾಗಿ
ಸಿಸೇರಿಯನ್
ಮಾಡಲೇಬೇಕಾಗುತ್ತದೆ.
ಮಗುವಿನ ಜನನದ ಬಳಿಕವೂ ಕುಗ್ಗುವಿಕೆಯು ಕೆಲವೊಂದು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು. ಹೆರಿಗೆ ಬಳಿಕ ದೇಹವು ಮತ್ತೆ ತನ್ನ ಹಳೆಯ ಸ್ಥಿತಿಗೆ ಬರಲು ಪ್ರಯತ್ನ ಮಾಡುವ ಕಾರಣದಿಂದಾಗಿ ಗರ್ಭಕೋಶದಲ್ಲಿ ಕೆಲವೊಂದು ಹೊಂದಾಣಿಕೆಗಳು ಆಗುತ್ತಿರುತ್ತದೆ. ಹೆರಿಗೆಯ ಬಳಿಕ ಇದೆಲ್ಲಾ ಮಾಮೂಲು, ಭಯ ಪಡದಿರಿ...
ಮತ್ತೊಂದು ಅನಿರೀಕ್ಷಿತ ಸಂಗತಿಯೆಂದರೆ ಕೆಲವೊಂದು ಮಹಿಳೆಯರಲ್ಲಿ ಹೆರಿಗೆ ತುಂಬಾ ವೇಗವಾಗಿ ಹಾಗೂ ಹೆಚ್ಚು ನೋವಿಲ್ಲದೆ ನಡೆದುಬಿಡುತ್ತದೆ. ಇದು ತುಂಬಾ ಹೆಚ್ಚು ಸಮಾಧಾನವನ್ನು ನೀಡುತ್ತದೆ. ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?
ಕೈ ಹಾಗೂ ಕಾಲುಗಳಲ್ಲಿ ಯಾವುದೇ ಸಂವೇದನ ಇಲ್ಲದೆ ಇರುವಂತಹ ಅನುಭವವು ಆಗುತ್ತಾ ಇದ್ದರೆ ತಕ್ಷಣ ವೈದ್ಯರನ್ನು ಕರೆಸಿ ಇದನ್ನು ತಿಳಿಸಬೇಕು. ಯಾಕೆಂದರೆ ಇದಕ್ಕೆ ವೈದ್ಯರ ಚಿಕಿತ್ಸೆ ಅಗತ್ಯವಾಗಿರುತ್ತದೆ.