Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವ್ಯಕ್ತಿಯ ವೃತ್ತಿಯನ್ನು ಆತನ ಬಾಲ್ಯ ನಿರ್ಧರಿಸಬಲ್ಲುದೇ?
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ತಮ್ಮ ಪಾಲಕರಿಂದ ಪ್ರೀತಿ, ಕಾಳಜಿ ಮತ್ತು ಎಲ್ಲಾ ವಿಧದ ಸೌಕರ್ಯಗಳನ್ನು ಪಡೆದು ಬಾಲ್ಯವನ್ನು ಕಳೆದ ಮಕ್ಕಳು ಹಿರಿಯರಾದ ಬಳಿಕ ವೃತ್ತಿಯಲ್ಲಿ ಅತ್ಯುನ್ನತ ಸಾಧನೆ ಸಾಧಿಸುತ್ತಾರೆ.
ಅಲ್ಲದೇ ಹಿರಿಯರಾಗಿ ಈ ವ್ಯಕ್ತಿಗಳು ಹೆಚ್ಚು ಸಂತೃಪ್ತರೂ ಗೌರವಾನ್ವಿತರೂ ಆಗಿರುತ್ತಾರೆ. ಶಿಕ್ಷಣದಲ್ಲಿ ಉತ್ತಮ ಸಾಧನೆ, ಜೀವನದಲ್ಲಿ ಸಂತೋಷ, ವೃತ್ತಿರಂಗದಲ್ಲಿ ತೃಪ್ತಿ ಎಲ್ಲವೂ ಬಾಲ್ಯದಲ್ಲಿ ಪಾಲಕ ಪೋಷಕರಿಂದ ಸಿಕ್ಕ ಪ್ರೀತಿಗೆ ಪೂರಕವಾಗಿವೆ ಎಂದು ಈ ಸಂಶೋಧನೆ ತಿಳಿಸುತ್ತದೆ.
ವೃತ್ತಿರಂಗದಲ್ಲಿ ಉನ್ನತ ಸಾಧನೆ ಸಾಧಿಸಿದ ಕೆಲವು ವ್ಯಕ್ತಿಗಳು ಬಾಲ್ಯದಲ್ಲಿ ತಮ್ಮ ಪಾಲಕರ ಕಟ್ಟುನಿಟ್ಟಿನ ನಿಯಮಗಳಲ್ಲಿ ಬಂಧಿತರಾಗಿದ್ದು ಕಂಡುಬಂದರೂ ಇವರು ಜೀವನವನ್ನು ಸುಖವಾಗಿ ಅನುಭವಿಸುವುದರಲ್ಲಿ ಅಥವಾ ಸಂತೋಷಪಡುವುದರಲ್ಲಿ ಇತರರಿಗಿಂತ ಹಿಂದಿರುತ್ತಾರೆ ಎಂದು ಈ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.
ಆದ್ದರಿಂದ ಅತ್ಯುತ್ತಮ ಅಂಕ ಬೇಕೇ ಬೇಕು ಎಂದು ಮಕ್ಕಳ ಮೇಲೆ ಅಪಾರ ಒತ್ತಡ ಹೇರುವ ಪಾಲಕರ ಕ್ರಮದ ಪರಿಣಾಮದಿಂದಲೂ ಈ ಮಕ್ಕಳು ಹಿರಿಯರಾದ ಬಳಿಕ ಹೆಚ್ಚು ಸಂತುಷ್ಟರಾಗಿರುವುದಿಲ್ಲ. ಈ ಸಂಶೋಧನೆಯಲ್ಲಿ ತಜ್ಞರು ಸುಮಾರು ಐದು ಸಾವಿರಕ್ಕೂ ಹೆಚ್ಚು ವಿವಿಧ ಶ್ರೇಣಿಯ ವ್ಯಕ್ತಿಗಳನ್ನು ಭೇಟಿಯಾಗಿ ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದು ವಿಶ್ಲೇಷಿಸಿ ಮೇಲಿನ ತೀರ್ಮಾನಕ್ಕೆ ಬರಲಾಗಿದೆ.
ಇದರಲ್ಲಿ ವಿಶೇಷವಾಗಿ ಬಾಲ್ಯದಲ್ಲಿ ತಂದೆ ತಾಯಿಯರು, ಹಿರಿಯರು, ಶಿಕ್ಷಕರು ಅವರನ್ನು ನಡೆಸಿಕೊಂಡಿದ್ದ ರೀತಿಯ ಬಗ್ಗೆ ಅಪಾರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಆದ್ದರಿಂದ ವೃತ್ತಿಜೀವನದಲ್ಲಿ ಉನ್ನತ ಸಾಧನೆ ಸಾಧಿಸಿದರೂ ವೈಯಕ್ತಿಕವಾಗಿ ಅಸುಖಿಗಳಾಗಿರಲು ಬಾಲ್ಯದ ಕಟ್ಟುಪಾಡು ಪ್ರಮುಖ ಕಾರಣವಾಗಿದೆ.
ಇದಕ್ಕೆ ತದ್ವಿರುದ್ಧವಾಗಿ ಬಾಲ್ಯದಲ್ಲಿ ಪಾಲಕರ ಪೋಷಕರ ಪ್ರೀತಿಯನ್ನು ಪಡೆದವರು ಉನ್ನತ ಪದವನ್ನು ಪಡೆದರೂ ಪಡೆಯದಿದ್ದರೂ ತಮ್ಮ ಪಾಲಿನ ಜೀವನವನ್ನು ಸಂತುಷ್ಟರಾಗಿ, ಸದಾ ನೆಮ್ಮದಿಯಿಂದ ಸವೆಸುತ್ತಿರುತ್ತಾರೆ.