Just In
- 36 min ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 2 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 3 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 5 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
Don't Miss
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Movies STD ಬೂತ್ನಲ್ಲಿ ಕೆಲಸ ಮಾಡುವಾಗ 500 ರೂ. ಸಂಬಳ; ಶೋ ಆರಂಭಿಸಿದ ಮೇಲೆ ಗಳಿಸಿದ್ದೆಷ್ಟು ಕೋಟಿ?
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿ 2022: ಪೂಜೆಗೆ ಅರ್ಪಿಸುವ ಗರಿಕೆ ಹೇಗಿರಬೇಕು, ಯಾವ ಗರಿಕೆ ಅರ್ಪಿಸಬಾರದು?
ಅಕ್ಟೋಬರ್ 31ಕ್ಕೆ ಗಣೇಶ ಚತುರ್ಥಿ. ಹಿಂದೂ ಧರ್ಮದಲ್ಲಿ ಪೂಜೆ ಮಾಡುವಾಗ ಗರಿಕೆ ಹುಲ್ಲು ಇರಲೇಬೇಕು. ಯಾವುದೇ ಪೂಜೆಗೆ ಮುನ್ನ ವಿಘ್ನ ನಿವಾರಕ ಗಣೇಶನನ್ನು ಪೂಜೆ ಮಾಡಲಾಗುವುದು. ಗಣೇಶನ ಪೂಜೆಯಲ್ಲಿ ಗರಿಕೆಗೆ ವಿಶೇಷವಾದ ಸ್ಥಾನವಿದೆ. ಗಣೇಶನ ಪೂಜೆ ಎಂದ ಮೇಲೆ ಗರಿಕೆ ಇರಲೇಬೇಕು.
ಗರಿಕೆಯ
ಎಲೆಗಳು
ಮೂರು
ದೇವ
ತತ್ವಗಳಾದ
ಶಿವ,
ಶಕ್ತಿ
ಮತ್ತು
ಗಣೇಶನನ್ನು
ಪ್ರತಿಬಿಂಬಿಸುತ್ತದೆ.
ಗರಿಕೆ
ಹುಲ್ಲಿಗೆ
ದೈವ
ಸ್ವರೂಪವನ್ನು
ಆಕರ್ಷಿಸುವವ
ಶಕ್ತಿಯಿದೆ.
ಆದ್ದರಿಂದಲೇ
ಇದನ್ನು
ಪೂಜೆ,
ಹೋಮಗಳಲ್ಲಿ
ಬಳಸಲಾಗುವುದು.
ಶಿವ ಪೂಜೆಯಲ್ಲಿ ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸಿದರೆ ಗಣೇಶನ ಪೂಜೆಯಲ್ಲಿ ಗರಿಕೆಯನ್ನು ಅರ್ಪಿಸಲಾಗುವುದು. ಗರಿಕೆ ಅರ್ಪಿಸದಿದ್ದರೆ ಗಣೇಶ ಮತ್ಯಾವ ನೈವೇದ್ಯ ಸ್ವೀಕರಿಸುವುದಿಲ್ಲ, ಗಣೇಶ ಗರಿಕೆಯನ್ನೇ ಆಹಾರವನ್ನಾಗಿ ಸೇವಿಸುತ್ತಾನೆ ಎಂಬ ನಂಬಿಕೆಯಿದೆ. ಗಣೇಶ ಚತುರ್ಥಿಯಂದು ಗಣಪನಿಗೆ ಗರಿಕೆ ಸಲ್ಲಿಸುವಾಗ ಗರಿಕೆ ಹೇಗಿರಬೇಕು? ಯಾವ ಗರಿಕೆ ಸಲ್ಲಿಸಬಾರದು ಎಂದು ಹೇಳಿದ್ದೇವೆ ನೋಡಿ
21 ಗರಿಕೆ ಅರ್ಪಿಸಿದರೆ ಅದೃಷ್ಟ ಒಲಿಯುವುದು
ಎಲ್ಲಾ ವಿಘ್ನಗಳು ಮಾಯವಾಗಿ ಜೀವನ ಸುಖಕರವಾಗಿರಲಿ ಎಂದು ವಿಘ್ನೇಶನನ್ನು ಪೂಜಿಸುತ್ತಾರೆ. ಗಣೇಶನಿಗೆ 21 ಗರಿಕೆಯನ್ನು ಅರ್ಪಿಸಿ ಪೂಜಿಸುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ. ಇನ್ನು ಯಾವುದೇ ಕಷ್ಟಗಳು ಇದ್ದರೂ ಅದರ ಪರಿಹಾರಕ್ಕಾಗಿ ವಿಘ್ನೇಶನ ಪೂಜೆ ಮಾಡಿದರೆ ಗಣಪ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾನೆ, ನಮ್ಮ ಸಂಕಲ್ಪ ನೆರವೇರಿಸುತ್ತಾನೆ ಎಂಬ ನಂಬಿಕೆ ಗಣಪನ ಭಕ್ತರಲ್ಲಿ ದೃಢವಾಗಿದೆ.
ಯಾವ ಗರಿಕೆ ಗಣೇಶನಿಗೆ ಅರ್ಪಿಸಬಾರದು?
ಗಣೇಶನಿಗೆ ಹೂ ಹೊಡೆದ ಗರಿಕೆಯನ್ನು ಅರ್ಪಿಸಬಾರದು, ಎಲೆಗಳು ಸ್ವಲ್ಪ ಒಣಗಿರುವ ಗರಿಕೆಯನ್ನು ಕೂಡ ಪೂಜೆಗೆ ಬಳಸಬಾರದು, ಇಂಥ ಗರಿಕೆಯಲ್ಲಿ ಜೀವಶಕ್ತಿಯ ಉಲ್ಲಾಸ ಕಡಿಮೆ ಇರುತ್ತದೆ, ಇದರಿಂದ ಗರಿಕೆಗೆ ದೇವತೆಗಳನ್ನು ಆಕರ್ಷಿಸುವವ ಶಕ್ತಿ ಸಾಮಾರ್ಥ್ಯ ಕೂಡ ಕಡಿಮೆ ಆಗುವುದು. ಆದ್ದರಿಂದ ಹಸಿರಾದ, ಎಳೆಯ ಗರಿಕೆಯನ್ನು ಮಾತ್ರ ಗಣಪನಿಗೆ ಅರ್ಪಿಸಬೇಕು.
ಗಣೇಶನಿಗೆ ಗರಿಕೆಯನ್ನು ಅರ್ಪಿಸುವ ಹಿಂದಿರುವ ಪೌರಾಣಿಕ ಕತೆ
ಅನಲಾಸುರ ಎಂಬ ರಾಕ್ಷಸನಿದ್ದ, ಆತ ಸ್ವರ್ಗ ಲೋಕಕ್ಕೆ ದೇವತೆಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದ. ಆ ರಾಕ್ಷಸನ ಕಣ್ಣಿನಿಂದ ಬರುವ ಬೆಂಕಿಯು ಅವನ ದಾದಿಯಲ್ಲಿ ಸಿಗುವ ಎಲ್ಲರನ್ನೂ ಸುಟ್ಟು ಭಸ್ಮ ಮಾಡುತ್ತಿದ್ದ. ಈತನ ಉಪಟಳದಿಂದ ಪಾರುಮಾಡುವಂತೆ ಗಣೇಶನ ಬಳಿ ದೇವತೆಗಳು ಕೋರುತ್ತಾರೆ.
ಗಣಪ ಆ ರಾಕ್ಷಸನ ಜೊತೆಗೆ ಹೋರಾಟ ಮಾಡುತ್ತಾ ಅನಲಾಸುರ ರಾಕ್ಷಸನನ್ನು ಸಂಪೂರ್ಣ ನುಂಗಿ ಬಿಡುತ್ತಾನೆ. ಇದರಿಂದಾಗಿ ಗಣಪನ ಹೊಟ್ಟೆ ಉಬ್ಬುವುದು, ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಗಣಪ ಕಷ್ಟಪಡುತ್ತಾನೆ. ಶಿವ, ವಿಷ್ಣು, ಚಂದ್ರ ಎಲ್ಲಾ ಬಂದು ಗಣಪನ ನೋವು ಕಡಿಮೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ, ಆಗ ಋಷಿ ಮುನಿಗಳು 21 ಗರಿಕೆಯನ್ನು ಗಣೇಶನ ತಲೆ ಮೇಲೆ ಇಡುತ್ತಾರೆ, ಗಣಪನ ದೇಹದ ಉಷ್ಣಾಂಶವೆಲ್ಲಾ ಮಾಯವಾಗುವುದು, ಅಲ್ಲಿಂದ ಗಣಪನಿಗೆ ಗರಿಕೆ ಪ್ರಿಯ ಎಂಬ ಕತೆಯಿದೆ.
ತಾಯಿ ಎದೆ ಹಾಲಿಗೆ ಸಮವಾದಗುಣ ಗರಿಕೆಯಲ್ಲಿದೆ
ತಾಯಿ ಎದೆ ಹಾಲಿನ ಬದಲಿಗೆ ಒಂದು ಚಮಚ ಗರಿಕೆ ರಸಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿ ಪ್ರತಿನಿತ್ಯ ನೀಡಿದರೆ ಮಗು ದಷ್ಟಪುಷ್ಟವಾಗಿ ಬೆಳೆಯುತ್ತದೆ. ಆಯುರ್ವೇದಲ್ಲೂ ಗರಿಕೆಯ ಬಳಕೆ ಬಗ್ಗೆ ಉಲ್ಲೇಖವಿದೆ.
ಮೂಲವ್ಯಾಧಿ ಗುಣವಾಗುವುದು
ಅಲ್ಲದೇ ಪ್ರತಿನಿತ್ಯ ತಪ್ಪದೇ ಗರಿಕೆ ನೀರನ್ನು ಸೇವಿಸಿದರೆ ದೇಹಕ್ಕೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಗರಿಕೆ ಸೇವನೆಯಿಂದ ಮೂಲವ್ಯಾಧಿ ಸಂಪೂರ್ಣ ಗುಣವಾಗುತ್ತದೆ.