Just In
- 1 hr ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 1 hr ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
- 7 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 14 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
Don't Miss
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Movies 'ರಾಮಾಯಣ'ದಲ್ಲಿ 'ಯಶ್' ಗೆ 'ಸಾಕ್ಷಿ ತನ್ವರ್' ನಾಯಕಿ ; 'ಬೇಡವೇ ಬೇಡ' ಎಂದ ಅಭಿಮಾನಿಗಳು..!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾತಕದಲ್ಲಿ ಕೇತುವಿನ ಅಶುಭ ಫಲವಿದ್ದರೆ ಪರಿಹಾರವೇನು?
ಹಿಂದೂ ಧರ್ಮದಲ್ಲಿ ನವಗ್ರಹಗಳಲ್ಲಿ ರಾಹು ಮತ್ತು ಕೇತು ಗ್ರಹಗಳನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗಿದೆ. ಪೌರಾಣಿಕ ಕತೆಯಲ್ಲಿ ಕೇತುವನ್ನು ರಾಹು ಗ್ರಹದ ಶರೀರವೆಂದು ಹೇಳಲಾಗಿದೆ. ರಾಹು-ಕೇತು ಗ್ರಹಗಳನ್ನು ಛಾಯಾ ಗ್ರಹಗಳು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಗ್ರಹಗಳು ದೈಹಿಕವಾಗಿ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಅವುಗಳ ಪ್ರಭಾವ ಮನುಷ್ಯರ ಮೇಲಿರುತ್ತದೆ ಎಂದು ಹೇಳಲಾಗುವುದು.
ಜಾತಕದಲ್ಲಿ ಕೇತುವಿನ ಋಣಾತ್ಮಕ ಪ್ರಭಾವವಿದ್ದರೆ ಇದರಿಂದಾಗಿ ಜೀವನದಲ್ಲಿ ಹಲವು ರೀತಿಯ ಕಷ್ಟಗಳು, ಸವಾಲುಗಳು ಎದುರಾಗುವುದು ಎಂದು ಹೇಳಲಾಗುವುದು. ಹಾಗಾದರೆ ಕೇತುವಿನ ಅಶುಭ ಪ್ರಭಾವಕ್ಕೆ ಪರಿಹಾರವಿದೆಯೇ ಎಂದು ನೋಡುವಾಗ ಜ್ಯೋತಿಷ್ಯದಲ್ಲಿ ಅದಕ್ಕೂ ಪರಿಹಾರ ಇದೆ.
ಕೇತುವಿನ ಕೆಟ್ಟ ಪ್ರಭಾವವಿದ್ದರೆ ಅದು ಹೋಗಲು ಏನು ಮಾಡಬೇಕೆಂದು ಹೇಳಲಾಗಿದೆ ನೋಡಿ:
ಗಣಪತಿ ಪೂಜೆ
ಎಲ್ಲಾ ವಿಘ್ನಗಳನ್ನು ತೊಡೆದು ಹಾಕಲು ಗಣೇಶನನ್ನು ಪೂಜಿಸಲಾಗುವುದು. ಕೇತು ನೀಡುವ ಕಷ್ಟದಿಂದ ಪಾರಾಗಲು ಕೂಡ ಗಣಪತಿಯನ್ನು ಪೂಜೆ ಮಾಡಿ. ಬುಧವಾರ ಗಣಪತಿಯ ಅಥರ್ವಶಿರ್ಷ ಪಠಿಸಿದರೆ ಶುಭ ಫಲಿತಾಂಶ ದೊರೆಯುವುದು.
ಕಪ್ಪು ಹಸು ದಾನ ಮಾಡಿ ಅಥವಾ ಗೋಶಾಲೆಗೆ ಮೇವನ್ನು ದಾನ ಮಾಡಿ
ಬ್ರಾಹ್ಮಣರಿಗೆ ಹಸುವನ್ನು ದಾನ ಮಾಡಿ ಇಲ್ಲದಿದ್ದರೆ ಗೋಶಾಲೆಗೆ ಅಕ್ಕಿ-ಬೆಲ್ಲ ದಾನ ಮಾಡಿ.
ನೀರಿಗೆ ಇದ್ದಿಲು ಹಾಕಿ
ಕೇತುವಿನ ಅಶುಭ ಫಲದಿಂದ ಮುಕ್ತಿ ಪಡೆಯಲು ಇದ್ದಿಲನ್ನು 8 ಭಾಗಗಳನ್ನಾಗಿ ಮಾಡಿ ಹರಿಯುವ ನೀರಿನಲ್ಲಿ ಬಿಡಬೇಕು. ಕೆಂಪು ಇರುವೆಗೆ ಆಹಾರ ನೀಡಬೇಕು. ಅಂಗವಿಕಲರಿಗೆ ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು.
ಕಪ್ಪು ನಾಯಿಗೆ ಆಹಾರ ನೋಡಿ
ಕಪ್ಪು ನಾಯಿಗೆ ಆಹಾರವನ್ನು ನೀಡಬೇಕು ಅಲ್ಲದೆ ಕಪ್ಪು ಹಾಗೂ ಬಿಳಿ ಎಳ್ಳನ್ನು ನೀರಿನಲ್ಲಿ ಬಿಡಿ. ಮೀನುಗಳಿಗೆ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಹಾಕಿ.
ತುಪ್ಪದ ದೀಪ ಹಚ್ಚಿ
ಜಾತಕದಲ್ಲಿ ಕೇತು ದೋಷವಿದ್ದವರು ದೇವಾಲಯಕ್ಕೆ ಹೋಗಿ ತುಪ್ಪದ ದೀಪ ಹಚ್ಚಬೇಕು.
ಲೋಹ, ಎಳ್ಳು, ತೆಂಗಿನಕಾಯಿ, ಉದ್ದು, ಗೋವು ಇವುಳನ್ನು ದಾನ ಮಾಡಿ..
ಕೇತುವಿನ ಕೆಟ್ಟ ಪ್ರಭಾವ ತಗ್ಗಲು ಮಂತ್ರ ಪಠಿಸಿ:
ಕೇತು ವೈದಿಕ ಮಂತ್ರ
ಓಂ ಕೇತು ಕೃಣ್ವನ್ನಕೆತವೇ ಪೇಷೋ ಮರ್ಯಾ ಅಪೇಶ ಸೆ. ಸುಮುಷದ್ಭಿರಜಾಯತಃ
ಕೇತು ತಾಂತ್ರಿಕ ಮಂತ್ರ
ಓಂ ಸ್ತ್ರಂ ಸ್ತ್ರಿಂ ಸ್ತ್ರೌಂ ಸಃ ಕೆತವೇನಮಃ
ಕೇತು ಏಕಾಕ್ಷರಿ ಮಂತ್ರ
ಓಂ ಕೆತವೇನಮಃ