Just In
- 40 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Brahma Muhurta : ಬ್ರಾಹ್ಮಿ ಮುಹೂರ್ತ ಎಂದರೇನು, ಹಿಂದೂ ಧರ್ಮದಲ್ಲಿ ಏಕೆ ಈ ಸಮಯಕ್ಕೆ ಹೆಚ್ಚು ಮಹತ್ವವಿದೆ?
ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು, ಕೆಲಸ ಮಾಡಬೇಕಾದರೂ ಒಳ್ಳೆಯ ದಿನ, ಶುಭ ಮುಹೂರ್ತ ನೋಡಿ ಮಾಡುವುದು ವಾಡಿಕೆ. ಆದರೆ ದಿನದಲ್ಲಿ ಪ್ರತಿದಿನವೂ ಒಂದು ನಿಗದಿತ ಮುಹೂರ್ತವಿದೆ, ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದು ಬಹಳ ಉತ್ತಮ, ಎಲ್ಲವೂ ಶುಭವಾಗುತ್ತದೆ ಎಂದು ನಂಬಲಾಗಿದೆ. ಅದುವೇ ಬ್ರಾಹ್ಮಿ ಮುಹೂರ್ತ.
ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತ ಎಂದು ಕರೆಯುವ ಈ ಸಮಯಕ್ಕೆ ಹಿಂದೂ ಧರ್ಮದಲ್ಲಿ ಬಹಳ ಪ್ರಾಶಸ್ತ್ಯವಾದ ಸ್ಥಾನವಿದೆ. ನಮ್ಮ ಹಿರಿಯರು ಮುಂಜಾನೆಯೇ ಎದ್ದು, ಶುದ್ಧರಾಗಿ ಪೂಜೆ ಮಾಡಿ ಮುಂದಿನ ಕಾರ್ಯಗಳನ್ನು ಮಾಡುತ್ತಿದ್ದರು. ಇದಕ್ಕೆ ಕಾರಣ ಅವರು ಬ್ರಾಹ್ಮಿ ಮುಹೂರ್ತಕ್ಕೆ ನೀಡುತ್ತಿದ್ದ ಮಹತ್ವ.
ಬ್ರಾಹ್ಮಿ ಮುಹೂರ್ತ ಎಂದರೇನು?
ಬ್ರಹ್ಮ ಎಂದರೆ ಜ್ಞಾನ ಮತ್ತು ಮುಹೂರ್ತ ಎಂದರೆ ಕಾಲ. ಬ್ರಹ್ಮ ಮುಹೂರ್ತವು ಜ್ಞಾನವನ್ನು ಗ್ರಹಿಸಲು ಸೂಕ್ತವಾದ ಸಮಯ. ಬ್ರಹ್ಮಮುಹೂರ್ತದ ಅವಧಿ, ಅಂದರೆ ಸೂರ್ಯೋದಯಕ್ಕೆ ಒಂದೂವರೆ ಗಂಟೆಗಳ ಮುಂಚೆಯ ಕಾಲ. ಬ್ರಾಹ್ಮೀ ಮುಹೂರ್ತ 48 ನಿಮಿಷಗಳು ಮಾತ್ರ ಇರುತ್ತದೆ. ಆಯುರ್ವೇದದ ಪ್ರಕಾರ ಮುಂಜಾನೆಯ ನಸುಕಿನ 3:00 ರಿಂದ 6:00 ರವರೆಗಿನ ಸಮಯದಲ್ಲಿ ಬ್ರಾಹ್ಮಿ ಮುಹೂರ್ತ ಇರುತ್ತದೆ.
ಬ್ರಾಹ್ಮಿ ಮುಹೂರ್ತಕ್ಕು ಮತ್ತು ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. ಈ ಅಪೂರ್ವ ಸಮಯದಲ್ಲೇ ಪ್ರಾಣಿಗಳು ಮತ್ತು ಪಕ್ಷಿಗಳು ಸಹ ಎಚ್ಚರಗೊಳ್ಳುತ್ತವೆ. ಇವುಗಳ ಸಿಹಿ ಧ್ವನಿ ಈ ಸಮಯದಲ್ಲಿ ಪ್ರಾರಂಭವಾಗುತ್ತದೆ. ಕಮಲ ಸೇರಿದಂತೆ ಹೂಗಳು ಕೂಡ ಅರಳುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಪ್ರಕೃತಿ ಪ್ರಬುದ್ಧವಾಗುತ್ತದೆ ಹಾಗೂ ಅರಳುತ್ತದೆ.
ಬ್ರಾಹ್ಮಿ ಮುಹೂರ್ತದ ಮಹತ್ವ
* ಪ್ರಾಚೀನ ಕಾಲದಿಂದಲೂ ಬ್ರಾಹ್ಮಿ ಮುಹೂರ್ತಕ್ಕೆ ಬಹಳ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಋಷಿಮುನಿಗಳು ಈ ಸಮಯಕ್ಕೆ ವಿಶೇಷವಾದಂತಹ ಸ್ಥಾನಮಾನ ನೀಡಿದ್ದಾರೆ.
* ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದ ಸತ್ಕರ್ಮಗಳನ್ನು ಆಚರಿಸಿದರೆ ಹೆಚ್ಚು ಫಲಪ್ರದ ಎಂದು ಹೇಳಲಾಗುತ್ತದೆ.
* ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರದ ಪ್ರಕಾರ ನಿಷಿದ್ಧ.
* ವೈಜ್ಞಾನಿಕ ದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಮಹತ್ವವಿದೆ. ಈ ಸಮಯದಲ್ಲಿ ವಾಯುಮಂಡಲ ಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ. ಆಮ್ಲಜನಕದ ಪ್ರಮಾಣ ಶೇಕಡಾ 41ರಷ್ಟಿರುತ್ತದೆ. ಇದರಿಂದ ನಮ್ಮ ಶ್ವಾಸಕೋಶಗಳು ಶುದ್ಧಿಯಾಗುತ್ತದೆ. ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
* ಬ್ರಹ್ಮ ಮುಹೂರ್ತದಲ್ಲೆದ್ದು ನಡೆಯುವವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ. ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂಥ ಶಕ್ತಿಯಿರುತ್ತದೆ.
* ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಚ್ಚು ತಾಜಾ ಅಗಿರುವ, ಜಾಗೃತರಾಗಿರುವ ಮತ್ತು ಸುಲಭವಾಗಿ ನಿಮ್ಮನ್ನು ಟ್ಯೂನ್ ಮಾಡಬಹುದಾದ ಏಕೈಕ ಸಮಯವೆಂದರೆ ಬ್ರಹ್ಮ ಮುಹೂರ್ತವಾಗಿದೆ.
* ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ. ದೇವರ ಶೃಂಗಾರ ಹಾಗೂ ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.
ಹಲವು ಸಂಶೋಧನೆಗಳ ಪ್ರಕಾರ ಬ್ರಾಹ್ಮಿ ಮುಹೂರ್ತದ ಪ್ರಯೋಜನಗಳು
ಇಂಟರ್ನ್ಯಾಷನಲ್ ಜರ್ನಲ್ ಆಫ್ ಯೋಗ ಮತ್ತು ಅಲೈಡ್ ಸೈನ್ಸಸ್ ಪ್ರಕಾರ, ಬ್ರಾಹ್ಮಿ ಮುಹೂರ್ತದ ಅವಧಿಯಲ್ಲಿ, ವಾತಾವರಣದಲ್ಲಿ ಹೊಸ ಆಮ್ಲಜನಕದ ಲಭ್ಯತೆ ಇರುತ್ತದೆ. ಈ ಹೊಸ ಆಮ್ಲಜನಕವು ಹಿಮೋಗ್ಲೋಬಿನ್ನೊಂದಿಗೆ ಸುಲಭವಾಗಿ ಬೆರೆತು ಆಕ್ಸಿಹೆಮೊಗ್ಲೋಬಿನ್ ಅನ್ನು ರೂಪಿಸುತ್ತದೆ, ಇದು ಈ ಕೆಳಗಿನ ಪ್ರಯೋಜನಗಳನ್ನು ಹೊಂದಿದೆ:
* ಪ್ರತಿನಿತ್ಯ ಬ್ರಹ್ಮಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ.
* ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂ ಬುದ್ಧಿ ಉಲ್ಲಸಿತವಾಗಿರುತ್ತವೆ.
* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
* ರಕ್ತದ ಪಿಎಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
* ನೋವು ಮತ್ತು ಸೆಳೆತವನ್ನು ನಿವಾರಿಸುತ್ತದೆ.
* ಖನಿಜಗಳು ಮತ್ತು ಜೀವಸತ್ವಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
* ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ. ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ಮನವರಿಕೆಯಾಗುತ್ತದೆ.
* ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರ ಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.
* ಮನುಷ್ಯನ ಜ್ಞಾನ, ವಿವೇಕ, ಶಾಂತಿ, ಸುಖ ಮುಂತಾದ ಸದ್ಗುಣಗಳ ವೃದ್ಧಿಯಾಗುತ್ತದೆ.
* ಭಗವಂತನ ಸ್ಮರಣೆಯ ನಂತರ ಮೊಸರು, ತುಪ್ಪ, ಕನ್ನಡಿ, ಬಿಲ್ವಪತ್ರೆ, ಹೂವಿನ ಮಾಲೆ ಮುಂತಾದ ಪವಿತ್ರ ವಸ್ತುಗಳನ್ನು ನೋಡುವುದರಿಂದ ದಿನ ಶುಭವಾಗಿರುತ್ತದೆ.
* ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬ್ರಾಹ್ಮಿ ಮುಹೂರ್ತದಲ್ಲಿ ಈ ಕೆಲಸಗಳನ್ನು ಮಾಡಬೇಕು
1. ಧ್ಯಾನ
ನಿಮ್ಮನ್ನು ನೀವು ಭೇಟಿಯಾಗಲು ಧ್ಯಾನವು ಉತ್ತಮ ಮಾರ್ಗವಾಗಿದೆ. ಮತ್ತು ಪ್ರಪಂಚವು ಹೆಚ್ಚು ಮೌನವಾಗಿರುವ ಈ ಸಮಯದಲ್ಲಿ ಧ್ಯಾನ ಮಾಡಲು ಉತ್ತಮ ಸಮಯ, ಈ ಸಮಯದಲ್ಲಿ ನಿಮ್ಮ ಅರಿವಿನ ಮಟ್ಟವು ಅತ್ಯುತ್ತಮವಾಗಿದೆ. ಅತ್ಯುತ್ತಮ ಬ್ರಹ್ಮ ಮುಹೂರ್ತ ಧ್ಯಾನವೆಂದರೆ ಸಹಜ ಸಮಾಧಿ ಧ್ಯಾನ.
2. ಜ್ಞಾನಾರ್ಜನೆ
ಬ್ರಹ್ಮ ಮುಹೂರ್ತವು ಆಧ್ಯಾತ್ಮಿಕ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಗ್ರಹಿಸಲು ಅತ್ಯಂತ ಸೂಕ್ತ ಸಮಯವಾಗಿದೆ. ಪ್ರಾಚೀನ ಗ್ರಂಥಗಳನ್ನು ಅನ್ವೇಷಿಸಿ ಅಥವಾ ಬುದ್ಧಿವಂತಿಕೆಯ ಸರಳ ತತ್ವಗಳ ಮೂಲಕ ಹೋಗಿ. ಧರ್ಮಶಾಸ್ತ್ರದ ಪ್ರಕಾರ, ಬ್ರಹ್ಮ ಮುಹೂರ್ತದ ಸಮಯದಲ್ಲಿ ಗ್ರಂಥಗಳನ್ನು ಅಧ್ಯಯನ ಮಾಡುವುದರಿಂದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
3. ಆತ್ಮಾವಲೋಕನ
ಹಿಂದಿನ ದಿನದ ನಿಮ್ಮ ಕ್ರಿಯೆಗಳನ್ನು ನೆನಪಿಸಿಕೊಳ್ಳಿ. ಅಸೂಯೆ, ಕೋಪ ಮತ್ತು ದುರಾಶೆಯಂತಹ ನಕಾರಾತ್ಮಕ ಭಾವನೆಗಳನ್ನು ನೀವು ಎಷ್ಟು ಬಾರಿ ಮಾಡಿದ್ದೀರಿ ಎಂಬುದನ್ನು ನೆನಪಿಡಿ. ಈ ಯಾವುದೇ ನೆನಪುಗಳು ನಿಮ್ಮನ್ನು ಅಪರಾಧದಲ್ಲಿ ಮುಳುಗಿಸಲು ಬಿಡಬೇಡಿ. ಆ ಕ್ಷಣಗಳ ಬಗ್ಗೆ ಅರಿತುಕೊಳ್ಳಿ. ಪ್ರತಿದಿನ ಇದನ್ನು ಮಾಡುವುದರಿಂದ ಅಂತಿಮವಾಗಿ ಈ ನಕಾರಾತ್ಮಕ ಭಾವನಾತ್ಮಕ ಮಾದರಿಗಳಿಗೆ ಒಳಗಾಗುವ ನಿಮ್ಮ ಪ್ರವೃತ್ತಿಯನ್ನು ಕಡಿಮೆ ಮಾಡುತ್ತದೆ.
4. ನಿಮ್ಮ ಪೋಷಕರು, ಗುರು ಮತ್ತು ದೇವರನ್ನು ನೆನಪಿಸಿಕೊಳ್ಳಿ
ನಮ್ಮ ಜೀವನದ ಪ್ರಮುಖ ವ್ಯಕ್ತಿಗಳನ್ನು ನೆನಪಿಟ್ಟುಕೊಳ್ಳಲು ನಮಗೆ ಆಗಾಗ್ಗೆ ಸಮಯ ಸಿಗುವುದಿಲ್ಲ. ಈ ಅವಧಿಯಲ್ಲಿ ನಿಮ್ಮ ಪೋಷಕರು, ಗುರು ಮತ್ತು ಈ ಸೃಷ್ಟಿಯನ್ನು ನಡೆಸುತ್ತಾರೆ ಎಂದು ನೀವು ನಂಬುವ ಶಕ್ತಿಯನ್ನು ನೆನಪಿಟ್ಟುಕೊಳ್ಳಲು ಮತ್ತು ಮಾನಸಿಕವಾಗಿ ನಮಸ್ಕರಿಸಲು ಇದು ಬಹಳ ಅತ್ಯುತ್ತಮ ಸಮಯ.
ಬ್ರಾಹ್ಮಿ ಮುಹೂರ್ತದಲ್ಲಿ ಈ ಕೆಲಸಗಳನ್ನು ಮಾಡಬಾರದು
ಧರ್ಮಶಾಸ್ತ್ರದ ಪ್ರಕಾರ ಬ್ರಾಹ್ಮಿ ಮುಹುರ್ತದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತದೆ. ಯಾವುದು ಆ ಕೆಲಸಗಳು ಇಲ್ಲಿದೆ ನೋಡಿ:
* ಬ್ರಹ್ಮ ಮುಹೂರ್ತದಲ್ಲಿ ತಿನ್ನುವುದರಿಂದ ಅನಾರೋಗ್ಯ ಉಂಟಾಗುತ್ತದೆ, ಆದ್ದರಿಂದ ಈ ಸಮಯದಲ್ಲಿ ತಿನ್ನುವುದು ನಿಷಿದ್ಧ.
* ಒತ್ತಡದ ಚಟುವಟಿಕೆಯನ್ನು ಮಾಡಬೇಡಿ. ಹೆಚ್ಚು ಮಾನಸಿಕ ಕೆಲಸದ ಅಗತ್ಯವಿರುವ ಯಾವುದನ್ನೂ ಮಾಡಬೇಡಿ. ಹಾಗೆ ಮಾಡುವುದರಿಂದ ಒಬ್ಬರ ಜೀವಿತಾವಧಿ ಕಡಿಮೆಯಾಗುತ್ತದೆ.
* ವೈಜ್ಞಾನಿಕವಾಗಿ ಹಾಗೂ ಧರ್ಮಶಾಸ್ತ್ರಗಳ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಆರೋಗ್ಯವಂತ ವ್ಯಕ್ತಿ ಮಾತ್ರ ಎಚ್ಚರಗೊಳ್ಳಬೇಕು ಎಂದು ಹೇಳುತ್ತದೆ. ಬ್ರಹ್ಮಮುಹೂರ್ತದಲ್ಲಿ ಈ ಕೆಳಗಿನ ಜನರು ಎಚ್ಚರಗೊಳ್ಳದಂತೆ ಸಹ ನಿರ್ಬಂಧವಿದೆ:
* ಗರ್ಭಿಣಿ ಮಹಿಳೆಯರು
* ಮಕ್ಕಳು
* ಮೊದಲಿನಿಂದಲೂ ಈ ಅವಧಿಯಲ್ಲಿ ಎಚ್ಚರಗೊಳ್ಳದ ವಯಸ್ಸಾದವರು
* ಯಾವುದೇ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು