Just In
- 45 min ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 1 hr ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 1 hr ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 2 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೌರಮಾನ ಯುಗಾದಿಯಂದು ಈ ಸಮಯ ತುಂಬಾ ಪವಿತ್ರವಾದದ್ದು
ವಿಷು ಕೇರಳದ ಪ್ರಮುಖ ಹಬ್ಬವಾದರೂ ನಮ್ಮ ಕರ್ನಾಟಕದಲ್ಲೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು. ಮಂಗಳೂರಿನಲ್ಲಿ ಇದನ್ನು ಬಿಷು ಹಬ್ಬವೆಂದು ಆಚರಿಸಲಾಗುವುದು.
ನಮಗೆ ಯುಗಾದಿ ಹೊಸ ವರ್ಷವಾದರೆ ಕೇರಳಿಗರು ವಿಷುವನ್ನು ಹೊಸ ವರ್ಷವೆಂದು ಆಚರಿಸಲಾಗುವುದು. ಈ ವರ್ಷ ವಿಷುವನ್ನು ಏಪ್ರಿಲ್ 14, ಬುಧವಾರದಂದು ಆಚರಿಸಲಾಗುವುದು. ಇದನ್ನು ಸೌರಮಾನ ಯುಗಾದಿ ಎಂದು ಕೂಡ ಕರೆಯಲಾಗುವುದು.
ಸೌರಮಾನ ಯುಗಾದಿಯ ಮಹತ್ವ
ಜನವರಿ, ಫೆಬ್ರವರಿ ಎನ್ನುವುದು ಇಂಗ್ಲಿಷ್ ತಿಂಗಳ ಲೆಕ್ಕಾಚಾರವಾದರೆ ಪಂಚಾಂಗದ ಪ್ರಕಾರ ಮೀನ, ಮೇಷ ನಮ್ಮ ತಿಂಗಳುಗಳಾಗಿವೆ. ನಾವು ಆಚರಿಸುವ ಹಬ್ಬಗಳು, ಸಂಪ್ರದಾಯ ಎಲ್ಲವೂ ಈ ತಿಂಗಳುಗಳ ಆಧಾರದ ಮೇಲೆ ನಡೆಯುವುದು. ಸೌರಮಾನ ಯುಗಾದಿ ಎಂಬುವುದು ಹೊಸ ವರ್ಷದ ಆರಂಭವಾಗಿದೆ.
ಪ್ರತೀ ತಿಂಗಳು ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರಿಸುತ್ತಾನೆ, ಇದನ್ನು ವೈದಿಕ ಭಾಷೆಯಲ್ಲಿ ಸೂರ್ಯ ಸಂಚಾರ ಎಂದು ಕರೆಯಲಾಗುವುದು.
ಸೌರಮಾನ ಯುಗಾದಿಗೆ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮೇಷ ರಾಶಿಯಿಂದ ಸಂಚಾರ ಪ್ರಾರಂಭಿಸುವುದರಿಂದ ಸೌರಮಾನ ಯುಗಾದಿಯನ್ನು ಹೊಸ ವರ್ಷವೆಂದು ಪರಿಗಣಿಸಲಾಗಿದೆ.
ಸೌರಮಾನ ಯುಗಾದಿಯ ಈ ಸಮಯ ತುಂಬಾ ಪವಿತ್ರವಾದದ್ದು
ಸೌರಮಾನ ಯುಗಾದಿಯ ಸಂಕ್ರಾಂತಿಯ ಸಮಯ ತುಂಬಾ ಪವಿತ್ರ ಎಂದು ಪರಿಗಣಿಸಲಾಗುವುದು. ಸಂಕ್ರಾಂತಿ ಸಮಯದ 10 ನಿಮಿಷಕ್ಕೆ ಮುಂಚೆ ಹಾಗೂ ಸಂಕ್ರಾಂತಿ ಸಮಯದ ನಂತರ 10 ನಿಮಿಷವನ್ನು ಅತ್ಯಂತ ಪವಿತ್ರ ಸಮಯವೆಂದು ಹೇಳಲಾಗುವುದು. ಈ ಸಮಯದಲ್ಲಿ ಗೃಹ ಪ್ರವೇಶ ಮುಂತಾದ ಶುಭ ಕಾರ್ಯಕ್ಕೆ ತುಂಬಾ ಯೋಗ್ಯವಾದ ಸಮಯವೆಂದು ಪರಿಗಣಿಸಲಾಗಿದೆ.
ಮೇಷ ಸಂಕ್ರಾಂತಿ ಪುಣ್ಯ ಕಾಲ: ಬೆಳಗ್ಗೆ 05:46ರಿಂದ ಮಧ್ಯಾಹ್ನ 12:07ರವರೆಗೆ
ಮೇಷ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಗ್ಗೆ 05:46ರಿಂದ 07:53ರವರೆಗೆ
ವಿಷು ಕಣಿ
ಇನ್ನು ಕೇರಳದಲ್ಲಿ ಈ ದಿನ ವಿಷು ಕಣಿ ಇಡಲಾಗುವುದು. ಸೌರಮಾನ ಯುಗಾದಿ ಎಂದರೆ ಹೊಸ ವರ್ಷ, ಈ ಹೊಸ ವರ್ಷದಂದು ಶುಭ ಹಾಗೂ ಅದೃಷ್ಟದ ವಸ್ತುಗಳನ್ನು ಮೊದಲು ನೋಡಬೇಕು, ಇದರಿಂದ ವರ್ಷ ಪೂರ್ತಿ ಸಂಪತ್ತು, ಸಮೃದ್ಧಿ, ಖುಷಿ ಇರುತ್ತದೆ ಎಂಬ ನಂಬಿಕೆ.
ಈ ದಿನ ರಾತ್ರಿಯೇ ಮನೆಯಲ್ಲಿ ಅಮ್ಮ ಒಂದು ಹಿತ್ತಾಳೆ ಪಾತ್ರೆಯಲ್ಲಿ ಆರಗು ಹೂ ಇಟ್ಟು (golden shower tree) ಅದರಲ್ಲಿ ಹೊಸ ಫಲ ಅಂದ್ರೆ ಮಾವು, ಹಲಸು, ಹಣ್ಣುಗಳು, ಹೊಸ ತರಕಾರಿ ಎಲ್ಲವನ್ನು ಇಟ್ಟು, ಹೊಸ ಬಟ್ಟೆ, ಚಿನ್ನ, ಬೆಳ್ಳಿ, ಹಣ ಎಲ್ಲವನ್ನು ಕೃಷ್ಣ ವಿಗ್ರಹ ಮುಂದೆ ಇಡಲಾಗುವುದು.
ಬೆಳಗ್ಗೆ ಬೇಗನೆ ಎದ್ದ ದೀಪವನ್ನು ಹಚ್ಚಿ, ಮನೆ ಮಂದಿಯ ಕಣ್ಣು ಮುಚ್ಚಿ ಆ ವಿಷು ಕಣಿ ಮುಂದೆ ತಂದು ಅವರನ್ನು ಬಿಡಲಾಗುವುದು. ಅವರು ಕಣ್ಣು ಬಿಟ್ಟ ತಕ್ಷಣ ಕಾಣುವುದು ವಿಷು ಕಣಿ. ಈ ದರ್ಶನ ಕಾಣುವುದರಿಂದ ವರ್ಷ ಪೂರ್ತಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ.
ನಂತರ ಈ ದಿನ ವಿವಿಧ ಭಕ್ಷ್ಯ ಮಾಡಿ ಮನೆ ಮಂದಿಯೆಲ್ಲಾ ಸೇರಿ ಸವಿಯಲಾಗುವುದು.