Just In
- 1 hr ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 1 hr ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 2 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 3 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆ.1ಕ್ಕೆ ಸ್ಕಂದ ಷಷ್ಠಿ: ಸಂತಾನ ಭಾಗ್ಯ, ದಾರಿದ್ರ್ಯ ನಿವಾರಣೆಗೆ ಪಾಲಿಸಬೇಕಾದ ಪೂಜಾ ವಿಧಿಗಳೇನು?
ಸ್ಕಂದ ಷಷ್ಠಿ ಉಪವಾಸವನ್ನು ಕಾರ್ತಿಕೇಯ ದೇವರಿಗೆ ಅಂದರೆ ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಿಸಲಾಗಿದೆ. ಭಾದ್ರಪದ ಶುಕ್ಲ ಪಕ್ಷದ ಷಷ್ಠಿ ದಿನಾಂಕದಂದು ಸ್ಕಂದ ಷಷ್ಠಿ ಆಚರಿಸಲಾಗುತ್ತದೆ ಅಂದರೆ ಈ ದಿನ ಆಚರಿಸಲಾಗುತ್ತಿದೆ. ಸ್ಕಂದ ಷಷ್ಠಿಯನ್ನು ಕಂದ ಷಷ್ಠಿ ಎಂದೂ ಕರೆಯುತ್ತಾರೆ.
ಈ ದಿನ ಕಾರ್ತಿಕೇಯ ದೇವರನ್ನು ನಿಯಮಾನುಸಾರ ಪೂಜಿಸುವುದರಿಂದ ಸುಖ, ಸಮೃದ್ಧಿ, ಸಂತಾನ ಭಾಗ್ಯ ದೊರೆಯುತ್ತದ.
ಸ್ಕಂದ ಷಷ್ಠಿಯ ಪೂಜೆಯ ಶುಭ ಸಮಯ ಯಾವಾಗ?
ಸ್ಕಂದ ಷಷ್ಠಿ ದಿನಾಂಕ - ಸೆಪ್ಟೆಂಬರ್ 1, 2022, ಗುರುವಾರ
ಭಾದ್ರಪದ, ಶುಕ್ಲ ಷಷ್ಠಿ ಆರಂಭ - ಮಧ್ಯಾಹ್ನ 02:49 ಸೆಪ್ಟೆಂಬರ್ 01
ಭಾದ್ರಪದ, ಶುಕ್ಲ ಷಷ್ಠಿ ಮುಕ್ತಾಯ -ಮಧ್ಯಾಹ್ನ 01:51ಕ್ಕೆ ಸೆಪ್ಟೆಂಬರ್ 02
ಸೆಪ್ಟೆಂಬರ್ 1 ರಂದು ಸ್ಕಂದ ಷಷ್ಠಿ ಉಪವಾಸವನ್ನು ಆಚರಿಸಲಾಗುತ್ತದೆ.
ಸ್ಕಂದ ಷಷ್ಠಿಯ ಮಹತ್ವ
ಮುರುಗನು ಷಷ್ಠಿಯ ದಿನದಂದು ಸೊರಪದ್ಮ ಮತ್ತು ಅವನ ಸಹೋದರರಾದ ತಾರಕಾಸುರ ಮತ್ತು ಸಿಂಹಮುಖನನ್ನು ಕೊಂದನು. ಸ್ಕಂದ ಷಷ್ಠಿಯ ಈ ದಿನ ವಿಜಯದ ಸಂಕೇತವಾಗಿದೆ. ಮುರುಗನ್ ವೇಲ್ ಎಂಬ ಆಯುಧವನ್ನು ಬಳಸಿ ಸೂರಪದ್ಮನ ಶಿರಚ್ಛೇದ ಮಾಡಿದನೆಂದು ನಂಬಲಾಗಿದೆ. ಕತ್ತರಿಸಿದ ತಲೆಯಿಂದ ನವಿಲು ಹಾಗೂ ಹುಂಜ ಹೊರಹೊಮ್ಮಿದವು ಎಂಬ ಪೌರಾಣಿಕ ಕತೆಯಿದೆ. ನವಿಲನ್ನು ಕಾರ್ತಿಕೇಯ ತನ್ನ ವಾಹನವನ್ನಾಗಿ ಮಾಡಿದರೆ ಧ್ವಜದ ಸಂಕೇತವಾಗಿ ಹುಂಜವನ್ನು ಬಳಸಿದರು.
ಸ್ಕಂದ ಷಷ್ಠಿಯ ವ್ರತವನ್ನು ಆಚರಿಸುವುದರಿಂದ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.
ಪೂಜಾ ವಿಧಿಗಳು:
* ಸ್ಕಂದ ಷಷ್ಠಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ.
* ಹಲಗೆಯ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ಕಾರ್ತಿಕೇಯನ ವಿಗ್ರಹವನ್ನು ಸ್ಥಾಪಿಸಿ.
* ಮುರುಗನ ಜೊತೆಗೆ ಶಿವ-ಪಾರ್ವತಿ ಹಾಗೂ ಗಣೇಶ ಮೂರ್ತಿಗಳನ್ನೂ ಪ್ರತಿಷ್ಠಾಪಿಸಬೇಕು.
* ಕಾರ್ತಿಕೇಯನ ಮುಂದೆ ಕಲಶವನ್ನು ಇರಿಸಿ.
* ಮೊದಲು ಗಣೇಶನ ಪೂಜೆ ಮಾಡಿ.
* ಸಾಧ್ಯವಾದರೆ ಅಖಂಡ ಜ್ಯೋತಿ ಬೆಳಗಿಸಿ. ಹಾಗೆಯೇ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಿ.
* ಕಾರ್ತಿಕೇಯನಿಗೆ ನೀರನ್ನು ಅರ್ಪಿಸಿ ಮತ್ತು ಹೊಸ ಬಟ್ಟೆಗಳನ್ನು ಅರ್ಪಿಸಿ.
* ಹೂವುಗಳು ಅಥವಾ ಹೂವಿನ ಹಾರಗಳನ್ನು ಅರ್ಪಿಸುವ ಮೂಲಕ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
* ಪೂಜೆಯ ಕೊನೆಯಲ್ಲಿ ಆರತಿ ಮಾಡಿ.