Just In
Don't Miss
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Shukra Asta 2022 : ಸಿಂಹದಲ್ಲಿ ಶುಕ್ರ ಅಸ್ತಂಗತ: 67 ದಿನಗಳವರೆಗೆ ದ್ವಾದಶ ಮೇಲೆ ಬೀರಲಿದೆ ಈ ಪ್ರಭಾವ
ವೈದಿಕ ಶಾಸ್ತ್ರದ ಪ್ರಕಾರ ಯಾವುದೇ ಗ್ರಹ ಅಸ್ತಂಗತವಾದರೆ ಅನುಕೂಲಕರ ಮತ್ತು ಪರಿಣಾಮಕಾರಿ ಫಲಿತಾಂಶಗಳನ್ನು ನೀಡಲು ಸಂಪೂರ್ಣವಾಗಿ ಅಸಮರ್ಥವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇದರ ಪ್ರಭಾವ ದ್ವಾದಶ ರಾಶಿಗಳ ಮೇಲಿರುತ್ತದೆ.
ಸೆಪ್ಟೆಂಬರ್ 15ಕ್ಕೆ ಶುಕ್ರ ಸಿಂಹ ರಾಶಿಯಲ್ಲಿ ಅಸ್ತಂಗತವಾಗುತ್ತಿದೆ. ಶುಕ್ರನನ್ನು ಐಶ್ವರ್ಯ, ಸೌಕರ್ಯ, ಸೌಂದರ್ಯ, ಪ್ರೇಮದ ಅಂಶವೆಂದು ಪರಿಗಣಿಸಲಾಗಿದೆ. ಶುಕ್ರ ಅಸ್ತಂಗತವಾದಾಗ ಹಣದ ಹರಿವು ಕಡಿಮೆಯಾಗುವುದು, ಕೆಲವೊಂದು ರಾಶಿಗಳಲ್ಲಿ ಮಾತ್ರ ಶುಕ್ರ ಪ್ರಬಲ ಸ್ಥಾನದಲ್ಲಿ ಇರುವುದರಿಂದ ತೊಂದರೆಯಿಲ್ಲ.
ಶುಕ್ರ ಸೆಪ್ಟೆಂಬರ್ 15ರಂದು ಅಸ್ತಂಗತವಾಗುತ್ತಿದೆ. ಡಿಸೆಂಬರ್ 2ರಂದು ಮತ್ತೆ ಉದಯಿಸಲಿದೆ. ಶುಕ್ರ ಅಸ್ತಂಗತವಾಗಿರುವುದರಿಂದ ವೈಯಕ್ತಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳು, ಹಣದ ಕೊರತೆಯ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿದೆ. ಶುಕ್ರನು ಅಸ್ತಂಗತವಾದಾಗ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:
ಮೇಷ ರಾಶಿ : ಮಿಶ್ರ ಫಲ
ಮೇಷ ರಾಶಿಯವರಿಗೆ, ಶುಕ್ರನು ಅವರ ಎರಡನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದ್ದು ಈಗ ಶುಕ್ರನು ನಿಮ್ಮ ಐದನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಇದರ ಪರಿಣಾಮವಾಗಿ ನಿಮ್ಮ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿದ ನಂತರ ಉತ್ತಮ ಫಲಿತಾಂಶಗಳನ್ನು ಪಡೆಯುವಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಒಲವು ಆಧ್ಯಾತ್ಮಿಕತೆಯತ್ತ ಹೆಚ್ಚಬಹುದು.
ವೃತ್ತಿಜೀವನದ ಬಗ್ಗೆ ನೋಡುವುದಾದರೆ ಈ ಸಮಯವು ಕೆಲಸದ ಕ್ಷೇತ್ರದ ವಿಷಯದಲ್ಲಿ ನಿಮಗೆ ಮಧ್ಯಮ ಫಲಿತಾಂಶಗಳನ್ನು ನೋಡುವಿರಿ. ಈ ಸಮಯದಲ್ಲಿ ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಉತ್ತಮ ಯಶಸ್ಸನ್ನು ನೀವು ಸಾಧಿಸಲಿದ್ದೀರಿ.
ಈ ಅವಧಿಯು ವ್ಯಾಪಾರಿಗಳಿಗೆ ಮಧ್ಯಮ ಪ್ರಯೋಜನವನ್ನು ನೀಡುತ್ತದೆ.
ಹಣದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿಯಲ್ಲಿ, ನೀವು ಉತ್ತಮ ಹಣವನ್ನು ಗಳಿಸುವಿರಿ, ಆದರೆ ಹೆಚ್ಚಿನ ಹಣವನ್ನು ಉಳಿಸುವ ಮತ್ತು ಸಂಗ್ರಹಿಸುವ ವಿಷಯದಲ್ಲಿ ನೀವು ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವು ಷೇರುಗಳು, ಲಾಟರಿಗಳು ಇತ್ಯಾದಿಗಳ ಮೂಲಕ ಪ್ರಯೋಜನಗಳನ್ನು ಪಡೆಯುತ್ತಾರೆ.
ಆದರೆ ನಿಮ್ಮ ಕೆಲಸ ಮತ್ತು ಕಠಿಣ ಪರಿಶ್ರಮದ ಪ್ರಕಾರ, ನೀವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಹಣವನ್ನು ಗಳಿಸುವಿರಿ. ಈ ಅವಧಿಯಲ್ಲಿ ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನೀವು ಕೆಲವು ಹಣಕಾಸು ಸಂಬಂಧಿತ ಯೋಜನೆಗಳನ್ನು ಸಹ ಮಾಡಬಹುದು.
ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗುತ್ತದೆ. ಆದರೆ ಪರಸ್ಪರ ಮಾತನಾಡುವ ಮೂಲಕ ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸಬಹುದು.
ಕೆಲವೊಂದು ಆರೋಗ್ಯ ಸಮಸ್ಯೆ ಕಾಡಬಹುದು, ಆಹಾರಕ್ರಮ ಹಾಗೂ ಧ್ಯಾನದ ಕಡೆ ಗಮನ ನೀಡಿ.
ಪರಿಹಾರ: ನಿಮ್ಮ ಜಾತಕದಲ್ಲಿ ಶುಕ್ರ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು, "ಓಂ ಶುಕ್ರಾಯ ನಮಃ" ಮಂತ್ರವನ್ನು ಪ್ರತಿದಿನ 42 ಬಾರಿ ಜಪಿಸಿ.
ವೃಷಭ ರಾಶಿ: ಮಿಶ್ರಫಲ
ವೃಷಭ ರಾಶಿಯವರಿಗೆ, ಶುಕ್ರನು ನಿಮ್ಮ ರಾಶಿಯ ಅಧಿಪತಿ. ಇದೀಗ ಶುಕ್ರ ನಿಮ್ಮ ನಾಲ್ಕನೇ ಮನೆಯಲ್ಲಿ ಇರಲಿದೆ. ಇದರ ಪರಿಣಾಮವಾಗಿ, ಯಾವುದೇ ಸೈದ್ಧಾಂತಿಕ ವ್ಯತ್ಯಾಸದಿಂದಾಗಿ ನಿಮ್ಮ ಕುಟುಂಬದಲ್ಲಿ ಕೆಲವು ವಿವಾದಗಳು ಉಂಟಾಗಬಹುದು. ಇನ್ನು ಮನೆಯ ಅಗತ್ಯತೆಗಳು ಮತ್ತು ಕೆಲಸಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಇದರಿಂದ ಆರ್ಥಿಕ ಹೊರೆ ಹೆಚ್ಚಾಗುವುದು.
ವೃತ್ತಿ ಜೀವನದ ಬಗ್ಗೆ ನೋಡುವುದಾದರೆ, ನಿಮಗೆ ಅನೇಕ ಅವಕಾಶಗಳು ಸಿಗಲಿವೆ. ಆದರೆ ಅದ್ಯಾವುದು ನಿಮಗೆ ತೃಪ್ತಿ ತರುವುದಿಲ್ಲ. ವ್ಯಾಪಾರಸ್ಥರು ಮಧ್ಯಮ ಲಾಭವನ್ನು ಪಡೆಯುವಿರಿ. ವ್ಯವಹಾರದಲ್ಲಿ ಮತ್ತಷ್ಟು ಬೆಳವಣಿಗೆಗೆ ಯೋಜನೆ ರೂಪಿಸಲು ಸಾದ್ಯವಾಗುವುದು.
ಹಣದ ದೃಷ್ಟಿಯಿಂದ ನೋಡುವುದಾದರೆ ನಿಮ್ಮ ಕೆಲವು ಬದ್ಧತೆಗಳನ್ನು ಪೂರೈಸಲು ಹಣ ದೊರೆಯಬಹುದು ಕೆಲವರು ಹೊಸ ಮನೆ ಕಟ್ಟಲು ಅಥವಾ ಖರೀದಿಸಲು ಮುಂದಾಗಬಹುದು.
ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಮನೆಯಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಪರಿಸ್ಥಿತಿಯನ್ನು ಹೆಚ್ಚು ದೃಢತೆ ಮತ್ತು ಪ್ರಬುದ್ಧತೆಯಿಂದ ನಿಭಾಯಿಸುವ ಮೂಲಕ ಪರಿಹರಿಸಲು ಸಾಧ್ಯವಾಗುತ್ತದೆ.
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ನಿಮ್ಮ ತಾಯಿಯ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಏಕೆಂದರೆ ಅವರು ಕೆಲವು ರೀತಿಯ ಅಲರ್ಜಿ ಸಂಬಂಧಿತ ಸಮಸ್ಯೆಯಿಂದ ತೊಂದರೆಗೊಳಗಾಗುವ ಸಾಧ್ಯತೆಯಿದೆ.
ಪರಿಹಾರ: ಶುಕ್ರವಾರದಂದು ಲಕ್ಷ್ಮಿಯನ್ನು ಆರಾಧಿಸಿ.
ಮಿಥುನ ರಾಶಿ: ಹಣವೂ ಬರುತ್ತದೆ, ಖರ್ಚು ಇರುತ್ತದೆ
ಮಿಥುನ ರಾಶಿಯ ಅಧಿಪತಿ ಬುಧ ಮತ್ತು ಶುಕ್ರ. ಈ ಅವಧಿಯಲ್ಲಿ ನಿಮ್ಮ ಮೂರನೇ ಮನೆಯಲ್ಲಿ ಇರಲಿದೆ. ಇದರ ಪರಿಣಾಮವಾಗಿ ನೀವು ಕೆಲಸ ಅಥವಾ ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಈ ಅವಧಿಯಲ್ಲಿ ಕೆಲವು ಪ್ರಯಾಣ ಮಾಡುವಿರಿ.
ಈ ಸಮಯವು ನಿಮಗೆ ಸ್ವಯಂ-ಅಭಿವೃದ್ಧಿಗೆ ಒಳ್ಳೆಯದಿದೆ. ಆದರೆ ಒಳ್ಳೆಯ ಫಲಿತಾಂಶ ಪಡೆಯಲು ಸ್ವಲ್ಪ ಕಾಯಬೇಕಾಗುವುದು.
ನೀವು ಕೆಲಸವನ್ನು ಬದಲಾಯಿಸಬಹುದು . ಉದ್ಯೋಗದಲ್ಲಿನ ಈ ಬದಲಾವಣೆಗಳು ನಿಮಗೆ ಸವಾಲಾಗಿರುತ್ತವೆ, ಆದರೆ ನೀವು ಸರಿಯಾದ ಯೋಜನೆಯನ್ನು ಮಾಡುವ ಮೂಲಕ ನೀವು ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತೀರಿ.
ನೀವು ವ್ಯಾಪಾರಸ್ಥರಾಗಿದ್ದರೆ ಲಾಭ ಮತ್ತು ನಷ್ಟಕ್ಕೆ ಸಂಬಂಧಿಸಿದ ಮಿಶ್ರ ಫಲಿತಾಂಶಗಳು ಕಂಡುಬರುತ್ತವೆ. ಹಣಕಾಸಿನ ದೃಷ್ಟಿಕೋನದಿಂದ ನೋಡುವುದಾದರೆ ಈ ಅವಧಿಯಲ್ಲಿ ನೀವು ನಿಮ್ಮ ಜೀವನದಲ್ಲಿ ವಿತ್ತೀಯ ಲಾಭಗಳು ಮತ್ತು ವೆಚ್ಚಗಳನ್ನು ನೋಡುತ್ತೀರಿ.
ವೈಯಕ್ತಿಕ ಜೀವನದಲ್ಲಿ ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳ ಪ್ರಗತಿಯ ಬಗ್ಗೆ ನೀವು ಸ್ವಲ್ಪ ಚಿಂತಿತರಾಗಬಹುದು. ಆರೋಗ್ಯದ ದೃಷ್ಟಿಯಿಂದ, ಈ ಅವಧಿಯಲ್ಲಿ ನೀವು ಪ್ರಯಾಣಿಸುವುದನ್ನು ತಪ್ಪಿಸಬೇಕಾಗುತ್ತದೆ. ಸಾಧ್ಯವಾದಷ್ಟು ಯೋಗ ಮತ್ತು ಧ್ಯಾನವನ್ನು ಮಾಡಲು ಸಲಹೆ ನೀಡಲಾಗಿದೆ.
ಪರಿಹಾರ: ಅನುಕೂಲಕರ ಫಲಿತಾಂಶಗಳನ್ನು ಪಡೆಯಲು, ಬುಧ ಮತ್ತು ಶುಕ್ರ ಗ್ರಹಗಳ ಮಂತ್ರವನ್ನು ಪಠಿಸಿ.
ಕರ್ಕ ರಾಶಿ: ಹಣ ಉತ್ತಮವಾಗಿರುತ್ತೆ, ಆದರೆ ಸಂಸಾರದಲ್ಲಿ ಜಾಗ್ರತೆ
ಕರ್ಕ ರಾಶಿಯವರಿಗೆ ಶುಕ್ರನು ಅವರ ನಾಲ್ಕು ಮತ್ತು ಹನ್ನೊಂದನೇ ಮನೆಯ ಅಧಿಪತಿ. ಈ ಅವಧಿಯಲ್ಲಿಇ ನಿಮ್ಮ ಎರಡನೇ ಮನೆಯಲ್ಲಿರುತ್ತದೆ. ಇದರ ಪರಿಣಾಮವಾಗಿ ನೀವು ಈ ಸಮಯದಲ್ಲಿ ಆಸ್ತಿಯನ್ನು ಖರೀದಿಸುವುದರಿಂದ ಅಥವಾ ಹೂಡಿಕೆ ಮಾಡುವುದರಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಅಲ್ಲದೆ, ವಿವಿಧ ಮೂಲಗಳಿಂದ ಹೆಚ್ಚಿನ ಹಣವನ್ನು ಗಳಿಸಲು ಸಾಧ್ಯವಾಗುವುದು.
ಕೆಲಸದ ವಿಷಯದಲ್ಲಿ ನಿಮ್ಮ ಸಂಪೂರ್ಣ ಗಮನವನ್ನು ಕೆಲಸದ ಕಡೆ ಮಾತ್ರ ಕೊಡಿ. ವ್ಯಾಪಾರಸ್ಥರು ಲಾಭವನ್ನು ಪಡೆಯುತ್ತೀರಿ, ಜೀವನದಲ್ಲಿ ಉತ್ತಮ ಹಣದ ಹರಿವು ಕಂಡುಬರುತ್ತದೆ, ಆದರೆ ಕೆಲವು ಮನೆ-ಸಂಬಂಧಿತ ವೆಚ್ಚಗಳು ನಿಮ್ಮನ್ನು ತೊಂದರೆಗೊಳಿಸಬಹುದು. ವೈಯಕ್ತಿಕ ದೃಷ್ಟಿಯಿಂದ ಈ ಅವಧಿಯಲ್ಲಿ ವೈವಾಹಿಕ ಸಂಬಂಧದಲ್ಲಿ ಆಸಕ್ತಿ ಮತ್ತು ಉತ್ಸಾಹದ ಕೊರತೆ ಇರುತ್ತದೆ . ಆದರೆ ಸಂಗಾತಿ ಜೊತೆಗೆ ಮಾತನಾಡುವ ಮೂಲಕ ಪರಿಸ್ಥಿತಿಯನ್ನು ಬಗೆಹರಿಸಬಹುದು.
ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.
ಪರಿಹಾರ: ಸೋಮವಾರದಂದು ಚಂದ್ರನನ್ನು ಪೂಜೆ ಮಾಡಿ.
ಸಿಂಹ ರಾಶಿ: ನಿಮಗೆ ಅನುಕೂಲಕರ
ಸಿಂಹ ರಾಶಿಯವರಿ ಶುಕ್ರ ಮೂರನೇ ಮತ್ತು ಹತ್ತನೇ ಮನೆಗೆ ಅಧಿಪತಿ. ಈಗ ಈ ಸಮಯದಲ್ಲಿ ಅದು ನಿಮ್ಮ ಸ್ವಂತ ರಾಶಿಯಲ್ಲಿ ಅಂದರೆ ನಿಮ್ಮ ಮೊದಲ ಮನೆಯಲ್ಲಿರಲಿದೆ. ಈ ಕಾರಣದಿಂದಾಗಿ ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ನೀವು ದೃಢತೆ ಮತ್ತು ವೃತ್ತಿಪರತೆಯನ್ನು ಪಡೆಯಬಹುದು.
ವಿದೇಶದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುತ್ತಿದ್ದರೆ ಅದು ಪಡೆಯುವಿರಿ. ವ್ಯಾಪಾರಸ್ಥರಿಗೆ ಟಾರ್ಗೆಟ್ ಮುಟ್ಟಲು ಈ ಅವಧಿಯಲ್ಲಿ ನಿಮಗೆ ತುಂಬಾ ಕಷ್ಟವಾಗುತ್ತದೆ.
ಆದರೆ ವ್ಯವಹಾರದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಸುಧಾರಿಸಲು ಮರು ಪ್ಲ್ಯಾನ್ ಮಡಿದರೆ ಯಶಸ್ಸ ಪಡೆಯುವಿರಿ.
ಹಣದ ವಿಷಯದಲ್ಲಿ ಈ ಅವಧಿಯಲ್ಲಿ ಜಾಗ್ರತೆವಹಿಸಬೇಕು, ಹಣದ ಉಳಿತಾಯ ಕಷ್ವವಾಗಬಹುದು. ಆರೋಗ್ಯದ ದೃಷ್ಟಿಯಿಂದ, ಈ ಸಮಯದಲ್ಲಿ ನಿಮಗೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳಿಲ್ಲ.
ಪರಿಹಾರ: ಶ್ರೀ ಉಮಾ ಮಹೇಶ್ವರನಿಗೆ ಯಾಗವನ್ನು ಮಾಡಿ.
ಕನ್ಯಾ ರಾಶಿ: ಹಣದ ಖರ್ಚು ಹೆಚ್ಚಾಗಿರಲಿದೆ
ಕನ್ಯಾ ರಾಶಿಯ ಜನರಿಗೆ, ಶುಕ್ರನುಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದ್ದುಈ ಸಮಯದಲ್ಲಿ ಅವರು ನಿಮ್ಮ ಹನ್ನೆರಡನೇ ಮನೆಯಲ್ಲಿರುತ್ತದೆ.ಇದರ ಪರಿಣಾಮವಾಗಿ, ನಿಮ್ಮ ವೃತ್ತಿಜೀವನದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುವುದಿಲ್ಲ, ಇದರಿಂದಾಗಿ ನಿಮ್ಮ ಕಾರ್ಯಗಳಿಂದ ಉತ್ತಮ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.
ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಮತ್ತು ನಿಮ್ಮ ಪ್ರತಿಸ್ಪರ್ಧಿಗಳು ತುಂಬಾ ಸಕ್ರಿಯರಾಗಿರುತ್ತಾರೆ ಮತ್ತು ಅವರು ನಿರಂತರವಾಗಿ ಪಿತೂರಿಯನ್ನು ಯೋಜಿಸುವ ಮೂಲಕ ನಿಮ್ಮ ವಿರುದ್ಧ ಪಿತೂರಿ ಮಾಡುವುದನ್ನು ಕಾಣಬಹುದು. ಆದರೆ ಶೀಘ್ರದಲ್ಲೇ ನೀವು ಅವರ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಸೋಲಿಸುವ ಮೂಲಕ ನಿಮ್ಮ ಕೆಲಸದ ಸ್ಥಳದಲ್ಲಿ ಲಾಭವನ್ನು ಗಳಿಸುವಿರಿ.
ಇದರ ಹೊರತಾಗಿ, ನೀವು ಎಲ್ಲವನ್ನೂ ತಾರ್ಕಿಕವಾಗಿ ಯೋಜಿಸಿ ಮತ್ತು ಆ ದಿಕ್ಕಿನಲ್ಲಿ ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಮತ್ತೊಂದೆಡೆ, ನೀವು ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದರೆ, ಈ ಸಮಯದಲ್ಲಿ ಸ್ವಲ್ಪ ಲಾಭದ ಕೊರತೆಯ ಸಾಧ್ಯತೆಯಿದೆ.
ಹಣದ ದೃಷ್ಟಿಯಿಂದ ನೋಡುವುದಾದರೆ ನಿಮ್ಮ ಖರ್ಚುಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆದಾಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವುದರಿಂದ, ನಿಮ್ಮ ಬಜೆಟ್ ಅಸಮತೋಲನವಾಗಿ ನಿರಾಸೆ ಅನುಭವಿಸುವುರಿ. ಈ ಪರಿಸ್ಥಿತಿಯಲ್ಲಿ, ನಿಮ್ಮ ಸಾಲವೂ ಹೆಚ್ಚಾಗಬಹುದು.
ವೈಯಕ್ತಿಕ ಜೀವನದಲ್ಲಿ, ಸಿಂಹದಲ್ಲಿ ಶುಕ್ರನ ಅಸ್ಥಿತ್ವದ ಈ ಅವಧಿಯು ಸಂಬಂಧದಲ್ಲಿ ಕೆಲವು ಸಾಮರಸ್ಯದ ಕೊರತೆಯನ್ನು ಉಂಟು ಮಾಡಬಹುದು.
ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಆದಷ್ಟು ಕಾಳಜಿ ವಹಿಸಿ.
ಪರಿಹಾರ: ಬುಧವಾರದಂದು ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ದಾನ ಮಾಡಿ.
ತುಲಾ ರಾಶಿ : ಮೊದಲು ಸವಾಲು ಎದುರಾದರೂ ನಂತರ ನಿರಾಳ
ತುಲಾ ರಾಶಿಯ ಅಧಿಪತಿ ಶುಕ್ರ. ಇದಲ್ಲದೆ, ಶುಕ್ರನು ನಿಮ್ಮ ಎಂಟನೇ ಮನೆಯನ್ನೂ ಆಳುತ್ತದೆ. ಈಗ ಅದು ನಿಮ್ಮ ಹನ್ನೊಂದನೇ ಮನೆಯಲ್ಲಿ ನೆಲೆಸಿದ್ದಾನೆ. ಇದರ ಪರಿಣಾಮವಾಗಿ ನೀವು ಕೆಲಸದ ಸ್ಥಳದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಈ ಅಡೆತಡೆಗಳ ನಂತರ, ನೀವು ನಿಮ್ಮ ಕೆಲಸದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತೀರಿ ಮತ್ತು ಯಶಸ್ಸನ್ನು ಸಾಧಿಸುವಿರಿ. ಇದರೊಂದಿಗೆ ಬಡ್ತಿ ರೂಪದಲ್ಲಿ ಅನಿರೀಕ್ಷಿತ ಲಾಭ ಪಡೆಯುವ ಸಾಧ್ಯತೆಯೂ ಇದೆ. ಆದ್ದರಿಂದ ಆರಂಭದಲ್ಲಿ, ನಿಮ್ಮ ಗುರಿಗಳ ಕಡೆಗೆ ಮಾತ್ರ ಗಮನಹರಿಸಲು ಪ್ರಯತ್ನಿಸಿ.
ವ್ಯಾಪಾರಸ್ಥರು ಪ್ರಯೋಜನಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಹಣಕಾಸು ಉತ್ತಮವಾಗಿರುತ್ತದೆ.
ವೈಯಕ್ತಿಕ ಜೀವನ ಚೆನ್ನಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ.
ಪರಿಹಾರ: ಪ್ರತಿ ಶುಕ್ರವಾರ ದೇವಸ್ಥಾನಕ್ಕೆ ಹೋಗಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ.
ವೃಶ್ಚಿಕ ರಾಶಿ: ಕೆಲಸದಲ್ಲಿ ಏರಳಿತ
ವೃಶ್ಚಿಕ ರಾಶಿಯ ಹನ್ನೆರಡನೇ ಮನೆ ಮತ್ತು ಏಳನೇ ಮನೆಯ ಅಧಿಪತಿ ಈಗ ನಿಮ್ಮ ಹತ್ತನೇ ಮನೆಯಲ್ಲಿರಲಿದೆ. ಇದರ ಪರಿಣಾಮವಾಗಿ ನೀವು ವೃತ್ತಿಜೀವನದಲ್ಲಿ ಮಧ್ಯಮ ಫಲಿತಾಂಶಗಳನ್ನು ಪಡೆಯುವ ಅವಕಾಶಗಳನ್ನು ಪಡೆಯುತ್ತೀರಿ. ಕೆಲಸದಲ್ಲಿ ಸಹೋದ್ಯೋಗಿಗಳಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಉದ್ಯೋಗವನ್ನು ಬದಲಾಯಿಸುವ ಮನಸ್ಥಿತಿಯನ್ನು ತಾಳಬಹುದು. ಆದರೆ ಈ ಎಲ್ಲಾ ಅಡೆತಡೆಗಳು ನಿಮ್ಮನ್ನು ದೀರ್ಘಕಾಲ ಕಾಡುವುದಿಲ್ಲ. ಏಕೆಂದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯ ಬಲದ ಮೇಲೆ ನೀವು ಪ್ರತಿ ಸವಾಲನ್ನು ಪರಿಹರಿಸಲು ಸಾಧ್ಯವಾಗುತ್ತದೆ.
ಆದರೆ ವ್ಯಾಪಾರಸ್ಥರು ನಿರೀಕ್ಷೆಗಿಂತ ಕಡಿಮೆ ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ.
ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಈ ಸಮಯದಲ್ಲಿ ನಿಮಗೆ ಅವಶ್ಯಕವಾಗಿದೆ. ಈಗೋ ಅಥವಾ ಅಹಂ ಬಿಡುವುದು ಒಳ್ಳೆಯದು.
ಸಿಂಹ ರಾಶಿಯಲ್ಲಿ ಶುಕ್ರನ ಅಸ್ತಂಗತ ಸಮಯದಲ್ಲಿ ನಿಮಗೆ ಆರೋಗ್ಯದ ದೃಷ್ಟಿಯಿಂದ ಯಾವುದೇ ದೊಡ್ಡ ದೈಹಿಕ ತೊಂದರೆಗಳು ಉಂಟಾಗುವುದಿಲ್ಲ.
ಪರಿಹಾರ: ದಿನಕ್ಕೆ 9 ಬಾರಿ "ಓಂ ಭೌಮಾಯ ನಮಃ" ಎಂದು ಜಪಿಸಿ.
ಧನು ರಾಶಿ: ಈ ಅವಧಿ ಅನುಕೂಲಕರ
ಧನು ರಾಶಿಆರನೇ ಮನೆ ಮತ್ತು ಹನ್ನೊಂದನೇ ಮನೆಯ ಅಧಿಪತಿ ಶುಕ್ರ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿರಲಿದೆ. ಇದರಿಂದಾಗಿ ಕೆಲಸದ ವಿಷಯದಲ್ಲಿ ಅದೃಷ್ಟದ ಸಮಯ. ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವಿರಿ.
ಈ ಸಮಯದಲ್ಲಿ ನೀವು ನಿಮ್ಮ ಮೇಲಧಿಕಾರಿಗಳಿಂದ ಹೆಚ್ಚಿನ ಬೆಂಬಲವನ್ನು ಪಡೆಯಬಹುದು. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ, ನೀವು ಮೊದಲಿನಿಂದಲೂ ತಾಳ್ಮೆಯಿಂದ ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳನ್ನು ಮುಂದುವರಿಸಬೇಕು.
ವ್ಯಾಪಾರಸ್ಥರು ಮಧ್ಯಮ ಲಾಭವನ್ನು ಮಾತ್ರ ಪಡೆಯಲಿದ್ದಾರೆ. ನೀವು ಪಾಲುದಾರಿಕೆ ವ್ಯವಹಾರದಲ್ಲಿದ್ದರೆ, ನಿಮ್ಮ ವ್ಯಾಪಾರ ಪಾಲುದಾರರು ನಿಮ್ಮೊಂದಿಗೆ ಸಹಕರಿಸದಿರಬಹುದು ಆದರೆ ನಿಮಗೆ ತೊಂದರೆ ನೀಡಲು ಪ್ರಯತ್ನಿಸಬಹುದು.
ವೈಯಕ್ತಿಕ ಜೀವನದ ಸಮಸ್ಯಗಳನ್ನು ಪರಸ್ಪರ ಪ್ರೀತಿ ಮತ್ತು ಗೌರವದಿಂದ ಮಾತನಾಡುವ ಮೂಲಕ ಪರಿಹರಿಸಲು ಪ್ರಯತ್ನಿಸುವುದು ಉತ್ತಮ.
ಇದಲ್ಲದೆ, ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯ ಸಾಧ್ಯತೆ ಇರುತ್ತದೆ.
ಪರಿಹಾರ: ಪ್ರತಿದಿನ 12 ಬಾರಿ 'ಓಂ ಬೃಹಸ್ಪತಿಯೇ ನಮಃ' ಜಪಿಸಿ.
ಮಕರ ರಾಶಿ: ವೃತ್ತಿ ಬದುಕಿನಲ್ಲಿ ಅಡೆತಡೆಗಳ ಸಾಧ್ಯತೆ ಇದೆ
ಮಕರ ರಾಶಿಯ ಐದನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿರುವ ಶುಕ್ರ ಈ ಅವಧಿಯಲ್ಲಿ ಎಂಟನೇ ಮನೆಯಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಎಂಟನೇ ಮನೆಯಲ್ಲಿ ಶುಕ್ರನ ಉಪಸ್ಥಿತಿಯಿಂದಾಗಿ, ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುವಲ್ಲಿ ನೀವು ಕೆಲವು ಅಡೆತಡೆಗಳನ್ನು ಅನುಭವಿಸುವಿರಿ.
ಉದ್ಯೋಗಿಗಳಿಗೆ, ಈ ಅವಧಿಯು ಅನೇಕ ಸವಾಲುಗಳನ್ನು ತರುತ್ತಿದೆ. ಕೆಲವರು ಕೆಲಸ ಕಳೆದುಕೊಳ್ಳಬಹುದು ಮತ್ತು ಕೆಲವರನ್ನು ಬಲವಂತವಾಗಿ ವರ್ಗಾವಣೆ ಮಾಡಬಹುದು. ಈ ರೀತಿಯಾಗಿ, ಸ್ಥಳಾಂತರ ಅಥವಾ ವರ್ಗಾವಣೆಯ ಕಾರಣ, ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳು ಸಹ ಕಂಡುಬರುತ್ತವೆ.
ವ್ಯಾಪಾರಸ್ಥರು ಈ ಅವಧಿಯಲ್ಲಿ ಶುಕ್ರನ ಬಲದಿಂದ ನಿಮ್ಮ ವ್ಯವಹಾರದಲ್ಲಿ ನಷ್ಟ ಮತ್ತು ಲಾಭದ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ನೀವು ಹೆಚ್ಚು ಅಪಾಯಕಾರಿ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸುವುದು ಉತ್ತಮ, ಇಲ್ಲದಿದ್ದರೆ ನಷ್ಟಗಳು ಹೆಚ್ಚಾಗಬಹುದು.
ನಿಮ್ಮ ವ್ಯಾಪಾರದ ಮಾದರಿಯನ್ನು ಬದಲಾಯಿಸಲು ಮತ್ತು ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಎಚ್ಚರದಿಂದಿರಲು ನಿಮಗೆ ಸಲಹೆ ನೀಡಲಾಗಿದೆ.
ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ತಮ್ಮ ಕುಟುಂಬ ಮತ್ತು ಅವರ ಮಕ್ಕಳ ಅಭಿವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಈ ಚಿಂತೆಯಿಂದಾಗಿ ಅವರ ಮಾನಸಿಕ ಒತ್ತಡವೂ ಹೆಚ್ಚಾಗುವುದು. ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿ.
ಆರೋಗ್ಯದ ದೃಷ್ಟಿಯಿಂದ, ನಿಮ್ಮ ಆರೋಗ್ಯದ ಬಗ್ಗೆ ಮೊದಲಿನಿಂದಲೂ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.
ಪರಿಹಾರ: ಶುಕ್ರವಾರದಂದು ಲಕ್ಷ್ಮಿ ದೇವಿಗೆ ಹವನ ಮಾಡಿ.
ಕುಂಭ ರಾಶಿ : ಉತ್ತಮ ಫಲಿತಾಂಶ ಪಡೆಯುವಿರಿ
ಕುಂಭ ರಾಶಿಯವರ ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಶುಕ್ರ ಈಗ ಅವರು ನಿಮ್ಮ ರಾಶಿಯ ಏಳನೇ ಮನೆಯಲ್ಲಿ ಇರಲಿದೆ. ಅಂತಹ ಪರಿಸ್ಥಿತಿಯಲ್ಲಿ, ಏಳನೇ ಮನೆಯಲ್ಲಿ ಶುಕ್ರನ ಉಪಸ್ಥಿತಿಯೊಂದಿಗೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಕೆಲಸದ ಸ್ಥಳದಲ್ಲಿ, ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಗುರಿಗಳನ್ನು ಸಮಯಕ್ಕೆ ಸಾಧಿಸುವ ಮೂಲಕ ನಿಮ್ಮ ವೃತ್ತಿಜೀವನದಲ್ಲಿ ನೀವು ಮುಂದುವರಿಯುತ್ತೀರಿ. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಯಶಸ್ಸಿನಿಂದ ನೀವು ಹೆಚ್ಚು ತೃಪ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ವಿಶೇಷವಾಗಿ ನೀವು ಈ ಹಿಂದೆ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ತೊಂದರೆಯನ್ನು ಎದುರಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಅದನ್ನು ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಸ್ವಂತ ವ್ಯವಹಾರ ನಡೆಸುತ್ತಿರುವವರು ಲಾಭ ಗಳಿಸಲು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ.
ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ, ಸಿಂಹ ರಾಶಿಯಲ್ಲಿ ಶುಕ್ರನ ಅಸ್ಥಿತ್ವದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ಇದು ನೀವು ಹಣವನ್ನು ಗಳಿಸುವ ಸಮಯವಾಗಿರುತ್ತದೆ, ಆದರೆ ನಿಮ್ಮ ವೆಚ್ಚಗಳು ಸಹ ಅಷ್ಟೇ ವೇಗವಾಗಿ ಹೆಚ್ಚಾಗುತ್ತವೆ. ಬ್ಯಾಲೆನ್ಸ್ ಮಾಡಿಕೊಂಡು ಹೋಗಿ.
ಆರೋಗ್ಯದ ದೃಷ್ಟಿಯಿಂದಲೂ ಈ ಅವಧಿ ಚೆನ್ನಾಗಿರಲಿದೆ.
ಪರಿಹಾರ: ಶನಿವಾರದಂದು ಹಿರಿಯರಿಗೆ ಮೊಸರು ಮತ್ತು ಆಹಾರವನ್ನು ದಾನ ಮಾಡಿ.
ಮೀನ ರಾಶಿ: ವೃತ್ತಿ ಜೀವನದಲ್ಲಿ ನಿಮಗೆ ಅನುಕೂಲಕರವಾಗಿದೆ
ಮೀನ ರಾಶಿಯ ಮೂರನೇ ಮತ್ತು ಎಂಟನೇ ಮನೆಯ ಅಧಿಪತಿಯಾದ ಶುಕ್ರ ನಿಮ್ಮ 6ನೇ ಮನೆಯಲ್ಲಿ ಇರಲಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರನೇ ಮನೆಯಲ್ಲಿ ಶುಕ್ರನ ಉಪಸ್ಥಿತಿಯು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ಪಡೆಯುವಂತೆ ಮಾಡುತ್ತದೆ.
ವೃತ್ತಿಯಲ್ಲಿ, ನಿಮ್ಮ ಉತ್ತಮ ಮತ್ತು ಸ್ಥಿರವಾದ ಪ್ರಯತ್ನಗಳಿಂದ ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಮೂಲಕ ನೀವು ಪ್ರಗತಿಯನ್ನು ಸಾಧಿಸುವಿರಿ. ಇದರಿಂದ ನಿಮ್ಮ ಆದಾಯವೂ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಅಲ್ಲೊಂದು ಇಲ್ಲೊಂದು ವಿಷಯಗಳತ್ತ ಗಮನ ಹರಿಸದೆ ನಿಮ್ಮ ಕೆಲಸದ ಕಡೆಗೆ ಮಾತ್ರ ಗಮನವಿರಲಿ.
ಅದೇ ಸಮಯದಲ್ಲಿ ವ್ಯಾಪಾರಸ್ಥರು ಮಧ್ಯಮ ಪ್ರಯೋಜನಗಳನ್ನು ಮಾತ್ರ ನೀಡುತ್ತದೆ. ಈ ಸಮಯವು ನಿಮ್ಮ ಸಂಬಂಧಗಳಲ್ಲಿ ಅನೇಕ ಸಮಸ್ಯೆಗಳನ್ನು ತರಲಿದೆ. ಏಕೆಂದರೆ ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಏರಿಳಿತಗಳಿಂದಾಗಿ ಸಂಗಾತಿ ನಡುವೆ ಮನಸ್ತಾಪ ಉಂಟಾಗಬಹುದು.
ಇದರ ಹೊರತಾಗಿ, ಆರೋಗ್ಯದ ವಿಷಯದಲ್ಲಿ, ನಿಮ್ಮ ಆಹಾರದ ಬಗ್ಗೆ ನೀವು ಮೊದಲಿನಿಂದಲೂ ಜಾಗರೂಕರಾಗಿರಬೇಕು.
ಪರಿಹಾರ: ಗುರುವಾರದಂದು ದೇವಸ್ಥಾನಕ್ಕೆ ಹೋಗಿ ಶಿವನ ಆರಾಧನೆ ಮಾಡುವುದು ನಿಮಗೆ ಅನುಕೂಲಕರವಾಗಿರುತ್ತದೆ.