Just In
- 4 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 5 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 5 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Ugadi Bhavishya 2020: ಶಾರ್ವರಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ 2020
ಯುಗಾದಿ ಹಬ್ಬದ ಶುಭಾಶಯಗಳು....................
ಮಾರ್ಚ್ 25, 2020ಕ್ಕೆ ಶಾರ್ವರಿ ನಾಮ ಸಂವತ್ಸರ ಆರಂಭವಾಗಲಿದೆ. ಯುಗಾದಿ ಬಂತೆಂದರೆ ಹೊಸ ವರ್ಷ ಶುರು ಎಂದು ಲೆಕ್ಕ. ಜ್ಯೋತಿಷ್ಯದಲ್ಲಿ ಗುರು-ಶನಿ ಗ್ರಹಗಳ ಸಂಚಾರದ ಪ್ರಕಾರ ರಾಶಿಗಳ ಫಲಾಫಲ ಹೇಳಲಾಗುವುದು.
ಇಲ್ಲಿ ಶಾರ್ವರಿ ನಾಮ ಸಂವತ್ಸರಕ್ಕೆ 12 ರಾಶಿಗಳ ರಾಶಿಫಲ ಹೇಗಿದೆ ಎಂದು ಹೇಳಲಾಗಿದೆ, ಇವುಗಳನ್ನುಗುರು ಹಾಗೂ ಶನಿ ಗ್ರಹಗಳ ಸಂಚಾರದ ಆಧಾರದ ಮೇಲೆ ಹೇಳಲಾಗಿದೆ.
ಗುರು- ವರ್ಷಾದಿಯಿಂದ (ಯುಗಾದಿ) 29-3-2020ರ ತನಕ ಧನುಸ್ಸು ರಾಶಿಯಲ್ಲಿ ಸಂಚಾರ
29-3-2020ರಿಂದ 29-6-2020ರ ತನಕ ಮಕರ ರಾಶಿಯಲ್ಲಿ ಸಂಚಾರ
29-6-2020ರಿಂದ 20-11-2020ರ ತನಕ ಧನುಸ್ಸು ರಾಶಿಯಲ್ಲಿ ಸಂಚಾರ
20-11-2020ರಿಂದ 5-4-2021ರ ತನಕ ಮಕರ ರಾಶಿಯಲ್ಲಿ ಸಂಚಾರ
5-4-2021ರಿಂದ ಸಂವತ್ಸರದ ಕೊನೆ ತನಕ ಕುಂಭ ರಾಶಿಯಲ್ಲಿ ಸಂಚಾರ
ಶನಿ ಗ್ರಹ- ಸಂವತ್ಸರದ ಆರಂಭದಿಂದ ಕೊನೆ ತನಕ ಮಕರ ರಾಶಿಯಲ್ಲಿ ಸಂಚಾರ
ಮೇಷ ರಾಶಿ
ಈ ವರ್ಷ ಗುರುವು ಜುಲೈ 10ರವರೆಗೆ ವಕ್ರೀಯಾಗಿ ಸಂಚರಿಸುವುದರಿಂದ ಮಿಶ್ರ ಫಲ ಉಂಟಾಗಲಿದೆ. ಈ ವರ್ಷದ ಆರಂಭದಲ್ಲಿ ಉದ್ಯೋಗದಲ್ಲಿ ಸ್ವಲ್ಪ ಕಿರಿ-ಕಿರಿ ಉಂಟಾಗುವ ಸಾಧ್ಯತೆ ಇದೆ, ಅಲ್ಲದೆ ಹಣ ಸ್ವಲ್ಪ ಅಧಿಕ ಖರ್ಚಾಗಲಿದೆ. ನಿರೀಕ್ಷಿತ ಆದಾಯ ಸಿಗುವುದಿಲ್ಲ. ಅನಾರೋಗ್ಯ ಕಾಡುವುದು. ಒಂದು ಕೆಲಸ ಸಿಗುವವರಿಗೆ ಕೈಯಲ್ಲಿಇರುವ ಕೆಲಸ ಬಿಡಲು ಹೋಗಬೇಡಿ. ಈ ವರ್ಷ ಖರ್ಚು ಮಿತವಾಗಿ ಮಾಡಿದರೆ ಒಳ್ಳೆಯದು.
ವೃಷಭರಾಶಿ
ಈ ಸಂವತ್ಸರದಲ್ಲಿ ನಿಮಗೆ ಒಳಿತು- ಕೆಡಕುಗಳ ಮಿಶ್ರ ಫಲ ಉಂಟಾಗಲಿದೆ. ವರ್ಷದ ಪ್ರಾರಂಭದಲ್ಲಿ ಗುರುವಿನ ವಕ್ರ ಸಂಚಾರದಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. 28-3-2019 ರಿಂದ ಗುರುವು ವೃಶ್ಚಿಕರಾಶಿಯಲ್ಲಿ ಸಂಚರಿಸಲು ಪ್ರಾರಂಭಿಸುವುದು, ಆಗ ಒಳಿತು ಉಂಟಾಗುತ್ತದೆ. ಈ ಸಂದರ್ಭದಲ್ಲಿ ನೀವು ಬಯಸಿದ ಕಾರ್ಯಗಳು ನೆರವೇರುವುದು. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ ಅದು ಪರಿಹಾರವಾಗುವುದು. ಕುಟುಂಬದಲ್ಲಿ ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲಿದೆ. ಈ ವರ್ಷ ಆದಾಯದಲ್ಲಿ ಲಾಭ ನಿರೀಕ್ಷೆ ಮಾಡಬಹುದು, ಆದರೆ ಮಿತ ಖರ್ಚು ಮಾಡುವುದು ಒಳ್ಳೆಯದು.
ಮಿಥುನರಾಶಿ
ಈ ರಾಶಿಯವರಿಗೆ ಗುರುಗ್ರಹವು ಪಂಚಮ ಸ್ಥಾನದಲ್ಲಿ ಸಂಚರಿಸುತ್ತಿರುವುದರಿಂದ ಹೆಚ್ಚಿನ ಶುಭಫಲವನ್ನು ಕಾಣುವಿರಿ. ನಿಮ್ಮ ಪ್ರತಿಭೆಯನ್ನು ಗುರುತಿಸಿ ನಿಮಗೆ ಗೌರವ ದೊರೆಯುವುದು. ನೀವು ಮಾತುನಾಡುವಾಗ ಸ್ವಲ್ಪ ಎಚ್ಚರವಹಿಸುವುದು ಒಳ್ಲೆಯದು, ನಿಮ್ಮ ಮಾತುಗಳು ಇತರರಲ್ಲಿ ಅಸಮಧಾನ, ಅಸಂತುಷ್ಟತೆ ಉಂಟು ಮಾಡುವುದು, ಕೆಲಸದ ಜಾಗದಲ್ಲಿ ಸ್ವಲ್ಪ ಕಿರಿಕಿರಿ ಎದುರಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸ್ವಲ್ಪ ಮನಸ್ತಾಪ, ವಿರಸ ಉಂಟಾಗುವ ಸಾಧ್ಯತೆ ಇದೆ. ಇನ್ನು ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಮುಖ್ಯವಾದ ದಾಖಲೆ, ಪತ್ರಗಳು, ಬೆಲೆ ಬಾಳುವ ವಸ್ತುಗಳು ಇವುಗಳನ್ನು ಜೋಪಾನ ಮಾಡಿ.
ಕಟಕರಾಶಿ
ಸಂವತ್ಸರ ಆರಂಭದ ಮೂರು ತಿಂಗಳು ಯಾವುದೇ ತೊಂದರೆ ಉಂಟಾಗುವುದಿಲ್ಲ. ವೈವಾಹಿಕ ಜೀವನದಲ್ಲಿ ಖುಷಿಯಾಗಿರುವಿರಿ. ಗುರುವು ಪಂಚಮ ಸ್ಥಾನದಲ್ಲಿ ಸಂಚರಿಸುವುದರಿಂದ ಉತ್ತಮ ಫಲವನ್ನು ಹೊಂದುವಿರಿ. ಈ ವರ್ಷ ಆಸ್ತಿ ಹಾಗೂ ವಾಹನ ಖರೀದಿ ಯೋಗವಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುದು. ಈ ವರ್ಷ ಮೊದಲ ಆರು ತಿಂಗಳು ಚೆನ್ನಾಗಿದ್ದರೆ, ಮತ್ತೆ ಆರು ತಿಂಗಳು ಅಷ್ಟೊಂದು ಅನುಕೂಲಕರವಾಗಿಲ್ಲ. ವರ್ಗಾವಣೆ, ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲೂ ಸ್ವಲ್ಪ ತೊಂದರೆಗಳು ಎದುರಾಗುವುದು. ಇನ್ನು ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಯಾವುದೇ ಆರ್ಥಿಕ ಕಷ್ಟ ಎದುರಾಗುವುದಿಲ್ಲ.
ಸಿಂಹರಾಶಿ
ಸಿಂಹರಾಶಿಯವರಿಗೆ ಈ ವರ್ಷದ ಗ್ರಹಗತಿ ಅಷ್ಟೇನು ಚೆನ್ನಾಗಿಲ್ಲ, ಹಾಗಾಗಿ ಪ್ರತಿಯೊಂದು ಹೆಜ್ಜೆಯನ್ನು ಯೋಚಿಸಿ ಇಡುವುದು ಒಳ್ಳೆಯದು. ಸಂತಾನ ಅಪೇಕ್ಷಿತ ದಂಪತಿಗೆ ಸಿಹಿ ಸುದ್ದಿ ದೊರೆಯುವುದು. ವಿದೇಶ ಪ್ರಯಾಣ, ಆಸ್ತಿ, ಮನೆ ಖರೀದಿ ಸಾಧ್ಯತೆಗಳಿವೆ.
ಕುಜ ಮತ್ತು ಶನಿಗ್ರಹರು ಪಂಚಮ ಸ್ಥಾನದಲ್ಲಿ ಸಂಚರಿಸುವುದರಿಂದ ಬಂಧು ಬಾಂಧವರೊಡನೆ ಭಿನ್ನಾಭಿಪ್ರಾಯ ಮೂಡುವುದು, ಮನೆಯಲ್ಲೂ ಜಗಳ ಉಂಟಾಗುವ ಸಾಧ್ಯತೆ ಇದೆ. ವರ್ಷ ಕೊನೆಯಲ್ಲಿ ನೀವು ಬಯಸಿದ ಕಾರ್ಯವು ನೆರವೇರುವುದು. ಈ ವರ್ಷ ಖರ್ಚು ಸ್ವಲ್ಪ ಅಧಿಕವಿರುವುದರಿಂದ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ರಾಘವೇಂದ್ರ ಸ್ವಾಮಿಯನ್ನು ಆರಾಧಿಸಿ, ಸಾಧ್ಯವಾದರೆ ಮಂತ್ರಾಲಯಕ್ಕೆ ಭೇಟಿ ಕೊಡಿ.
ಕನ್ಯಾರಾಶಿ
ಈ ವರ್ಷ ಕನ್ಯಾರಾಶಿಯವರಿಗೆ ಮಿಶ್ರಫಲ. ಕಳೆದ ವರ್ಷಕ್ಕಿಂತ ಈ ವರ್ಷ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ವರ್ಷದ ಆರಂಭದಲ್ಲಿ ಮಕ್ಕಳಿಂದ ಸುಖ-ಸಂತೋಷ ದೊರೆಯುವುದು. ಕೆಲವೊಂದು ಆರೋಗ್ಯ ಸಮಸ್ಯೆಯೂ ಕಾಡುವುದು. ಸಮಾಜದಲ್ಲಿ ನಿಮ್ಮ ಮೇಲೆ ಕೆಲವೊಂದು ಸುಳ್ಳು ಆರೋಪಗಳು ಬರಬಹುದು. ಮನೆ ದೇವರ ಪೂಜೆ ಮಾಡಿ.
ತುಲಾರಾಶಿ
ಕಳೆದ ವರ್ಷ ಗಜಕೇಸರಿ ಯೋಗ ಅನುಭವಿಸಿದ ನೀವು ಈ ಬಾರಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವರ್ಷದ ಆರಂಭದಲ್ಲಿಯೇ ಗುರುವು ವಕ್ರೀಯಾಗಿರುವುದರಿಂದ ಹೆಚ್ಚಿನ ಶುಭ ಫಲ ನಿರೀಕ್ಷಿಸುವಂತಿಲ್ಲ. ನೀವು ಮಾಡಬೇಕಾದ ಕೆಲಸವನ್ನು ಯಾವುದೇ ಲೋಪ ಬಾರದಂತೆ ನಿರ್ವಹಿಸಿ. ತುಲಾ ರಾಶಿಯವರಿಗೆ ಕೆಲಸದ ಜಾಗದಲ್ಲಿ ಹಿತಶತ್ರುಗಳ ಕಾಟವಿರುತ್ತದೆ. ಹಣ ಹೂಡಿಕೆ ಮಾಡುವಾಗ ಎಚ್ಚರ, ಈ ವರ್ಷ ಯಾವುದೇ ಹೂಡಿಕೆ, ಖರೀದಿ ಮಾಡದಿದ್ದರೆ ಒಳ್ಳೆಯದು. ಆಂಜನೇಯ ಮಂತ್ರ ಪಠಿಸಲು ಮರೆಯದಿರಿ.
ವೃಶ್ಚಿಕರಾಶಿ
ವರ್ಷದ ಆರಂಭದಲ್ಲಿ ಕೆಲವೊಂದು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.ತೆ ಗುರು ಮತ್ತು ಶನಿಗ್ರಹರು ಅಶುಭ ಸ್ಥಾನದಲ್ಲಿ ಸಂಚರಿಸುವ ಮೂಲಕ ಹೆಚ್ಚಿನ ಶುಭ ಫಲವನ್ನು ಕಾಣಲಾರಿರಿ. ಆಸ್ತಿ ವಿಷಯದಲ್ಲಿ ಕೆಲವೊಂದು ತಕರಾರು ಬರಬಹುದು. ಕುಟುಂಬ ಜೀವನದಲ್ಲಿ ಸಂಶಯದ ಪಿಶಾಚಿ ಸುಳಿಯಬಹುದು. ರಾಜಕಾರಣಿಗಳಿಗೂ ಅಷ್ಟೊಂದು ಶುಭಕರವಾಗಿಲ್ಲ, ಅನೇಕ ಟೀಕೆ, ಟಿಪ್ಪಣಿಗಳನ್ನು ಎದುರಿಸಬೇಕಾಗುತ್ತದೆ. ಆದರೆ ಆ ನಂತರ ಧನ ಲಾಭ ದೊರೆಯುತ್ತದೆ. ಭೂಮಿ ಮಾರಾಟದಿಂದ ಲಾಭ ದೊರೆಯುವುದು. ಸಾಡೇಸಾತ್ ಶನಿ ದೂರವಾಗುವುದು. ಹಣವನ್ನು ದುಂದುವೆಚ್ಚ ಮಾಡದಂತೆ ಜಾಗ್ರತೆ ವಹಿಸಿ.
ಧನುರಾಶಿ
ಜನ್ಮಸ್ಥ ಶನಿ ಮತ್ತು ಅಷ್ಟಮದ ರಾಹುಗ್ರಹದಿಂದಾಗಿ ಧನುರಾಶಿಯವರ ಮಾನಸಿಕ ನೆಮ್ಮದಿಗೆ ಹೊಡೆತ ಬೀಳುತ್ತದೆ. ಈ ಕಾರಣದಿಂದ ಚಿಕಿತ್ಸೆಗಾಗಿ ಹಾಗೂ ಕೆಲ ಮೂಢನಂಬಿಕೆಗಳಿಗಾಗಿ ಹಣ ಖರ್ಚು ಮಾಡುವಿರಿ. ನಿಮ್ಮ ಮನೋಲ್ಲಾಸ ಕಡಿಮೆಯಾಗುವುದು, ಸಾಲ ಮಾಡಿ ಯಾವುದೇ ಕೆಲಸವನ್ನು ಮಾಡುವ ಪ್ರಯತ್ನ ಮಾಡಬೇಡಿ, ಇದರಿಂದ ಮಾನಸಿಕ ನೆಮ್ಮದಿ ಹಾಳಾಗುವುದು. ದಾಂಪತ್ಯ ಜೀವನದಲ್ಲೂ ಕೆಲವೊಂದು ತೊಂದರೆಗಳು ಎದುರಾಗುವುದು. ನಿಮ್ಮೊಂದಿಗೆ ಕೆಲಸ ಮಾಡುವವರೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ.
ಮಕರರಾಶಿ
ಈ ವರ್ಷ ನಿಮಗೆ ಗುರು ಹನ್ನೆರಡು ಮತ್ತು ಜನ್ಮ ಸ್ಥಾನದಲ್ಲಿ, ಶನಿ ಜನ್ಮ ಸ್ಥಾನದಲ್ಲಿ ಸಂಚಾರ ಮಾಡುವುದರಿಂದ ಯಾವುದೇ ಶುಭ ಫಲಗಳು ದೊರೆಯಲು ಸಾಧ್ಯವಿಲ್ಲ.ವೃತ್ತಿಯಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ, ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲಸದಲ್ಲೂ ಹಲವಾರು ವ್ಯತ್ಯಾಸಗಳು ಉಂಟಾಗುವುದು, ಬಯಸದೇ ಇದ್ದರೂ ವರ್ಗಾವಣೆ ಉಂಟಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲೂ ಕೆಲವೊಂದು ಭಿನ್ನಾಭಿಪ್ರಾಯ ಮೂಡುವುದು. ಒಂದು ಕೆಲಸ ಸಿಗುವವರೆಗೆ ಕೆಲಸ ಬಿಡಲು ಹೋಗಬೇಡಿ. ಹಣಕಾಸಿನ ತೊಂದರೆ ಉಂಟಾಗದಿರಲು ಖರ್ಚು ಹಿಡಿತದಲ್ಲಿರಲಿ.
ಕುಂಭರಾಶಿ
ಈ ವರ್ಷ ವ್ಯಾಪಾರ ಉದ್ಯಮದಲ್ಲಿ ಲಾಭ ಕಾಣಬಹುದು. ಆರಂಭದಲ್ಲಿ ಸ್ವಲ್ಪ ನಷ್ಟ, ಖರ್ಚು ವೆಚ್ಚಗಳು ಬಂದರೂ ನಂತರ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಾಧ್ಯತೆ ಇದೆ. ವಿವಾಹ ಯೋಗ್ಯರಿಗೆ ಕಂಕಣಭಾಗ್ಯ ಕೂಡಿ ಬರುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು. ಖರ್ಚು ಸ್ವಲ್ಪ ಅಧಿಕ ಬಂದರೂ ಮಾನಸಿಕ ನೆಮ್ಮದಿ ದೊರೆಯುವುದು.
ಮೀನರಾಶಿ
ಈ ಗ್ರಹದವರಿಗೆ ಗುರು ಹಾಗೂ ಶನಿ ಎರಡೂ ಗ್ರಹಗಳ ಅನುಗ್ರಹವಿರುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ, ವೃತ್ತಿ ಬದುಕಿನಲ್ಲೂ ಪ್ರಗತಿ ಕಾಣುವಿರಿ. ಗರ್ಭಿಣಿಯರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ, ಇಲ್ಲದೆ ಇದ್ದಲ್ಲಿ ಗರ್ಭಸ್ರಾವ ಆಗುವ ಸಾಧ್ಯತೆ ಇರುತ್ತದೆ. ಲೇವಾದೇವಿ ವ್ಯವಹಾರ ಮಾಡುವಾಗ ಎಚ್ಚರ ಇಲ್ಲದಿದ್ದರೆ ಮೋಸಹೋಗುವಿರಿ. ಉದ್ಯೋಗ ಬದಲಾವಣೆ ಬಯಸುವುದಾದರೆ ಇದು ಸೂಕ್ತ ಕಾಲವಾಗಿದೆ. ನೆ, ಸೈಟು ಖರೀದಿ, ಕಾರು- ಬೈಕ್ ಇತ್ಯಾದಿ ವಾಹನ ಖರೀದಿ ಮಾಡುವುದಕ್ಕೂ ಉತ್ತಮ ಸಮಯ ಇದು. ಹಣವನ್ನು ಉಳಿತಾಯ ಮಾಡಲು ಪ್ರಯತ್ನಿಸಿ.