Just In
- 8 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 10 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆ. 25ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಹೀಗೆ ಮಾಡಿದರೆ ಕಷ್ಟಗಳು ದೂರಾಗುವುದು
ಪಿತೃಪಕ್ಷ ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಿತ್ತು, ಇದೀಗ ಸೆಪ್ಟೆಂಬರ್ 25ಕ್ಕೆ ಮುಕ್ತಾಯವಾಗಲಿದೆ. ಪಿತೃಪಕ್ಷ ಹಿಂದೂಗಳಿಗೆ ತುಂಬಾನೇ ಮಹತ್ವವಾದದ್ದು. ಈ ಸಂದರ್ಭದಲ್ಲಿ ಮರಣವೊಂದಿರುವ ಹಿರಿಯರಿಗೆ ತರ್ಪಣ ನೀಡಿ, ಅವರ ಆಶೀರ್ವಾದ ಪಡೆಯಲಾಗುವುದು. ಪಿತೃಪಕ್ಷ ಆಚರಣೆ ಮಾಡುವುದರಿಂದ ಪಿತೃದೋಷವಿದ್ದರೆ ನಿವಾರಣೆಯಾಗುವುದು. ಪಿತೃಪಕ್ಷ ಅಶ್ವನಿ ಮಾಸದ ಅಮವಾಸ್ಯೆಯಂದು ಮುಕ್ತಾಯವಾಗಲಿದೆ.
ಸೆಪ್ಟೆಂಬರ್ 25ಕ್ಕೆ ಸರ್ವ ಪಿತೃ ಅಮವಾಸ್ಯೆ ಇದನ್ನು ಮಹಾಲಯ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು. ಸರ್ವ ಪಿತೃ ಅಮವಾಸ್ಯೆಯನ್ನು ಅಶ್ವಿನ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸಲಾಗುತ್ತಿದೆ.
ಸರ್ವ ಪಿತೃ ಅಮವಾಸ್ಯೆಯ ಮಹತ್ವ
ಪಿತೃದೋಷ ಒಳ್ಳೆಯದಲ್ಲ. ಕೆಲವರಿಗೆ ಕುಂಡಲಿಯಲ್ಲಿ ಪಿತೃದೋಷವಿರುತ್ತದೆ, ಇನ್ನು ಕೆಲವರಿಗೆ ಕರ್ಮಫಲದಿಂದಾಗಿ ಪಿತೃದೋಷ ಉಂಟಾಗಿರುತ್ತದೆ. ಪಿತೃದೋಷ ಹೋಗಲಾಡಿಸಲು ಈ ಪಿತೃಪಕ್ಷ ಸೂಕ್ತವಾದ ಸಂದರ್ಭವಾಗಿದೆ. ಪಿತೃಪಕ್ಷದಲ್ಲಿ ಹಿರಿಯರಿಗೆ ತರ್ಪಣ ನೀಡುವುದರಿಂದ ಪಿತೃದೋಷ ನೀಗುವುದು, ಅದರಲ್ಲೂ ಸರ್ವ ಪಿತೃ ಅಮವಾಸ್ಯೆಯಂದು ತರ್ಪಣ ನೀಡಿದರೆ ನಿಮ್ಮ ಎಲ್ಲಾ ಹಿರಿಯರು ಸಂತುಷ್ಟರಾಗಿ ನಿಮ್ಮನ್ನು ಆಶೀರ್ವದಿಸುತ್ತಾರೆ. ಇದರಿಂದಾಗಿ ಪಿತೃದೋಷವಿದ್ದರೆ ಅದು ನಿವಾರಣೆಯಾಗಿ ಏಳಿಗೆ ಉಂಟಾಗಲಿದೆ.
ಸರ್ವ ಪಿತೃ ಅಮವಾಸ್ಯೆ ತಿಥಿ
ಸರ್ವ ಪಿತೃ ಅಮವಾಸ್ಯೆ ದಿನಾಂಕ ಸೆಪ್ಟೆಂಬರ್ 25
ಅಮವಾಸ್ಯೆ ತಿಥಿ ಪ್ರಾರಂಭ: ಸೆಪ್ಟೆಂಬರ್ 25 ಮುಂಜಾನೆ 03:12ಕ್ಕೆ
ಅಮವಾಸ್ಯೆ ತಿಥಿ ಮುಕ್ತಾಯ: ಸೆಪ್ಟೆಂಬರ್ 26 ಮುಂಜಾನೆ 03:23ಕ್ಕೆ
ರೋಹಿಣಿ ಮುಹೂರ್ತ: 11:48ರಿದ 12:37ರವರೆಗೆ
ಅಪರಾಹ್ನ ಕಾಲ: ಮಧ್ಯಾಹ್ನ 01:25ರಿಂದ 03:50ರವರೆಗೆ
ಸರ್ವ ಪಿತೃಪಕ್ಷ ಅಮವಾಸ್ಯೆ ನಿಯಮಗಳು
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು
* ಈ ದಿನ ಸಾತ್ವಿಕ ಆಹಾರ ಸೇವಿಸಬೇಕು
* ಶ್ರಾದ್ಧ ಕಾರ್ಯ ಮಾಡಬೇಕು
* ಬ್ರಾಹ್ಮಿಣರಿಗೆ ಆಹಾರ, ಹಣ್ಣು, ಬಟ್ಟೆಯನ್ನು ನೀಡಿ, ಅವರ ಪಾದ ಮುಟ್ಟಿ ನಮಸ್ಕರಿಸಬೇಕು.
* ಕೆಲವರು ಪವಿತ್ರ ನದಿಗಳ ತಟದಲ್ಲಿ ಶ್ರಾದ್ಧ ಕಾರ್ಯ ಮಾಡುತ್ತಾರೆ,
ಈ ದಿನ ಹೀಗೆ ಮಾಡಿದರೆ ಶುಭ ಫಲ ಪಡೆಯುವಿರಿ
ಹಸುವಿಗೆ ಹಸಿರು ಮೇವು ನೀಡಿ
ಸರ್ವ ಪಿತೃ ಅಮಾವಾಸ್ಯೆಯ ದಿನ ಪೂರ್ವಜರನ್ನು ಮೆಚ್ಚಿಸಲು ಹಸುವಿಗೆ ಹಸಿರು ಮೇವು ನೀಡಬೇಕು.
ಆಲದ ಮರಕ್ಕೆ ಪೂಜೆ ಮಾಡಿ
ಸರ್ವಪಿತ್ರ ಅಮಾವಾಸ್ಯೆಯಂದು ಆಲದ ಮರದ ಬಳಿ ದೀಪ ಹಚ್ಚಿದರೆ ಸಂತುಷ್ಟರಾಗಿ ನಮ್ಮನ್ನು ಆಶೀರ್ವದಿಸುತ್ತಾರೆ.
ದಾನ ಮಾಡಿ
ಜ್ಯೋತಿಷ್ಯ ಪ್ರಕಾರ ಸರ್ವ ಪಿತೃ ಅಮಾವಾಸ್ಯೆಯಂದು ದಾನ ಮಾಡುವುದು ತುಂಬಾ ಒಳ್ಳೆಯದು. ಈ ದಿನ ದಾನ ಮಾಡುವುದರಿಂದ ಪುಣ್ಯ ಬರುತ್ತದೆ. ಸರ್ವ ಪಿತೃ ಅಮಾವಾಸ್ಯೆಯಂದು ಬ್ರಾಹ್ಮಣನಿಗೆ ಸಾಮಾನ್ಯ ದಾನವನ್ನು ಮಾಡಬೇಕು. ಹಾಗೆಯೇ ಬೆಳ್ಳಿಯನ್ನು ದಾನ ಮಾಡುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.