Just In
- 4 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 5 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 6 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 6 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇ.13ಕ್ಕೆ ವೃಷಭ ರಾಶಿಯಲ್ಲಿ ಅಸ್ತಮಿಸಲಿದ್ದಾನೆ ಬುಧ: ಈ 9 ರಾಶಿಯವರಿಗೆ ಈ ಅವಧಿ ಅನುಕೂಲಕರವಲ್ಲ, 3 ರಾಶಿಯವರಿಗೆ ಒಳ್ಳೆಯದಿದೆ
ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ಬುದ್ಧಿವಂತಿಕೆ, ಜ್ಞಾನ ಮತ್ತು ಮಾಹಿತಿಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಬಲವಾದ ಬುಧವು ತೀಕ್ಷ್ಣವಾದ ಬುದ್ಧಿವಂತಿಕೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಉತ್ತಮ ಸಂವಹನ ಕೌಶಲ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ.
ಮತ್ತೊಂದೆಡೆ, ಜಾತಕದಲ್ಲಿ ಬುಧದ ಸ್ಥಾನ ದುರ್ಬಲವಾಗಿದ್ದರೆ ಅದು ಶಿಕ್ಷಣದ ಕೊರತೆ, ದುರ್ಬಲ ಸಂವಹನ ಕೌಶಲ್ಯ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯದ ಕೊರತೆ ಇತ್ಯಾದಿಗಳಿಗೆ ಕಾರಣವಾಗುತ್ತದೆ. ಬುಧದ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳು ಜಾತಕದಲ್ಲಿ ಅದರ ಸ್ಥಾನವನ್ನು ಅವಲಂಬಿಸಿರುತ್ತದೆ.
ಮೇ 10ಕ್ಕೆ ಬುಧವು ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಾರಂಭಿಸಿತ್ತು, ಇದೀಗ ಮೇ 13 ಮಧ್ಯಾಹ್ನ 12:56ಕ್ಕೆ ವೃಷಭ ರಾಶಿಯಲ್ಲಿಯೇ ಅಸ್ತಮಿಸಲಿದೆ. ವೃಷಭ ರಾಶಿಯಲ್ಲಿ ಅಸ್ತಮಿಸುವ ಬುಧ ಮತ್ತೆ ಸಹಜ ಸ್ಥಿತಿಗೆ ಮೇ 30ಕ್ಕೆ ಮರಳಲಿದೆ.
ಯಾವುದೇ ಗ್ರಹವು ಸೂರ್ಯನಿಗೆ ಸಮೀಪವಾದಾಗ ಆ ಗ್ರಹ ಅಸ್ತಮಿಸಿದೆ ಎಂದು ಹೇಳಲಾಗುವುದು. ಗ್ರಹವು ಅಸ್ತಮಿಸಿದಾಗ ಅದರ ಪ್ರಭಾವ 12 ರಾಶಿಗಳ ಮೇಲೂ ಇರುತ್ತದೆ ಎಂದು ವೈದಿಕ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಬನ್ನಿ ದ್ವಾದಶ ರಾಶಿಗಳ ಮೇಲೆ ಇದು ಬೀರಿರುವ ಪ್ರಭಾವವೇನು ಎಂದು ನೋಡೋಣ:
ಮೇಷ ರಾಶಿ: ಈ ಅವಧಿ ನಿಮಗೆ ಒಳ್ಳೆಯದಿದೆ
ಮೇಷ ರಾಶಿಯವರಿಗೆ, ಬುಧ ಮೂರನೇ ಮತ್ತು ಆರನೇ ಮನೆಯ ಅಧಿಪತಿಯಾಗಿದ್ದು ಅದು ಅವರ ಎರಡನೇ ಮನೆಯಲ್ಲಿ ಅಸ್ತಮಿಸಲಿದೆ.
ವೃತ್ತಿಜೀವನದ ವಿಷಯದಲ್ಲಿ, ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಇದಕ್ಕಾಗಿ ನೀವು ಹೆಸರು ಮತ್ತು ಖ್ಯಾತಿಯನ್ನು ಸಹ ಪಡೆಯುತ್ತೀರಿ.
ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಸಮಯವು ಉತ್ತಮ ಲಾಭವನ್ನು ಗಳಿಸಲು ಮತ್ತು ಹೊಸ ಯೋಜನೆಗಳಲ್ಲಿ ಕೆಲಸವನ್ನು ಪ್ರಾರಂಭಿಸಲು ಪ್ರಬಲವಾಗಿದೆ. ಇದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಇದರೊಂದಿಗೆ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.
ಪರಿಹಾರ: ಪ್ರತಿದಿನ ಬೆಳಗ್ಗೆ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.
ವೃಷಭ ರಾಶಿ: ವೃತ್ತಿ ಜೀವನಕ್ಕೆ ಅನುಕೂಲಕರವಾಗಿದೆ
ವೃಷಭ ರಾಶಿಯವರಿಗೆ ಬುಧವು ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾಗಿದ್ದು ಅದು ಅವರ ಮೊದಲ ಅಂದರೆ ಆರೋಹಣ ಮನೆಯಲ್ಲಿ ಅಸ್ತಮಿಸಲಿದೆ.
ನಿಮ್ಮ ಲಗ್ನದಲ್ಲಿ ಬುಧದ ಸ್ಥಾನವು ನಿಮ್ಮ ವೃತ್ತಿಜೀವನದ ದೃಷ್ಟಿಯಿಂದ ಅನುಕೂಲಕರವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುತ್ತೀರಿ. ನಿಮ್ಮ ಉತ್ತಮ ಕಾರ್ಯನಿರ್ವಹಣೆಯು ನಿಮ್ಮ ವೃತ್ತಿಪರ ಜೀವನದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಪಡೆಯುವಂತಹ ಯಶಸ್ಸನ್ನು ತರುತ್ತದೆ.
ನೀವು ಯಾವುದೇ ವ್ಯವಹಾರ ಮಾಡುತ್ತಿದ್ದರೆ ಉತ್ತಮ ಧನಾತ್ಮಕ ಫಲಿತಾಂಶಗಳನ್ನು ಕಾಣುತ್ತೀರಿ.
ಆರ್ಥಿಕವಾಗಿ ನೀವು ಆದಾಯ ಮತ್ತು ಖರ್ಚು ಎರಡನ್ನೂ ಸಮದೂಗಿಸಬೇಕಾಗುವುದು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಸಂಗಾತಿಯೊಂದಿಗೆ ಪರಸ್ಪರ ಸಾಮರಸ್ಯ ಇರುತ್ತದೆ.
ಪರಿಹಾರ: ಪ್ರತಿದಿನ 14 ಬಾರಿ "ಓಂ ಬುಧಾಯ ನಮಃ" ಜಪಿಸಿ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಅವಧಿ ಅನುಕೂಲಕರವಲ್ಲ
ಮಿಥುನ ರಾಶಿಯವರಿಗೆ ಬುಧನು ಮೊದಲ/ಲಗ್ನ ಮತ್ತು ನಾಲ್ಕನೇ ಮನೆಯ ಅಧಿಪತಿಯಾಗಿದ್ದು ಅದು ಈ ಅವಧಿಯಲ್ಲಿ ನಿಮ್ಮ ಹನ್ನೆರಡನೇ ಮನೆಯಲ್ಲಿ ಅಸ್ತಮಿಸುತ್ತದೆ.
ವೃತ್ತಿಪರವಾಗಿ ಈ ಅವಧಿಯು ಕೆಲವು ತೊಂದರೆಗಳಿಂದ ಕೂಡಿರಬಹುದು, ನೀವು ಕೆಲಸದ ಒತ್ತಡದಲ್ಲಿರಬಹುದು, ಸಹೋದ್ಯೋಗಿಗಳಿಂದ ಹೆಚ್ಚಿನ ಬೆಂಬಲವನ್ನು ಪಡೆಯದಿರಬಹುದು.
ವ್ಯಾಪಾರಸ್ಥರಿಗೆ ಈ ಸಮಯವು ನಿಮಗೆ ಸರಾಸರಿಯಾಗಿರುತ್ತದೆ, ಆದ್ದರಿಂದ ಈ ಅವಧಿಯಲ್ಲಿ ಪ್ರಮುಖ ವ್ಯಾಪಾರ ವ್ಯವಹಾರಗಳನ್ನು ಮಾಡದಂತೆ ನಿಮಗೆ ಸಲಹೆ ನೀಡಲಾಗಿದೆ.
ವೈಯಕ್ತಿಕ ಜೀವನದಲ್ಲೂ ಸಾಮರಸ್ಯದ ಕೊರತೆ ಎದುರಿಸಬಹುದು. ವಿಷಯಗಳನ್ನು ಶಾಂತವಾಗಿ ಬಗೆಹರಿಸಲು ಪ್ರಯತ್ನಿಸುವುದು ಒಳ್ಳೆಯದು. ಆರೋಗ್ಯ ಜೀವನದ ಬಗ್ಗೆ ನೋಡುವುದಾದರೆ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದಿರಿ.
ಪರಿಹಾರ: ಬುಧವಾರದಂದು ಬಡ ಮಕ್ಕಳಿಗೆ ಆಹಾರ ನೀಡುವುದರಿಂದ ಬುಧನ ಋಣಾತ್ಮಕ ಪ್ರಭಾವ ತಗ್ಗಿಸಬಹುದು.
ಕರ್ಕ ರಾಶಿ: ವೃತ್ತಿಪರವಾಗಿ ಒಳ್ಳೆಯದು, ಆದರೆ ಸವಾಲು ಇದೆ
ಕರ್ಕ ರಾಶಿಯವರಿಗೆ ಬುಧ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿದ್ದು ಅದು ಈ ಅಧಿಯಲ್ಲಿ ಹನ್ನೊಂದನೇ ಮನೆಯಲ್ಲಿ ಅಸ್ತಮಿಸುತ್ತದೆ.
ವೃತ್ತಿಪರವಾಗಿ ನೋಡಿದರೆ, ಹೆಚ್ಚಿನ ಮಟ್ಟಿಗೆ ನೀವು ಧನಾತ್ಮಕ ಫಲಿತಾಂಶಗಳನ್ನು ನೋಡುತ್ತೀರಿ ಆದರೆ ಅದೇ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕಾರ್ಯಗಳನ್ನು ನೀವು ಸರಿಯಾಗಿ ಯೋಜಿಸಬೇಕಾಗುತ್ತದೆ.
ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಅವಧಿಯಲ್ಲಿ ಲಾಭ ಮತ್ತು ನಷ್ಟ ಎರಡೂ ಸಾಧ್ಯ. ಮತ್ತೊಂದೆಡೆ, ಈ ಅವಧಿಯಲ್ಲಿ ವಿದೇಶದಿಂದ ವ್ಯಾಪಾರ ಮಾಡಲು ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ.
ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಸಂಬಂಧಗಳಲ್ಲಿ ಸಾಮರಸ್ಯ ಇರುತ್ತದೆ. ಆರೋಗ್ಯ ವಿಷಯದಲ್ಲಿ ಶೀತದಂತಹ ಸಣ್ಣ ಪುಟ್ಟ ಸಮಸ್ಯೆಗಳಿರಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಿಮಗೆ ಉತ್ತಮವಾಗಿದೆ.
ಪರಿಹಾರ: ಬುಧವಾರದಂದು ಹಸುಗಳಿಗೆ ಹಸಿರು ಹುಲ್ಲನ್ನು ತಿನ್ನಿಸಿ.
ಸಿಂಹ ರಾಶಿ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ
ಸಿಂಹ ರಾಶಿಯವರಿಗೆ ಬುಧ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು ಅದು ನಿಮ್ಮ ಹತ್ತನೇ ಮನೆಯಲ್ಲಿ ಅಸ್ತಮಿಸಲಿದೆ.
ವೃತ್ತಿಪರವಾಗಿ ಉದ್ಯೋಗದಲ್ಲಿರುವ ಜನರು ಈ ಅವಧಿಯಲ್ಲಿ ಉದ್ಯೋಗದಲ್ಲಿ ಬದಲಾವಣೆ ಅಥವಾ ವರ್ಗಾವಣೆಯನ್ನು ಎದುರಿಸಬೇಕಾಗಬಹುದು. ಮತ್ತೊಂದೆಡೆ, ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು.
ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ದುರಹಂಕಾರದಿಂದ ಸಂಗಾತಿಯೊಂದಿಗೆ ವಾದಗಳು ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಕೋಪ ಮತ್ತು ಅಹಂ ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಮತ್ತೊಂದೆಡೆ, ನೀವು ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಾನಸಿಕ ಒತ್ತಡವನ್ನು ಹೊಂದಿರಬಹುದು, ಈ ಅವಧಿಯಲ್ಲಿ ನಿಮ್ಮ ಉಳಿದ ಆರೋಗ್ಯವು ಉತ್ತಮವಾಗಿರುತ್ತದೆ.
ಪರಿಹಾರ: ಪ್ರತಿದಿನ ಲಿಂಗಾಷ್ಟಕವನ್ನು ಪಠಿಸಿ.
ಕನ್ಯಾ ರಾಶಿ: ಈ ಅವಧಿ ಅನುಕೂಲಕರವಾಗಿದೆ
ಕನ್ಯಾ ರಾಶಿಯರಿಗೆ ಬುಧವು ಮೊದಲ / ಲಗ್ನ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದು ಅದು ನಿಮ್ಮ ಒಂಬತ್ತನೇ ಮನೆಯಲ್ಲಿ ಅಸ್ತಮಿಸಲಿದೆ.
ವೃತ್ತಿಪರವಾಗಿ ನೋಡಿದರೆ, ಈ ಸಮಯದಲ್ಲಿ ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ವೃತ್ತಿಪರ ಜೀವನವು ಸಕಾರಾತ್ಮಕತೆಯಿಂದ ಕೂಡಿರುತ್ತದೆ.
ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ, ಹೊಸ ವ್ಯಾಪಾರ ಸಂಪರ್ಕಗಳನ್ನು ಪಡೆಯಬಹುದು. ಅಂತಹ ಸಂಪರ್ಕಗಳು ನಿಮಗೆ ಪ್ರಯೋಜನಕಾರಿಯಾಗಿದೆ.
ವೈಯಕ್ತಿಕ ಜೀವನ ಹಾಗೂ ಆರೋಗ್ಯ ಚೆನ್ನಾಗಿರುತ್ತದೆ.
ಪರಿಹಾರ: ಪ್ರತಿದಿನ "ವಿಷ್ಣು ಸಹಸ್ರನಾಮ" ಪಠಿಸಿ.
ತುಲಾ ರಾಶಿ: ಈ ಅವಧಿ ಅನುಕೂಲಕರವಾಗಿಲ್ಲ
ತುಲಾ ರಾಶಿಯವರಿಗೆ, ಬುಧ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿದ್ದು ಅದು ನಿಮ್ಮ ಎಂಟನೇ ಮನೆಯಲ್ಲಿ ಅಸ್ತಮಿಸಲಿದೆ.
ವೃತ್ತಿಪರವಾಗಿ ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಕೆಲವು ಅಡೆತಡೆಗಳನ್ನು ಎದುರಿಸಬಹುದು. ಇದರೊಂದಿಗೆ ಕೆಲವು ಸವಾಲಿನ ಗುರಿಗಳೂ ನಿಮ್ಮ ಮುಂದೆ ಬರಬಹುದು.
ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಸಮಯದಲ್ಲಿ ನಷ್ಟದ ಸಾಧ್ಯತೆಯಿದೆ ಆದ್ದರಿಂದ ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡಿ
ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲೂ ಏರಿಳಿತಗಳನ್ನು ಕಾಣಬಹುದು
ಆರೋಗ್ಯ ಸಮಸ್ಯೆಗಳು ಬರಬಹುದು, ಆದ್ದರಿಂದ ಆರೋಗ್ಯದ ಕಡೆ ಗಮನ ಹರಿಸಿ.
ಪರಿಹಾರ: ಶುಕ್ರವಾರದಂದು ಲಕ್ಷ್ಮಿ ದೇವಿಗೆ ತುಪ್ಪದ ದೀಪವನ್ನು ಹಚ್ಚಿ.
ವೃಶ್ಚಿಕ ರಾಶಿ: ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ
ವೃಶ್ಚಿಕ ರಾಶಿಯವರಿಗೆ ಬುಧ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು ಅದು ನಿಮ್ಮ ಏಳನೇ ಮನೆಯಲ್ಲಿ ಅಸ್ತಮಿಸಲಿದೆ.
ವೃತ್ತಿಪರವಾಗಿ ನೋಡಿದರೆ, ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು, ಹಾಗೆಯೇ ನೀವು ಕೆಲವು ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುವುದು ಉತ್ತಮ.
ನೀವು ವ್ಯಾಪಾರಸ್ಥರಾಗಿದ್ದರೆಈ ಅವಧಿಯಲ್ಲಿ ವ್ಯಾಪಾರ ಪಾಲುದಾರರೊಂದಿಗಿನ ಸಂಬಂಧದಲ್ಲಿ ಕೆಲವು ಏರಿಳಿತಗಳ ಸಾಧ್ಯತೆಯಿದೆ. ಇದು ನಿಮ್ಮ ವ್ಯಾಪಾರದ ಉತ್ಪಾದಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಮತ್ತು ನಿಮ್ಮ ಆಹಾರದ ಬಗ್ಗೆಯೂ ಗಮನ ಕೊಡಿ.
ಪರಿಹಾರ: ಪ್ರತಿದಿನ 11 ಬಾರಿ "ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪಿಸಿ.
ಧನು ರಾಶಿ: ವೃತ್ತಿ ಜೀವನಕ್ಕೆ ಒಳ್ಳೆಯದು, ವೈಯಕ್ತಿಕ ಜೀವನದ ಕಡೆ ಗಮನ ಹರಿಸಿ
ಧನು ರಾಶಿಯವರಿಗೆ ಬುಧ ಗ್ರಹವು ಏಳನೇ ಮತ್ತು ಹತ್ತನೆಯ ಅಧಿಪತಿಯಾಗಿದ್ದು ಅದು ನಿಮ್ಮ ಆರನೇ ಮನೆಯಲ್ಲಿ ಅಸ್ತಮಿಸಲಿದೆ.
ವೃತ್ತಿಪರವಾಗಿ, ವೃತ್ತಿಜೀವನದ ಬೆಳವಣಿಗೆಯು ಈ ಅವಧಿಯಲ್ಲಿ ಸಾಧ್ಯವಾಗುತ್ತದೆ, ಜೊತೆಗೆ ಎಲ್ಲಾ ಕೆಲಸಗಳು ಉತ್ತಮವಾಗಿ ಮತ್ತು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಇದರ ಪರಿಣಾಮವಾಗಿ ನಿಮಗೆ ಪ್ರಶಂಸೆ, ಪ್ರೋತ್ಸಾಹ ಎಲ್ಲಾ ಸಿಗುವುದು.
ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಸಮಯದಲ್ಲಿ ನೀವು ಬಯಸಿದ ಲಾಭವನ್ನು ಗಳಿಸುವಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು.
ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಅಹಂಕಾರದಿಂದ ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಅದೇ ಸಮಯದಲ್ಲಿ, ಆರೋಗ್ಯದ ವಿಷಯದಲ್ಲಿ, ಈ ಅವಧಿಯಲ್ಲಿ ಶೀತ ವಸ್ತುಗಳ ಸೇವನೆಯನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ.
ಪರಿಹಾರ: ಪ್ರತಿದಿನ 11 ಬಾರಿ "ಓಂ ಗುರುವೇ ನಮಃ" ಎಂದು ಜಪಿಸಿ.
ಮಕರ ಸಂಕ್ರಾಂತಿ: ಸವಾಲುಗಳನ್ನು ಎದುರಿಸಬೇಕಾಗುವುದು
ಮಕರ ರಾಶಿಯವರಿಗೆ ಬುಧ 6 ಮತ್ತು 9 ನೇ ಮನೆಯ ಅಧಿಪತಿಯಾಗಿದ್ದು ಮೇ 13ಕ್ಕೆ ನಿಮ್ಮ ಐದನೇ ಮನೆಯಲ್ಲಿ ಅಸ್ತಮಿಸಲಿದೆ.
ವೃತ್ತಿ ಜೀವನದ ಬಗ್ಗೆ ನೋಡುವುದಾದರೆ ಈ ಅವಧಿಯಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ನಿಮ್ಮ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ನೀವು ಸರಿಯಾಗಿ ಪ್ಲ್ಯಾನ್ ಮಾಡಬೇಕಾಗುತ್ತದೆ.
ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಕೆಲವು ಹಿನ್ನಡೆಗಳಿಂದಾಗಿ ಈ ಅವಧಿಯಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಕೌಟುಂಬಿಕ ಸಮಸ್ಯೆಗಳಿಂದಾಗಿ ನಿಮ್ಮ ಸಂಬಂಧದಲ್ಲಿ ಏರಿಳಿತಗಳನ್ನು ನೀವು ನೋಡಬಹುದು. ಆದರೆ ಮಾನಸಿಕ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಯೋಗ, ವ್ಯಾಯಾಮ ಮತ್ತು ಧ್ಯಾನ ಇತ್ಯಾದಿಗಳನ್ನು ಮಾಡಿ.
ಪರಿಹಾರ: ಹನುಮಾನ್ ಚಾಲೀಸಾ ಪಠಿಸಿ.
ಕುಂಭ ರಾಶಿ:ಕುಂಭ ರಾಶಿಯವರಿಗೆ ಈ ಅವಧಿ ಸರಾಸರಿಯಾಗಲಿದೆ
ಕುಂಭ ರಾಶಿಯವರಿಗೆ ಬುಧವು ಐದನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿದ್ದು ಈ ಅವಧಿಯಲ್ಲಿ ನಿಮ್ಮ ನಾಲ್ಕನೇ ಮನೆಯಲ್ಲಿ ಅಸ್ತಮಿಸುತ್ತದೆ.
ವೃತ್ತಿಜೀವನದ ವಿಷಯದಲ್ಲಿ ಈ ಅವಧಿಯಲ್ಲಿ ನೀವು ಸರಾಸರಿ ಫಲಪ್ರದ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಪ್ರಯೋಜನಗಳನ್ನು ಪಡೆಯುತ್ತೀರಿ ಆದರೆ ಅವು ನಿಮಗೆ ಸೂಕ್ತವಲ್ಲದಿರಬಹುದು ಮತ್ತು ನೀವು ಅತೃಪ್ತರಾಗಬಹುದು.
ನೀವು ನಿಮ್ಮ ಸ್ವಂತ ವ್ಯವಹಾರವನ್ನು ಹೊಂದಿದ್ದರೆ, ಈ ಅವಧಿಯಲ್ಲಿ ನೀವು 'ಲಾಭವಿಲ್ಲ, ನಷ್ಟವಿಲ್ಲ' ಎಂಬಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಯೋಜನೆಗಳು ಮತ್ತು ತಂತ್ರಗಳನ್ನು ಬದಲಾಯಿಸುವುದು ನಿಮಗೆ ಒಳ್ಳೆಯದು.
ವೈಯಕ್ತಿಕ ಜೀವನದ ವಿಷಯದಲ್ಲಿ, ಈ ಅವಧಿಯಲ್ಲಿ ನಿಮ್ಮ ಕುಟುಂಬ ಸದಸ್ಯರಿಗೆ ಸಂಬಂಧಿಸಿದಂತೆ ನೀವು ತಪ್ಪು ತಿಳುವಳಿಕೆಯನ್ನು ಎದುರಿಸಬೇಕಾಗಬಹುದು. ಇನ್ನು ಆರೋಗ್ಯದ ಬಗ್ಗೆ ನೋಡುವುದಾದರೆ ಕಾಲುಗಳಲ್ಲಿ ನೋವು ಕಾಣಿಸಬಹುದು. ಆದ್ದರಿಂದ ಯೋಗ, ವ್ಯಾಯಾಮ ಇತ್ಯಾದಿಗಳನ್ನು ಮಾಡುವುದು ಉತ್ತಮ.
ಪರಿಹಾರ: ಶನಿವಾರದಂದು ಬಡ ರೋಗಿಗಳಿಗೆ ಆಹಾರ, ಔಷಧ ನೀಡಿ.
ಮೀನ ರಾಶಿ: ಈ ಸಮಯದಲ್ಲಿ ಹುಷಾರಾಗಿರಿ
ಮೀನ ರಾಶಿಯವರಿಗೆ ಬುಧವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದ್ದು ಅದು ನಿಮ್ಮ ಮೂರನೇ ಮನೆಯಲ್ಲಿ ಅಸ್ತಮಿಸುತ್ತದೆ.
ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಬದಲಾವಣೆಯನ್ನು ಕಾಣಬಹುದು. ಅಲ್ಲದೆ, ನೀವು ವಿದೇಶ ಪ್ರವಾಸ ಮಾಡಬೇಕಾಗಬಹುದು ಮತ್ತು ಅಂತಹ ಸಂದರ್ಭಗಳು ನಿಮಗೆ ಸ್ವಲ್ಪ ಸವಾಲಾಗಿರಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಸಮಯದಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಲಾಭವನ್ನು ಪಡೆಯಬಹುದು.
ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಸಂವಹನದ ಕೊರತೆಯಿಂದಾಗಿ ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ತಾಳ್ಮೆಯಿಂದ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸಿ.
ಆರೋಗ್ಯದ ಬಗ್ಗೆ ನೋಡುವುದಾದರೆ ಈ ಅವಧಿಯಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯ ಕುಸಿತವನ್ನು ಕಾಣಬಹುದು, ಇದರಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆಹಾರಕ್ರಮದ ಕಡೆಗೂ ವಿಶೇಷ ಗಮನ ಹರಿಸಿ.
ಪರಿಹಾರ: ಪ್ರಮುಖ ಕೆಲಸಕ್ಕೆ ಹಹಿರಿಯರ ಆಶೀರ್ವಾದ ಪಡೆಯಿರಿ.