Just In
- 1 hr ago
ಮಳೆಗಾಲದಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ: ಈ ಅಪಾಯಕಾರಿ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ
- 3 hrs ago
ಒಟ್ಟಿಗೆ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ಇತಿಹಾಸ ಬರೆದ ಅಪ್ಪ-ಮಗಳು
- 3 hrs ago
ಮಾನ್ಸೂನ್ನಲ್ಲಿ ಕಾಡುವ ಈ ತ್ವಚೆಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
- 6 hrs ago
ಕಾಂಟಾಕ್ಟ್ ಲೆನ್ಸ್ ಹಾಕಿಯೇ ಮಲಗೋದ್ರಿಂದ ಏನಾಗುತ್ತೆ ಗೊತ್ತಾ..? ಈ ತಪ್ಪು ಮಾಡಲೇಬೇಡಿ..!
Don't Miss
- Movies
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶರ್ಟ್ ಬಿಚ್ಚಿಸಿದ ಕಮೀಷನರ್
- News
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ಮೂರೇ ದಿನದಲ್ಲಿ 2 ಲಕ್ಷ ರುಪಾಯಿ ದಂಡ ಸಂಗ್ರಹಿಸಿದ ಬಿಬಿಎಂಪಿ
- Sports
IND vs ENG: 1ನೇ ಟಿ20 ಪಂದ್ಯಕ್ಕೆ ಈ ಆಟಗಾರನಿಗೆ ಅವಕಾಶ ಇಲ್ಲವೆಂದ ಆಕಾಶ್ ಚೋಪ್ರಾ
- Finance
ಕೇರಳ ಲಾಟರಿ: 'ಅಕ್ಷಯ AK 556' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Automobiles
ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ
- Education
DC Office Tumakuru Recruitment 2022 : 7 ಲೋಡರ್ಸ್ ಮತ್ತು ಕ್ಲೀನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಅಮೆಜಾನ್ ಪ್ರೈಮ್ ಡೇ ಸೇಲ್ 2022 ಡೇಟ್ ಫಿಕ್ಸ್! ಡಿಸ್ಕೌಂಟ್ ಏನಿದೆ?
- Travel
ಪರಿಪೂರ್ಣದೃಶ್ಯಗಳನ್ನು ಹೊಂದಿರುವ ತಾಣ - ಶಿರ್ಸಿ
ರೈತನ ಬೆಳೆ ರಕ್ಷಿಸುತ್ತಿರುವ ಹುಲಿವೇಷದ ನಾಯಿ
ಶಿವಮೊಗ್ಗದ ರೈತರೊಬ್ಬರ ಮನೆಯಲ್ಲಿ ಹುಲಿಯೊಂದು ಓಡಾಡಿದಂತೆ ಕಂಡವರು ಅರೆಕ್ಷಣ ಅಯ್ಯೋ... ಇಲ್ಲಿಗೆ ಹುಲಿ ಬಂದಿದೆಯೇ? ಎಂದು ಗಾಬರಿ ಬೀಳುತ್ತಿದ್ದರು. ಸೂಕ್ಷ್ಮವಾಗಿ ನೋಡಿದರೆ ಹುಲಿಯಲ್ಲ, ಅರೇ... ಹುಲಿ ಅಲ್ಲ, ಹುಲಿಯಂತೆ ಕಾಣುವ ಈ ಪ್ರಾಣಿ ಯಾವುದೆಂದು ನೋಡಿದರೆ ಅದೊಂದು ನಾಯಿಯಾಗಿತ್ತು. ನಾಯಿಗೆ ಹುಲಿಯಂತೆ ಕಾಣಲು ಬಣ್ಣ ಬಳಿದಿದ್ದರು.
ಇದೇನು ಹುಲಿವೇಷಕ್ಕೆ ಮನುಷ್ಯರು ಬಣ್ಣ ಬಳಿದಂತೆ ನಾಯಿಗೂ ಬಳಿದಿದ್ದಾರೆ, ಈ ನಾಯಿಗೆ ಏಕೆ ಬೇಕು ಈ ಹುಲಿಯ ಬಣ್ಣ ಎಂದು ನೋಡಿದರೆ ಅಲ್ಲಿ ಹುಲಿಯಂತೆ ಕಾಣುವ ನಾಯಿಯನ್ನು ತನ್ನ ಬೆಳೆಯ ರಕ್ಷಣೆಗೆ ಬಳಸಿದ ರೈತನ ಚಾಣಾಕ್ಷತನ ಹಾಗೂ ಅವನ ನೋವು ಎರಡೂ ಎದ್ದು ಕಾಣುತ್ತದೆ.
ರೈತರು ಬೆಳೆದ ಬೆಲೆ ಕೈ ಸಿಗಲು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ಅವರಿಗಷ್ಟೇ ಗೊತ್ತಿರುತ್ತದೆ. ಪ್ರಕೃತಿ ವಿಕೋಪ, ಮಂಗ, ಹಂದಿ ಹೀಗೆ ಇತರ ಪ್ರಾಣಿಗಳ ಕಾಟಗಳಿಂದ ರೈತ ತನ್ನ ಬೆಳೆ ರಕ್ಷಣೆ ಮಾಡುವಷ್ಟರಲ್ಲಿ ಸುಸ್ತಾಗಿ ಹೋಗುತ್ತಾನೆ. ಇನ್ನು ಬೆಳೆ ಬೆಳೆಯುವ ಕಡೆ ಮಂಗಗಳ ಕಾಟ ಇದ್ದರಂತೂ ಮುಗಿಯಿತು. ಬೆಳೆದು ಬಂದ ಬೆಳೆಗಳು ಕಪಿಚೇಷ್ಠೆಗೆ ಸಿಲುಕಿ ನಲುಗಿ ಹೋಗಿರುತ್ತವೆ. ಎಷ್ಟೇ ಕಾವಲು ಕುಳಿತರು ಅವು ತಮ್ಮ ಕೆಲಸ ಮಾಡದೆ ಬಿಡುವುದಿಲ್ಲ. ಇನ್ನು ಅವುಗಳಿಗಂತೂ ಮನುಷ್ಯನ ಭಯ ಇರುವುದಿಲ್ಲ.
ಹಾಗಾಗಿ ತನ್ನ ಬೆಳೆಯನ್ನು ರಕ್ಷಣೆ ಮಾಡಲು ತೀರ್ಥಹಳ್ಳಿ ತಾಲೂಕಿನ ನಲ್ಲೂರು ರೈತ ಶ್ರೀಕಂಠ ಗೌಡ ಈ ಐಡಿಯಾ ಮಾಡಿದ್ದಾರೆ. ಅವರ ಬೆಳೆಗೆ ಮಂಗಗಳು ದಾಳಿ ತುಂಬಾ ನಷ್ಟ ಮಾಡುತ್ತಿದ್ದವು. ಆಗ ಬಟ್ಕಳದಲ್ಲಿ ಒಬ್ಬ ರೈತ ಹುಲಿಯ ಆಕೃತಿ ತಂದು ಇಟ್ಟಾಗ ಅದಕ್ಕೆ ಹೆದರಿ ಮಂಗಗಳು ಬಾರದಿದ್ದ ಕತೆ ಕೇಳಿದ್ದು ನೆನಪಾಗಿ ಹಾಗೇ ಮಾಡುತ್ತಾರೆ.
ಹುಲಿಯ ಆಕೃತಿಯನ್ನು ನೋಡಿ ಭಯಪಟ್ಟು ಮಂಗಗಳು ಬರುತ್ತಿರಲಿಲ್ಲ, ಆದರೆ ಆ ಆಕೃತಿ ಎಲ್ಲಿಗೂ ಚಲಿಸದೆ ಒಂದೇ ಕಡೆ ಇರುವುದನ್ನು ನೋಡಿದ ಮಂಗಗಳು ಮತ್ತೆ ತಮ್ಮ ಕಪಿಚೇಷ್ಠೆಗೆ ಮುಂದಾಗುತ್ತವೆ. ಆಗ ಶ್ರೀಕಂಠ ಗೌಡರಿಗೆ ಹೊಳೆದಿದ್ದೇ ನಾಯಿಯನ್ನೇ ಹುಲಿ ಮಾಡುವ ಯೋಚನೆ.
#Karnataka farmer paints #TigerStripes on #dog to #SaveCrop from #monkeys
— 4to40 (@4to40) November 29, 2019
Srikanta Gowda, a farmer from #Naluru village, #Thirthahalli taluk in #Karnataka, has painted his dog to look like a tiger to save his crop from monkeys. https://t.co/ZZwhD2pe0g pic.twitter.com/VBhcbEeEWT
ಇದೀಗ ನಾಯಿ ಹುಲಿಯ ಗತ್ತಿನಲ್ಲಿ ಬೆಳೆ ಬೆಳೆದ ತೋಟದಲ್ಲಿ ಓಡಾಡುತ್ತಿದ್ದರೆ ಮಂಗಗಳು ಅದಕ್ಕೆ ಹೆದರಿ ಬರುವುದನ್ನು ನಿಲ್ಲಿಸಿವೆ. ತಮ್ಮ ಐಡಿಯಾ ವರ್ಕ್ಔಟ್ ಆಯ್ತು ಅಂತ ಶ್ರೀಕಂಠ ಗೌಡರಿಗೂ ನೆಮ್ಮದಿಯಾಗಿದೆ. ಇವರ ಐಡಿಯಾಕ್ಕೆ ಟ್ವಿಟರ್ನಲ್ಲಿ ಭಾರಿ ಮೆಚ್ಚುಗೆಯೂ ಸಿಕ್ಕಿದೆ.