Just In
- 3 min ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 1 hr ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- 2 hrs ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- 4 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
Don't Miss
- News Zero Shadow Day: ನಾಳೆ ಬುಧವಾರ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ; ಸಮಯ, ವಿವರ
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಶಿ ಪ್ರಕಾರ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು, ಯಾವ ರಾಶಿಯವರು ಹೇಗೆ ಪೂಜಿಸಬೇಕು ನೋಡಿ
ಶ್ರೀ ಆಂಜನೇಯ ಶ್ರೀ ರಾಮನ ಭಕ್ತ. ಭಕ್ತಿ ಎಂದರೆ ಏನು, ಹೇಗಿರುತ್ತದೆ ಎಂಬುವುದಕ್ಕೆ ನಿದರ್ಶನ ಹನುಮಂತ. ಹನುಮಂತನನ್ನು ಪೂಜಿಸಿದರೆ ಐಶ್ವರ್ಯ, ಧೈರ್ಯ, ಆತ್ಮಸ್ಥೈರ್ಯ, ಆರೋಗ್ಯ ಎಲ್ಲವೂ ಲಭಿಸುವುದು. ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಬಹುದು, ರೋಗಗಳು ದೂರಾಗುವುದು.
ಜ್ಯೋತಿಷ್ಯದಲ್ಲಿ ನಿಮ್ಮ ರಾಶಿಯ ಪ್ರಕಾರ ಹನುಮಂತನ ಪೂಜಿಸಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಯಾವ ರಾಶಿಯವರು ಹೇಗೆ ಪೂಜಿಸಿದರೆ ಹೆಚ್ಚಿನ ಫಲ ಸಿಗುವುದು ಎಂದು ಹೇಳಲಾಗಿದೆ ನೋಡಿ:
ಮೇಷ ರಾಶಿ
ಮೇಷ ರಾಶಿಯವರು ಅಧಿಪತಿ ಮಂಗಳ. ಮಂಗಳವಾರ ಹಾಗೂ ಶನಿವಾರ ಹನುಮಂತನಿಗೆ ಕುಂಕುಮ ಅರ್ಪಿಸಿ ಪೂಜೆ ಸಲ್ಲಿಸಿ.
ವೃಷಭ ರಾಶಿಯವರು
ವೃಷಭ ರಾಶಿಯವರು ಪ್ರತಿದಿನ ಒಂದು ಬಾರಿಯಾದರೂ ಹನುಮಾನ್ ಚಾಲೀಸ ಹೇಳಿದರೆ ಕಷ್ಟಗಳು, ರೋಗಗಳು ದೂರಾಗುವುದು.
ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ, ಹನುಮಂತನಿಗೆ ಬುಧನ ರಕ್ಷಣೆ ಇದೆ. ನೀವು ಶನಿವಾರ ಹನುಮಂತನಿಗೆ ಬೂಂದಿ ಪ್ರಸಾದ ಅರ್ಪಿಸಿ.
ಕರ್ಕ ರಾಶಿ
ಕರ್ಕ ರಾಶಿಯವರ ಅಧಿಪತಿ ಚಂದ್ರ. ನೀವು ಕೆಂಪು ವಸ್ತ್ರ ಅರ್ಪಿಸಿ.
ಸಿಂಹ ರಾಶಿ
ಸಿಂಹ ರಾಶಿಯವರ ಅಧಿಪತಿ ಸೂರ್ಯ. ನೀವು ಶ್ರೀ ಆದಿತ್ಯ ಹೃದಯ ಸ್ತೋತ್ರ ಪಠಿಸಿ, ಬಡವರಿಗೆ ಆಹಾರವನ್ನು ನೀಡಿದರೆ ಹನುಮಂತನಿಗೆ ತೃಪ್ತಿಯಾಗುವುದು.
ಕನ್ಯಾ ರಾಶಿ
ಕನ್ಯಾ ರಾಶಿಯವರ ಅಧಿಪತಿ ಬುಧ ನೀವು ಹನುಮಂತನ ಆಶೀರ್ವಾದ ಪಡೆಯಲು ಹನುಮಾನ್ ಚಾಲೀಸವನ್ನು 108 ಬಾರಿ ಪಠಿಸಿ.
ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರ. ರಾಮಚರಿತ ಮಾನಸ ಬಾಲಕಾಂಡ ಓದಿದರೆ ಕಷ್ಟಗಳು, ರೋಗಗಳು ದೂರಾಗುವುದು, ಐಶ್ವರ್ಯ ಹೆಚ್ಚುವುದು, ಜೀವನದಲ್ಲಿ ಯಶಸ್ಸು ಪಡೆಯುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ನೀವು ಪ್ರತೀದಿನ ಓಂ ಶ್ರೀ ಹನುಮಂತೇ ನಮಃ ಪಠಿಸಿದರೆ ಎಲ್ಲಾ ಸಮಸ್ಯೆಗಳು ದೂರಾಗುವುದು, ನಿಮ್ಮ ಕಾರ್ಯದಲ್ಲಿ ಯಶಸ್ಸು ಕಾಣುವಿರಿ.
ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಯಾವುದೇ ದೇವಾಲಯಕ್ಕೆ ಹೋಗಿ ಶ್ರೀ ಸೀತಾ ಮಂತ್ರ ಪಠಿಸಿ ರಾಮ ಚರಿತೆ ಮಾನಸ ಪುಸ್ತಕವನ್ನು ಹಂಚಿದರೆ ಶ್ರೀ ಹನುಮಂತನ ಆಶೀರ್ವಾದ ನಿಮ್ಮ ಮೇಲಿರುತ್ತದೆ.
ಮಕರ ರಾಶಿ
ಮಕರ ರಾಶಿಯ ಅಧಿಪತಿ ಶನಿ. ಶನಿ ದೇವನ ಗುರು ಹನುಮಂತ. ನೀವು ಶನಿ ದೇವರನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಮಂಗಳವಾರ, ಶನಿವಾರ ಹನಮಾನ್ ಚಾಲೀಸ ಪಠಿಸಿ, ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರಾಗಿ ಬದುಕಿನಲ್ಲಿ ಸಂತೋಷ ನೆಲೆಸುವುದು.
ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿ. ನೀವು ಶ್ರೀ ರಾಮ ಮಂತ್ರ ಪಠಿಸಿ ಹಾಗೂ ಹನುಮಾನ್ ಚಾಲೀಸ ಹೇಳಿ. ಇದರಿಂದ ನಿಮ್ಮ ಬದುಕಿನಲ್ಲಿ ನೆಮ್ಮದಿ, ಪ್ರೀತಿ, ಶಾಂತಿ, ಸಂತೋಷ ಇರುತ್ತದೆ.
ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು. ನೀವು ಪ್ರತಿ ದಿನ ಶ್ರೀ ಹನುಮಂತೇ ನಮಃ ಪಠಿಸಿದರೆ ಆರೋಗ್ಯ, ಐಶ್ವರ್ಯ, ಯಶಸ್ಸಯ ಲಭಿಸುವುದು.