Just In
- 5 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 6 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 7 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 8 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅದೃಷ್ಟ ನಿಮ್ಮದಾಗಲು ವಾರದ ಪ್ರತಿ ದಿನ ತಪ್ಪದೆ ಈ ಕೆಲಸಗಳನ್ನು ಮಾಡಿ
ಜೀವನದಲ್ಲಿ ಯಶಸ್ವಿಯಾಗಲು ನಮ್ಮ ಶ್ರಮದ ಜೊತೆಗೆ ಅದೃಷ್ಟ ಇದ್ದರೆ ಒಳ್ಳೆಯದು ಎಂಬುದು ಹಲವರ ನಂಬಿಕೆ. ಇದು ಕೆಲವರ ಜೀವನದ ಪ್ರಾಯೋಗಿಕವಾಗಿ ಸಹ ಸತ್ಯವಾಗಿದೆ. ಪ್ರತಿದಿನ ಬೆಳಿಗ್ಗೆ ನಾವು ಎದ್ದಾಗ ಅದೃಷ್ಟವು ನಮ್ಮ ದಾರಿಯನ್ನು ಬರಲು ಮತ್ತು ನಮ್ಮ ಜೀವನವನ್ನು ಸಂತೋಷದಿಂದ ತುಂಬಲು ಪ್ರಾರ್ಥಿಸುತ್ತೇವೆ. ದುರಾದೃಷ್ಟ ಎದುರಾದಾಗ ಆ ದೇವರನ್ನು ದೂಷಿಸುತ್ತೇವೆ ಸಹ. ಈ ಅದೃಷ್ಟ ನಮ್ಮ ಪಾಲಾಗಲು ನಾವು ಏನು ಮಾಡಬೇಕು ಎಂದು ಹಲವರಲ್ಲಿ ಪ್ರಶ್ನೆ ಮೂಡದೇ ಇರದು?
ಅದೃಷ್ಟವು ದೇವರ ಕೈಯಲ್ಲಿದೆ, ದೇವರ ಕೃಪೆ ಇದ್ದರೆ ನಿಮಗೂ ಅದೃಷ್ಟದ ಬಾಗಿಲು ತೆರೆಯಬಹುದು. ಇದಕ್ಕೆ ನಿಮ್ಮ ಪ್ರಾರ್ಥನೆ ಸಹ ಬಹಳ ಮುಖ್ಯವಾಗುತ್ತದೆ. ನೀವು ಮನಸ್ಸು ಮಾಡಿದರೆ, ಯಶಸ್ಸಿನ ಹಾದಿಯನ್ನು ನಿಮಗೆ ತೋರಿಸಲು ದೇವರು ಇದ್ದಾನೆ. ಆದರೆ ಯಾವಾಗಲೂ ನೆನಪಿಡಿ ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಅದೃಷ್ಟ ನಿಮಗೆ ಅನುಕೂಲವಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ಅದೃಷ್ಟ ನಮ್ಮ ಪಾಲಾಗಲು ಪ್ರತಿನಿತ್ಯ ಮಾಡಬಹುದಾದ ಕೆಲವು ಪದ್ದತಿ ಅಥವಾ ಆಚರಣೆಗಳಿವೆ. ಇವುಗಳನ್ನು ನಿತ್ಯ ತಪ್ಪದೇ ಪಾಲಿಸಿದರೆ ಅದೃಷ್ಟ ನಮ್ಮ ಪಾಲಾಗಬಹುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಯಾವುದು ಆ ಆಚರಣೆ, ಹೇಗೆ ಪಾಲಿಸಬೇಕು ಎಂದು ತಿಳಿಯಲು ಮುಂದೆ ನೋಡಿ:
ಸೋಮವಾರದ ಅದೃಷ್ಟದ ಸಲಹೆಗಳು
ಸೋಮವಾರವು ವಾರದ ಮೊದಲ ದಿನ ಮತ್ತು ಸಾಮಾನ್ಯವಾಗಿ ಎಲ್ಲರೂ ವಾರ ಪೂರ್ತಿ ನಿಮಗೆ ಅನುಕೂಲವಾಗಲಿ ಹಾಗೂ ಸಕಾರಾತ್ಮಕ ಆರಂಭವನ್ನು ಬಯಸುತ್ತಾರೆ. ಸೋಮವಾರವನ್ನು ಶಿವನ ದಿನವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಅದೃಷ್ಟ ನಿಮ್ಮದಾಗಲು ಈ ದಿನ ನೀವು ಅನುಸರಿಸಬೇಕಾದ ವಿಷಯಗಳು:
* ಬೆಳಿಗ್ಗೆ ಶಿವಲಿಂಗಕ್ಕೆ ನೀರನ್ನು ಅರ್ಪಿಸುವ ಮೂಲಕ ಶಿವನ ಆಶೀರ್ವಾದ ಪಡೆಯಿರಿ.
* ಹಣಕಾಸು ಅಥವಾ ಇತರ ವ್ಯಾಪಾರ ಚಟುವಟಿಕೆಗಳಿಗೆ ಇದು ಉತ್ತಮ ದಿನವಾಗಿದೆ
* ಬಿಳಿ ಬಟ್ಟೆಗಳನ್ನು ಧರಿಸುವುದು ಅದೃಷ್ಟವನ್ನು ಆಕರ್ಷಿಸುತ್ತದೆ
* ಸೋಮವಾರದಂದು ಕಪ್ಪು ಬಟ್ಟೆ ಅಥವಾ ಕಪ್ಪು ಬೂಟುಗಳನ್ನು ಧರಿಸಬೇಡಿ
* ಮನೆಯಿಂದ ಹೊರಡುವ ಮುನ್ನ ಒಂದು ಲೋಟ ಹಾಲು ಕುಡಿಯಿರಿ
* ಜೇನುತುಪ್ಪ ಮತ್ತು ಸೌತೆಕಾಯಿಯನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಬರುತ್ತದೆ
* ಹೊರಡುವ ಮುನ್ನ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬವನ್ನು ನೋಡಿ
ಮಂಗಳವಾರದಂದು ತಪ್ಪದೇ ಈ ಕೆಲಸಗಳನ್ನು ಮಾಡಿ
ಮಂಗಳವಾರ ಎರಡನೇ ದಿನವಾಗಿದೆ ಮತ್ತು ಈ ದಿನ ನೀವು ಸೋಮವಾರ ಆರಂಭಿಸಿದ ಕೆಲಸವನ್ನು ಮುಂದಕ್ಕೆ ಸಾಗಿಸುತ್ತದೆ. ಇದನ್ನು ದುರ್ಗಾದೇವಿಯ ಯೋಧನ ಮಗ ಕಾರ್ತಿಕೇಯನ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ನೀವು ಗಮನ ಹರಿಸಬೇಕಾದದ್ದು:
* ಇದು ಕಾರ್ತಿಕೇಯನ ದಿನವಾಗಿದ್ದು, ಆತನ ಆಶೀರ್ವಾದ ನಿಮ್ಮ ಮೇಲೆ ಇರಲು ಪೂಜೆಯ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ.
* ಯಾವುದೇ ತೊಂದರೆ ಅಥವಾ ಅಡೆತಡೆಗಳನ್ನು ನಿವಾರಿಸಲು ಕೆಂಪು ಬಟ್ಟೆಗಳನ್ನು ಧರಿಸಿ
* ಕೆಂಪು ಬಣ್ಣದ ಹೂವುಗಳನ್ನು ನಿಮ್ಮೊಂದಿಗೆ ಒಯ್ಯಿರಿ
* ಯಾವುದೇ ಕೆಲಸವನ್ನು ಕೈಗೊಳ್ಳುವ ಮೊದಲು ಬಡವರಿಗೆ ಕೆಲವು ಹಣ್ಣುಗಳನ್ನು ದಾನ ಮಾಡಿ
* ಮನೆಯಿಂದ ಹೊರಡುವ ಮುನ್ನ ಹಸಿರು ಕೊತ್ತಂಬರಿ ಸೊಪ್ಪನ್ನು ಸೇವಿಸಿ
* ಬೇಯಿಸಿದ ಬೇಳೆ ಅಥವಾ ಆಲೂಗಡ್ಡೆಯನ್ನು ಸೇವಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
ಬುಧವಾರದ ಅದೃಷ್ಟದ ಸಲಹೆಗಳು
ಬುಧವಾರ ವಾರದ ಮೂರನೇ ದಿನ ಮತ್ತು ಮಂಗಳವಾರದಂತೆಯೇ, ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ಸಮರ್ಪಣೆ ಮತ್ತು ಗಮನವನ್ನು ಹೊಂದಿದ್ದೀರಿ. ಇದನ್ನು ವಿಷ್ಣುವಿನ ದಿನವೆಂದು ಪರಿಗಣಿಸಲಾಗುತ್ತದೆ, ಇದು ಹಿಂದೂ ಧರ್ಮದ ಮಂಗಳಕರ ದೇವರಲ್ಲಿ ಒಂದಾಗಿದೆ. ಅದೃಷ್ಟವನ್ನು ಆಕರ್ಷಿಸಲು ನೀವು ಗಮನಹರಿಸಬೇಕಾದ ಅಂಶಗಳು:
* ಭಗವಾನ್ ವಿಷ್ಣುವಿನ ಆಶೀರ್ವಾದ ಪಡೆಯಲು ಮುಂಜಾನೆ ಆರಾಧಿಸಿ
* ಪ್ರೀತಿ ಮತ್ತು ಪ್ರಣಯಕ್ಕೆ ಇದು ಸೂಕ್ತ ದಿನ
* ಹಸಿರು ಬಣ್ಣವು ಬುಧವಾರಕ್ಕೆ ಸೂಕ್ತವಾಗಿದೆ
* ಅದೃಷ್ಟವನ್ನು ಆಕರ್ಷಿಸಲು ಯಾವಾಗಲೂ ಮನೆಯಿಂದ ಹೊರಡುವ ಮೊದಲು ಸಿಹಿ ಏನನ್ನಾದರೂ ತಿನ್ನಿರಿ
*ಉತ್ತಮ ಫಲಿತಾಂಶಗಳನ್ನು ಸಾಧಿಸಲು ಬೀನ್ಸ್ ಸೇವಿಸಿ
* ನಾಲ್ಕು ಚಕ್ರದ ವಾಹನದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ
ಗುರುವಾರದ ತಪ್ಪದೇ ಈ ಕೆಲಸಗಳನ್ನು ಮಾಡಿ
ಗುರುವಾರ ವಾರದ ನಾಲ್ಕನೇ ದಿನವಾಗಿದ್ದು, ನಿಮ್ಮ ಕೆಲಸಗಳನ್ನು ಮುಗಿಸಲು ಮತ್ತು ವಾರಾಂತ್ಯಕ್ಕೆ ತಯಾರಿ ಮಾಡುವ ದಿನವಿದು. ಇದನ್ನು ಲಕ್ಷ್ಮಿ ದೇವಿಯ ದಿನವೆಂದು ಪರಿಗಣಿಸಲಾಗುತ್ತದೆ ಮತ್ತು ಆಕೆಯ ಆಶೀರ್ವಾದ ಪಡೆಯಲು ಉತ್ತಮ ದಿನಗಳಲ್ಲಿ ಗುರುವಾರ ಒಂದಾಗಿದೆ. ಆದ್ದರಿಂದ, ಈ ದಿನ ನೀವು ಅನುಸರಿಸಬೇಕಾದ ಮತ್ತು ತಪ್ಪಿಸಬೇಕಾದ ಕೆಲವು ವಿಷಯಗಳು:
* ಸಂಪತ್ತನ್ನು ಆಕರ್ಷಿಸಲು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಮುಂಜಾನೆ ದೇವಸ್ಥಾನಕ್ಕೆ ಭೇಟಿ ನೀಡಿ
* ಹಳದಿ ಗುರುವಾರದ ಬಣ್ಣ, ಹಾಗಾಗಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ.
* ಲಕ್ಷ್ಮಿ ದೇವಿಯ ಸಣ್ಣ ಮೂರ್ತಿಯನ್ನು ಕಚೇರಿಯಲ್ಲಿ ನಿಮ್ಮ ಮೇಜಿನ ಮುಂದೆ ಇರಿಸಿ.
* ಮನೆಯಿಂದ ಹೊರಡುವ ಮೊದಲು ಹಳದಿ ಸಾಸಿವೆ ಅಥವಾ ಹಳದಿ ಬಣ್ಣದ ಯಾವುದಾದರೂ ವಸ್ತುವನ್ನು ಇಟ್ಟುಕೊಳ್ಳಿ
* ಗುರುವಾರ ಪಪ್ಪಾಯಿ, ತುಪ್ಪ ಮತ್ತು ದಾಲ್ ತಿನ್ನುವುದನ್ನು ತಪ್ಪಿಸಿ.
* ಬಡವರಿಗೆ ಹಳದಿ ಬಣ್ಣದ ಹೂವುಗಳನ್ನು ನೀಡುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಶುಕ್ರವಾರದ ಅದೃಷ್ಟದ ಸಲಹೆಗಳು
ಶುಕ್ರವಾರವು ವಾರದ ಐದನೇ ದಿನವಾಗಿದೆ ಮತ್ತು ವಾರಾಂತ್ಯದಲ್ಲಿ ನಿಮ್ಮ ಎಲ್ಲಾ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ನೀವು ಸಿದ್ಧರಾಗಿರುತ್ತೀರಿ. ಇದು ಪ್ರಪಂಚದ ಸೃಷ್ಟಿಯನ್ನು ರೂಪಿಸುವ ಭುವೇಶ್ವರಿ ದೇವಿಯ ದಿನ. ಈ ದಿನದಂದು ನೀವು ಗಮನ ಹರಿಸಬೇಕಾದದ್ದು:
* ಭುವನೇಶ್ವರಿ ದೇವಿಯ ಮಂತ್ರವನ್ನು ಮುಂಜಾನೆಯಿಂದ ಜಪಿಸಿ ನಿಮ್ಮ ಹಾನಿಕಾರಕ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.
* ಕಾರು, ಆಭರಣ ಅಥವಾ ಯಾವುದೇ ಅಮೂಲ್ಯ ರತ್ನವನ್ನು ಖರೀದಿಸಲು ಇದು ಉತ್ತಮ ದಿನ.
* ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಲು ಇದು ಉತ್ತಮ ದಿನ.
* ಈ ದಿನ ಅದೃಷ್ಟವನ್ನು ಆಕರ್ಷಿಸಲು ತಿಳಿ ನೀಲಿ ಅಥವಾ ಬಿಳಿ ಬಟ್ಟೆಗಳನ್ನು ಧರಿಸಿ.
* ಉತ್ತಮ ಫಲಿತಾಂಶಗಳನ್ನು ಪಡೆಯಲು ಮನೆಯಿಂದ ಹೊರಡುವ ಮೊದಲು ಮೊಸರು (ದಹಿ) ಸೇವಿಸಿ
* ಶುಕ್ರವಾರದಂದು ಹಸಿರು ತರಕಾರಿ ಮತ್ತು ಅನ್ನ ತಿನ್ನುವುದನ್ನು ತಪ್ಪಿಸಿ.
ಶನಿವಾರದ ತಪ್ಪದೇ ಈ ಕೆಲಸಗಳನ್ನು ಮಾಡಿ
ಶನಿವಾರವು ವಾರದ ಆರನೇ ದಿನವಾಗಿದೆ ಮತ್ತು ವಾರಾಂತ್ಯದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಶ್ರಾಂತಿ ಪಡೆಯಲು ಮತ್ತು ಆನಂದಿಸಲು ಇದು ಸಕಾಲ. ಇದು ಇಡೀ ಪ್ರಪಂಚದ ಆಡಳಿತಗಾರ ಶನಿ ದೇವನ ದಿನ. ದಿನದ ಅದೃಷ್ಟವನ್ನು ಆಕರ್ಷಿಸಲು ಈ ಹಂತಗಳನ್ನು ಅನುಸರಿಸಿ:
* ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಶನಿ ದೇವರನ್ನು ಆರಾಧಿಸಿ
* ವ್ಯಾಪಾರ ಮತ್ತು ಹಣಕಾಸು ಚಟುವಟಿಕೆಗಳಿಗೆ ಇದು ಉತ್ತಮ ದಿನವಾಗಿದೆ
* ಶನಿವಾರದಂದು ಉಪವಾಸ ಮಾಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ
* ಶನಿವಾರದಂದು ಅದೃಷ್ಟವನ್ನು ಪಡೆಯಲು ಸುಟ್ಟ ಕಪ್ಪು ಬದನೇಕಾಯಿ ತಿನ್ನುವುದು ಉತ್ತಮ ಮಾರ್ಗವಾಗಿದೆ.
* ಮನೆಯಿಂದ ಹೊರಡುವ ಮುನ್ನ ಒಂದು ಚಮಚ ಶುದ್ಧ ತುಪ್ಪವನ್ನು ಸೇವಿಸಿ
* ಶನಿ ದೇವರನ್ನು ಮೆಚ್ಚಿಸಲು ಮತ್ತು ಅದೃಷ್ಟವನ್ನು ಆಕರ್ಷಿಸಲು ಕಪ್ಪು ಬಟ್ಟೆಗಳನ್ನು ಧರಿಸಿ
* ಶನಿವಾರದಂದು ಮನೆ ಬದಲಾಯಿಸುವುದನ್ನು ತಪ್ಪಿಸಿ
ಭಾನುವಾರಗಳಿಗೆ ಅದೃಷ್ಟದ ಸಲಹೆಗಳು
ಭಾನುವಾರ ವಾರದ ಕೊನೆಯ ಮತ್ತು ಬಹುನಿರೀಕ್ಷಿತ ದಿನ. ವಾರದಲ್ಲಿ ಕೆಲಸ ಮಾಡಿದ ನಂತರ ನಿಟ್ಟುಸಿರು ಬಿಡುವ ಸಂತೋಷದ ದಿನ. ಇದು ಸೂರ್ಯನಿಂದ ಆಳಲ್ಪಡುವ ಸೂರ್ಯನ ದಿನ. ಈ ದಿನದಂದು ಕೈಗೊಳ್ಳಬೇಕಾದ ವಿಷಯಗಳು:
* ಬೆಳಿಗ್ಗೆ ಬೇಗನೆ ಎದ್ದು ಸೂರ್ಯ ನಮಸ್ಕಾರವನ್ನು ಅರ್ಪಿಸಿ
* ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗಿನ ವಿವಾದಗಳನ್ನು ಪರಿಹರಿಸಲು ಇದು ಒಳ್ಳೆಯ ಸಮಯ.
* ಬಿಳಿ ಅಥವಾ ಗುಲಾಬಿ ಬಣ್ಣ ಭಾನುವಾರಕ್ಕೆ ಅತ್ಯಂತ ಅನುಕೂಲಕರ ಬಣ್ಣವಾಗಿದೆ.
* ನಿಮ್ಮ ಮನೆಯನ್ನು ಸ್ಥಳಾಂತರಿಸಲು ಯೋಜಿಸುತ್ತಿದ್ದರೆ, ಕಾರ್ಯಗತಗೊಳಿಸಲು ಉತ್ತಮ ದಿನ
* ವಿಶೇಷವಾಗಿ ಸಂಜೆ 4 ರ ನಂತರ ಬಡವರಿಗೆ ಆಹಾರವನ್ನು ನೀಡಿ
* ಈ ದಿನ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ.
--