Just In
- 8 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 9 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 9 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 10 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಷಾಢ ಅಮಾವಾಸ್ಯೆ: ಈ ದಿನ ಏನು ಮಾಡಬೇಕು, ಏನು ಮಾಡಲೇಬಾರದು?
ಹಿಂದೂ ಧರ್ಮದಲ್ಲಿ ಆಷಾಢ ಅಮಾವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ಇದೆ. ಆಷಾಢ ಅಮವಾಸ್ಯೆಯನ್ನು ಒಂದೊಂದು ಕಡೆ ಒಂದೊಂದು ರೀತಿಯಯಲ್ಲಿ ಆಚರಿಸಲಾಗುವುದು. ಈ ದಿನ ಭೀಮನ ಅಮಾವಾಸ್ಯೆಯೆಂದೂ ಆಚರಿಸಲಾಗುವುದು. ಈ ದಿನ ವ್ರತ ಆಚರಿಸುವುದರಿಂದ ಕನ್ಯೆಯರಿಗೆ ಒಳ್ಳೆಯ ಸಂಬಂಧ ಕೂಡಿ ಬರುವುದು, ವಿವಾಹಿತ ಹೆಣ್ಣು ಮಕ್ಕಳ ಮುತ್ತೈದೆ ಭಾಗ್ಯ ಬಲವಾಗುವುದು.
ಇನ್ನು ಪಿತೃದೋಷ ನಿವಾರಣೆಗೆ ಈ ದಿನ ತುಂಬಾ ಮುಖ್ಯವಾಗಿದೆ. ಈ ದಿನದಂದು ಕೆಲವರು ಪಿತೃತರ್ಪಣ ಮಾಡುತ್ತಾರೆ, ಈ ಮೂಲಕ ತಮ್ಮ ಹಿರಿಯರಿಗೆ ಮೋಕ್ಷ ನೀಡಿ ಪುಣ್ಯದ ಫಲ ಪಡೆಯುತ್ತಾರೆ.
ಇನ್ನು ದಕ್ಷಿಣ ಕನ್ನಡ ಕಡೆ ಆಟಿ ಅಮವಾಸ್ಯೆಯೆಂದು ಆಚರಿಸಲಾಗುವುದು. ಈ ದಿನ ಪಾಲೆ ಮರದ ತೊಗಟೆ ಕೆತ್ತಿ ತಂದು ಅದರಿಂದ ಕಷಾಯ ಮಾಡಿ ಸೇವಿಸುತ್ತಾರೆ. ಇ ಕಷಾಯ ಮಳೆಗಾಲದಲ್ಲಿ ಕಾಡುವ ರೋಗಗಳನ್ನು ತಡೆಗಟ್ಟಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ.
ಹೀಗೆ ಆಷಾಢ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ ಹಲವು ವಿಶೇಷತೆಗಳಿಂದ ಕೂಡಿದೆ, ಇನ್ನು ಈ ದಿನ ಕೆಲವೊಂದು ಕಾರ್ಯಗಳನ್ನು ಮಾಡವುದರಿಂದ ಪುಣ್ಯ ಫಲ ಹೆಚ್ಚುವುದು.
ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ:
ಪಿತೃ ತರ್ಪಣ ಮಾಡಿ:
ಈ ದಿನ ಪಿತೃ ತರ್ಪಣ ಮಾಡುವುದರಿಂದ ಪಿತೃ ದೋಷದಿಂದ ಮುಕ್ತರಾಗುತ್ತೀರಿ. ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ವ್ರತ ಮಾಡಬೇಕು, ಈ ದಿನ ಪಿತೃಗಳಿಗೆ ತರ್ಪಣ ನೀಡಿ.
ದಾನ ಮಾಡಿ
ಆಷಾಢ ಅಮಾವಾಸ್ಯೆಯಂದು ದಾನ ಮಾಡುವುದು ಶ್ರೇಷ್ಠ ಎಂದು ನಂಬಲಾಗಿದೆ. ಈ ದಿನ ಬ್ರಾಹ್ಮಣರಿಗೆ ದಾನ ಮಾಡಿ, ಬಡವರಿಗೆ ಕೂಡ ಈ ದಿನ ಮಾಡುವುದರಿಂದ ಪುಣ್ಯ ಲಭಿಸುವುದು.
ಕೃಷಿ ಉಪಕರಣಗಳನ್ನು ಪೂಜಿಸಿದರೆ ಒಳ್ಳೆಯದು
ಈ ದಿನದಂದು ಕೆಲವರು ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ, ಹೀಗೆ ಪೂಜಿಸುವುದರಿಂದ ಇಳುವರಿ ಉತ್ತಮವಾಗಿರುತ್ತದೆ ಎಂಬ ನಂಬಿಕೆ.
ದೀಪ ದಾನ ಮಾಡಿ
ಈ ದಿನ ದೀಪ ದಾನಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ಎಲೆಗಳ ಬಟ್ಟಲಿನಲ್ಲಿ ದೀಪ ಹಾಗೂ ಹೂಗಳನ್ನು ಹಾಕಿ ಅದನ್ನು ನೀರಿನಲ್ಲಿ ಹರಿಯ ಬಿಡಬೇಕು. ಈ ರೀತಿ ಮಾಡುವುದರಿಂದ ಕಷ್ಟಗಳು ದೂರಾಗಿ, ಸಂಪತ್ತು ವೃದ್ಧಿಯಾಗುವುದು.
ಈ ದಿನ ಏನು ಮಾಡಬಾರದು?
* ಈ ದಿನ ಮದ್ಯ ಸೇವನೆ ಮಾಡಬಾರದು
* ಬಡರ್ವರು, ನಿರ್ಗತಿಕರನ್ನು ಅವಮಾನಿಸಬಾರದು.
* ಈ ದಿನ ತಲೆಗೆ ಎಣ್ಣೆ ಹಚ್ಚಬಾರದು, ಇದರ ಬದಲಿಗೆ ಎಣ್ಣೆಯನ್ನು ದಾನ ಮಾಡಿ
* ಹಿರಿಯರನ್ನು ಅವಮಾನಿಸಬಾರದು
* ಈ ದಿನ ಪಿತೃ ಕರ್ಮಕ್ಕೆ ಮೀಸಲಾಗಿರುವುದರಿಂದ ದೇವರ ಪೂಜೆಗೆ ಸಂಬಂಧಿಸಿ ವಸ್ತುಗಳನ್ನು ಖರೀದಿಸಬಾರದು.
* ಈ ದಿನ ಮನೆಗೆ ಪೊರಕೆ ತರಬಾರದು.