Just In
Don't Miss
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- News ಇಂದು ಕರ್ನಾಟಕಕ್ಕೆ ಮೋದಿ :11 ಪ್ರಶ್ನೆಗಳ ಬಾಣ ಬಿಟ್ಟ ಸಿದ್ದರಾಮಯ್ಯ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿ ಕೈಕೊಟ್ಟಾಗ ಈ ರಾಶಿಚಕ್ರದವರ ಜೀವನ ಏನಾಗುವುದು ನೋಡಿ
ಜೀವನದಲ್ಲಿ ಕಷ್ಟ ನೋವುಗಳು ಸಹಜ. ಹಾಗಂತ ಅದನ್ನು ಅಷ್ಟು ಸುಲಭವಾಗಿ ಪರಿಗಣಿಸುವಂತಿಲ್ಲ. ಮನುಷ್ಯ ಖುಷಿಯಲ್ಲಿರುವಾಗ ಅಥವಾ ಜೀವನವು ಸಂತೋಷದಿಂದ ಸಾಗುತ್ತಿದೆ ಎಂದಾಗ ಮಾನಸಿಕ ಒತ್ತಡಕ್ಕೆ ಒಳಗಾಗುವುದಿಲ್ಲ. ಬದಲಿಗೆ ಉತ್ತಮ ಆರೋಗ್ಯ ಹಾಗೂ ಮಾನಸಿಕವಾಗಿ ಉಲ್ಲಾಸದಲ್ಲಿ ಇರುತ್ತಾನೆ. ಅದೇ ಕಷ್ಟ ಹಾಗೂ ನೋವಿನಿಂದ ಬಳಲುತಿದ್ದಾನೆ ಎಂದರೆ ಖಿನ್ನತೆ ಹಾಗೂ ಜಿಗುಪ್ಸೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ.
ಜೀವನದಲ್ಲಿ ನಮ್ಮ ಜೀವ ಎಂದುಕೊಂಡ ಪ್ರೀತಿ ಪಾತ್ರರು ನಮ್ಮನ್ನು ತೊರೆದಾಗ ಅಥವಾ ನ್ಮಮಿಂದ ದೂರವಾದಾಗ ಮನಸ್ಸಿಗೆ ಅತಿಯಾದ ಆಘಾತ ಹಾಗೂ ನೋವು ಉಂಟಾಗುವುದು. ಇಂತಹ ಆಘಾತದ ನೋವನ್ನು ಮಾನಸಿಕವಾಗಿ ಸಹಿಸಿಕೊಳ್ಳುವುದು ಸುಲಭವಲ್ಲ. ಇದರಿಂದಾಗಿ ವ್ಯಕ್ತಿಯ ಜೀವನದಲ್ಲಿ ತೀವ್ರತರದ ಬದಲಾವಣೆಯೂ ಉಂಟಾಗಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಅಥವಾ ದೂರವಾದಾಗ ತೀವ್ರತರವಾದ ನೋವಿಗೆ ಒಳಗಾಗುತ್ತಾರೆ. ಅವರ ಜೀವನದಲ್ಲಿ ನಂತರದ ದಿನಗಳು ಕೆಲವು ಗಮನಾರ್ಹ ಬದಲಾವಣೆ ಉಂಟಾಗುವುದು. ಹಾಗಾದರೆ ಆ ರಾಶಿಚಕ್ರದವರು ಯಾರು ಅವರ ಜೀವನದ ಬದಲಾವಣೆಯ ಸಂಗತಿಗಳು ಹೇಗಿರುತ್ತದೆ ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದಿನ ವಿವರಣೆಯಲ್ಲಿ ವಿವರಿಸಿದೆ...
ಕರ್ಕ
ಇವರು ಪ್ರೀತಿಯನ್ನು ಕಳೆದುಕೊಂಡಾಗ ಸಂಪೂರ್ಣವಾಗಿ ನಿರ್ಲಕ್ಷಿಸುವರು. ಇವರು ಅಸ್ವಿತ್ವದಲ್ಲಿ ಇಲ್ಲದವರಂತೆ ವರ್ತಿಸುತ್ತಾರೆ. ಇವರು ಇವರ ಹೃದಯವನ್ನು ರಕ್ಷಿಸಲು ಇಷ್ಟಪಡುತ್ತಾರೆ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುವರು. ಪ್ರೀತಿಯಲ್ಲಿ ಮೋಸ ಅಥವಾ ಗಾಯಗೊಂಡಾಗ ಹೆಚ್ಚು ದುರ್ಬಲರಾಗುವರು. ವಿಚಿತ್ರ ವರ್ತನೆ ತೋರಬಹುದು ಅಥವಾ ಮಾನಸಿಕವಾಗಿ ಅಸ್ವಸ್ಥರಾದಂತೆ ಆಗಬಹುದು. ಸಾಮಾಜಿಕವಾಗಿ ದೂರ ಉಳಿಯುವುದುಉಡುಗೊರೆ ಕೊಟ್ಟ ಎಲ್ಲಾ ವಸ್ತುಗಳನ್ನು ಹಾಳುಮಾಡುವರು.
ಕನ್ಯಾ
ಈ ರಾಶಿಯ ವ್ಯಕ್ತಿಗಳು ನಿಂದನೆಯ ಆಟ ಆಡಲು ಬಯಸುತ್ತಾರೆ. ಇವರು ಸಂಬಂಧದಿಂದ ದೂರವಾದ ನಂತರ ಕ್ಷುಲಕವಾಗಿ ಕಾಣುವರು. ಇವರು ದೂರಸರಿದವರನ್ನು ಒಬ್ಬ ವ್ಯಕ್ತಿಯಾಗಿಯೂ ಇಷ್ಟಪಡುವುದಿಲ್ಲ. ಸಂಬಂಧದಲ್ಲಿ ಇರುವಾಗ ಬಹಳ ಬಾಲಿಶ ರೀತಿಯಲ್ಲಿ ವರ್ತಿಸಬಹುದು. ಆದರೆ ಸಂಬಂಧದಿಂದ ತೊರೆದರೆ ಪ್ರೀತಿಯ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಅಸ್ತಿತ್ವದಲ್ಲಿ ಇಲ್ಲದವರಂತೆ ನಟಿಸುತ್ತಾರೆ.
ತುಲಾ
ಇವರು ಸಂಬಂಧದಲ್ಲಿ ಸರ್ವಕಾಲಿಕ ಸಭ್ಯತೆಯನ್ನು ಹೊತ್ತಿಕೊಳ್ಳುತ್ತಾರೆ. ಪ್ರೀತಿಯಿಂದ ದೂರವಾದ ಮೇಲೆ ಇವರ ಜೀವನದಲ್ಲಿ ಅವರು ಯಾವುದೇ ಭಾಗವನ್ನು ಹೊಂದಿಲ್ಲ ಎನ್ನುವ ರೀತಿಯಲ್ಲಿಯೇ ವರ್ತಿಸುತ್ತಾರೆ. ಇವರು ಸಂಬಂಧ ತೊರೆದ ನಂತರ ಯಾವುದೇ ಬಗೆಯಲ್ಲೂ ದೂರ ಆದವರಂತೆ ಚಿಂತನೆ ಅಥವಾ ನಟನೆ ಮಾಡಲು ಇಷ್ಟಪಡುವುದಿಲ್ಲ. ಒಮ್ಮೆ ದೂರವಾದ ಮೇಲೆ ಮತ್ತೆ ಅವರು ತಿರುಗಿ ನೋಡುವುದಿಲ್ಲ.
ವೃಶ್ಚಿಕ
ಇವರು ಸಂಬಂಧದಲ್ಲಿ ನಂಬಿಕೆ ಹಾಗೂ ಪ್ರಾಮಾಣಿಕತೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಸತ್ಯ ಹಾಗೂ ಪ್ರೀತಿಗೆ ದ್ರೋಹವನ್ನು ಹೊಂದಿದರೆ, ತಮ್ಮ ಪ್ರೀತಿಯ ವ್ಯಕ್ತಿ ಅಸ್ತಿತ್ವದಲ್ಲಿ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುವುದಿಲ್ಲ. ಇವರು ಅಷ್ಟು ಸುಲಭವಾಗಿ ಯಾವುದನ್ನೂ ಮರೆಯುವುದಿಲ್ಲ. ಅವರಂತೆಯೇ ಇತರರು ಸಹ ಎಂದು ನಂಬುತ್ತಾರೆ. ಈ ರಾಶಿಯವರೊಂದಿಗೆ ಸಂಬಂಧದಲ್ಲಿ ದೂರವಾದರೆ ಇವರು ತಮ್ಮ ಜೀವನದಲ್ಲಿ ಶಾಸ್ವತವಾಗಿ ಕಣ್ಮರೆಯಾಗಿಯೇ ಉಳಿಯುತ್ತಾರೆ ಎಂದು ನಿರೀಕ್ಷಿಸಬಹುದು.
ಧನು
ಈ ರಾಶಿಯವರು ಅತ್ಯುತ್ತಮ ಜೀವನ ನಡೆಸಲು ಬಯಸುತ್ತಾರೆ. ಸಂಬಂಧದಲ್ಲಿ ಒಮ್ಮೆ ತಿರಸ್ಕಾರ ಅಥವಾ ನೋವು ಉಂಟಾದರೆ ಅದರ ಬಗ್ಗೆಯೇ ಹೆಚ್ಚು ಚಿಂತಿಸುವುದಿಲ್ಲ. ಮುಂದಿನ ಜೀವನವನ್ನು ಹೆಚ್ಚು ಆನಂದಿಸುತ್ತಾರೆ. ಹಾಗೊಮ್ಮೆ ಸಂಬಂಧ ಒಡೆದಾಗ ಮಗುವಿನಂತೆ ಮುಗ್ಧರಾಗಿ ವರ್ತಿಸುತ್ತಾರೆ. ಪ್ರೀತಿಯನ್ನು ಕಳೆದುಕೊಂಡು ಸ್ವಲ್ಪ ಸಮಯದ ತನಕ ದುಃಖದಲ್ಲಿ ಇರುತ್ತಾರೆ. ನಂತರ ನಿಧಾನವಾಗಿ ಅವರು ಅಸ್ತಿತ್ವದಲ್ಲಿ ಇಲ್ಲ ಎನ್ನುವಂತೆ ಬದುಕಲು ಪ್ರಾರಂಭಿಸುತ್ತಾರೆ.
ಮಕರ
ಇವರು ತಮ್ಮ ಪ್ರೀತಿಯನ್ನು ಕಳೆದುಕೊಂಡಾಗ ಅತ್ಯಂತ ಕೆಟ್ಟ ವ್ಯಕ್ತಿಗಳಾಗಿ ವರ್ತಿಸಬಹುದು. ಸಂಬಂಧ ಮುರಿದ ಮೇಲೂ ಇವರು ತಾವು ಮೇಲುಗೈ ಸಾಧಿಸಿದವರಂತೆ ಇರುತ್ತಾರೆ. ಈ ರಾಶಿಚಕ್ರದವರು ಎಲ್ಲಾ ರಾಶಿಚಕ್ರದವರಿಗಿಂತ ವಿಭಿನ್ನ ಹಾಗೂ ವಿಶೇಷತೆಯನ್ನು ಹೊಂದಿರುತ್ತಾರೆ ಎನ್ನಬಹುದು. ತಮ್ಮಿಂದ ದೂರವಾದ ವ್ಯಕ್ತಿಯನ್ನು ಈ ಪ್ರಪಂಚದಿಂದ ದೂರ ಹೋಗಿದ್ದಾನೆ ಎನ್ನುವ ರೀತಿಯಲ್ಲಿ ನಟಿಸುತ್ತಾರೆ. ಇನ್ನೊಂದೆಡೆ ಅವರೊಬ್ಬ ಸಾಮಾನ್ಯವಾದ ವ್ಯಕ್ತಿ ಎಂದು ಒಪ್ಪಿಕೊಳ್ಳುತ್ತಾರೆ. ಇದೊಂದು ವಿಚಿತ್ರ ಎನಿಸುವುದು.