Just In
Don't Miss
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಮೂರು ರಾಶಿಯವರು ಮನಸ್ಸು ಮಾಡಿದರೆ ವಿಶ್ವವನ್ನೇ ಬದಲಿಸಬಲ್ಲರು!
ಕೆಲವರು ತಾವು ಇದ್ದ ಪರಿಸರ ಅಥವಾ ಸ್ಥಳದಲ್ಲಿ ಒಂದು ಬಗೆಯ ಸಂತೋಷ ಹಾಗೂ ವ್ಯವಸ್ಥೆಯಿರುವಂತೆ ನೋಡಿಕೊಳ್ಳುತ್ತಾರೆ. ಒಂದೇ ಬಗೆಯ ವಿಧಾನವನ್ನು ಹೊಂದಿದ್ದರೆ ಅದನ್ನು ಬದಲಿಸಿ ಹೊಸತನವನ್ನು ತುಂಬುವಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಅವರು ಇದ್ದಲ್ಲಿ ಏನೋ ಒಂದು ಬಗೆಯ ಹೊಸತನ ಹಾಗೂ ಸಂತೋಷ ನೆಲೆಸುವಂತೆ ಮಾಡುವರು.
ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವರು ಎಷ್ಟೇ ಹತಾಷೆ ಅಥವಾ ಬೇಸರದಲ್ಲಿದ್ದರೂ ಬಹುಬೇಗ ತಮ್ಮ ನೋವನ್ನು ಮರೆಯುತ್ತಾರೆ. ಬದಲಿಗೆ ತಮ್ಮ ಸುತ್ತಲಿನ ಜನರೊಂದಿಗೆ ಬೆರೆಯುವುದು, ಅಲ್ಲಿಯ ವಾತಾವರಣದ ಬದಲಾವಣೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅಂತಹ ವ್ಯಕ್ತಿಗಳ ಸಾಲಲ್ಲಿ ನೀವು ಇದ್ದೀರಾ? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....
ಜೋತಿಷ್ಯ ಶಾಸ್ತ್ರದ ಪ್ರಕಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶೀಚಕ್ರದವರು ವಿಶೇಷವಾದ ಕೌಶಲ್ಯವನ್ನು ಹೊಂದಿರುತ್ತಾರೆ. ಅವರ ರಾಶಿಚಕ್ರ, ನಕ್ಷತ್ರ ಹಾಗೂ ಗ್ರಹಗಳ ಪ್ರಭಾವದಿಂದ ವಿಶೇಷ ಸಾಮಥ್ರ್ಯವನ್ನು ಹೊಂದಿರುತ್ತಾರೆ. ತಮ್ಮ ಆಲೋಚನೆ, ಸ್ಥಿರತೆ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ತಮ್ಮ ಜಗತ್ತನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರ ವಿಶೇಷ ಗುಣಗಳಿಂದಾಗಿ ಜಗತ್ತು ಬದಲಾವಣೆ ಹಾಗೂ ಹೊಸತನವನ್ನು ಪಡೆದುಕೊಳ್ಳುವುದು ಎಂದು ಹೇಳಲಾಗುವುದು.
ಮೇಷ
ಈ ರಾಶಿಯ ವ್ಯಕ್ತಿಗಳು ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಆದರೂ ಅನ್ಯಾಯವನ್ನು ಸಹಿಸಿಕೊಳ್ಳುವ ವ್ಯಕ್ತಿಗಳಾಗಿರುವುದಿಲ್ಲ. ಉತ್ಸಾಹ ಭರಿತ ವ್ಯಕ್ತಿಗಳಾದ ಇವರು ಕೆಲವು ಸಂದರ್ಭದಲ್ಲಿ ಶಾಂತವಾಗಿರಲು ಬಯಸುತ್ತಾರೆ. ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳೂ ಆಗಿರುತ್ತಾರೆ. ಅಗತ್ಯವಿರುವ ಶಕ್ತಿಯ ಮಟ್ಟವನ್ನು ಹೊಂದಿರುತ್ತಾರೆ. ಇವರು ತಾವಿರುವ ಪರಿಸರ ಹಾಗೂ ವಿಶ್ವವನ್ನೂ ಸಹ ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸುವಂತಹ ಸಾಮಥ್ರ್ಯವನ್ನು ಹೊಂದಿರುತ್ತಾರೆ.
Most Read:ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ
ಕನ್ಯಾ
ಈ ರಾಶಿಯ ವ್ಯಕ್ತಿಗಳು ತಮ್ಮ ಆಲೋಚನೆಗಳನ್ನು ಅಷ್ಟು ಸುಲಭವಾಗಿ ಬಹಿರಂಗಪಡಿಸುವುದಿಲ್ಲ. ಇವರು ದೊಡ್ಡ ಯೋಜಕರಾಗಿರುತ್ತಾರೆ. ಇವರಲ್ಲಿ ಹಠಾತ್ ಪ್ರವೃತ್ತಿ ಇದ್ದರೂ ವಿಷಯಗಳನ್ನು ಸೂಕ್ತ ರೀತಿಯಲ್ಲಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಬಹುತೇಕ ಸಂದರ್ಭದಲ್ಲೂ ಕಾರ್ಯ ನಿರ್ವಾಹಕರಾಗಿರುವ ಇವರು ಇತರರೊಂದಿಗೆ ಬಹು ಆತ್ಮೀಯತೆಯಿಂದ ಮಾತನಾಡಬಲ್ಲರು. ಇವರು ಇತರರ ಬಗ್ಗೆ ಸೂಕ್ತ ಆಲೋಚನೆ ಹಾಗೂ ವಿಶ್ಲೇಷಣೆ ಮಾಡಬಲ್ಲರು. ಇವರು ಬಲವಾದ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಮನಸ್ಸು ಮಾಡಿದರೆ ತಾವು ಇರುವ ಪ್ರದೇಶ ಅಥವಾ ವಿಶ್ವವನ್ನೇ ಬದಲಾವಣೆ ಮಾಡಬಲ್ಲರು.
Most Read:ಈ 5 ರಾಶಿಯವರು ಕಷ್ಟಪಡದೇ- ಜೀವನದಲ್ಲಿ ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ!
ಕುಂಭ
ಈ ರಾಶಿಯ ವ್ಯಕ್ತಿಗಳು ಇತರ ವ್ಯಕ್ತಿಗಳಿಗಿಂತ ವಿಭಿನ್ನವಾದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಸ್ವಭಾವತಃ ಜಿಜ್ಞಾಸೆ ಮತ್ತು ಜೀವನದಲ್ಲಿ ಸರಿಯಾದ ವಿಷಯಗಳನ್ನು ಕಲಿಯಲು ಉತ್ಸುಕರಾಗಿರುತ್ತಾರೆ. ಭಾವನಾತ್ಮಕ ಜೀವಿಗಳಾದ ಇವರು ಪ್ರಪಂಚದಾದ್ಯಂತ ನಡೆಯುವ ಅನ್ಯಾಯಗಳನ್ನು ಸಹಿಸಿಕೊಳ್ಳದ ವ್ಯಕ್ತಿಗಳು. ಇವರು ಅನ್ಯಾಯದ ವಿರುದ್ಧ ಎದ್ದೇಳುವರು. ಕೌಶಲ್ಯ ಭರಿತ ಗುಪ್ತಚರರಾದ ಇವರು ಪ್ರಪಂಚವನ್ನು ಸೂಕ್ತ ರೀತಿಯಲ್ಲಿ ಸುಧಾರಣೆ ಕಾಣುವಂತೆ ಹಾಗೂ ಬದಲಾವಣೆ ಹೊಂದುವಂತೆ ಮಾಡುವರು.