Just In
- 14 min ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- 1 hr ago ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- 2 hrs ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 5 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- Automobiles ಅತ್ಯಾಧುನಿಕ ಅಡಾಸ್ನೊಂದಿಗೆ ಬರಲಿದೆ ಈ ಕಿಯಾ ಕಾರು: ಟಾಟಾ ಪಂಚ್ಗೆ ಇನ್ನು ದೇವರೇ ಗತಿ!
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- News ಕರ್ನಾಟಕದಲ್ಲಿ ಮೋದಿ, ಯೋಗಿ, ಅಮಿತ್ ಶಾ, ಜೆಪಿ ನಡ್ಡಾ ಪ್ರಚಾರ: ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
- Movies ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಮೂರು ರಾಶಿಯವರು ಹುಟ್ಟಿನಿಂದಲೇ ಅತೀಂದ್ರಿಯ ಗುಣ ಹೊಂದಿದ್ದಾರೆ!
ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಅಲ್ಲಿ ನಡೆಯುವ ಬದಲಾವಣೆಯನ್ನು ಸಾಮಾನ್ಯವಾಗಿ ನಮ್ಮ ಪಂಚೇಂದ್ರಿಯಗಳ ಸಹಾಯದಿಂದ ವೀಕ್ಷಿಸುತ್ತೇವೆ. ಪ್ರತಿಯೊಂದು ಇಂದ್ರಿಯಗಳು ಸಮನಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ನಾವು ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುವುದು. ಇಂದ್ರೀಯಗಳಲ್ಲಿ ಒಂದು ಇಂದ್ರಿಯ ಕೆಲಸ ನಿರ್ವಹಿಸುವಲ್ಲಿ ಎಡವುತ್ತದೆ ಅಥವಾ ಕಾರ್ಯನಿರ್ವಹಿಸುವುದಿಲ್ಲ ಎಂದಾದರೆ ನಾವು ಅಂಗವಿಕಲತೆಯನ್ನು ಅನುಭವಿಸಬೇಕಾಗುವುದು.
ಆದರೆ ಕೆಲವು ವ್ಯಕ್ತಿಗಳಿಗೆ ಪಂಚೇಂದ್ರಿಯಗಳಲ್ಲದೆ ವಿಶೇಷವಾದ ಆರನೇ ಇಂದ್ರಿಯ ಕೆಲಸ ಮಾಡುತ್ತದೆ. ಆ ಆರನೇ ಅತೀಂದ್ರಿಯದ ಸಹಾಯದಿಂದ ಮುಂದೆ ನಡೆಯಬಹುದಾದ ಸನ್ನಿವೇಶಗಳು ಅಥವಾ ಸಂಕಷ್ಟಗಳನ್ನು ಅರಿಯುತ್ತಾರೆ. ಇವರು ತಮ್ಮ ಬುದ್ಧಿವಂತಿಕೆ ಹಾಗೂ ಸೂಕ್ಷ್ಮ ಗುಣಗಳ ಸಹಾಯದಿಂದ ಈಗ ಕೈಗೊಂಡ ಕಾರ್ಯದ ಪರಿಣಾಮ ಹೀಗೇ ಇರುತ್ತದೆ ಎಂದು ಊಹಿಸಬಲ್ಲವರಾಗಿರುತ್ತಾರೆ ಎನ್ನಲಾಗುವದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರಿಗೆ ಹುಟ್ಟಿನಿಂದಲೇ ಅತೀಂದ್ರಿಯ ಗುಣವು ಇರುತ್ತದೆ. ಅದಕ್ಕೆ ಅವರ ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವ ಎಂದು ಹೇಳಲಾಗುವುದು. ನಿಮಗೂ ಅತೀಂದಿಯ ಗುಣಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ....
ಮೀನ
ಮೀನರಾಶಿಯವರು ಅತೀಂದ್ರಿಯ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಈ ರಾಶಿಯಲ್ಲಿ ಜನಿಸಿದವರಿಗೆ ಇದೊಂದು ಅಮೋಘವಾದ ಶಕ್ತಿ ಅಥವಾ ವರದಾನ ಎನ್ನಬಹುದು. ಸೂಕ್ಷ್ಮ ಗ್ರಹಿಕೆ ಹಾಗೂ ಸುಲಭವಾಗಿ ವಿಷಯಗಳನ್ನು ವಿಮರ್ಶೆ ಮಾಡಬಲ್ಲರು. ಸನ್ನಿವೇಶಗಳಿಗೆ ತಕ್ಕಂತೆ ಹೀಗೆ ಆಗಬಹುದು ಎಂದು ಸುಲಭವಾಗಿ ಊಹಿಸಬಲ್ಲರು.
ಮೀನ
ಇವರ ಆಲೋಚನೆ ಮತ್ತು ಕನಸುಗಳು ವಿಶೇಷವಾಗಿರುತ್ತವೆ. ಈ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ನಡೆಯುವ ಬಹುತೇಕ ಸಮಸ್ಯೆಗಳನ್ನು ಹಾಗೂ ಅದೃಷ್ಟವನ್ನು ಮೊದಲೇ ಊಹಿಸಿರುತ್ತಾರೆ ಎಂದು ಹೇಳಲಾಗುವುದು.
ವೃಶ್ಚಿಕ
ಇವರು ಜೀವನದಲ್ಲಿ ಎಷ್ಟೇ ಸಂಕಷ್ಟಗಳನ್ನು ಅನುಭಿಸಿದರೂ ಅದನ್ನು ಸಹಿಸಿಕೊಂಡು ಮುನ್ನಡೆಯುವ ಹಾಗೂ ಯಶಸ್ಸನ್ನು ತಲುಪುವಂತಹ ಬುದ್ಧಿವಂತಿಕೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ಬಹಳ ಧೈರ್ಯದಿಂದ ಎದುರಿಸಬಲ್ಲ ಕಠಿಣ ಮನಸ್ಸಿನವರು ಎನ್ನಲಾಗುವುದು. ಇವರು ಮಾನಸಿಕವಾಗಿ ಅಪಾರ ಜ್ಞಾನವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಅದನ್ನು ನಿಭಾಯಿಸುವ ಅಥವಾ ನಿವಾರಿಸುವ ಕಲೆ ನಮಗಿರಬೇಕು ಎಂದು ಹೇಳುವವರು ಇವರು. ಇವರಿಗೆ ತಮ್ಮ ನಿಷ್ಠ ಹಾಗೂ ಕೆಲಸದಲ್ಲಿ ಅಪಾರ ನಂಬಿಕೆಯಿರುತ್ತದೆ. ಜೊತೆಗೆ ಅತೀಂದ್ರಿಯ ಶಕ್ತಿಯಿಂದಾಗಿ ಸಮಸ್ಯೆಗಳಿಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವರು.
ಕರ್ಕ
ಇವರು ಸಾಮಾನ್ಯವಾಗಿ ವ್ಯಕ್ತಿಯ ಮನಸ್ಸಿನಲ್ಲಿ ಅಥವಾ ಆಂತರ್ಯದಲ್ಲಿ ಏನಿದೆ ಎನ್ನುವದನ್ನು ನೇರವಾಗಿ ಹೇಳುತ್ತಾರೆ. ನಿಮ್ಮ ಸುತ್ತಲಿನ ಪರಿಸರದ ಪ್ರಭಾವದಿಂದ ನೀವು ಯಾವ ರೀತಿಯ ಅನುಭವವನ್ನು ತಳೆಯುವಿರಿ ಹಾಗೂ ನಿಮ್ಮ ಭಾವನೆ ಹೇಗಿರುತ್ತದೆ ಎನ್ನುವುದನ್ನು ಇವರು ಬಹಳ ಸುಲಭವಾಗಿ ಹೇಳಬಲ್ಲರು. ಇವರಲ್ಲಿ ಅನುಭೂತಿ ಮತ್ತು ಅಂತಃಪ್ರಜ್ಞೆ ಆಕಾಶದಂತೆ ವಿಸ್ತಾರವಾಗಿರುತ್ತದೆ ಎನ್ನಲಾಗುವುದು. ಪ್ರತಿಯೊಬ್ಬರಿಗೂ ಇವರು ಸಹಕಾರ ಹಾಗೂ ಸಹಾಯ ಮಾಡುವುದರ ಮೂಲಕ ಒಳಿತನ್ನು ಬಯಸುವರು. ಇವರು ಸಮಯ ಹಾಗೂ ಕಂಪನಗಳನ್ನು ಸಹ ಬಲು ಸುಲಭವಾಗಿ ಗ್ರಹಿಸಬಲ್ಲರು. ತಮ್ಮ ಅತೀಂದ್ರಿಯ ಗುಣದಿಂದಾಗಿಯೇ ಎಲ್ಲರಲ್ಲೂ ಪ್ರೀತಿ ಹಾಗೂ ವಿಶ್ವಾಸದ ವರ್ತನೆಯನ್ನು ತೋರುವರು.