Just In
- 29 min ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 53 min ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 1 hr ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 1 hr ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
Don't Miss
- Movies Radha Bhagavathi ; ಮಲ್ಲಿ ಅಲಿಯಾಸ್ ರಾಧಾ ಭಗವತಿ ಹಿನ್ನೆಲೆ ಏನ್ಗೊತ್ತಾ..?
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಲಸದ ಮೊದಲ ದಿನ 14 ಮೈಲಿ ನಡೆದ ವ್ಯಕ್ತಿಗೆ ಕಂಪೆನಿ ಸಿಇಓನಿಂದ ಕಾರು ಉಡುಗೊರೆ!
ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯೂ ಯಾವತ್ತೂ ಜೀವನದಲ್ಲಿ ನಿಮಗೆ ಒಳ್ಳೆಯದನ್ನು ಮಾಡುವುದು. ಇದರಿಂದ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಪ್ರಾಮಾಣಿಕವಾಗಿರಬೇಕು. ಇಂತಹ ಒಂದು ಪ್ರೇರಣಾತ್ಮಕ ಕಥೆಯ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.
ತನ್ನ ಪ್ರಾಮಾಣಿಕತೆ ಹಾಗೂ ಬದ್ಧತೆಗಾಗಿ ಈ ಯುವಕನಿಗೆ ಕಂಪೆನಿಯು ಕಾರನ್ನು ಉಡುಗೊರೆಯಾಗಿ ನೀಡಿದೆ. ಇದು ಒಬ್ಬ ವ್ಯಕ್ತಿಯು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲೂ ತನ್ನ ಬದ್ಧತೆ ಮತ್ತು ಸರಿಯಾದ ಕೆಲಸ ಮಾಡಿರುವ ಪ್ರತಿಫಲ. ವಾಲ್ಟರ್ ಕಾರ್ ಎನ್ನುವಾತನೇ ಈ ಕಥೆಯ ಸ್ಫೂರ್ತಿ.
ಈತ ಹೊಸ ಉದ್ಯೋಗಕ್ಕೆ ಮರುದಿನ ಸೇರಬೇಕಿತ್ತು. ಆದರೆ ಆತನ ಕಾರು ಕೆಟ್ಟಿರುವುದು ತಿಳಿದುಬಂತು. ಇದನ್ನು ಸರಿಮಾಡಲು ಪ್ರಯತ್ನಿಸಿದ. ಆದರೆ ಕಾರು ಸ್ಟಾರ್ಟ್ ಆಗಲೇ ಇಲ್ಲ. ಮೊದಲ ದಿನವೇ ರಜೆ ಮಾಡುವ ಬದಲು ಆತ ಕಚೇರಿಗೆ ನಡೆದುಕೊಂಡೇ ಹೋಗುವ ನಿರ್ಧಾರಕ್ಕೆ ಬಂದ. ಆತನ ಮನೆಯಿಂದ ಕಚೇರಿಯು ಸುಮಾರು14 ಮೈಲಿ ದೂರದಲ್ಲಿತ್ತು. ನಾಲ್ಕು ಗಂಟೆ ನಿದ್ರೆ ಮಾಡಿಕೊಂಡ ಬಳಿಕ ಆತ ತನ್ನ ಕಚೇರಿಯತ್ತ ನಡೆಯಲು ಆರಂಭಿಸಿದ. ವಾಲ್ಟರ್ ಅಲಬಾಮದ ಹೋಮ್ ವುಡ್ ನಲ್ಲಿರುವ ತನ್ನ ಮನೆಯಿಂದ ಅಲಬಾಮದ ಪೆಲ್ಹಮ್ ಗೆ ನಡೆಯಲು ಆರಂಭಿಸಿದ. ಅದು ಕೂಡ ಮಧ್ಯರಾತ್ರಿ ವೇಳೆಗೆ....
ವಾಲ್ಟರ್ ಸುಮಾರು 14 ಮೈಲಿ ಕ್ರಮಿಸಿದ ಬಳಿಕ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಪೊಲೀಸರು ಆತನನ್ನು ಹಿಡಿದರು. ವರದಿಯ ಪ್ರಕಾರ ವಾಲ್ಟರ್ ಸುದ್ದಿ ಕೇಳಿದ ಪೊಲೀಸರು ಆತನನ್ನು ಕಚೇರಿಗೆ ತಮ್ಮ ವಾಹನದಲ್ಲಿ ಬಿಟ್ಟರು ಮತ್ತು ಆತನ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ತಿನಾ ಚಂಡಮಾರುತದಿಂದಾಗಿ ವಾಲ್ಟರ್ ಕುಟುಂಬವು ಮನೆ ಕಳೆದುಕೊಂಡ ಬಳಿಕ ಬರ್ಮಿಗ್ ಹ್ಯಾಮ್ ಗೆ ಸ್ಥಳಾಂತರಗೊಂಡಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಟರ್ ಬಗ್ಗೆ ಪೋಸ್ಟ್ ಗಳು ಹರಿದಾಡಿದವು ಮತ್ತು ಆತನ ಬದ್ಧತೆಯನ್ನು ನೋಡಿ ಕಂಪೆನಿಯ ಮಾಲಕರು ಮತ್ತು ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕಂಪೆನಿಯ ಸಿಇಒ ಇದರ ಬಗ್ಗೆ ತಿಳಿದು ವಾಲ್ಟರ್ ಗೆ ಒಂದು ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದರು. ಇದರಿಂದ ಆತ ಯಾವುದೇ ತೊಂದರೆಯಿಲ್ಲದೆ ಕಚೇರಿಗೆ ಬರುವಂತೆ ಆಗುವುದು. ಇದರ ಬಗ್ಗೆ ನಿಮ್ಮ ನಿಲುವು ಏನು? ಕೆಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.