Just In
- 17 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 19 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
Karnataka By-Election Results 2019 LIVE:ಎಲ್ಲರ ಚಿತ್ತ ಮತಎಣಿಕೆಯತ್ತ
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Movies
26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ-ಈ 8 ವಾಸ್ತು ಟಿಪ್ಸ್ ಅನುಸರಿಸಿ
ಪ್ರತಿಯೊಬ್ಬರ ಮನೆಯ ದೋಸೆ ತೂತು ಎನ್ನುವ ಗಾದೆಯಿದೆ. ಯಾಕೆಂದರೆ ಸಮಸ್ಯೆ, ಜಗಳ ಎನ್ನುವುದು ಪ್ರತಿಯೊಂದು ಮನೆಗಳಲ್ಲೂ ಇರುವುದು. ಆದರೆ ಇವುಗಳನ್ನು ಹೋಗಲಾಡಿಸಿ, ಸಂತೋಷದ ಜೀವನ ನಡೆಸಲು ಪ್ರತಿಯೊಬ್ಬರು ಬಯಸುವರು. ಆದರೆ ಸಂಪತ್ತು ಹಾಗೂ ಸಮೃದ್ಧಿಯ ಕೊರತೆಯಿಂದಾಗಿ ಇದು ಸಿಗುವುದು ಕಡಿಮೆ. ಕೆಲವೊಂದು ಮನೆಗಳಲ್ಲಿ ಆಗಾಗ ಜಗಳಗಳಾಗುವುದು ಇದೆ.
ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ಮನೆಯಲ್ಲಿನ ಸದಸ್ಯರ ಮಧ್ಯೆ ಮನಸ್ತಾಪ ಇತ್ಯಾದಿಗಳು. ಮನೆಯ ವಾಸ್ತು ಸರಿಯಾಗಿ ಇಲ್ಲದೆ ಇರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ವಾಸ್ತು ಸರಿಯಾಗಿಲ್ಲ ವಾದರೆ ಆಗ ಮನೆಯ ಸದಸ್ಯರ ಮಧ್ಯೆ ಕಲಹಗಳು ಉಂಟಾಗುವುದು. ವಾಸ್ತು ಸರಿಪಡಿಸಿಕೊಂಡರೆ ಇಂತಹ ಸಮಸ್ಯೆ ನಿವಾರಣೆ ಮಾಡಬಹುದು. ಇದು ಹೇಗೆ ಎಂದು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ ಮತ್ತು ಸಂತೋಷದಿಂದ ಜೀವನ ಸಾಗಿಸಿ...

ಅಡುಗೆ ಮನೆ ಅಥವಾ ಶೌಚಾಲಯ ಈಶಾನ್ಯ ಭಾಗದಲ್ಲಿ
ಮನೆಯ ಈಶಾನ್ಯಭಾಗದಲ್ಲಿ ಯಾವತ್ತೂ ಅಡುಗೆ ಮನೆ ಅಥವಾ ಶೌಚಾಲಯವು ಇರಲೇಬಾರದು. ಕುಟುಂಬ ಸದಸ್ಯರ ಮಧ್ಯೆ ಉಂಟಾಗುವ ಕಲಹಕ್ಕೆ ಇದು ಪ್ರಮುಖ ಕಾರಣವಾಗಿದೆ. ಈಶಾನ್ಯ ಭಾಗವು ದೇವರಿಗೆ ಮೀಸಲಿರಿಸಲಾಗಿದೆ. ಇದರಿಂದ ಶೌಚಾಲಯವು ನಿಮಗೆ ಅಶುಭ ಉಂಟು ಮಾಡಬಹುದು. ಉತ್ತರ ಭಾಗದಲ್ಲಿ ಇರುವಂತಹ ಅಡುಗೆ ಮನೆಯು ನಿಮಗೆ ಇದೇ ರೀತಿಯ ಪರಿಣಾಮ ಉಂಟು ಮಾಡಬಹುದು.

ಬಾಗಿಲುಗಳು ಮತ್ತು ಕಿಟಕಿಗಳು
ಮನೆಯ ಬಾಗಿಲುಗಳು ಮತ್ತು ಕಿಟಕಿಗಳು ಪೂರ್ವ ಭಾಗಕ್ಕೆ ಇರಬೇಕು. ಪೂರ್ವ ಭಾಗವು ಸೂರ್ಯನು ಮೂಡುವಂತಹ ದಿಕ್ಕು. ಇದರಿಂದಾಗಿ ಧನಾತ್ಮಕ ಶಕ್ತಿಯು ಬರುವುದು. ಬಾಗಿಲು ಮತ್ತು ಕಿಟಕಿಗಳನ್ನು ತೆರೆಯುವಾಗ ಅಥವಾ ಹಾಕುವಾಗ ಯಾವುದೇ ರೀತಿಯ ಶಬ್ಧ ಬರಬಾರದು.

ಮನೆಯ ಪವಿತ್ರ ಮೂಲೆ
ಈಶಾನ್ಯ ಭಾಗವನ್ನು ವಾಸ್ತುಶಾಸ್ತ್ರದಲ್ಲಿ `ಇಶಾನ ಕೋಣೆ' ಎಂದು ಕರೆಯಲಾಗುವುದು. ಮನೆಯ ಈ ದಿಕ್ಕಿನಲ್ಲಿರುವಂತಹ ನೆಲವು ಎತ್ತರವಾಗಿರಬಾರದು. ಹೀಗಿದ್ದರೆ ಆಗ ಕುಟುಂಬದ ಸದಸ್ಯರ ಮಧ್ಯೆ ಜಗಳವಾಗುವುದು. ಮಕ್ಕಳು ಕೂಡ ಕಳಪೆ ಪ್ರದರ್ಶನ ನೀಡಬಹುದು. ಈ ಭಾಗದಲ್ಲಿ ದೇವರ ಕೋಣೆ ನಿರ್ಮಿಸಿ. ಈ ಭಾಗದಲ್ಲಿ ಯಾವುದೇ ರೀತಿಯ ವಿದ್ಯುತ್ ಸಾಮಗ್ರಿಗಳನ್ನು ಇಡಬೇಡಿ.
Most Read: ಒಂದೇ ಒಂದು ರಸಗುಲ್ಲಾ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು

ಗೇಟ್ ಸಮೀಪ ಮೆಟ್ಟಿಲುಗಳು ಇರಬಾರದು
ಮನೆಯ ಮುಖ್ಯ ಗೇಟ್ ನ ಬಳಿಯಲ್ಲಿಯೇ ಮೆಟ್ಟಿಲುಗಳನ್ನು ನಿರ್ಮಿಸುವುದು ಜನರು ಮಾಡುತ್ತಿರುವ ಮತ್ತೊಂದು ತಪ್ಪು. ಮೆಟ್ಟಿಲುಗಳು ಮನೆಯ ನೈರುತ್ಯ ಅಥವಾ ಪಶ್ಚಿಮ ಅಥವಾ ದಕ್ಷಿಣ ಭಾಗದಲ್ಲಿ ಇರಬೇಕು. ಇದನ್ನು ಹೊರತುಪಡಿಸಿ, ಮುಖ್ಯ ಗೇಟ್ ನ ಸಮೀಪವೇ ಅಡುಗೆ ಮನೆ ಇರಬಾರದು. ಅಡುಗೆಮನೆಯು ದಕ್ಷಿಣ ಅಥವಾ ನೈರುತ್ಯ ಭಾಗದಲ್ಲಿ ಇರಬೇಕು. ಪೂರ್ವ ಭಾಗಕ್ಕೆ ಮುಖ ಮಾಡಿಕೊಂಡು ಅಡುಗೆ ಮಾಡಬೇಕು.

ಈಶಾನ್ಯ ಭಾಗದಲ್ಲಿ ಗೋದಾಮು ಇಡಬೇಡಿ
ಮನೆಯ ಈಶಾನ್ಯ ಭಾಗದಲ್ಲಿ ಯಾವತ್ತಿಗೂ ಗೋದಾಮು ಇರಬಾರದು. ಈಶಾನ್ಯ ಭಾಗವು ದೇವರಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳುವುದರಿಂದ ಈ ಭಾಗದಲ್ಲಿ ಗೋದಾಮು ಇತ್ಯಾದಿ ನಿರ್ಮಿಸಬಾರದು. ಇದು ಮನೆಯವರ ಮಧ್ಯೆ ಜಗಳ ಉಂಟು ಮಾಡುವುದು ಮಾತ್ರವಲ್ಲದೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ಈ ಜಾಗವು ಪೂಜಾ ಕೊಠಡಿಗೆ ತುಂಬಾ ಪ್ರಾಸಸ್ತ್ಯವಾಗಿರುವ ಜಾಗವಾಗಿದೆ. ಗೇಟ್ ನ ಸಮೀಪ ಪೂಜೆಯ ಕೋಣೆ ಇರಬಾರದು.
Most Read:ಬ್ಯೂಟಿ ಟಿಪ್ಸ್: ತಾಜಾ ಹಾಲಿನ ಫೇಶಿಯಲ್-ಮನೆಯಲ್ಲೇ ಮಾಡಿ ನೋಡಿ

ಕನ್ನಡಿಗಳು ಮತ್ತು ಗಾಜುಗಳು
ಮೇಲಿನವುಗಳನ್ನು ಹೊರತುಪಡಿಸಿ ಇತರ ಕೆಲವೊಂದು ನಂಬಿಕೆಗಳು ಇವೆ. ಕಿಟಕಿ ಗಾಜು, ಕನ್ನಡಿ ಒಡೆದಿರಬಾರದು ಮತ್ತು ಗಡಿಯಾರವು ಸರಿಯಾಗಿ ಕೆಲಸ ಮಾಡುತ್ತಿರಬೇಕು. ಹಾಸಿಗೆಗೆ ವಿರುದ್ಧವಾಗಿ ಕನ್ನಡಿ ಇಡಬೇಡಿ. ಹಾಸಿಗೆಯಲ್ಲಿ ಮಲಗಿದ ವ್ಯಕ್ತಿಗೆ ಕನ್ನಡಿಯಲ್ಲಿ ತನ್ನ ಚಿತ್ರ ಕಾಣಬಾರದು.

ಹಿರಿಯರ ಫೋಟೊಗಳು
ಇಹಲೋಕ ತ್ಯಜಿಸಿರುವಂತಹ ಹಿರಿಯರಿಗೆ ಹಿಂದೂ ಧರ್ಮದಲ್ಲಿ ಪೂಜಿಸಲಾಗುವುದು. ಆದರೆ ಕೆಲವರು ದೇವರ ಫೋಟೊ ಜತೆಗೆ ಹಿರಿಯರ ಫೋಟೊಗಳನ್ನು ಇಡುವರು. ಇದು ಒಳ್ಳೆಯದಲ್ಲ. ದಕ್ಷಿಣ ಭಾಗದ ಗೋಡೆಯಲ್ಲಿ ಇದನ್ನು ನೇತಾಡಬಾರದು. ಇದರಿಂದ ಮನೆಯ ಶಾಂತಿ ಕಾಪಾಡಬಹುದು.
Most Read:ಗೋಧಿ ಹಿಟ್ಟಿಗಿಂತಲೂ, ಹತ್ತು ಪಟ್ಟು 'ಬಾದಾಮಿ ಹಿಟ್ಟು' ಪವರ್ ಫುಲ್!

ಪವಿತ್ತ ತುಳಸಿ ಗಿಡ
ಹಿಂದೂಗಳು ತುಳಸಿ ಗಿಡವನ್ನು ತುಂಬಾ ಪವಿತ್ರವೆಂದು ಪರಿಗಣಿಸುವರು. ಇದರಲ್ಲಿ ಇರುವಂತಹ ಆರೋಗ್ಯ ಗುಣಗಳೊಂದಿಗೆ ಇದು ಕೆಲವೊಂದು ಆಧ್ಯಾತ್ಮಿಕ ಲಾಭಗಳನ್ನು ನೀಡುವುದು. ತುಳಸಿ ಪೂಜೆ ಮಾಡಿದರೆ ವಿಷ್ಣುವಿನ ಆರಾಧನೆ ಮಾಡಿದಂತೆ. ಕುಟುಂಬ ಸದಸ್ಯರ ಮಧ್ಯೆ ಶಾಂತಿ ನೆಲೆಸಲು ತುಳಸಿ ಗಿಡವು ತುಂಬಾ ಮಹತ್ವದ್ದಾಗಿದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ.