Just In
Don't Miss
- News
Jharkhand Assembly Elections 2019 Polling LIVE : 2ನೇ ಹಂತದ ಮತದಾನ ಅಪ್ಡೇಟ್ಸ್
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Technology
ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ರಿಕವರ್ ಮಾಡುವುದು ಹೇಗೆ?
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಆಯಸ್ಸು ಮುಗಿಯುತ್ತಾ ಬಂದಿದ್ದರೆ, ಹೀಗೆಲ್ಲಾ ನಡೆಯುತ್ತವೆಯಂತೆ!
ಪುರಾಣ, ವೇದ ಅಥವಾ ಶಾಸ್ತ್ರಗಳ ಪ್ರಕಾರ ಎಲ್ಲಾ ಮಾನವರಿಗೆ ಅರಿವಿನ ಹಸಿವು ಸದಾ ತಣಿಯುತ್ತಲೇ ಇರಬೇಕು. ಕರ್ಮ, ಧರ್ಮ ಅಥವಾ ಇನ್ನಾವುದೇ ಶಾಸ್ತ್ರದ ಪ್ರಕಾರ ನಮ್ಮ ಸುತ್ತ ಮುತ್ತ ಜರುಗುತ್ತಿರುವ ಹಲವಾರು ವಿಷಯಗಳು ನಮ್ಮ ಜೀವನದ ಮೇಲೆ ನೇರವಾದ ಪ್ರಭಾವ ಹೊಂದಿರುತ್ತವೆ. ಮನುಷ್ಯರು ಸತ್ತ ನಂತರ ದೆವ್ವಗಳಾಗಿ ನಮ್ಮನ್ನು ಏಕೆ ಕಾಡುತ್ತಾರೆ?
ಪುರಾಣಗಳ ಪ್ರಕಾರ ಕೆಲವು ಸೂಚನೆಗಳು ನಿಮ್ಮ ಆಯಸ್ಸು ಮುಗಿಯುತ್ತಾ ಬಂದಿರುವ ಸೂಚನೆಗಳನ್ನು ನೀಡುತ್ತವೆ. ಈ ಸೂಚನೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ಇಂದು ನೀಡಲಾಗಿದ್ದು ಇವುಗಳ ಬಗ್ಗೆ ಅರಿತುಕೊಂಡಿರುವುದು ಅಗತ್ಯವಾಗಿದೆ. ಈ ಸೂಚನೆಗಳನ್ನು ಅರಿತರೆ ಈ ಬಗ್ಗೆ ಜಾಗರೂಕಗಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ನೆರವಾಗಬಹುದು. ಇದು ಸಾವಿನ ನಂತರ ನಡೆಯುವ ಕಥೆ! ಹೀಗೂ ಉಂಟೇ?
ವಿಶೇಷ ಸೂಚನೆ: ಈ ಸೂಚನೆಗಳು ಗ್ರಂಥಗಳಲ್ಲಿ ಕಂಡುಬಂದ ವಿಷಯಗಳನ್ನು ಆಧರಿಸಿದ್ದೇ ಹೊರತು ಯಾವುದೇ ವ್ಯಕ್ತಿಯ ವೈಯಕ್ತಿಕ ಅನುಭವದಿಂದಲ್ಲ...

ಸೂಚನೆ #1
ಪವಿತ್ರ ಗ್ರಂಥಗಳಲ್ಲಿ ತಿಳಿಸಿರುವ ಪ್ರಕಾರ ಯಾವ ವ್ಯಕ್ತಿ ಧ್ರುವ ನಕ್ಷತ್ರವನ್ನು ನೋಡಲು ಅಸಮರ್ಥನಾಗುತ್ತಾನೋ, ಆ ವ್ಯಕ್ತಿಗೆ ಮುಂದಿನ ವರ್ಷದೊಳಗೆ ಮೃತ್ಯುವಿಗೆ ಸಮೀಪನಾಗುತ್ತಾನೆ/ಳೆ.

ಸೂಚನೆ #2
ಒಂದು ವೇಳೆ ಸೂರ್ಯನ ಆಕಾರ ವಿರೂಪಗೊಂಡಂತೆ ವ್ಯಕ್ತಿಗೆ ಕಂಡರೆ ಆ ವ್ಯಕ್ತಿಯ ಸಾವು ಸಮೀಪದಲ್ಲಿಯೇ ಇದೆ ಎಂದು ಅರ್ಥ. ಧರ್ಮಗ್ರಂಥಗಳ ಪ್ರಕಾರ ಆ ವ್ಯಕ್ತಿಯ ಮರಣ ಮುಂದಿನ ಹನ್ನೊಂದು ತಿಂಗಳ ಒಳಗಾಗಿ ಸಂಭವಿಸುತ್ತದೆ.

ಸೂಚನೆ #3
ಒಂದು ವೇಳೆ ವ್ಯಕ್ತಿಯ ಪಾದದ ಗುರುತುಗಳು ಮರಳಿನ ಮೇಲೆ ಪೂರ್ಣವಾಗಿ ಮೂಡದೇ ಅರ್ಧಂಬರ್ಧ ಮಾತ್ರ ಮೂಡಿದರೆ ಆ ವ್ಯಕ್ತಿಯ ಮರಣ ಮುಂದಿನ ಏಳು ತಿಂಗಳ ಒಳಗಾಗಿ ಸಂಭವಿಸುತ್ತದೆಯಂತೆ!

ಸೂಚನೆ #4
ಒಂದು ವೇಳೆ ಹದ್ದು ಅಥವಾ ಕಾಗೆಯೊಂದು ವ್ಯಕ್ತಿಯ ತಲೆಯ ಮೇಲೆ ಕುಳಿತರೆ ಇದು ಸೂತಕದ ಸ್ಪಷ್ಟ ಸಂಕೇತವಾಗಿದೆ. ಆ ವ್ಯಕ್ತಿ ಮುಂದಿನ ಆರು ತಿಂಗಳ ಒಳಗಾಗಿ ಸಾವಿನ ಅತಿಥಿಯಾಗುತ್ತಾನೆ.

ಸೂಚನೆ #5
ಪುರಾಣಗಳಲ್ಲಿ ತಿಳಿಸಿರುವಂತೆ ಒಂದು ವೇಳೆ ವ್ಯಕ್ತಿ ತನ್ನನ್ನು ತಾನೇ ಕನ್ನಡಿಯಲ್ಲಿ ನೋಡಿಕೊಂಡಾಗ ಆತನ ಪ್ರತಿಬಿಂಬ ವಿರೂಪಗೊಂಡಂತೆ ಕಂಡುಬಂದರೆ ಅಥವಾ ಆತನ ಸುತ್ತ ಧೂಳಿನ ಮೋಡವೊಂದು ಕವಿದಿರುವಂತೆ ಕಂಡುಬಂದರೆ ಆತನ ಆಯಸ್ಸು ಇನ್ನು ಕೇವಲ ನಾಲ್ಕರಿಂದ ಐದು ತಿಂಗಳು ಮಾತ್ರ ಉಳಿದಿದೆ.

ಸೂಚನೆ #6
ಒಂದು ವೇಳೆ ಯಾವುದೇ ಮೋಡ ಅಥವಾ ಮಳೆ ಇಲ್ಲದ ಸಮಯದಲ್ಲಿ ಮಿಂಚನ್ನು ಸ್ಪಷ್ಟವಾಗಿ ಕಂಡರೆ ಆತನ ಆಯಸ್ಸು ಇನ್ನು ಕೇವಲ ಎರಡರಿಂದ ಮೂರು ತಿಂಗಳು ಮಾತ್ರ ಉಳಿದಿದೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ.

ಸೂಚನೆ #7
ಒಂದು ವೇಳೆ ಸ್ನಾನದ ಬಳಿಕ ಕೆಲವೇ ಕ್ಷಣಗಳಲ್ಲಿ ಸ್ನಾನ ಮಾಡೇ ಇರಲಿಲ್ಲವೆನ್ನುವಷ್ಟು ಒಣಗಿಬಿಟ್ಟರೆ ಆತ ಮುಂದಿನ ಹತ್ತು ದಿನಗಳ ಒಳಗಾಗಿ ಸಾವಿಗೆ ಶರಣಾಗುವ ಸಾಧ್ಯತೆ ಇದೆ.

ಸೂಚನೆ #8
ಒಂದು ವೇಳೆ ದೀಪದ ಜ್ವಾಲೆ ನಂದಿದ ಬಳಿಕ ಸುಟ್ಟ ಅಥವಾ ಹೊಗೆಯ ಪರಿಮಳವನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ಆತನ ಆಯಸ್ಸು ಇನ್ನು ಕೆಲವೇ ದಿನಗಳಿವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ.