Just In
- 12 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 13 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 13 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 15 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Movies ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯ 'ಪ್ರಧಾನ ಬಾಗಿಲ' ವಾಸ್ತು ಟಿಪ್ಸ್- ಅದೃಷ್ಟವೇ ಬದಲಾಗಬಹುದು!
ಮನೆಯ ಪ್ರಮುಖ ಅಂಗವೆಂದರೆ ಮನೆಯ ಪ್ರಧಾನ ಬಾಗಿಲು. ಈ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದು ವಾಸ್ತುವಿನ ಪ್ರಮುಖ ಅಂಶವಾಗಿದ್ದು ಮನೆಯ ಸುಖ, ನೆಮ್ಮದಿ, ಸಂತೃಪ್ತಿಗಳೆಲ್ಲವೂ ಇದನ್ನು ಅವಲಂಬಿಸಿದೆ. ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ
ಅಲ್ಲದೆ ಬರೆಯ ಬರೆಯ ಬಾಗಿಲನ್ನು ಮಾತ್ರ ವಾಸ್ತುವಿನ ಪ್ರಕಾರದ ದಿಕ್ಕಿನಲ್ಲಿಟ್ಟರೆ ಸಾಲದು, ಬದಲಿಗೆ ಕೆಲವು ವಸ್ತುಗಳನ್ನು ಈ ಬಾಗಿಲ ಬಳಿ ಇಡುವ ಮೂಲಕವೂ ಮನೆಯಲ್ಲಿ ನೆಮ್ಮದಿ ನೆಲೆಸಲು, ಅದೃಷ್ಟ ಹುಡುಕಿಕೊಂಡು ಬರಲು ನೆರವಾಗುತ್ತದೆ..... ಮುಂದೆ ಓದಿ...
ಗಾಜಿನ ಪಾತ್ರೆ
ಒಂದು ದೊಡ್ಡ ಗಾಜಿನ ಜಾಡಿ ಅಥವಾ ಗಾಜಿನ ಲೋಟದಲ್ಲಿ ನೀರು ತುಂಬಿ ಇದರಲ್ಲಿ ನಿತ್ಯವೂ ತಾಜಾ ಹೂವುಗಳನ್ನಿರಿಸಿ. ಇದು ಮನೆಯ ಸಮೃದ್ಧಿಗೆ ಅಗತ್ಯವಾಗಿದೆ. ಪ್ರತಿದಿನ ಹಳೆಯ ಹೂವುಗಳನ್ನು ನಿವಾರಿಸಿ ತಾಜಾ ಹೂವುಗಳನ್ನು ಇರಿಸಿ.
ಮಾಲೆ
ಅರಳಿ, ಮಾವು ಅಥವಾ ಅಶೋಕ ವೃಕ್ಷದ ಎಲೆಗಳನ್ನು ಒಂದು ಗಟ್ಟಿಯಾದ ದಾರಕ್ಕೆ ಕಲಾತ್ಮಕವಾಗಿ ಪೋಣಿಸಿ ಮಾಲೆ ತಯಾರಿಸಿ. ಈ ಮಾಲೆಯನ್ನು ಪ್ರಧಾನ ಭಾಗಿಲಿನ ಮೇಲೆ, ಮನೆಯ ಹೊರಭಾಗದಲ್ಲಿ ನೇತು ಹಾಕಿ.
ಮಾಲೆ
ಇದರಿಂದ ಮನೆಯೊಳಗೆ ಪ್ರವೇಶ ಪಡೆಯಲೆತ್ನಿಸುವ ಋಣಾತ್ಮಕ ಶಕ್ತಿಯನ್ನು ತಡೆಯಲು ಸಾಧ್ಯ. ಈ ಎಲೆಗಳು ಒಣಗಿದ ಬಳಿಕ ಮತ್ತೊಮ್ಮೆ ತಾಜಾ ಎಲೆಗಳಿಂದ ಮಾಲೆಯನ್ನು ಬದಲಿಸಿ.
ಲಕ್ಷ್ಮಿ ದೇವರ ಪಟ
ಮನೆಯಲ್ಲಿ ಸಂಪತ್ತು ಸದಾ ತುಂಬಿರಲು ಲಕ್ಷ್ಮಿದೇವರ ಪಟ ಅಥವಾ ಮುದ್ರಿತ ಗೋಡೆಯ ಟೈಲ್ಸ್ ಅನ್ನು ಮನೆಯ ಪ್ರಧಾನ ಬಾಗಿಲಿಗೆ ಎದುರಾಗಿ, ಅಂದರೆ ಮನೆಯ ಒಳಗೆ ಅಡಿಯಿಡುತ್ತಿದ್ದಂತೆಯೇ ಕಾಣುವಂತೆ ಇರಿಸಿ. ಆದರೆ ಇದಕ್ಕೆ ಎದುರಾಗಿ ಪಾದರಕ್ಷೆಗಳು ಅಥವಾ ಪಾದರಕ್ಷೆಗಳ ಕಪಾಟು ಇರಿಸಕೂಡದು.
ಲಕ್ಷ್ಮಿಯ ಪಾದಗಳು
ಒಂದು ಜೊತೆ ಲಕ್ಷ್ಮೀಪಾದಗಳನ್ನು ಮನೆಯ ಪ್ರಧಾನ ಬಾಗಿಲಿನ ಬಳಿ ಇರಿಸಿ. ಇವುಗಳು ಮನೆಯೊಳಕ್ಕೆ ಹೋಗುವ ದಿಕ್ಕಿನಲ್ಲಿರಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ಆಗಮಿಸುತ್ತದೆ.
ಶುಭ-ಲಾಭ ಪಟ
ಮನೆಯ ಪ್ರಧಾನ ಬಾಗಿಲಿನ ಮೇಲೆ ಶುಭ ಲಾಭ ಎಂದು ಬರೆಸಿ ಅಥವಾ ಹೀಗೆ ಬರೆದ ಪಟವನ್ನು ಬಾಗಿಲ ಮೇಲೆ ಅಳವಡಿಸಿ. ಇದರಿಂದ ಮನೆಯಲ್ಲಿ ಅನಾರೋಗ್ಯ ನುಸುಳಲು ಅಸಾಧ್ಯವಾಗುತ್ತದೆ.
ಸ್ವಸ್ತಿಕ್ ಚಿಹ್ನೆ
ಮನೆಯ ಪ್ರಧಾನ ಬಾಗಿಲಿನ ಎದುರು ಸ್ವಸ್ತಿಕ್ ಚಿಹ್ನೆಯೊಂದನ್ನು ಬಿಡಿಸಿ. ಇದರಿಂದ ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿ ನೆಲೆಸುತ್ತದೆ. ಈಗ ಮನೆಯ ಪ್ರಧಾನ ಬಾಗಿಲನ್ನು ನಿರ್ಮಿಸುವ ಮೊದಲು ಗಮನಿಸಬೇಕಾದ ವಿಷಯಗಳನ್ನು ನೋಡೋಣ:
ದೊಡ್ಡ ಗಾತ್ರ
ನಿಮ್ಮ ಮನೆಯ ಪ್ರಧಾನ ಬಾಗಿಲು ನಿಮ್ಮ ಮನೆಯ ಎಲ್ಲಾ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಬೇರೆಲ್ಲಾ ಬಾಗಿಲುಗಳು ಕೊಂಚವಾದರೂ ಇದಕ್ಕಿಂತ ಚಿಕ್ಕದಾಗಿರುವಂತೆ ನೋಡಿಕೊಳ್ಳಿ.
ಎರಡು ಬಾಗಿಲ ದ್ವಾರ
ಪ್ರಧಾನ ಬಾಗಿಲು ಎರಡು ಹಲಗೆಗಳನ್ನು ಹೊಂದಿರಬೇಕು. ಇದು ಮನೆಯ ಒಳಭಾಗಕ್ಕೆ ತೆರೆಯುವಂತೆ, ಹಿಡಿಕೆ ಇರುವ ಭಾಗ ಮೇಲಿನಿಂದ ನೋಡಿದರೆ ಪ್ರದಕ್ಷಿಣವಾಗಿ ತೆರೆಯುವಂತಿರಬೇಕು. ಈ ಬಾಗಿಲು ಮನೆಗೆ ಶುಭ ತರುತ್ತದೆ.
ಗುಣಮಟ್ಟ
ಮನೆಯ ಇತರ ಬಾಗಿಲುಗಳನ್ನು ಯಾವುದೇ ಮರ ಅಥವಾ ಇತರ ವಸ್ತುಗಳನ್ನು ಬಳಸಿ ತಯಾರಿಸಿದರೂ ಪ್ರಧಾನ ಬಾಗಿಲಿಗೆ ಮಾತ್ರ ಅತ್ಯುತ್ತಮವದ ಕಚ್ಚಾವಸ್ತುಗಳನ್ನೇ ಉಪಯೋಗಿಸಬೇಕು. ಕಡಿಮೆ ಗುಣಮಟ್ಟದ ಮರ ಮನೆಯ ವಾಸ್ತುವಿಗೆ ಸರಿಯಾಗಲಾರದು.
ಶಬ್ದರಹಿತವಾಗಿರಬೇಕು
ಬಾಗಿಲಿಗೆ ಬಳಸುವ ಬಿಜಾಗರೆಗಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು ಬಾಗಿಲನ್ನು ತೆರೆದಾಗ ಸದ್ದು ಮಾಡಕೂಡದು.
ಶಬ್ದರಹಿತವಾಗಿರಬೇಕು
ಒಂದು ವೇಳೆ ಚಿಕ್ಕ ಸದ್ದು ಉಂಟಾದರೂ ಹರಳೆಣ್ಣೆ ಅಥವಾ ಬೇರಾವುದಾದರೂ ಜಾರುಕ ಬಳಸಿ ಸದ್ದು ಅಡಗಿಸಿ. ಈ ಸದ್ದು ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.
ಬಾಗಿಲುಗಳ ಸಂಖ್ಯೆ
ನಿಮ್ಮ ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಸಮಸಂಖ್ಯೆಯಲ್ಲಿರಬೇಕು. (2,4,6 ಇತ್ಯಾದಿ) ಅಲ್ಲದೇ ಎರಡಂಕೆಯ ಸಂಖ್ಯೆಯಾದರೆ ಇದರ ಎರಡನೆಯ ಅಂಕೆ ಸೊನ್ನೆಯಾಗಬಾರದು (10,20 ಇತ್ಯಾದಿ)