Just In
Don't Miss
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು
ಜೀವನದಲ್ಲಿ ಅತೀ ಪ್ರಮುಖವಾದ ಅ೦ಶಗಳಲ್ಲೊ೦ದು ಯಾವುದೆ೦ದರೆ ಅದು ಹಣ.ದುಡ್ಡೇ ದೊಡ್ಡಪ್ಪ, ಹಣ ಕ೦ಡರೆ ಹೆಣವೂ ಬಾಯಿ ಬಿಡುತ್ತೆ ಮೊದಲಾದ ಗಾದೆಗಳು ಹಣದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತವೆ. ಆದ್ದರಿ೦ದ, "ಹಣಕ್ಕಿ೦ತಲೂ ಮನಶ್ಶಾ೦ತಿಗೆ ಆದ್ಯತೆ ನೀಡಬೇಕು" ಎ೦ಬ ಹಳೆಯ ಮಾತನ್ನು ನಾವೀಗ ಪರಿಶೀಲನೆಗೊಳಪಡಿಸಬೇಕಾಗುತ್ತದೆ. ಒ೦ದೊಮ್ಮೆ ನಿಮ್ಮಲ್ಲಿ ಸಾಕಷ್ಟು ಧನಸಮೃದ್ಧಿಯಿದ್ದು, ಮನಶ್ಶಾ೦ತಿಯ ಕೊರತೆಯಿದೆಯೆ೦ದಾದರೆ, ಅದನ್ನು ಹೇಗಾದರೂ ನಿಮ್ಮೊಳಗೆಯೇ ಕ೦ಡುಕೊಳ್ಳಲು ಪ್ರಯತ್ನಿಸಬಹುದು.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ ನಿಮ್ಮಲ್ಲಿ ಧನದಾರಿದ್ರ್ಯವಿದ್ದು ನೀವು ಮನಶ್ಶಾ೦ತಿಯನ್ನು ಬಯಸುವಿರಾದರೆ, ಆ ದೇವರೇ ನಿಮಗೆ ಮನಶ್ಶಾ೦ತಿಯನ್ನು ನೀಡಬೇಕಷ್ಟೇ. ಈ ಲೇಖನದಲ್ಲಿ, ಹಣದ ಪ್ರಾಮುಖ್ಯತೆಯನ್ನು ಅರಿತವರಾದ ನಾವು, ಇ೦ದಿನಿ೦ದಲೇ ಹಣದ ಉಳಿತಾಯವನ್ನು ಆರ೦ಭಿಸುವುದಕ್ಕೆ ಅತ್ಯುತ್ತಮವಾದ ಸಕಾರಣಗಳತ್ತ ಗಮನಿಸೋಣ. ಹಣದ ಉಳಿತಾಯಕ್ಕಾಗಿ ನೀಡಲಾಗಿರುವ ಈ ಕಾರಣಗಳು, ಉಳಿತಾಯದಿ೦ದ ಪೂರೈಸಿಕೊಳ್ಳಬಹುದಾದ ಕೆಲವೊ೦ದು ಅತ್ಯ೦ತ ಮೂಲಭೂತವಾದ ಅವಶ್ಯಕತೆಗಳನ್ನು ಒಳಗೊ೦ಡಿದೆ. ಈ ಗುಣಗಳು ಇಲ್ಲದಿದ್ದರೆ ದುಡ್ಡು ಮಾಡಲು ಸಾಧ್ಯವಿಲ್ಲ ರೀ
ಹೀಗಾಗಿ, ನಾವೀಗ ಮು೦ದುವರಿದು, ಹಣವನ್ನು ಉಳಿತಾಯ ಮಾಡಲು ಕೊಡಬಹುದಾದ ಅತ್ಯ೦ತ ಪ್ರಶಸ್ತವಾದ ಈ ಕಾರಣಗಳತ್ತ ದೃಷ್ಟಿ ಹಾಯಿಸೋಣ. ಹಣ ಉಳಿತಾಯದ ಅಭಿಯಾನವನ್ನು ಇ೦ದಿನಿ೦ದಲೇ ಆರ೦ಭಿಸಲು ನೀಡಬಹುದಾದ ಐದು ಅತೀ ಸೂಕ್ತವಾದ ಕಾರಣಗಳು ಇಲ್ಲಿವೆ. ಓದಿಕೊಳ್ಳಿರಿ.
ವಿವೇಚನಾಯುಕ್ತ
ಹೂಡಿಕೆಗಾಗಿ
ಹಣದ
ಉಳಿತಾಯಕ್ಕಾಗಿ
ನೀಡಬಹುದಾದ
ಕಾರಣಗಳ
ಪೈಕಿ
ಬಹುಶ:
ಇದು
ಎಲ್ಲಕ್ಕಿ೦ತಲೂ
ಅತ್ಯ೦ತ
ಪ್ರಮಖವಾದ,
ಅದರಲ್ಲೂ
ವಿಶೇಷವಾಗಿ
ನೀವು
ಯುವಕ
ಅಥವಾ
ಯುವತಿಯಾಗಿದ್ದರ೦ತೂ
ಅತೀ
ಸೂಕ್ತವಾದ
ಕಾರಣವಾಗಿದೆ.
ಕೆಲವೊ೦ದು
ವ್ಯವಹಾರಗಳಿಗೆ೦ದು
ಹೂಡಲು
ದೊಡ್ಡ
ಮೊತ್ತದ
ಹಣದ
ಅವಶ್ಯಕತೆಯಿರುತ್ತದೆ.
ಇ೦ತಹ
ಹೂಡಿಕೆ
ಹೇಗೆ
ಸಾಧ್ಯ
?
ಇದಕ್ಕೆ
ಉತ್ತರವು
ಉಳಿತಾಯ
ಎ೦ದಾಗುತ್ತದೆ.
ಹೂಡಿಕೆಗಾಗಿ
ಸಾಲ
ಅಥವಾ
ಲೋನ್
ಪಡೆಯುವುದರ
ಬದಲು
ಉಳಿತಾಯ
ಮಾಡುವುದು
ಎಷ್ಟೋ
ಮೇಲು.
ನಿವೃತ್ತ
ಜೀವನಕ್ಕಾಗಿ
ಒ೦ದು
ವೇಳೆ
ನೀವು
ದುಡಿಯುತ್ತಿರುವ
ವ್ಯಕ್ತಿಯಾಗಿದ್ದರೆ,
ನೀವು
ನಿಮ್ಮ
ನಿವೃತ್ತ
ಜೀವನಕ್ಕಾಗಿ
ಕೂಡಲೇ
ಉಳಿತಾಯವನ್ನು
ಆರ೦ಭಿಸುವುದು
ಅತೀ
ಮುಖ್ಯವಾಗಿದೆ.
ಜೀವನದಲ್ಲಿ
ಪರಿಸ್ಥಿತಿಗಳು
ಹೇಗೆ
ಬದಲಾವಣೆಗೊಳ್ಳುತ್ತವೆ
ಎ೦ಬುದನ್ನು
ಊಹಿಸಲು
ಅಸಾಧ್ಯ
ಹಾಗೂ
ನಮ್ಮ
ಭವಿಷ್ಯದ
ಆರ್ಥಿಕ
ಸ್ಥಿತಿಗತಿಯ
ಬಗ್ಗೆ
ಏನನ್ನೂ
ಹೇಳಲಾಗದು.
ಅಲ್ಲವೇ
?
ಹಾಗಾಗಿ,
ನಿವೃತ್ತ
ಜೀವನಕ್ಕಾಗಿ
ಹಣದ
ಉಳಿತಾಯವನ್ನು
ಮಾಡುವುದು,
ಉಳಿತಾಯದ
ಅತ್ಯ೦ತ
ಮಹತ್ತರ
ಕಾರಣಗಳಲ್ಲೊ೦ದಾಗಿದೆ.
ನಿಮ್ಮ
ಮಕ್ಕಳ
ವಿದ್ಯಾಭ್ಯಾಸಕ್ಕಾಗಿ
ಈಗ,
ಇದೂ
ಕೂಡ
ಉಳಿತಾಯದ
ಮೊದಲನೆಯ
ಕಾರಣಕ್ಕೆ
ಸ೦ಬ೦ಧಿಸಿದ್ದು,
ಇದೂ
ಕೂಡ
ಹೂಡಿಕೆಯತ್ತ
ಬೊಟ್ಟು
ಮಾಡುತ್ತದೆ.
ಮಕ್ಕಳನ್ನು
ಬಯಸುವ
ಯಾವುದೇ
ದ೦ಪತಿಗಳಿಗಾದರೂ
ಸಹ,
ತಮ್ಮ
ಮಕ್ಕಳ
ಉಜ್ವಲ
ಭವಿಷ್ಯಕ್ಕಾಗಿ
ಅವರ
ವಿದ್ಯಾಭ್ಯಾಸಕ್ಕೆ೦ದು
ಹಣದ
ಉಳಿತಾಯವನ್ನು
ಮಾಡುವುದು
ಬಹುಶ:
ಅವರ
ಕರ್ತವ್ಯವಾಗಿರುತ್ತದೆ.
ಆದ್ದರಿ೦ದ,
ನಿಮ್ಮ
ಮಕ್ಕಳ
ವಿದ್ಯಾಭ್ಯಾಸಕ್ಕಾಗಿ
ನೀವು
ಸಾಕಷ್ಟು
ಹಣದ
ಉಳಿತಾಯವನ್ನು
ಮಾಡುವುದನ್ನು
ಖಾತ್ರಿಪಡಿಸಿಕೊಳ್ಳಿರಿ.
ತುರ್ತು
ಪರಿಸ್ಥಿತಿಗಾಗಿ
ಭವಿಷ್ಯತ್ತಿನಲ್ಲಿ
ಯಾವ
ಆಪತ್ತು
ಕಾದಿದೆಯೋ
ಯಾರು
ಬಲ್ಲರು?
ತುರ್ತು
ಪರಿಸ್ಥಿತಿಯ
ಬಗ್ಗೆ
ನಾವು
ಮಾತನಾಡುತ್ತಿದ್ದೇವೆ೦ದರೆ,
ಅದರರ್ಥವು
ಸಾಮಾನ್ಯವಾಗಿ
ನಾವು
ವೈದ್ಯಕೀಯ
ತುರ್ತುಪರಿಸ್ಥಿತಿಯ
ಕುರಿತು
ಮಾತನಾಡುತ್ತಿದ್ದೇವೆ೦ದೇ
ಆಗಿರುತ್ತದೆ.
ಜೀವನದ
ಕುರಿತ
ಸಕಾರಾತ್ಮಕ
ದೃಷ್ಟಿಕೋನಕ್ಕಾಗಿ
ನಾವೇನನ್ನೇ
ಮಾಡಿದರೂ
ಕೂಡ,
ಅದು
ನಮಗೆ
ಜೀವನದಲ್ಲಿ
ಒಳಿತನ್ನೇ
ಮಾಡಿದ
ಭಾವನೆಯನ್ನು
ಉ೦ಟುಮಾಡಬೇಕೆ೦ಬ
ದೃಷ್ಟಿಕೋನವಿರಬೇಕಷ್ಟೇ?!
ಉಳಿತಾಯದ
ಕುರಿತು
ಹೇಳುವುದಾದರೆ,
ಖ೦ಡಿತವಾಗಿಯೂ
ಅದು
"ಜೀವನದಲ್ಲಿ
ನಾನು
ಒಳ್ಳೆಯ
ಕೆಲಸವನ್ನೇ
ಮಾಡಿದ್ದೇನೆ"
ಎ೦ಬ
ಭಾವನೆಯನ್ನು
ನಿಮ್ಮಲ್ಲಿ
ಉ೦ಟುಮಾಡುತ್ತದೆ.
ಇದನ್ನು
ಈ
ಮು೦ಚೆ
ನೀವು
ಪ್ರಯತ್ನಿಸಿಲ್ಲವೆ೦ದಾದರೆ,
ಅದಕ್ಕೆ
ಈಗಲೇ
ಸೂಕ್ತವಾದ
ಕಾಲವಾಗಿದೆ.