Just In
Don't Miss
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
shravan maas 2021: ಪ್ರತಿರಾಶಿಯವರು ಸಂಪತ್ತು ವೃದ್ಧಿಗಾಗಿ ಶಿವನನ್ನು ಆರಾಧಿಸಬೇಕಾದ ಕ್ರಮವಿದು
ಇದೇ ಬರುವ ಆಗಸ್ಟ್ 9ರಿಂದ ಶ್ರಾವಣ ತಿಂಗಳು ಆರಂಭವಾಗಲಿದೆ. ಶಿವನ ಆರಾಧನೆಗೆ ಹೆಸರುವಾಸಿಯಾಗಿರುವ ಈ ತಿಂಗಳು ಸೆಪ್ಟೆಂಬರ್ ವರೆಗೂ ಮುಂದುವರೆಯುವುದು. ಈ ದಿನಗಳಲ್ಲಿ ಶಿವನನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆರಾಧಿಸಿದರೆ, ಸಕಲ ಪಾಪಗಳ ನಾಶವಾಗಿ, ಇಷ್ಟಾರ್ಥಗಳೆಲ್ಲವೂ ಫಲಿಸುತ್ತವೆ ಎಂಬ ನಂಬಿಕೆಯಿದೆ.
ಬಡವನನ್ನು ಶ್ರೀಮಂತನನ್ನಾಗಿಸುವ ಈ ಶ್ರಾವಣ ತಿಂಗಳ ಸೋಮವಾರದಂದು ಶಿವನನ್ನು ಪೂಜಿಸಬೇಕು. ನಿಮಗೂ ಸಂಪತ್ತು ಹೆಚ್ಚಾಗಬೇಕಾದರೆ, ನಿಮ್ಮ ರಾಶಿಚಕ್ರದ ಪ್ರಕಾರ, ಶ್ರಾವಣಸೋಮವಾರದಂದು ಶಿವನನ್ನು ಮೆಚ್ಚಿಸಲು ಯಾವ ಕ್ರಮಗಳನ್ನು ಮಾಡಬೇಕು ಎಂಬುದನ್ನು ತಿಳಿಸಿಕೊಡಲಿದ್ದೇವೆ.
ಸಂಪತ್ತು ವೃದ್ಧಿಗಾಗಿ ಶ್ರಾವಣ ಸೋಮವಾರದಂದು ಶಿವನ ಆರಾಧನೆಗೆ ಪ್ರತಿರಾಶಿಚಕ್ರ ಮಾಡಬೇಕಾಗಿರುವ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:
ಮೇಷ
ಈ ರಾಶಿಯವರು, ಸೋಮವಾರ ಬೆಲ್ಲವನ್ನು ನೀರಿನಲ್ಲಿ ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು ಅಥವಾ ಕುಂಕುಮವನ್ನು ನೀರಿನಲ್ಲಿ ಬೆರೆಸಿ ಕೂಡ ಅಭಿಷೇಕಿಸಬಹುದು. ಜೊತೆಗೆ ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ. ಇದನ್ನು ಮಾಡುವುದರಿಂದ ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗುತ್ತದೆ.
ವೃಷಭ :
ಈ ರಾಶೀಯವರು ಪ್ರತಿ ಸೋಮವಾರ ಮೊಸರಿನಿಂದ ಶಿವನಿಗೆ ಅಭಿಷೇಕ ಮಾಡಿಬೇಕು, ಇದು ನೀವು ಎದುರಿಸುತ್ತಿರುವ ಹಣದ ಸಮಸ್ಯೆಯನ್ನು ಪರಿಹರಿಸುತ್ತದೆ. ಅಲ್ಲದೆ, ನೀವು ಶಿವನನ್ನು ಸ್ತುತಿಸುತ್ತಾ, ಬಿಲ್ವಪತ್ರೆಯನ್ನು ಅರ್ಪಿಸಿದರೆ, ಇನ್ನಷ್ಟು ಬೇಗನೆ ಫಲಿತಾಂಶಗಳನ್ನು ಪಡೆಯುತ್ತೀರಿ.
ಮಿಥುನ:
ಮಿಥುನ ರಾಶಿಯವರು ಪ್ರತಿ ಸೋಮವಾರ ಶಿವನನ್ನು ಕಬ್ಬಿನ ರಸದಿಂದ ಪವಿತ್ರಗೊಳಿಸಿದರೆ, ಶೀಘ್ರದಲ್ಲೇ ನಿಮ್ಮೆಲ್ಲಾ ಆಸೆಗಳು ಈಡೇರಿಕೆಯಾಗುವುದು. ಶಿವನಿಗೆ ಉಮ್ಮತ್ತಿ ಹೂವನ್ನು ಅರ್ಪಿಸಿ. ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಕರ್ಕ:
ಈ ರಾಶಿಚಕ್ರದ ಭಕ್ತರು ಪ್ರತಿ ಶ್ರಾವಣ ಸೋಮವಾರ, ಶಿವನಿಗೆ ಸಕ್ಕರೆ ಬೆರೆಸಿದ ಹಾಲನ್ನು ಅರ್ಪಿಸಬೇಕು. ಜೊತೆಗೆ ಶಿವನಿಗೆ ಪ್ರಿಯವಾದ ಹೂವುಗಳನ್ನು ಸಹ ನೀಡಿ. ಈ ವಿಧಾನಗಳಿಂದ ಕೆಲವೇ ದಿನಗಳಲ್ಲಿ ನಿಮಗೆ ಅದೃಷ್ಠ ಬರಲಿದೆ.
ಸಿಂಹ:
ಈ ರಾಶಿಚಕ್ರದ ವ್ಯಕ್ತಿಯು ಶಿವನನ್ನು ಶ್ರೀಗಂಧದ ನೀರಿನಿಂದ ಅಭಿಷೇಕಿಸಬೇಕು ಮತ್ತು ಶಿವನ ಅಮೃತವಾಣಿಯನ್ನು ಕೇಳಬೇಕು. ಇದು ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸುತ್ತದೆ ಮತ್ತು ಶೀಘ್ರದಲ್ಲೇ ನಿಮಗೆ ಬೇಕಾದ ಎಲ್ಲವನ್ನೂ ನೀವು ಪಡೆಯುತ್ತೀರಿ.
ಕನ್ಯಾ:
ಕನ್ಯಾರಾಶಿ ಜನರು ಶಿವನನ್ನು ಬಾಂಗ್ ಬೆರೆಸಿದ ನೀರಿನಿಂದ ಅಭಿಷೇಕಿಸಬೇಕು, ಅವರಿಗೆ ಯಾವುದೇ ಕಾಯಿಲೆ ಇದ್ದರೆ ಅದು ಕಡಿಮೆಯಾಗುತ್ತದೆ, ಜೊತೆಗೆ ನಿರೀಕ್ಷಿತ ವಿತ್ತೀಯ ಪ್ರಯೋಜನಗಳೂ ಸಹ ಸಿಗುತ್ತದೆ.
ತುಲಾ:
ಈ ರಾಶಿಚಕ್ರದವರು ಸೋಮವಾರ ಹಸುವಿನ ತುಪ್ಪ ಮತ್ತು ಸುಗಂಧಪೂರಿತ ಎಣ್ಣೆಯಿಂದ ಶಿವ ಅಭಿಷೇಕ ಮಾಡಬೇಕು. ಅಲ್ಲದೆ, ಕೇಸರಿ ಮಿಶ್ರಿತ ಸಿಹಿತಿಂಡಿಗಳನ್ನು ಅರ್ಪಿಸಬೇಕು. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ವೃಶ್ಚಿಕ:
ಈ ರಾಶಿಯವರು ಪ್ರತಿ ಶ್ರಾವಣ ಸೋಮವಾರದಂದು ಶಿವನಿಗೆ ಜೇನುತುಪ್ಪ ಬೆರೆಸಿದ ನೀರಿನಿಂದ ಅಭಿಷೇಕ ಮಾಡಬೇಕು, ಜೇನುತುಪ್ಪ ಲಭ್ಯವಿಲ್ಲದಿದ್ದರೆ ಸಕ್ಕರೆಯನ್ನು ಸಹ ಬಳಸಬಹುದು.
ಧನು:
ಈ ರಾಶಿಚಕ್ರದ ಜನರು ಕೇಸರಿಯನ್ನು ಹಾಲಿನಲ್ಲಿ ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ಅಲ್ಲದೆ, ಶಿವ ಪಂಚಾಕ್ಷರಿಯನ್ನು ಪಠಿಸುವುದರಿಂದ ಕೂಡ ಸಾಕಷ್ಟು ಅನುಕೂಲಗಳು ಸಂಭವಿಸುತ್ತವೆ. ಖಂಡಿತವಾಗಿಯೂ ಅವರಿಗೆ ಹಣ ಗಳಿಸುವಂತೆ ಮಾಡುತ್ತದೆ.
ಮಕರ:
ಶಿವನನ್ನು ಈ ರಾಶಿಚಕ್ರ ಚಿಹ್ನೆಯ ಜನರು ಎಳ್ಳೆಣ್ಣೆಯಿಂದ ಅಭಿಷೇಕಿಸಿದರೆ, ಅವರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಜೊತೆಗೆ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ. ಶೀಘ್ರದಲ್ಲೇ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಾಗುವುದು.
ಕುಂಭ:
ಈ ರಾಶಿಚಕ್ರದ ಜನರು ಪ್ರತಿ ಸೋಮವಾರ ಶಿವನನ್ನು ತೆಂಗಿನ ನೀರು ಅಥವಾ ಸಾಸಿವೆ ಎಣ್ಣೆಯಿಂದ ಅಭಿಷೇಕಿಸಬೇಕು. ಇದು ಅವರಿಗೆ ಹಣ ಗಳಿಸುವಲ್ಲಿ ಪ್ರಯೋಜನವನ್ನು ನೀಡುತ್ತದೆ, ಅಷ್ಟೇ ಅಲ್ಲ, ನಿಮ್ಮೆಲ್ಲಾ ಆಸೆ ಈಡೇರುತ್ತದೆ.
ಮೀನ:
ಈ ರಾಶಿಚಕ್ರದ ಜನರು ಶಿವನನ್ನು ಕೇಸರಿಯನ್ನು ನೀರಿನಲ್ಲಿ ಬೆರೆಸಿ ಅಭಿಷೇಕ ಮಾಡಬೇಕು. ಈ ಪರಿಹಾರದಿಂದ, ಅವರು ಶಿವನ ಪೂರ್ಣ ಆಶೀರ್ವಾದವನ್ನೂ ಪಡೆಯುತ್ತಾರೆ.