Just In
- 3 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 4 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 5 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರಾವಣ ಮಾಸ: ಇಷ್ಟಾರ್ಥ ಸಿದ್ಧಿಗಾಗಿ ಶಿವನಿಗೆ ಯಾವ ಹೂವನ್ನು ಅರ್ಪಿಸಬೇಕು?
ಶ್ರಾವಣ ಮಾಸ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಈ ಶ್ರಾವಣ ತಿಂಗಳು ಶಿವನಿಗೆ ಅತ್ಯಂತ ಪ್ರಿಯ. ಈ ದಿನಗಳಲ್ಲಿ ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ನಮ್ಮ ಇಷ್ಟಾರ್ಥಗಳೆಲ್ಲಾ ನೆರವೇರುತ್ತದೆ ಎಂಬ ನಂಬಿಕೆಯಿದೆ. ಈ ತಿಂಗಳಲ್ಲಿ, ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶಿವನನ್ನು ಪೂಜಿಸಿದರೆ, ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಕೆಯಾಗುವುದು. ಹಾಗಾದರೆ ಈ ಪೂಜೆಗೆ ಯಾವ ಹೂವುಗಳನ್ನು ಬಳಸಬೇಕು, ಶಿವನಿಗೆ ಯಾವ ಹೂವಿನಿಂದ ಪೂಜೆ ಸಲ್ಲಿಸದರೆ ಉತ್ತಮ ಎಂಬ ವಿಚಾರವನ್ನು ಈ ಲೇಖನದಲ್ಲಿ ವಿವರಿಸುತ್ತೇವೆ.
ಶಿವನ ಕೃಪೆಗೆ ಪಾತ್ರರಾಗಲು ಶ್ರಾವಣ ಮಾಸದಂದು ಯಾವ ಹೂವುಗಳಿಂದ ಪೂಜೆ ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಕಮಲ, ಬಿಲ್ಬಪತ್ರೆ ಮತ್ತು ಶಂಖಪುಷ್ಪ:
ಲಕ್ಷ್ಮಿ ಅಂದರೆ ಸಂಪತ್ತನ್ನು ಪಡೆಯಲು ಬಯಸುವ ಶಿವಭಕ್ತನು ದೇವರನ್ನು ಕಮಲ, ಬಿಲ್ವಪತ್ರೆ ಮತ್ತು ಶಂಖಪುಷ್ಪ ಹೂವುಗಳಿಂದ ಪೂಜಿಸಬೇಕು. ಒಂದು ಲಕ್ಷ ಹೂವುಗಳನ್ನು ಬಳಸಿ ಶಿವನ ಆರಾಧನೆ ಮಾಡಿದರೆ, ನಮ್ಮ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ.
ಗರಿಕೆ ಮತ್ತು ಪಾರಿಜಾತ:
ಕದಿಕೆ ಮತ್ತು ಪಾರಿಜಾತ ಹೂವಿನಿಂದ ಶಿವನನ್ನು ಪೂಜಿಸುವುದು ಸಂತೋಷ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ. ಶಿವನಿಗೆ ಕದಿಕೆ ಅರ್ಪಿಸುವುದರಿಂದ ವ್ಯಕ್ತಿಯು ಆರೋಗ್ಯವಾಗಿರುತ್ತಾನೆ. ದೀರ್ಘಾಯುಷ್ಯವನ್ನು ಬಯಸುವ ವ್ಯಕ್ತಿಯು ಶಿವನನ್ನು ಒಂದು ಲಕ್ಷ ಕದಿಕೆಗಳಿಂದ ಪೂಜಿಸಬೇಕು ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ.
ಚೇಪುಲು ಮತ್ತ ಕಣಗಿಲೆ ಹೂವು:
ಈ ಹೂವುಗಳಿಂದ ಶಿವನನ್ನು ಪೂಜಿಸುವುದರಿಂದ ವ್ಯಕ್ತಿಯು ಆಭರಣಗಳನ್ನು ಪಡೆಯುತ್ತಾನೆ. ಅಂತೆಯೇ, ಕಣಗಿಲೆ ಹೂವುಗಳಿಂದ ಪೂಜಿಸುವ ಮೂಲಕ ಒಬ್ಬ ವ್ಯಕ್ತಿಯು ಅತ್ಯುತ್ತಮವಾದ ಬಟ್ಟೆಗಳನ್ನು ಪಡೆಯುತ್ತಾನೆ.
ದುಂಡು ಮಲ್ಲಿಗೆ ಮತ್ತು ಮಲ್ಲಿಗೆ:
ದುಂಡು ಮಲ್ಲಿಗೆಯಿಂದ ಶಿವನನ್ನು ಪೂಜಿಸುವವರು ತಾವು ಬಯಸಿದ ವ್ಯಕ್ತಿಯೊಂದಿಗೆ ಅಥವಾ ಅಪೇಕ್ಷಿತ ವಧು-ವರರ ಜೊತೆ ವಿವಾಹವಾಗಲು ಸಾದ್ಯವಾಗುವುದು. ಜೊತೆಗೆ ಪರಿಮಳಯುಕ್ತ ಮಲ್ಲಿಗೆಯಿಂದ ಶಿವನನ್ನು ಪೂಜಿಸಿದರೆ, ವಾಹನಗಳನ್ನು ಒದಗಿಸುತ್ತಾನೆ.
ಶಮಿ ಮತ್ತು ಸಣ್ಣ ಮಲ್ಲಿಗೆ:
ಶಿವನನ್ನು ಶಮಿಪತ್ರೆಯಿಂದ ಪೂಜಿಸುವುದರಿಂದ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ. ಶಮಿಯು ವಿಷ್ಣುವಿಗೆ ಪ್ರಿಯವಾದ ವಸ್ತುವಾಗಿದೆ. ಈ ಮರದ ಹೂವುಗಳನ್ನು ಶಿವನಿಗೆ ಅರ್ಪಿಸಿದರೆ, ಆ ವ್ಯಕ್ತಿ ಮೋಕ್ಷವನ್ನು ಪಡೆಯುತ್ತಾನೆ. ಶಿವನನ್ನು ಸಣ್ಣ ಮಲ್ಲಿಗೆಯಿಂದ ಪೂಜಿಸಿದರೆ, ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಉಂಟಾಗುವುದಿಲ್ಲ.
ಎಕ್ಕದ ಹೂವು ಹಾಗೂ ಉಮ್ಮತ್ತಿ ಹೂವು:
ಶಿವನಿಗೆ ಎಕ್ಕದ ಹೂವುಗಳನ್ನು ಅರ್ಪಿಸುವುದರಿಂದ ವ್ಯಕ್ತಿಯ ಕಣ್ಣು ಮತ್ತು ಹೃದಯ ಆರೋಗ್ಯಕರವಾಗಿರುತ್ತದೆ. ಜೊತೆಗೆ ಉಮ್ಮತ್ತಿ ಹೂವಿನಿಂದ ಪೂಜಿಸುವುದರಿಂದ ವಿಷಕಾರಿ ಜೀವಿಗಳಿಂದ ಯಾವುದೇ ಅಪಾಯ ಆಗುವುದಿಲ್ಲ.