Just In
- 44 min ago ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- 3 hrs ago ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- 4 hrs ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 4 hrs ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
Don't Miss
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Movies Yuva Review : ಕ್ಲಾಸ್-ಮಾಸ್; ಸ್ಯಾಂಡಲ್ವುಡ್ನ ಹೊಸ ಪರ್ವ ಈ ಯುವ, ಹೇಗಿದೆ ದೊಡ್ಮನೆ ಕುಡಿಯ ಅಬ್ಬರ?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶರದ್ ಪೂರ್ಣಿಮಾ 2021: ಸಂತೋಷ-ಸಂಪತ್ತು ವೃದ್ಧಿಗಾಗಿ ಲಕ್ಷ್ಮಿದೇವಿಯನ್ನು ಈ ರೀತಿ ಪೂಜಿಸಿ
ಇದೇ ಅಕ್ಟೋಬರ್ 19ರಂದು ಶರದ್ ಪೂರ್ಣಿಮಾ. ಪ್ರತಿ ತಿಂಗಳ ಹುಣ್ಣಿಮೆಯು ಮಂಗಳಕರವೆಂದು ಪರಿಗಣಿಸಲಾಗಿದ್ದರೂ, ವರ್ಷದ ಕೆಲವು ಹುಣ್ಣಿಮೆಗಳು ಅತ್ಯಂತ ಮಂಗಳಕರ ಮತ್ತು ಸಮೃದ್ಧವೆನಿಸಿಕೊಂಡಿವೆ. ಅಂತಹುಗಳಲ್ಲಿ ಒಂದು ಈ ಶರದ್ ಪೂರ್ಣಿಮಾ.
ಅಶ್ವಿನ್ ತಿಂಗಳಲ್ಲಿ ಬರುವ ಹುಣ್ಣಿಮೆಯನ್ನು ಶರದ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ಪೂಜೆ ಹಾಗೂ ಚಂದ್ರನ ಪೂಜೆಗೆ ಪ್ರಾಶಸ್ತ್ಯವಾದ ಈ ಹುಣ್ಣಿಮೆಯನ್ನು ಶ್ರೀಮಂತ ಹುಣ್ಣಿಮೆಯೆಂದು ಪರಿಗಣಿಸಲಾಗಿದ್ದು, ಈ ದಿನ ಆಕಾಶದಿಂದ ಅಮೃತ ಮಳೆ ಬೀಳುವುದು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುವುದು ಎಂದು ನಂಬಿಕೆಯಿದೆ. ಜತೆಗೆ ಚಳಿಗಾಲದ ಆರಂಭವನ್ನು ಈ ಹುಣ್ಣಿಮೆಯು ಸೂಚಿಸುತ್ತದೆ. ಇಷ್ಟು ಮಹತ್ವವಾಗಿರುವ ಈ ಈ ದಿನದ ಮಹತ್ವ, ಪೂಜಾ ವಿಧಾನ ಮತ್ತು ಶುಭ ಮುಹೂರ್ತಗಳ ಬಗ್ಗೆ ಇಲ್ಲಿ ನೋಡೋಣ.
ಶರದ್ ಪೂರ್ಣಿಮಾ 2021ರ ಶುಭ ಮುಹೂರ್ತ:
ಶರದ್ ಪೂರ್ಣಿಮಾ ದಿನಾಂಕ 2021 ರ ಅಕ್ಟೋಬರ್ 19, ಮಂಗಳವಾರ
ಪೂರ್ಣಿಮಾ ತಿಥಿ ಆರಂಭ: ಅಕ್ಟೋಬರ್ 19 ರಂದು ಸಂಜೆ 7 ಗಂಟೆಯಿಂದ
ಪೂರ್ಣಿಮಾ ತಿಥಿ ಅಂತ್ಯ: ಅಕ್ಟೋಬರ್ 20 ರಂದು ರಾತ್ರಿ 8.20 ರವರೆಗೆ
ಶರದ್ ಪೂರ್ಣಿಮಾ ಪೂಜಾವಿಧಾನ:
- ಶರದ್ ಪೂರ್ಣಿಮಾ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಇದು ಸಾಧ್ಯವಾಗದಿದ್ದರೆ, ಮನೆಯಲ್ಲಿ ಗಂಗಾಜಲವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
- ಮರದ ಹಲಗೆ ಅಥವಾ ಪೀಠದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ ಮತ್ತು ಗಂಗಾಜಲದಿಂದ ಆ ಸ್ಥಳವನ್ನು ಪವಿತ್ರಗೊಳಿಸಿ.
- ಈ ಪೀಠದ ಮೇಲೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಸ್ಥಾಪಿಸಿ ಮತ್ತು ಕೆಂಪು ಬಟ್ಟೆಯಿಂದ ಅಲಂಕರಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕನ್ನು ಸಂಪತ್ತಿನ ವಲಯವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿಕ್ಕಿನಲ್ಲಿ ಲಕ್ಷ್ಮಿ ಆರಾಧನೆಯು ಉತ್ತಮವಾಗಿದೆ.
- ದೇವಿಗೆ ಧೂಪ, ದೀಪ, ನೈವೇದ್ಯ ಮತ್ತು ವೀಳ್ಯದೆಲೆ ಇತ್ಯಾದಿಗಳನ್ನು ಅರ್ಪಿಸಿ.
- ನಂತರ ಲಕ್ಷ್ಮಿ ದೇವಿಯನ್ನು ಧ್ಯಾನ ಮಾಡಬೇಕು ಮತ್ತು ಪೂಜಿಸಬೇಕು ಜೊತೆಗೆ ಲಕ್ಷ್ಮಿ ಚಾಲೀಸಾವನ್ನು ಪಠಿಸಬೇಕು.
- ಸಂಜೆ ವಿಷ್ಣುವನ್ನು ಪೂಜಿಸಿ ಮತ್ತು ತುಳಸಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಇದರೊಂದಿಗೆ, ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಅದರ ನಂತರ ಅಕ್ಕಿ ಮತ್ತು ಹಸುವಿನ ಹಾಲಿನಿಂದ ಪಾಯಸವನ್ನು ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಡಿ. ಕೆಲವು ಸಮಯಗಳ ನಂತರ ಆ ಪಾಯಾಸವನ್ನು ತಂದು ಮನೆಯ ಸದಸ್ಯರಿಗೆ ಪ್ರಸಾದದ ರೂಪದಲ್ಲಿ ವಿತರಿಸಿ.
- ಈ ದಿನ ಮಾಂಸಾಹಾರ ಮತ್ತು ಮದ್ಯ ಸೇವಿಸಬೇಡಿ, ಇಲ್ಲದಿದ್ದರೆ ನೀವು ಹಣಕಾಸಿನ ತೊಂದರೆಗೆ ಸಿಲುಕಬಹುದು.
- ಹಣದ ವಹಿವಾಟುಗಳನ್ನು ಮಾಡಬೇಡಿ. ಇದು ಹಣದ ನಷ್ಟಕ್ಕೆ ಕಾರಣವಾಗುತ್ತದೆ.
- ಈ ದಿನದಂದು ಬ್ರಹ್ಮಚರ್ಯವನ್ನು ಅನುಸರಿಸಬೇಕು, ಇಲ್ಲದಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತದೆ.
- ಸೂರ್ಯಾಸ್ತದ ಮೊದಲು ದಾನ ಮಾಡಬೇಕೇ ವಿನಃ ಸೂರ್ಯಾಸ್ತದ ನಂತರ ಮಾಡಿದರೆ ಬಡತನ ಬರುತ್ತದೆ.
- ಸೂರ್ಯಾಸ್ತದ ನಂತರ ಮಹಿಳೆಯರು ತಮ್ಮ ಕೂದಲನ್ನು ಬಾಚಿಕೊಳ್ಳಬಾರದು. ಹಾಗೆ ಮಾಡುವುದು ಅಶುಭವೆನಿಸುತ್ತದೆ.
ಲಕ್ಷ್ಮಿ ದೇವಿಯ ಮಂತ್ರ:
''ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ''
ಶರದ್ ಪೂರ್ಣಿಮಾ ಮಹತ್ವ:
ಪೌರಾಣಿಕ ನಂಬಿಕೆಗಳ ಪ್ರಕಾರ, ಶರದ್ ಪೂರ್ಣಿಮೆಯ ದಿನ, ಲಕ್ಷ್ಮಿ ದೇವಿಯು ಸಮುದ್ರ ಮಂಥನದಿಂದ ಜನಿಸಿದಳು ಎಂದು ನಂಬಿಕೆಯಿದೆ. ಆದ್ದರಿಂದ ಈ ದಿನ ಲಕ್ಷ್ಮಿ ದೇವಿಯು ಭೂಮಿಗೆ ಭೇಟಿ ನೀಡುತ್ತಾಳೆ ಮತ್ತು ರಾತ್ರಿ ಭಜನೆ ಮಾಡಿ, ಲಕ್ಷ್ಮಿ ದೇವಿಯನ್ನು ಆವಾಹನೆ ಮಾಡುವವರು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಅನುಗ್ರಹವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ.
ಈ ಹುಣ್ಣಿಮೆಯ ರಾತ್ರಿ, ಇಡೀ ಭೂಮಿಯು ಚಂದ್ರನ ಬೆಳಕಿನಲ್ಲಿ ತೇವವಾಗಿರುತ್ತದೆ ಮತ್ತು ಅಮೃತ ಮಳೆಯಾಗುತ್ತದೆ. ಈ ನಂಬಿಕೆಗಳ ಆಧಾರದ ಮೇಲೆ, ರಾತ್ರಿ ಚಂದ್ರನ ಬೆಳಕಿನಡಿಯಲ್ಲಿ ಖೀರ್ ಅನ್ನು ಇಡುವುದರಿಂದ, ಅದರಲ್ಲಿ ಅಮೃತವು ಸೇರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.