Just In
- 28 min ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 1 hr ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 1 hr ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 1 hr ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಯಿ ಪ್ರೀತಿಗೆ ಯಮನೇ ಸೋತನು, ಸತ್ತಿದ್ದ ಮಗ ಬದುಕಿ ಬಂದ
ಹಲವಾರು ಪವಾಡ ಕತೆಗಳ ಬಗ್ಗೆ ಕೇಳುತ್ತೇವೆ, ಕೆಲವರು ಆ ಪವಾಡಗಳ ಬಗ್ಗೆ ಹೇಳುವಾಗ ಹೀಗೆಲ್ಲಾ ಕೂಡ ನಡೆಯುವುದೇ ಎಂದು ಆಶ್ಚರ್ಯಚಕಿತರಾಗುತ್ತೇವೆ, ಹರಿಯಾಣದ ಒಂದು ಕುಟುಂಬದಲ್ಲಿ ಅಂಥದ್ದೊಂದು ಪವಾಡ ನಡೆದಿದೆ. ಆ ತಾಯಿಯ ಪ್ರೀತಿಗೆ ಯಮನೇ ಸೋತು ಆಕೆಯ ಮಗನನ್ನು ಹಿಂತಿರುಗಿಸಿದ್ದಾನೆ.
ತನ್ನ ಮಗನ ಪಾರ್ಥಿವ ಶರೀರದ ಮುಂದೆ ಕೂತಿರುವ ತಾಯಿಗೆ ಮಗ ಬದುಕಿ ಬರುತ್ತಾನೆ ಎಂಬ ನಂಬಿಕೆ. ಮಗನ ಮೇಲಿದ್ದ ಬಟ್ಟೆ ಸರಿಸಿ,ಮಗನ ಹಣೆಗೆ ಆಗಾಗ ಮುತ್ತಿಕ್ಕುತ್ತಾ ಮರಳಿ ಬಾ...ಮರಳಿ ಬಾ ಎಂದು ಕರೆಯುತ್ತಿದ್ದಳು. ಆದರೆ ಪವಾಡವೆಂಬಂತೆ ಹುಡುಗನ ಶರೀರದಲ್ಲಿ ಚಲನೆ ಕಂಡು ಬಂದಿದೆ, ಕೂಡಲೇ ಆತನ ಬಾಯಿಗೆ ಬಾಯಿಟ್ಟು ತಂದೆ ಉಸಿರು ನೀಡಿದ್ದಾರೆ, ಮತ್ತೊಬ್ಬರು ಹೃದಯ-ಶ್ವಾಸಕೋಶದ ಚೇತರಿಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ, ನಂತರ ಅವನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಈತ ಬದುಕುವ ಸಾಧ್ಯತೆ ಶೇ. 15ರಷ್ಟಿದೆ ಎಂದಿದ್ದಾರೆ. ಆದರೆ ಆ ತಾಯಿಯ ಮಡಿಲು ಬರಿದಾಗಲಿಲ್ಲ, ಹುಡುಗನಲ್ಲಿ ನಿಧಾನಕ್ಕೆ ಚೇತರಿಕೆ ಕಂಡು ಬಂದು ಸಾವನ್ನು ಗೆದ್ದು ಬಂದಿದ್ದಾನೆ.
ಹರಿಯಾಣದ ಜಜ್ಜರ್ ಜಿಲ್ಲೆಯ ಕ್ವಿಲ್ಲಾ ಪ್ರದೇಶದ ಕುನಲ್ ಶರ್ಮರ ಮೊಮ್ಮಗನಿಗೆ ಟೈಫಾಯ್ಡ್ ಬಂದಿತು. ಆತನನ್ನು ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಆತನ ಸಾವಿನ ಸುದ್ದಿಯನ್ನು ತಿಳಿಸಿದರು. ಮಗನ ಪಾರ್ಥೀವ ಶರೀರ ತಗೊಂಡು ಬಹದ್ದೂರ್ಗಢಕ್ಕೆ ಬಂದರು. ಹುಡುಗನ ಅಜ್ಜಿಗೆ ಮೊಮ್ಮಗನ ಕೊನೆಯ ದರ್ಶನ ಮಾಡಿಸಲು ಮಾವನ ಮನೆಯಲ್ಲಿ ಪಾರ್ಥೀವ ಶರೀರ ಇಡಲು ತೀರ್ಮಾನಿಸಿ ತೆಗೆದುಕೊಂಡು ಬಂದಿದ್ದರು.
ದುಃಖದಿಂದ ಆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹುಡುಗನ ತಾಯಿ ಮಗನ ಶವ ಶರೀರ ಹಿಡಿದು ಬಾ ಮಗನೇ.. ಬಾ ಎಂದು ಹಿಡಿದು ಅಲುಗಾಡಿಸಿದಾಗ ಆ ಶರೀರದಲ್ಲಿ ಚಲನೆ ಕಂಡು ಬಂದಿದೆ.
ಕೂಡಲೇ ಹುಡುಗನನ್ನು ಅಲ್ಲಿಂದ ಎತ್ತಿದ ಮನೆಯವರು ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾರಂಭಿಸಿದರು. ಬಾಯಿಗೆ-ಬಾಯಿಟ್ಟು ಊದಿದರು, ಆತನ ಎದೆಗೆ ಮೆಲ್ಲನೆ ಗುದ್ದಿ ಹೃದಯ ಬಡಿಯುವಂತೆ ಮಾಡಿದರು, ನಂತರ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯದ್ದರು. ಆಗಲೂ ಹುಡುಗ ಬದುಕುವ ಸಾಧ್ಯತೆ ತುಂಬಾನೆ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದರು. ತಾಯಿಗೆ ಮಗ ಬಂದೇ ಬರುತ್ತಾನೆ ಎಂಬ ನಂಬಿಕೆ ಇತ್ತು, ಆ ತಾಯಿಯ ನಂಬಿಕೆ ಹುಸಿಯಾಗಲಿಲ್ಲ, ಹುಡುಗ ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದಾನೆ.
ಹೀಗೆ ಹುಡುಗ ಯಮನನ್ನೇ ಗೆದ್ದು ತಾಯಿ ಮಡಿಲು ಸೇರಿ ಪವಾಡಕ್ಕೆ ಕಾರಣನಾಗಿದ್ದಾನೆ.