Just In
- 3 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 11 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 12 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 12 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುರ್ಗಾ ವಿಸರ್ಜನೆ 2021: ದಿನಾಂಕ, ಶುಭಮುಹೂರ್ತ, ವಿಧಿವಿಧಾನ ಹಾಗೂ ಮಹತ್ವದ ಸಂಪೂರ್ಣ ಮಾಹಿತಿ
ಒಂಬತ್ತು ದಿನಗಳ ನವರಾತ್ರಿ ಸಂಭ್ರಮದ ಅಂತಿಮ ಘಟ್ಟವೇ ದುರ್ಗಾ ವಿಸರ್ಜನೆ. ದುರ್ಗಾದೇವಿಯ ಆಶೀರ್ವಾದಕ್ಕಾಗಿ ಸತತ ಒಂಬತ್ತು ದಿನಗಳ ಕಾಲ ಆಕೆಯನ್ನು ಆರಾಧಿಸಿ, ಕೊನೆಯದಾಗಿ, ಆ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಅಂತಿಮಗೊಳ್ಳುತ್ತದೆ. ಇದು ವಿಜಯದಶಮಿಯಂದು ಬೆಳಗ್ಗ ಅಥವಾ ಮಧ್ಯಾಹ್ನ ನೆರವೇರಿಸಲಾಗುವುದು.
ಈ ವರ್ಷ, ದುರ್ಗಾ ವಿಸರ್ಜನೆಯು ಅಕ್ಟೋಬರ್ 15ರಂದು ಬಂದಿದ್ದು, ಅದರ ವಿಧಿವಿಧಾನ, ಆಚರಣೆಗಳು ಹೇಗಿರಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ದುರ್ಗಾವಿಸರ್ಜನೆಗೆ ಶುಭಮುಹೂರ್ತ:
ನವರಾತ್ರಿಯ ದಶಮಿ ಅಥವಾ ನವಮಿಯ ದಿನ ದುರ್ಗಾವಿಸರ್ಜನೆಗೆ ಅತ್ಯಂತ ಶುಭಕರವಾಗಿದೆ. ಸಾಮಾನ್ಯವಾಗಿ ಇದನ್ನು ಮುಂಜಾನೆ ನಡೆಸಲಾಗುತ್ತದೆ ಆದರೆ ಶುಭ ಮುಹೂರ್ತದ ಪ್ರಕಾರ ದುರ್ಗಾ ವಿಸರ್ಜನೆಯನ್ನು ಸಂಜೆಯ ಸಮಯದಲ್ಲಿ ಕೂಡ ನಡೆಸಬಹುದು. ವಿಸರ್ಜನೆಯ ಶುಭ ಸಮಯವು ಅಕ್ಟೋಬರ್ 15 ರಂದು ಬೆಳಿಗ್ಗೆ 6.22 ರಿಂದ ಆರಂಭವಾಗಿ, 8.40 ಕ್ಕೆ ಕೊನೆಗೊಳ್ಳುತ್ತದೆ. ದುರ್ಗಾ ವಿಸರ್ಜನೆಯ ಅವಧಿ ಕೇವಲ 2 ಗಂಟೆ 18 ನಿಮಿಷಗಳು.
ದುರ್ಗಾ ವಿಸರ್ಜನೆಯ ಆಚರಣೆಗಳು:
ಈ ದಿನ, ದುರ್ಗಾ ದೇವಿಯು ತನ್ನ ಆಧ್ಯಾತ್ಮಿಕ ನಿವಾಸವಾದ ಕೈಲಾಸ ಪರ್ವತಕ್ಕೆ ಹಿಂದಿರುಗುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಆಚರಣೆಗೆ ಬಹಳ ಮಹತ್ವವಿದ್ದು, ಸಂಪೂರ್ಣ ವಿಧಿವಿಧಾನಗಳ ಮೂಲಕ ನೆರವೇರಿಸಲಾಗುತ್ತದೆ. ಅವುಗಳೆಂದರೆ:
- ಕನ್ಯಾ ಪೂಜೆಯ ನಂತರ, ಅಂಗೈಯಲ್ಲಿ ಹೂವು ಮತ್ತು ಅಕ್ಷತೆಯನ್ನು ತೆಗೆದುಕೊಂಡು ಪ್ರತಿಜ್ಞೆಯನ್ನು ಮಾಡಿ.
- ಪಾತ್ರೆಯಲ್ಲಿ ಇಟ್ಟಿರುವ ತೆಂಗಿನಕಾಯಿ, ವೀಳ್ಯದೆಲೆಯನ್ನು ಪ್ರಸಾದವೆಂದು ಭಾವಿಸಿ ಕುಟುಂಬಕ್ಕೆ ನೀಡಿ.
- ಧಾರಕದ ಪವಿತ್ರ ನೀರನ್ನು ಇಡೀ ಮನೆಯಲ್ಲಿ ಸಿಂಪಡಿಸಿ, ಇಡೀ ಕುಟುಂಬವು ಅದನ್ನು ಪ್ರಸಾದವಾಗಿ ಸೇವಿಸಬೇಕು.
- ದುರ್ಗಾಮಾತೆಯನ್ನು ಸಿಂಹಾಸನದಿಂದ ಇಳಿಸಿ, ಮನೆಯ ಚೌಕಿಯಲ್ಲಿಡಿ.
- ಆ ಸಿಂಹಾಸನ ಅಥವಾ ದೇವಿ ಇಟ್ಟಿದ ಜಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಿ.
- ಎಲ್ಲಾ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ನೈವೇದ್ಯವಾಗಿ ವಿತರಿಸಿ.
- ಕೊನೆಯದಾಗಿ, ದುರ್ಗಾ ವಿಗ್ರಹ ಅಥವಾ ಫೋಟೋದ ಮುಂದೆ ತಲೆಬಾಗಿ ಆಕೆಯ ಆಶೀರ್ವಾದ ಪಡೆಯಿರಿ. ನಂತರ, ನದಿ, ಸರೋವರ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡಿ.
- ವಿಸರ್ಜನೆಯ ನಂತರ ಬ್ರಾಹ್ಮಣರಿಗೆ ತೆಂಗಿನಕಾಯಿ, ದಕ್ಷಿಣ ಮತ್ತು ಚೌಕಿಯ ಬಟ್ಟೆಗಳನ್ನು ನೀಡಿ.
- ನದಿಯಲ್ಲಿ ಅಥವಾ ಸರೋವರದಲ್ಲಿ ವಿಸರ್ಜನೆ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ತಾಯಿಯ ಪ್ರತಿಮೆಯನ್ನು ಪೂರ್ಣ ನಂಬಿಕೆಯಿಂದ ಮುಳುಗಿಸಿ. ಎಲ್ಲಾ ಪೂಜಾ ಸಾಮಾಗ್ರಿಗಳನ್ನು ಸಹ ಪವಿತ್ರ ನೀರಿನಲ್ಲಿ ಮುಳುಗಿಸಬೇಕು.
- ಮೂರ್ತಿಯನ್ನು ವಿಸರ್ಜನೆಗಾಗಿ ತೆಗೆದುಕೊಂಡು ಹೋಗುವಾಗಅವಳನ್ನು ಕರೆತಂದ ರೀತಿಯಲ್ಲಿಯೇ ನೋಡಿಕೊಳ್ಳಿ. ವಿಸರ್ಜನೆಯ ಮೊದಲು ದೈವಿಕ ದುರ್ಗಾ ಮೂರ್ತಿಗೆ ಯಾವುದೇ ಹಾನಿ ಉಂಟಾಗಬಾರದು. ವಿಸರ್ಜನೆಗೆ ಮುನ್ನ ಸರಿಯಾದ ಆರತಿಯನ್ನು ಮಾಡಬೇಕು.
- ಆರತಿಯನ್ನು ದುರ್ಗಾಳ ಆಶೀರ್ವಾದವಾಗಿ ಮತ್ತು ಶುದ್ಧ ಪ್ರಸಾದವಾಗಿ ಸ್ವೀಕರಿಸಬೇಕು.
ವಿಸರ್ಜನೆ ಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ:
ದುರ್ಗಾ ವಿಸರ್ಜನೆಯ ಮಹತ್ವ:
ಹಿಂದೂ ಸಂಪ್ರದಾಯದಲ್ಲಿ ವಿಸರ್ಜನಗೆ ವಿಶೇಷ ಮಹತ್ವವಿದೆ. ವಿಸರ್ಜನೆ ಎಂದರೆ ಪರಿಪೂರ್ಣತೆ, ಜೀವನದ ಪರಿಪೂರ್ಣತೆ, ಆಧ್ಯಾತ್ಮಿಕ ಧ್ಯಾನ ಅಥವಾ ಪ್ರಕೃತಿ. ಒಂದು ಘಟಕವು ಪೂರ್ಣಗೊಂಡಾಗ, ಅದನ್ನು ಅಗತ್ಯವಾಗಿ ಮುಳುಗಿಸಬೇಕು ಅಥವಾ ವಿಸರ್ಜನೆ ಮಾಡಬೇಕು. ಈ ವಿಸರ್ಜನೆಯಿ ನವರಾತ್ರಿಯ ಒಂಬತ್ತು ದಿನಗಳು ಒಂದು ರೂಪವನ್ನು ಪೂಜಿಸುವುದಕ್ಕೆ ನಮ್ಮನ್ನು ಸೀಮಿತಗೊಳಿಸಬಾರದು ಎಂಬ ಅಂಶವನ್ನು ಸಂಕೇತಿಸುತ್ತದೆ. ತಾಯಿ ದುರ್ಗಾ ಯಾವುದೇ ರೂಪದಲ್ಲಾದರೂ ಇರಬಹುದು. ಆದರೆ, ಆಕೆಯನ್ನು ಪೂಜಿಸುವ ಆತ್ಮ ಪರಿಶುದ್ಧವಾಗಿರಬೇಕು. ಮುಕ್ತ ಮನಸ್ಸಿನಿಂದ ತಾಯಿಯನ್ನು ಪೂಜಿಸಿದರೆ, ಆಕೆ ಒಲಿಯುತ್ತಾಳೆ. ಆದ್ದರಿಂದ ದುರ್ಗಾ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು.
ಜೊತೆಗೆ ಹೆಣ್ಣುಮಕ್ಕಳು ನವರಾತ್ರಿಯಂದು ತಮ್ಮ ಅತ್ತೆಯ ಮನೆಯಿಂದ ತಾಯಿಯ ಮನೆಗೆ ಬರುತ್ತಾರೆ ಒಂಬತ್ತು ದಿನಗಳ ನಂತರ ತಮ್ಮ ಅತ್ತೆಯ ಮನೆಗೆ ಮರಳುತ್ತಾರೆ. ಅದೇ ರೀತಿಯಲ್ಲಿ, ತಾಯಿ ದುರ್ಗಾ ಕೂಡ ತನ್ನ ತಾಯಿಯ ಮನೆಗೆ ಅಂದರೆ ಈ ಭೂಮಿಗೆ ಬರುತ್ತಾಳೆ ಮತ್ತು 9 ದಿನಗಳ ನಂತರ ತನ್ನ ಮನೆಗೆ ಅಂದರೆ ಶಿವನ ಕೈಲಾಸ ಪರ್ವತಕ್ಕೆ ತಾಯಿ ಪಾರ್ವತಿಯ ರೂಪದಲ್ಲಿ ಹೋಗುತ್ತಾಳೆ ಎಂಬ ನಂಬಿಕೆಯಿದೆ. ಅದು ವಿಸರ್ಜನೆಯ ಬಳಿಕ ಎಂಬ ನಂಬಿಕೆಯಿದೆ.