Just In
- 24 min ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 3 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 12 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 12 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
Don't Miss
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೃಷ್ಣ ಜನ್ಮಾಷ್ಟಮಿ 2021: ಬಾಲಗೋಪಾಲನ ಸಂಪೂರ್ಣ ಕೃಪೆಗಾಗಿ ಆತನನ್ನು ಈ ರೀತಿ ಪೂಜಿಸಿ
ಇದೇ ಬರುವ ಆಗಸ್ಟ್ 30ರಂದು ಗೋಕುಲಾಂದನ ಜನ್ಮದಿನ, ಅಂದರೆ ಶ್ರೀಕೃಷ್ಣಜನ್ಮಾಷ್ಟಮಿ. ವಿಷ್ಣುವಿನ ಪ್ರಮುಖ ಅವತಾರಗಳಲ್ಲಿ ಒಂದಾದ, ಕೃಷ್ಣಾವತಾರವು, ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಬಹಳ ಶ್ರದ್ಧೆ, ಪ್ರೀತಿ, ಗೌರವದಿಂದ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗುತ್ತದೆ.
ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಗೆ ಜನ್ಮವೆತ್ತಿದ ಗೋಕುಲಾಂದನ ಸಿದ್ಧಿಗಾಗಿ, ಆತನ ಪೂಜೆಯನ್ನು ಮನೆಯಲ್ಲಿ ಹೇಗೆ ಸರಳವಾಗಿ ಮಾಡಬಹುದು? ಅದಕ್ಕೆ ಬೇಕಾಗಿರುವ ಪೂಜಾಸಾಮಾಗ್ರಿಗಳಾವುವು? ಕೃಷ್ಣನ ಪೂಜಾಮಂತ್ರ ಎಲ್ಲವನ್ನೂ ಈ ಲೇಖನದಲ್ಲಿ ನೀಡಲಾಗಿದೆ. ಇವುಗಳನ್ನು ಅನುಸರಿಸಿ, ನೀವೂ ಕೃಷ್ಣನ ಕೃಪೆಗೆ ಪಾತ್ರರಾಗಿ.
ಬಾಲ ಗೋಪಾಲನ ಪೂಜೆಗೆ ಅಗತ್ಯವಾದ ಸಾಮಾಗ್ರಿಗಳು:
ದೊಡ್ಡ ಮಡಕೆ, ತಾಮ್ರದ ಮಡಕೆ, ಕಲಶ, ಹಾಲು, ಬಟ್ಟೆ, ಆಭರಣ, ಅಕ್ಕಿ, ಕುಂಕುಮ, ದೀಪ, ಎಣ್ಣೆ, ಹತ್ತಿ, ಧೂಪದ ಕಡ್ಡಿಗಳು, ಹೂವು, ಅಷ್ಟಗಂಧ, ತುಳಸಿ, ಎಳ್ಳು, ಜೇನು, ಹಣ್ಣು, ಸಿಹಿತಿಂಡಿಗಳು, ತೆಂಗಿನಕಾಯಿ, ಪಂಚಾಮೃತ, ಒಣ ಹಣ್ಣುಗಳು, ವೀಳ್ಯದೆಲೆ, ಖೀರ್, ಹಾಲು ಮತ್ತು ಹಾಲಿನ ಉತ್ಪನ್ನಗಳು.
ಪೂಜಾ ಮುಹೂರ್ತ:
ನಿಶಿತಾ ಕಾಲ ಮುಹೂರ್ತ: ರಾತ್ರಿ 11:59ರಿಂದ 12:44ರವರೆಗೆ
ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 29, 2021 ರಾತ್ರಿ 11:25ರವರೆಗೆ
ಅಷ್ಟಮಿ ತಿಥಿ ಮುಕ್ತಾಯ: ಆಗಸ್ಟ್ 30 ರಾತ್ರಿ 01:59ರವರೆಗೆ
ಮುರಾರಿಯ ಪೂಜಾವಿಧಾನ:
- ಬೆಳಿಗ್ಗೆ ಬೇಗನೆ ಎದ್ದು ಪೂಜೆಗೆ ವ್ಯವಸ್ಥೆ ಮಾಡಿ. ಮೊದಲು ಗಣೇಶನನ್ನು ಪೂಜಿಸಿ. ಗಣೇಶನಿಗೆ ಅಭಿಷೇಕ ಮಾಡಿ, ಹೂವುಗಳಿಂದ ಅಲಂಕರಿಸಿ, ಅಕ್ಕಿಯನ್ನು ನೀಡಿ.
- ತದನಂತರ ಕೃಷ್ಣ ಪೂಜೆ. ಕೃಷ್ಣನ ಮೂರ್ತಿಯನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಮೂರ್ತಿಯನ್ನು ಹಳದಿ ಮತ್ತು ನೀಲಿ ಬಣ್ಣಗಳಿಂದ ಅಲಂಕರಿಸುವುದು ಅತ್ಯಗತ್ಯ. ಏಕೆಂದರೆ ಇದು ಅವರಿಗೆ ಅದೃಷ್ಟ ಮತ್ತು ಶಾಂತಿಯನ್ನು ತರಬಹುದು.
- ಮೊದಲು ಶುದ್ಧ ನೀರಿನಿಂದ ಕೃಷ್ಣನಿಗೆ ಸ್ನಾನ ಮಾಡಿಸಿ, ನಂತರ ಜೇನು, ಸಕ್ಕರೆ, ಹಾಲು, ಮೊಸರು, ತುಪ್ಪ ಮತ್ತು ಗಂಗಾಜಲದ ಮಿಶ್ರಣವಾಗಿರುವ ಪಂಚಾಮೃತದಿಂದ ಅಭಿಷೇಕ ಮಾಡಿ, ನಂತರ ಶುದ್ಧ ನೀರನ್ನು ಅರ್ಪಿಸಿ.
- ಅದರ ನಂತರ ಕೃಷ್ಣನಿಗೆ ಬಟ್ಟೆಗಳನ್ನು ಧರಿಸಿ, ಆಭರಣಗಳಿಂದ ಅಲಂಕರಿಸಿ.
- ಹೂವು, ಹಣ್ಣು, ಸಿಹಿತಿಂಡಿಗಳು, ಜೇನು, ತೆಂಗಿನಕಾಯಿ, ಪಂಚಾಮೃತ, ಡ್ರೈ ಫ್ರೂಟ್ಸ್, ವೀಳ್ಯದೆಲೆ, ಖೀರ್, ಲಡ್ಡು, ಹಾಲು, ಹಾಲಿನ ಉತ್ಪನ್ನಗಳು ಸೇರಿದಂತೆ ಇತರ ಪೂಜಾ ಸಾಮಗ್ರಿಗಳನ್ನು ಕೃಷ್ಣನ ಮುಂದಿಟ್ಟು, ತಿಲಕವನ್ನಿಟ್ಟು, ಧೂಪ ಹಾಕಿರಿ.
- ತುಳಸಿ ಎಲೆಗಳ ಸಹಾಯದಿಂದ ಬೆಣ್ಣೆ ಮತ್ತು ಸಕ್ಕರೆ ಮಿಶ್ರಣವನ್ನು ಕೃಷ್ಣನಿಗೆ ಅರ್ಪಿಸುತ್ತಾ, ಕೃಷ್ಣನ ಮಂತ್ರವನ್ನು 108 ಬಾರಿ ಜಪಿಸಿ.
- ಕೊನೆಯದಾಗಿ ಆರತಿ ಬೆಳಗಿ, ಪ್ರದಕ್ಷಿಣೆ ಹಾಕಿ, ಪೂಜೆಯಲ್ಲಿ ಉದ್ದೇಶಪೂರ್ವಕವಲ್ಲದ ತಪ್ಪಿಗೆ ಕ್ಷಮೆ ಕೇಳಿ.
- ಇದರ ನಂತರ, ಇತರ ಭಕ್ತರಿಗೆ ಪ್ರಸಾದವನ್ನು ವಿತರಿಸಿ, ನೀವೂ ಪ್ರಸಾದವನ್ನು ತೆಗೆದುಕೊಳ್ಳಿ.
- ನೀವು ಉಪವಾಸ ಮಾಡುತ್ತಿದ್ದರೆ, ಜನ್ಮಾಷ್ಟಮಿಯ ದಿನ ಯಾವುದೇ ಧಾನ್ಯಗಳನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ.
ಕೃಷ್ಣ ಜನ್ಮಾಷ್ಟಮಿಯಂದು ಪಠಿಸಬೇಕಾದ ಮಂತ್ರ:
ಹರೇ ಕೃಷ್ಣ, ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ರಾಮ ಹರೇ ಹರೇ
ಅಥವಾ
ರಾಧೆ ಕೃಷ್ಣ ರಾಧೆ ಕೃಷ್ಣ
ಕೃಷ್ಣ ಕೃಷ್ಣ ರಾಧೆ ರಾಧೆ
ಮೇಲಿನ ಎಲ್ಲಾ ಆಚರಣೆಗಳನ್ನು ಮಾಡಿದರೆ, ಶ್ರೀಕೃಷ್ಣ ನಿಮ್ಮೆಲ್ಲಾ ಕಷ್ಟಗಳನ್ನು ದೂರಮಾಡಿ, ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧೀಯಿಂದ ಕೂಡಿರುವಂತೆ ಮಾಡುತ್ತಾನೆ. ಆದರೆ ಇಲ್ಲಿ ಶ್ರದ್ಧೆ ಹಾಗೂ ಭಕ್ತಿ ತುಂಬಾ ಮುಖ್ಯ. ಕೃಷ್ಣಂ ವಂದೇ ಜಗದ್ಗುರುಂ..