Just In
Don't Miss
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದೂ ಧರ್ಮದ ಪ್ರಕಾರ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು, ಯಾವುದು ಶುಭಕರ?
ಹಿಂದೂ ಸಂಪ್ರದಾಯದಲ್ಲಿನ ಪ್ರತಿಯೊಂದು ಅಚರಣೆಗೂ ಒಂದು ಅರ್ಥ ಇದ್ದೇ ಇರುತ್ತದೆ. ಆದರೆ ನಾವು ಇಂದು ಕಾಲಮಾನ ಬದಲಾದಂತೆ ಪಾಶ್ಚಾತ್ಯೀಕರಣಕ್ಕೆಮಾಡುಹೋಗಿ ಕೆಲವು ಆಚರಣೆಗಳನ್ನು ಬಿಡುತ್ತಾ ಬಂದಿದ್ದೇವೆ ಅಥವಾ ಆಚರಣೆಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾ ಬಂದಿದ್ದೇವೆ.
ಅಂಥಾ ಆಚರಣೆಗಳಲ್ಲಿ ಮುಖ್ಯವಾದ ಒಂದು ಆಚರಣೆ ಹುಟ್ಟು ಹಬ್ಬ ಅಥವಾ ಜನ್ಮದಿನ.
ಹಿಂದೂ ಸಂಪ್ರದಾಯದಲ್ಲಿ ನಾವು ಹುಟ್ಟಿನ ಘಳಿಗೆಗೆ ಬಹಳ ಅಮೂಲ್ಯ ಅರ್ಥ ನೀಡಲಾಗಿದೆ. ಹುಟ್ಟಿನ ಸಮಯದಲ್ಲಿ ಚಂದ್ರನ ಸ್ಥಾನ ಮುಖ್ಯವಾಗುತ್ತದೆ. ಇದನ್ನು ಆಧರಿಸಿ ಜ್ಯೋತಿಶಾಸ್ತ್ರದ ಪ್ರಕಾರ ನಮ್ಮ ಭವಿಷ್ಯ ಹೇಳಲಾಗುತ್ತದೆ.
ಇಂದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ತಿಥಿಯ ಪ್ರಕಾರ (ಹಿಂದೂ ಪಂಚಾಂಗದ ಪ್ರಕಾರ ಚಂದ್ರನ ದಿನ) ಜನ್ಮದಿನಗಳನ್ನು ಆಚರಿಸುವುದು ಹೆಚ್ಚು ಮಂಗಳಕರ ಮತ್ತು ಆಧ್ಯಾತ್ಮಿಕವಾಗಿ ಪ್ರಯೋಜನಕಾರಿಯಾಗಿದೆ. ತಿಥಿಯ ಪ್ರಕಾರ ಹುಟ್ಟುಹಬ್ಬವನ್ನು ಆಚರಿಸುವ ಆಧ್ಯಾತ್ಮಿಕ ಮಹತ್ವವನ್ನು ನಾವು ತಿಳಿದುಕೊಳ್ಳೋಣ.
1. ಪಾಶ್ಚಾತ್ಯ ಸಂಸ್ಕೃತಿಯಂತೆ ಇಂದು ಹುಟ್ಟು ಹಬ್ಬವನ್ನು ನಾವು ಹೇಗೆ ಆಚರಿಸುತ್ತಿದ್ದೇವೆ?
ಹುಟ್ಟಿದ ದಿನ ಎಂದರೆ ಎಲ್ಲರಿಗೂ ಸಂಭ್ರಮದ ದಿನ. ಹಿಂದೆ ಗುರು ಹಿರಿಯರ, ದೇವರ ಆಶೀರ್ವಾದವನ್ನು ಪಡೆಯುವ ದಿನವಾಗಿದ್ದ ಹುಟ್ಟಿದ ದಿನ, ಇಂದು ವಿದೇಶ ಸಂಸ್ಕೃತಿಯಲ್ಲಿ ಕೊಚ್ಚಿಹೋಗಿದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ಇಂದು ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತಾರೆ ನೋಡೋಣ:
ದಿನವಿಡೀ ಏನೇನು ಮಾಡಬೇಕು ಎಂದು ಅನೇಕ ದಿನಗಳ ಹಿಂದೆ ನಿಯೋಜನೆ ಮಾಡುತ್ತೇವೆ. ಆಪ್ತೇಷ್ಟರನ್ನು ಆಮಂತ್ರಿಸುತ್ತೇವೆ. ತನ್ನ ಮಗುವಿಗೆ ಯಾವ ಕಾರ್ಟೂನ್ ಇಷ್ಟವಾಗುತ್ತದೆ ಎಂದು ಸೂಕ್ಷ್ಮವಾಗಿ ಗಮನಿಸಿ, ಡೋರೆಮಾನ್, ಪೋಕಿಮ್ಯಾನ್, ಆನ್ಯಾ, ಬೆಲ್ಲಾ, ಹನುಮಾನ್ ಹೀಗೆ ಅವರಿಗೆ ಇಷ್ಟವಾಗುವ ಕೇಕ್ ಗಳನ್ನು ಹುಟ್ಟಹಬ್ಬದಂದು ತರುತ್ತೇವೆ. ಹುಟ್ಟಿದ ದಿನ ಎಲ್ಲರೂ ಸೇರಿ ಮೇಣದ ಬತ್ತಿಗಳನ್ನು ಆರಿಸಿ, ಕೇಕ್ ಕತ್ತರಿಸುವಾಗ ‘happy birthday to you' ಎಂದು ಹಾಡು ಶುಭಕೋರುತ್ತಾರೆ. ಅದಾದ ನಂತರ ಸಂಗೀತ, ನೃತ್ಯ, ಜಾದೂ, ವಿಚಿತ್ರ ಆಟಗಳ ಮಧ್ಯದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ನಿಜವಾದ ಅರ್ಥವನ್ನು ಮರೆತುಹೋಗುತ್ತಾರೆ.
ಆದರೆ ನಮ್ಮ ಹಿಂದೂ ಪರಂಪರೆಯ ಪ್ರಕಾರ ನಮ್ಮ ಹುಟ್ಟುಹಬ್ಬವನ್ನು ಜನ್ಮ ತಿಥಿಗನುಸಾರ ಆಚರಿಸುವುದು ಉತ್ತಮ ಆಚರಣೆ. ಹಿಂದೂ ಸಂಸ್ಕೃತಿಯಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಆಚರಣೆಯಂತೆ, ಹುಟ್ಟು ಹಬ್ಬದಂದು ಕೂಡ ಕೆಲವು ಶುಭ ಕೆಲಸಗಳನ್ನು ಮಾಡಬೇಕು. ನಮ್ಮ ಭಾರತೀಯ ಸಂಸ್ಕೃತಿಯಂತೆ ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ ಹೇಗೆ ಮುಂದೆ ತಿಳಿದುಕೊಳ್ಳೋಣ ಬನ್ನಿ.
2. ಹುಟ್ಟು ಹಬ್ಬವನ್ನು ಆಚರಿಸುವ ಯೋಗ್ಯ ಪದ್ಧತಿ
1. ಹುಟ್ಟು ಹಬ್ಬದ ದಿನ ಅಭ್ಯಂಗ ಸ್ನಾನ (ಎಣ್ಣೆಯನ್ನು ಹಚ್ಚಿ ತಲೆಗೆ ಸ್ನಾನ) ಮಾಡಿ ಹೊಸ ಬಟ್ಟೆಗಳನ್ನು ಧರಿಸಬೇಕು.
2. ಅಪ್ಪ-ಅಮ್ಮ ಮತ್ತು ಮನೆಯ ಎಲ್ಲಾ ಹಿರಿಯ ವ್ಯಕ್ತಿಗಳಿಗೆ ನಮಸ್ಕರಿಸಬೇಕು.
3. ಕುಲದೇವರಿಗೆ ಭಕ್ತಿ ಭಾವದಿಂದ ಪೂಜೆಯನ್ನು ಮಾಡಬೇಕು ಮತ್ತು ಸಾಧ್ಯವಿದ್ದರೆ ದೇವರಿಗೆ ಅಭಿಷೇಕ ಮಾಡಬೇಕು.
4. ಕುಲದೇವರ ನಾಮಜಪವನ್ನು ಕಡಿಮೆ ಎಂದರೆ 4 ಮಾಲೆಯಷ್ಟಾದರೂ ಮಾಡಬೇಕು.
5. ಯಾರ ಹುಟ್ಟುಹಬ್ಬವಿರುತ್ತದೆಯೋ, ಅವರ ಆರತಿಯನ್ನು ತುಪ್ಪದ ದೀಪದಿಂದ ಮಾಡಬೇಕು.
6. ಆರತಿ ಮಾಡಿದ ನಂತರ ಮನೆದೇವರನ್ನು ಸ್ಮರಿಸಿ ಮೂರು ಬಾರಿ ಅಕ್ಷತೆಯನ್ನು ಅವರ ತಲೆಯ ಮೇಲೆ ಹಾಕಬೇಕು.
7. ಅವರಿಗೆ ತಿನ್ನಲು ಸಿಹಿ ಪದಾರ್ಥವನ್ನು ನೀಡಬೇಕು.
8. ಹುಟ್ಟುಹಬ್ಬ ಇದ್ದವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆಯನ್ನು ಮಾಡಬೇಕು.
9. ಅವರಿಗೆ ಉಡುಗೊರೆಯನ್ನು ನೀಡಬಹುದು ಆದರೆ ನೀಡುವಾಗ ಅಪೇಕ್ಷೆ ಅಥವಾ ಕರ್ತೃತ್ವವಿರಬಾರದು.
10. ಉಡುಗೊರೆಯನ್ನು ಸ್ವೀಕರಿಸುವಾಗ "ಇದು ದೇವರ ಪ್ರಸಾದ" ಎಂದು ಸ್ವೀಕರಿಸಬೇಕು.
3. ತಿಥಿಯ ಪ್ರಕಾರ ಜನ್ಮದಿನ
ಆಶೀರ್ವಾದಗಳು ಮತ್ತು ಶುಭ ಹಾರೈಕೆಗಳು ಗರಿಷ್ಠ ಪ್ರಯೋಜನವನ್ನು ನೀಡುತ್ತವೆ. ನಮ್ಮ ಕಂಪನಗಳು ನಮ್ಮ ಜನ್ಮದ ತಿಥಿಗೆ ಹೆಚ್ಚು ಹೊಂದಿಕೆಯಾಗುತ್ತವೆ. ಪರಿಣಾಮವಾಗಿ, ಆ ತಿಥಿಯಂದು ಬಂಧುಗಳು ಮತ್ತು ಹಿತೈಷಿಗಳ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.
ಜನ್ಮ-ತಿಥಿಯಂದು, ನಕ್ಷತ್ರಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವು ವ್ಯಕ್ತಿಯ ಜನ್ಮ ಸಮಯದಲ್ಲಿ ಒಂದೇ ಆಗಿರುತ್ತದೆ. ಆದ್ದರಿಂದ, ವ್ಯಕ್ತಿಯ ವಾರ್ಷಿಕ ಜನ್ಮ-ತಿಥಿಯು ಅವನು ಹುಟ್ಟಿದ ಸಮಯದಲ್ಲಿ ಇದ್ದ ಅನುಕೂಲಕರವಾದ ತತ್ವಗಳನ್ನು ಪಡೆಯಲು ಸಹಾಯ ಮಾಡುತ್ತದೆ, ಆ ದಿನದಂದು ಔಕ್ಷನವನ್ನು ಮಾಡಿದ ನಂತರ ವ್ಯಕ್ತಿಯು ಪಡೆಯುತ್ತಾನೆ. ಹಾಗಾಗಿ ತಿಥಿಯಂತೆ ಹುಟ್ಟುಹಬ್ಬವನ್ನು ಆಚರಿಸಬೇಕು.
4. ಚೈತನ್ಯವನ್ನು ಹೀರಿಕೊಳ್ಳುವ ಸಾಮರ್ಥ್ಯ
ಜನ್ಮದಿನವು ದೇವತೆಗಳ ಆಶೀರ್ವಾದದ ಮೂಲಕ ಪಡೆದ ಪರೋಪಕಾರಿ ಅಲೆಗಳ ಮೂಲಕ ಚೈತನ್ಯವನ್ನು ಹೀರಿಕೊಳ್ಳುವ ವ್ಯಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸುವ ದಿನವಾಗಿದೆ. ಚೈತನ್ಯ ಆಧಾರಿತ ಪ್ರಕ್ರಿಯೆಯಿಂದಾಗಿ ಸಾತ್ವಿಕವಾಗಿ ಮಾರ್ಪಟ್ಟಿರುವ ಬಾಹ್ಯ ವಾತಾವರಣದೊಂದಿಗೆ ವ್ಯಕ್ತಿಯು ಸಾಮರಸ್ಯವನ್ನು ಹೊಂದುತ್ತಾನೆ ಮತ್ತು ಆ ಮೂಲಕ ಆಂತರಿಕ ಸ್ಥಿರತೆಯನ್ನು ಪಡೆಯುತ್ತಾನೆ.
5. ಹುಟ್ಟುಹಬ್ಬದಂದು ಮಾಡಬಾರದ ಕೆಲಸಗಳು
೧. ಮೇಣದ ಬತ್ತಿಯನ್ನು ಆರಿಸುವುದು
ಭಾರತೀಯ ಸಂಸ್ಕೃತಿಯಲ್ಲಿ ಉರಿಯುತ್ತಿರುವ ದೀಪವು ಶುಭಸೂಚಕ. ದೀಪವು ಅಜ್ಞಾನದ ಕತ್ತಲನ್ನು ಸರಿಸಿ ಜ್ಞಾನದ ಬೆಳಕು ಬೀರುತ್ತದೆ. ಹುಟ್ಟು ಹಬ್ಬದಂದು ದೀಪವನ್ನು ಆರಿಸುವುದರಿಂದ ನಮ್ಮ ಮುಂದಿನ ಜೀವನದಲ್ಲಿ ಕತ್ತಲನ್ನು ಆಮಂತ್ರಿಸಿದಂತೆ ಆಗುತ್ತದೆ ಅಲ್ಲವೇ?.
೨. ಕೇಕ್ ಕತ್ತರಿಸುವುದು
೩. ಕೇವಲ ಮನೋರಂಜನೆಗಾಗಿ ನಿರರ್ಥಕ ಆಟಗಳನ್ನು ಆಡುವುದು ಅಥವಾ ಹಾಡುಗಳಿಗೆ ಕುಣಿಯುವುದು.
6. ದಿನಾಂಕದ ಪ್ರಕಾರ ಹುಟ್ಟುಹಬ್ಬವನ್ನು ಆಚರಿಸುವ ದುಷ್ಪರಿಣಾಮಗಳು
* ದಿನಾಂಕದ ಪ್ರಕಾರ ಹುಟ್ಟುಹಬ್ಬವನ್ನು ಆಚರಿಸುವುದು ಎಂದರೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಅದನ್ನು ಆಚರಿಸುವುದು. ಇಂಗ್ಲಿಷ್ ತಿಂಗಳುಗಳು ಮನುಷ್ಯನಿಂದ ರಚಿಸಲ್ಪಟ್ಟಿವೆ. ಈ ಎಣಿಕೆಯು ಕ್ರಿಸ್ತನ ಜನನದಿಂದ ಪ್ರಾರಂಭವಾಯಿತು. ಅದರಲ್ಲಿ ಯಾವುದೇ ದೈವಿಕ ಯೋಜನೆ ಇಲ್ಲದಿರುವುದರಿಂದ, ದಿನಾಂಕದ ಪ್ರಕಾರ ಹುಟ್ಟುಹಬ್ಬವನ್ನು ಆಚರಿಸುವುದರಿಂದ ವ್ಯಕ್ತಿಯು ಯಾವುದೇ ಆಧ್ಯಾತ್ಮಿಕ ಪ್ರಯೋಜನವನ್ನು ಪಡೆಯುವುದಿಲ್ಲ. ಇದಲ್ಲದೆ, ಮನುಷ್ಯನಿಂದ ರಚಿಸಲ್ಪಟ್ಟ ಇಂಗ್ಲಿಷ್ ತಿಂಗಳುಗಳು ಅಹಂಕಾರದ ಸಕ್ರಿಯ ಕಂಪನಗಳನ್ನು ಒಳಗೊಂಡಿರುತ್ತವೆ.
* ದಿನಾಂಕದ ಪ್ರಕಾರ ಜನ್ಮದಿನವನ್ನು ಆಚರಿಸುವ ಜನರು ಮಾಡುವ ಅನುಚಿತ ಕಾರ್ಯಗಳಿಂದಾಗಿ, ಜನ್ಮದಿನವನ್ನು ಆಚರಿಸುವ ವ್ಯಕ್ತಿಯ ಕಡೆಗೆ ತಾಮ-ಪ್ರಧಾನವಾದ ಕಂಪನಗಳು ಆಕರ್ಷಿತವಾಗುತ್ತವೆ, ಅದರ ದೇಹದ ಸುತ್ತಲೂ ಕಪ್ಪು ಹೊದಿಕೆಯು ಬೆಳೆಯುತ್ತದೆ ಮತ್ತು ಅದು ಬಹಿರ್ಮುಖವಾಗುತ್ತದೆ: ಹಿಂದಿನ ದಿನ ಮಧ್ಯರಾತ್ರಿಯಲ್ಲಿ ಹಾರೈಸುವುದು, ಜನ್ಮದಿನದಂದು ಕೇಕ್ ಕತ್ತರಿಸುವುದು, ಮೇಣದಬತ್ತಿಗಳನ್ನು ಊದುವುದು ಮುಂತಾದ ಕ್ರಿಯೆಗಳು, ತಾಮ-ಪ್ರಧಾನವಾದ ಕಂಪನಗಳು ಹುಟ್ಟುಹಬ್ಬವನ್ನು ಆಚರಿಸುವ ವ್ಯಕ್ತಿಯ ಕಡೆಗೆ ಆಕರ್ಷಿಸಲ್ಪಡುತ್ತವೆ ಮತ್ತು ಅವನ ದೇಹದ ಸುತ್ತಲೂ ಕಪ್ಪು ಹೊದಿಕೆಯು ಬೆಳೆಯುತ್ತದೆ. ಇಂತಹ ಎಲ್ಲಾ ಕ್ರಮಗಳು ಬಹಿರ್ಮುಖ ಮನೋಭಾವಕ್ಕೆ ಕಾರಣವಾಗುತ್ತವೆ.
ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ
ಹಿರಿಯರಿಗೆ ಹುಟ್ಟು ಹಬ್ಬದ ದಿನವೆಂದರೆ ಆತ್ಮಾವಲೋಕನದ ದಿನವಾಗಿರಬೇಕು. ಕಳೆದ ವರ್ಷದಲ್ಲಿ ತನ್ನಲ್ಲಿ ಎಷ್ಟು ಒಳ್ಳೆಯ ಬದಲಾವಣೆಗಳು ಆಗಿವೆ ಎಂದು ನೋಡುವ ದಿನವಿದು. ದೇವರು ನಮ್ಮ ಮೇಲೆ ಮಾಡಿದ ಕೃಪೆಗೆ ಕೃತಜ್ಞತೆ ವ್ಯಕ್ತಪಡಿಸುವ ದಿನ ಮತ್ತು ನಮ್ಮಿಂದಾದ ತಪ್ಪುಗಳಿಗೆ ಕ್ಷಮೆ ಯಾಚಿಸುವ ದಿನ. ಅಂತರ್ಮುಖರಾಗಿ ಮುಂದಿನ ವರ್ಷದಲ್ಲಿ ಇನ್ನಷ್ಟು ಒಳ್ಳೆಯವರಾಗಲು ಸಂಕಲ್ಪ ಮಾಡುವ ದಿನವೇ ಹುಟ್ಟುಹಬ್ಬ.