Just In
- 14 min ago
ಈ 5 ಪ್ರಮುಖ ಪ್ರಯೋಜನ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಮಾತ್ರ ಸಿಗುವುದು
- 2 hrs ago
ವೈರಲ್: ಮುನಿಸಕೊಂಡ ತಮ್ಮನಿಗಾಗಿ 432ಮೀ ಉದ್ದ, 5ಕೆಜಿ ತೂಕದ ಪತ್ರ ಬರೆದ ಅಕ್ಕ, ಕೇರಳದ ನಡೆದ ಸುಂದರ ಘಟನೆ
- 4 hrs ago
ಜ್ಯೋತಿಷ್ಯ: ಜುಲೈ 2022 ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ..!
- 7 hrs ago
ಇಂಥಾ ಸಿಲ್ಲಿ ಕಾರಣಗಳಿಂದಲೇ ಮದುವೆಯಾಗಿ ವರ್ಷದಲ್ಲೇ ವಿವಾಹ ವಿಚ್ಛೇದನ ಆಗುವುದು
Don't Miss
- Sports
ಜೋ ರೂಟ್ಗೆ ಬೆಳ್ಳಿ ಬ್ಯಾಟ್ ಗಿಫ್ಟ್ ನೀಡಿದ ECB: ಕಾರಣ ಏನು ಗೊತ್ತಾ?
- News
ನಿಮ್ಮಿಂದಲೇ ಈ ದ್ವೇಷ, ಕೋಪ: ಬಿಜೆಪಿಯನ್ನು ಕುಟುಕಿದ ರಾಹುಲ್ ಗಾಂಧಿ
- Movies
ಸಹನಾ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾರಾ ಪುಟ್ಟಕ್ಕ?
- Automobiles
ಬೆಂಗಳೂರಿನಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್
- Technology
ವಿದ್ಯುತ್ ಬಿಲ್ ಪಾವತಿಸುವ ಮುನ್ನ ಎಚ್ಚರ? ವಂಚಕರಿದ್ದಾರೆ?
- Finance
ವಿ APP ಬಳಸಿ ನೆಚ್ಚಿನ ಹಾಡು ಕಾಲರ್ ಟ್ಯೂನ್ ಮಾಡ್ಕೊಳ್ಳೋದು ಹೇಗೆ?
- Education
Essay On Eid Al Adha 2022 : ಈದ್-ಅಲ್-ಅಧಾ ಹಬ್ಬದ ಕುರಿತು ಪ್ರಬಂಧ ಬರೆಯಲು ಮಾಹಿತಿ
- Travel
ಶಿವಗಂಗೆಯ ಸೌಂದರ್ಯತೆಯ ಒಂದು ಅನಾವರಣ - ಬೆಂಗಳೂರಿನಿಂದ ಶಿವಗಂಗೆಗೆ ಒಂದು ಪ್ರಯಾಣ
Hanuman Jayanti puja vidhi :ಪೂಜಾವಿಧಾನ ಹಾಗೂ ಹನುಮನನ್ನು ಒಲಿಸಿಕೊಳ್ಳುವ ಮಾರ್ಗಗಳು ಇಲ್ಲಿದೆ
ಇದೇ ಬರುವ 27ರಂದು ಹನುಮಾನ್ ಜಯಂತಿ. ಅಂದರೆ ರಾಮಭಕ್ತ ಹನುಮ ಹುಟ್ಟಿದ ದಿನ. ಈ ದಿನ ಹನುಂತನನ್ನ ಪೂಜಿಸಿದರ ತಮ್ಮ ಕಷ್ಟಗಳೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆ. ಹಾಗಾದರೆ ಈ ದಿನ ಭಗವಾನ್ ಹನುಮಂತನನ್ನು ಪೂಜಿಸುವುದು ಹೇಗೆ? ಪೂಜಾ ವಿಧಾನ ಯಾವದು? ಹನುಮನನ್ನು ಒಲಿಸಿಕೊಳ್ಳಲು ನಾವು ಮಾಡಬೇಕಾಗಿರುವುದು ಏನು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

ಹನುಮಾನ್ ಜಯಂತಿಯ ಪೂಜಾ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
ಚೈತ್ರಮಾಸದಲ್ಲಿ ಹನುಮನನ್ನು ಪೂಜಿಸಲು ಹಲವಾರು ಮಾರ್ಗಗಳಿವೆ. ಈ ದಿನದಂದು ಜನರು ದೇವಾಲಯಗಳಿಗೆ ಭೇಟಿ ನೀಡಿ ಧಾರ್ಮಿಕ ಅರ್ಪಣೆಗಳೊಂದಿಗೆ ಪೂಜಿಸುತ್ತಾರೆ. ದೇವಾಲಯದ ಅರ್ಚಕರಿ ಭಕ್ತರಿಗೆ ಹೂವು, ತಿಂಡಿ, ತೆಂಗಿನಕಾಯಿ ಮೊದಲಾದವುಗಳಗಳನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ.

ಹನುಮಾನ್ ಜಯಂತಿ ಪೂಜಾ ವಿಧಾನ:
- ಈ ದಿನದಂದು ಬೆಳಿಗ್ಗೆ ಬೇಗ ಏಳಬೇಕು.
- ಸ್ನಾನ ಮಾಡಿದ ನಂತರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಬಹುದು ಅಥವಾ ನೆಯಲ್ಲಿಯೂ ಪೂಜೆ ಮಾಡಬಹುದು.
- ಪೂಜೆಗೆ ನಿಂತಿರುವ ಹನುಮ ವಿಗ್ರಹ ಒಳಿತೆಂಬ ನಂಬಿಕೆಯಿದೆ.
- ಭಗವಂತನಿಗೆ ಕೆಂಪು ಸಿಂಧೂರವನ್ನು ಅರ್ಪಿಸಿ.
- ಈ ದಿನ ಹನುಮಾನ್ ಚಾಲಿಸಾ ಪಠಿಸಿ
- ಹನುಮನಿಗೆ ಹೂವುಗಳು, ಸಿಹಿತಿಂಡಿಗಳನ್ನು ಅರ್ಪಿಸಿ.
- ಹನುಮನನ್ನು ಸಂತೋಷಪಡಿಸಲು, ಮಲ್ಲಿಗೆ ಎಣ್ಣೆಯನ್ನು ಬಳಸಿ.
- ಪೂಜೆ ಮಾಡುವಾಗ ಹೆಚ್ಚು ಹೆಚ್ಚು ಕೆಂಪು ವಸ್ತುಗಳನ್ನು ಬಳಸಿ.
- ಹನುಮಾನ್ ಜಯಂತಿ ಉಪವಾಸ ಆಚರಿಸುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದ ನಂತರ, ಭಗವಾನ್ ಶ್ರೀ ರಾಮ್, ತಾಯಿ ಸೀತಾ ಮತ್ತು ಶ್ರೀ ಹನುಮಾನ್ ಅವರನ್ನು ಸ್ಮರಿಸಿ, ಉಪವಾಸದ ನಿರ್ಣಯವನ್ನು ತೆಗೆದುಕೊಳ್ಳಿ.

ಹನುಮನನ್ನು ಒಲಿಸಿಕೊಳ್ಳುವ ವಿಧಾನ ಇಲ್ಲಿದೆ:
- ಓಂ ಹನುಮಂತೆ ನಮಃ ಜಪಿಸುವುದರಿಂದ, ದೈವಿಕ ಮತ್ತು ದೈಹಿಕ ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ.
-ಪೂಜೆಯಲ್ಲಿ ಪರಿಮಳಯುಕ್ತ ಎಣ್ಣೆ ಮತ್ತು ಸಿಂಧೂರ ಹನುಮನಿಗೆ ಪ್ರಿಯವಾದುದರಿಂದ ಅವುಗಳನ್ನು ಅರ್ಪಿಸುವುದರಿಂದ ಉತ್ತಮ ಲಾಭವಿದೆ.
- ರಾಮಚರಿತ ಮಾನಸ, ಹನುಮಾನ್ ಚಾಲೀಸಾ, ಹನುಮಾನ್ ಬಹುಕ್ ಇತ್ಯಾದಿಗಳನ್ನು ಓದಿ.
-ದೇವಾಲಯಕ್ಕೆ ಭೇಟಿ ನೀಡಿ, ತೆಂಗಿನಕಾಯಿ ಹಿಡಿದು ೭ ಪ್ರದಕ್ಷಿಣೆ ಹಾಕಿದ ಬಳಿಕ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸಿ.
-ಸೂರ್ಯಾಸ್ತದ ನಂತರ, ಹನುಮಾನ್ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ. ದೀಪವು ಜೇಡಿಮಣ್ಣಿನಿಂದ ಕೂಡಿದ್ದರೆ, ಅದು ಹೆಚ್ಚು ಶುಭವಾಗಿರುತ್ತದೆ. ದೀಪವನ್ನು ಬೆಳಗಿಸಿದ ನಂತರ, ಹನುಮಾನ್ ಚಾಲಿಸಾ ಪಠಿಸಿ.