Just In
- 1 hr ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 2 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 4 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 5 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Movies 'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗರುಡ ಪುರಾಣದ ಪ್ರಕಾರ, ಈ ವಿಚಾರಗಳನ್ನು ಅರ್ಧದಲ್ಲೇ ಬಿಡಬೇಡಿ, ಮುಂದೆ ಹಾನಿಯಾಗುವುದು ಖಚಿತ
ಹಿಂದೂ ಧರ್ಮದ 18 ಪುರಾಣಗಳಲ್ಲಿ ಒಂದಾದ ಗರುಡ ಪುರಾಣಕ್ಕೆ ವಿಶೇಷ ಮಹತ್ವವಿದೆ. ಗರುಡ ಪುರಾಣವು ವಿಷ್ಣುವಿನ ಮಹಿಮೆಯನ್ನು ವಿವರಿಸುತ್ತದೆ. ಇದರಲ್ಲಿ, ಮಾನವ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಜೊತೆಗೆ ಸಂತೋಷದ ಜೀವನವನ್ನು ಮಾಡುವುದು ಹೇಗೆ ಎಂಬುದನ್ನ ಹೇಳಿದೆ.
ಪುರಾಣಗಳಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಅನುಸರಿಸುವ ಮೂಲಕ ಮನುಷ್ಯ ಯಾವಾಗಲೂ ಸದೃಢವಾಗಿರುತ್ತಾನೆ ಎಂದು ನಂಬಲಾಗಿದೆ. ಇದೇ ಗರುಡ ಪುರಾಣದಲ್ಲಿ, ಕೆಲವು ವಿಚಾರಗಳನ್ನು ಮಧ್ಯದಲ್ಲಿ ಬಿಡಬಾರದು ಎಂದು ಒಂದು ಪದ್ಯದ ಮೂಲಕ ಹೇಳಲಾಗಿದೆ. ಈ ಕಾರ್ಯಗಳನ್ನು ಅರ್ಧದಲ್ಲೇ ಬಿಡುವುದರಿಂದ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಗೆ ನಾಂದಿಯಾಗುತ್ತದೆ. ಹಾಗಾದ್ರೆ ಆ ವಿಚಾರಗಳಾವುವು ಎಂಬುದನ್ನು ವಿವರಿಸಲಾಗಿದೆ.
ಗರುಡ ಪುರಾಣದ ಪ್ರಕಾರ ಮಧ್ಯದಲ್ಲೇ ಬಿಡಬಾರದಂತಹ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:
1. ಅನಾರೋಗ್ಯ:
ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವನು ತನ್ನ ಔಷಧಿಗಳನ್ನು ಅರ್ಧದಲ್ಲೇ ನಿಲ್ಲಿಸಬಾರದು. ಅನೇಕ ಬಾರಿ ಜನರು ಸಂಪೂರ್ಣವಾಗಿ ಗುಣವಾಗದೇ, ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಮುಂಬರುವ ಸಮಯದಲ್ಲಿ ರೋಗವು ಹೆಚ್ಚಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯ ಸಾಮಾನ್ಯ ಸ್ಥಿತಿಯವರೆಗೆ ಬರುವವರೆಗೂ ಔಷಧಿಗಳನ್ನು ಮಧ್ಯದಲ್ಲಿ ಬಿಡಬಾರದು. ಗರುಡ ಪುರಾಣದಲ್ಲಿ ಹೇಳಿದ ಈ ಮಾತನ್ನು ನಿಧಾನವಾಗಿ ಕೂತು ಚಿಂತಿಸಿದರೆ ಇಂದಿಗೂ ಎಂದಿಗೂ ಸೂಕ್ತ ಎನಿಸುತ್ತದೆ. ಏಕೆಂದರೆ ಅನಾರೋಗ್ಯವನ್ನ ಹಾಗೆಯೇ ಬಿಡಲು ಸಾಧ್ಯವಿಲ್ಲ.
2. ಬೆಂಕಿ:
ಯಾವುದಾದರೂ ಸ್ಥಳದಲ್ಲಿ ಬೆಂಕಿ ಇದ್ದರೆ ಅದನ್ನು ಸಂಪೂರ್ಣವಾಗಿ ನಂದಿಸಬೇಕು ಎಂದು ಗರುಡ ಪುರಾಣ ಹೇಳುತ್ತದೆ. ಹೌದು, ಯಾವುದೇ ಜಾಗದಲ್ಲಿ ಬೆಂಕಿ ಕಂಡರೆ ಅಥವಾ ಬೆಂಕಿ ಉರಿಯುತ್ತಿದ್ದರೆ ಅದನ್ನು ಅಲ್ಲಿಗೇ ಬಿಟ್ಟು ಹೋಗಬೇಡಿ. ಸಂಪೂರ್ಣವಾಗಿ ನಂದಿಸಿ ಹೋಗಿ. ಅಲ್ಲಿ ಸಣ್ಣ ಕಿಡಿ ಉಳಿದಿದ್ದರೂ ಸಹ ಮತ್ತೆ ಬೆಂಕಿ ಹಿಡಿಯಬಹುದು. ಇದರಿಂದಾಗಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗುವ ಸಾಧ್ಯತೆಯಿದೆ. ಆದ್ದರಿಂದ ಬೆಂಕಿ ಎಲ್ಲೇ ಕಂಡರೂ, ಸಂಪೂರ್ಣವಾಗಿ ನಂದಿಸುವುದು ಒಳ್ಳೆಯದು.
3. ಸಾಲ:
ಗರುಡ ಪುರಾಣದ ಪ್ರಕಾರ, ನೀವು ಯಾರಿಂದಾದರೂ ಸಾಲ ಪಡೆದಿದ್ದರೆ, ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಬೇಕು. ಸಾಲವನ್ನು ಸಮಯಕ್ಕೆ ಮರುಪಾವತಿಸದಿದ್ದರೆ, ಅದರ ಬಡ್ಡಿ ಹೆಚ್ಚಾಗಬಹುದು. ಅದು ನಿಮಗೆ ಮತ್ತೆ ಹೊರೆಯಾಗಬಹುದು. ಒಂದು ವೇಳೆ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಬಳಿ ಸಾಲ ತೆಗೆದುಕೊಂಡಿದ್ದರೆ, ಹಣದ ಕಾರಣದಿಂದಾಗಿ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಆದ್ದರಿಂದ, ಪ್ರತಿಯೊಬ್ಬ ವ್ಯಕ್ತಿಯು ಸಾಲವನ್ನು ತ್ವರಿತವಾಗಿ ಮರುಪಾವತಿಸಲು ಪ್ರಯತ್ನಿಸಬೇಕು. ಇದು ಹಣ ಕೊಂಡು ನಿಮಗೂ, ಹಣ ನೀಡಿದ ಅವರಿಗೂ ಜೊತೆಗೆ ನಿಮ್ಮ ಗೌರವಕ್ಕೂ ಒಳ್ಳೆಯದು.