Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು : ಇವರ ವೈಯಕ್ತಿಕ ಬದುಕಿನಲ್ಲಿ ವಿಧಿಯಾಡಿತು ಕ್ರೂರ ಆಟ
ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಇಡೀ ದೇಶ ಶುಭಾಶಯಗಳನ್ನು ಕೋರುತ್ತಿದ್ದಾರೆ.
ದೇಶದ ಪ್ರಥಮ ಪ್ರಜೆಯಾಗಿರುವ ಎರಡು ವಿಷಯಗಳಲ್ಲಿ ಗಮನ ಸೆಳೆಯುತ್ತಿದ್ದಾರೆ
1. ದೇಶದ ರಾಷ್ಟ್ರಪತಿ ಸ್ಥಾನಕೇರಿದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತೊ
2. ದೇಶದ ಎರಡನೇ ಮಹಿಳಾ ರಾಷ್ಟ್ರಪತಿ
ಪ್ರತಿಭಾ ಪಾಟೇಲ್ ಬಳಿಕ ಆ ಸ್ಥಾನದ ಜವಾಬ್ದಾರಿ ಹೊತ್ತಿರುವ ಎರಡನೇ ಮಹಿಳೆ.
ದ್ರೌಪದಿ ಮುರ್ಮು ಇಂದು ದೇಶದ ಅತ್ಯುನ್ನತ ಪದವಿಯಲ್ಲಿದ್ದರೂ ಅವರ ಮನಸ್ಸಿನಲ್ಲಿ ಎಂದ ಮಾಸದ ಶಾಶ್ವತ ನೋವು ಮಡುಗಟ್ಟಿದೆ. ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದಾಗ ವಿಧಿ ವ್ಯಕ್ತಿಯ ಬಾಳಲ್ಲಿ ಇಷ್ಟೊಂದು ಕ್ರೂರಿಯಾಗಿರುತ್ತಾ ಎನ್ನುವಷ್ಟರ ಮಟ್ಟಿಗೆ ವಿಧಿ ಇವರ ಬದುಕಿನಲ್ಲಿ ಆಟವಾಡಿದೆ. ಪುತ್ರ ಶೋಕಂ ನಿರಂತರ ಅಂತಾರೆ, ಆದರೆ ಇವರು ಒಬ್ಬರಲ್ಲ, ಇಬ್ಬರು ಪುತ್ರರನ್ನು ಕಳೆದುಕೊಂಡಿದ್ದಾರೆ.
ಅವರ ಬದುಕಿನ ಜರ್ನಿ ಬಗ್ಗೆ ನೋಡುವುದಾದರೆ
ದ್ರೌಪದಿ ವರ್ಮ 1958 ಜೂನ್ 20ರಲ್ಲಿ ಒಡಿಸ್ಸಾದ ಉಪಾರಬೇಡ ಗ್ರಾಮದ ಸಾಂತಲಿ ಬುಡಕಟ್ಟು ಪ್ರಭಾವಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ತಾತ ಅವರ ಸಮುದಾಯದವರ ನ್ಯಾಯಪಂಚಾಯಿತ್ ಮಾಡುವ ಸರ್ಪಂಚ್ಗಳಾಗಿದ್ದರು. ಏನೂ ಸೌಕರ್ಯವಿಲ್ಲದ ಒಂದು ಚಿಕ್ಕ ಹಳ್ಳಿಯಿಂದ ದಿಲ್ಲಿಯತ್ತ ಅವರ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ.
ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು
ಓದಿನಲ್ಲಿ ತುಂಬಾ ಚುರುಕು ಇದ್ದ ದ್ರೌಪದಿ ಮುರ್ಮು ಪ್ರಾರಂಭದಲ್ಲಿ ಶಿಕ್ಷಕಿ ವೃತ್ತಿಯನ್ನು ಮಾಡುತ್ತಾರೆ. ಪ್ರಸಿದ್ದ 'ಶ್ರೀ ಅರಬಿಂದೋ ಸಮಗ್ರ ಶಿಕ್ಷಣ' ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್ ಆಗಿ ಕೂಡ ಸ್ವಲ್ಪ ಸಮಯ ಕಾರ್ಯನಿರ್ವಹಿಸಿದ್ದರು.
ನಂತರ ಸ್ವಲ್ಪ ಸಮಯ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗದು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿದ ಮೊದಲ ಅನುಭವ.
1997ರಲ್ಲಿ ದ್ರೌಪದಿ ಮುರ್ಮು ಬಿಜೆಪಿ ಸೇರುತ್ತಾರೆ, ಕೂಡಲೇ ಅವರಿಗೆ ಕೌನ್ಸಿಲರ್ ಹುದ್ದೆ ನೀಡಲಾಗುವುದು. ತಮ್ಮ ಕಾರ್ಯವೈಖರಿಯಿಂದಾಗಿ ದ್ರೌಪದಿ ಮುರ್ಮು ಒಳ್ಳೆಯ ಹೆಸರು ಗಳಿಸುತ್ತಾರೆ. 2000ನೇ ಇಸವಿಯಲ್ಲಿ ರಾಯರಂಗಪುರ ಪಂಚಾಯತಿನಲ್ಲಿ ಅಧ್ಯಕ್ಷರಾಗುತ್ತಾರೆ, ಹೀಗೆ ರಾಜಕೀಯದಲ್ಲಿ ಬೆಳೆಯಲಾರಂಭಿಸುತ್ತಾರೆ. 2000 ಮಾರ್ಚ್ 2002ರವರೆಗೆ ಸ್ವತಂತ್ರ ಶುಲ್ಕದ ವಾಣಿಜ್ಯ ಹಾಗೂ ಸಾರಿಗೆ ಮಂತ್ರಿಯಾಗಿದ್ದರು. ನಂತರ ಮೀನು ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿಯಲ್ಲಿ 2022ರಿಂದ 2014ರವರೆಗೆ ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ಜಾರ್ಖಂಡ್ನ ಗರ್ವನರ್ ಆಗ ಕೂಡ ಕಾರ್ಯನಿರ್ವಹಿಸಿದ್ದಾರೆ.
ರಾಜಕೀಯದಲ್ಲಿ ಬೆಳೆಯುತ್ತಿದ್ದಾಗ ವೈಯಕ್ತಿಕ ಬದುಕಿನಲ್ಲಿ ಎದುರಾಯ್ತು 3 ಆಘಾತ
ದ್ರೌಪದಿ ಮುರ್ಮು ಅವರ ರಾಜಕೀಯ ಬದುಕು ತುಂಬಾನೇ ಚೆನ್ನಾಗಿತ್ತು, 2010ರಲ್ಲಿ ಅವರ ಬದುಕಿನಲ್ಲಿ ದೊಡ್ಡ ದುರಂತವೇ ಉಂಟಾಯಿತು. ಪತಿ, ಮೂವರು ಮಕ್ಕಳ ಸುಂದರ ಕುಟುಂಬವಾಗಿತ್ತು ಅವರದ್ದು, ಆದರೆ 2010ರಲ್ಲಿ ಅವರ ಮಗ ಸಾವನ್ನಪ್ಪುತ್ತಾರೆ. ಒಬ್ಬ ಮಗನನ್ನು ಕಳೆದುಕೊಂಡ ದುಃಖದಲ್ಲಿರುವಾಗ ವಿಧಿ ಮತ್ತೊಮ್ಮೆ ಅವರ ಬದುಕಿನಲ್ಲಿ ಆಟವಾಡಿತು. ಎರಡನೇ ಮಗನನ್ನು 2013ರಲ್ಲಿ ಅಪಘಾತದಲ್ಲಿ ಕಳೆದುಕೊಂಡರು. ದ್ರೌಪದಿ ಮುರ್ಮು ಹಾಗೂ ಅವರ ಪತಿ ಶ್ಯಾಮ್ಗೆ ಬದುಕಿನಲ್ಲಿ ಸಂಪೂರ್ಣ ಕತ್ತಲಾವರಿಸಿತು. ಇಬ್ಬರು ಪುತ್ರರನ್ನು ಕಳೆದುಕೊಂಡ ದುಃಖದಲ್ಲಿಯೇ 2014ರಲ್ಲಿ ಪತಿ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. 2009ರಿಂದ- 2015ರ ನಡುವೆ ತಾಯಿ ಹಾಗೂ ಒಬ್ಬ ಸಹೋದರನನ್ನೂ ಕಳೆದುಕೊಳ್ಳುತ್ತಾರೆ.
ಈಗ ಅವರಿಗಿರುವುದು ಒಬ್ಬಳು ಮಗಳು ಮಾತ್ರ, ಮಗಳೊಂದಿಗೆ ವಾಸವಾಗಿದ್ದಾರೆ.
ಮನಸ್ಸಿನಲ್ಲಿ ಇಷ್ಟೆಲ್ಲಾ ನೋವು ಇದ್ದರೂ ಜನ ಸೇವೆ ಮಾಡುವುದನ್ನು ಮರೆಯಲಿಲ್ಲ, ಆದ್ದರಿಂದಲೇ ಇಂದು ಅವರಿಗೆ ರಾಷ್ಟ್ರಪತಿ ಹುದ್ದೆ ಲಭಿಸಿದೆ.