Just In
Don't Miss
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Buddha Purnima 2021: ಬುದ್ಧ ಪೂರ್ಣಿಮಾ ದಿನಾಂಕ, ಶುಭ ಘಳಿಗೆ ಹಾಗೂ ಮಹತ್ವದ ಕುರಿತ ಸಂಪೂರ್ಣ ಮಾಹಿತಿ
ಜಗತ್ತಿಗೆ ಕರುಣೆ ಮತ್ತು ಶಾಂತಿಯನ್ನು ಸಾರಿದ ವ್ಯಕ್ತಿ ಬುದ್ಧ. ಈತನನ್ನು ಬೌದ್ಧ ಧರ್ಮದವರು ಮಾತ್ರವಲ್ಲದೇ ಜಗತ್ತಿನದ್ಯಾಂತ ಲಕ್ಷಾಂತರ ಜನರು ಪೂಜಿಸುತ್ತಾರೆ. ವೈಶಾಖ ಮಾಸದ ಹುಣ್ಣಿಮೆಯ ದಿನ ಬುದ್ಧ ಜಯಂತಿ. ಸಿದ್ದಾರ್ಥ ಬುದ್ಧನಾಗಿದ್ದುಇದೇ ದಿನ, ಸಿದ್ದಾರ್ಥ ಹುಟ್ಟಿದ್ದೂ ಕೂಡ ಇದೇ ದಿನ. ಹಾಗಾದ್ರೆ ಈ ವರ್ಷ ಈ ಬುದ್ಧ ಪೂರ್ಣಿಮಾ ಯಾವಾಗ ಬಂದಿದೆ? ಅದರ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
2021ರ ಬುದ್ಧ ಪೂರ್ಣಿಮಾ ದಿನಾಂಕ:
ಬುದ್ಧ ಪೂರ್ಣಿಮಾವನ್ನು ಬುದ್ಧ ಜಯಂತಿ ಎಂದೂ ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಬುದ್ಧ ಜಯಂತಿಯನ್ನು ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು (ಪೂರ್ಣಿಮಾ) ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಇದನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ.
ಈ ವರ್ಷ, ಗೌತಮ ಬುದ್ಧನ 2583 ನೇ ಜನ್ಮ ದಿನಾಚರಣೆಯಾಗಿದ್ದು, ಇದನ್ನು ಮೇ 26 ರಂದು ಆಚರಿಸಲಾಗುವುದು. ಆದರೆ, ಗೌತಮ ಬುದ್ಧನ ಜನನ ಮತ್ತು ಮರಣದ ಸಮಯದ ಬಗ್ಗೆ ಇತಿಹಾಸಕರರಲ್ಲಿ ಗೊಂದಲವಿದೆ.
ಬುದ್ಧ ಪೂರ್ಣಿಮಾ ತಿಥಿ:
ಪೂರ್ಣಿಮಾ ತಿಥಿ 2021 ರ ಮೇ 25 ರಂದು 09:29 ಕ್ಕೆ ಪ್ರಾರಂಭವಾಗಿ, ಮೇ 26 ರಂದು 04:43 ಕ್ಕೆ ಕೊನೆಗೊಳ್ಳುತ್ತದೆ.
ಬುದ್ಧ ಪೂರ್ಣಿಮಾದ ಮಹತ್ವ :
ಈ ದಿನ ಭಕ್ತರು ಬೌದ್ಧ ದೇವಾಲಯಗಳಿಗೆ ಭೇಟಿ ನೀಡಿ, ಭಗವಾನ್ ಬುದ್ಧನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಅಗತ್ಯವಿರುವವರಿಗೆ ದಾನ ಮಾಡುತ್ತಾರೆ. ಕೆಲವು ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಜೊತೆಗೆ ಧ್ಯಾನ ಮಾಡುತ್ತಾರೆ ಮತ್ತು ಪವಿತ್ರ ಗ್ರಂಥವನ್ನು ಓದುತ್ತಾರೆ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ದೊರೆಯುವುದು ಎಂಬುದು ಜನರ ನಂಬಿಕೆಯಾಗಿದೆ.
ಬುದ್ಧ ಪೂರ್ಣಿಮಾ ಯಶಸ್ಸಿಗೆ ಉತ್ತಮ ದಾರಿಗಳು :
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯ. ಮೋಕ್ಷ ಸಾಧಿಸಲು ಶಾಂತಿ ಹಾಗೂ ಕರುಣೆಯ ಮಾರ್ಗದ ಮೂಲಕ ಸಾಗಿದರೆ ಉತ್ತಮ ಎಂದು ಲೋಕಕ್ಕೆ ಸಾರಿದ ಬುದ್ಧನ ಎಂಟು ಉತ್ತಮ ಮೌಲ್ಯಗಳು ಈ ಕೆಳಗಿವೆ.
1. ಸರಿಯಾದ ತಿಳುವಳಿಕೆ
2. ಸರಿಯಾದ ಚಿಂತನೆ
3. ಸರಿಯಾದ ಕ್ರಿಯೆ
4. ಸರಿಯಾದ ಮಾತು
5. ಸರಿಯಾದ ಮನಸ್ಸು
6. ಸರಿಯಾದ ಜೀವನೋಪಾಯ,
7. ಸರಿಯಾದ ಪ್ರಯತ್ನ
8. ಬಲ ಏಕಾಗ್ರತೆ