For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ಶಿವಾರಾಧನೆ ಮಾಡುವ ಮೂಲಕ ಈ ದೋಷಗಳಿಂದ ಮುಕ್ತಿ ಪಡೆಯಬಹುದು..

|

ಶ್ರಾವಣ ಮಾಸ ಎಂದರೆ ಅದು ಶಿವನ ಆರಾಧನೆಗೆ ಉತ್ತಮವಾದ ದಿನ. ಆಗಸ್ಟ್ 9ರಿಂದ ಶುರುವಾಗುವ ಶ್ರಾವಣ ಮಾಸ ಸೆಪ್ಟೆಂಬರ್ ವರೆಗೂ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಶಿವನನ್ನು ಆರಾಧಿಸುವುದರಿಂದ ನಮ್ಮೆಲ್ಲಾ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಅದರಲ್ಲೂ ಈ ತಿಂಗಳ ಸೋಮವಾರಕ್ಕೆ ವಿಶೇಷ ಮಹತ್ವವಿದ್ದು, ಈ ದಿನ ಶಿವರಾಧನೆ ಮಾಡುವುದರಿಂದ ಉತ್ತಮ ಲಾಭಗಳಿವೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ ಇದನ್ನು ಪವಿತ್ರವಾದ ತಿಂಗಳು ಎಂದು ಪರಿಗಣಿಸಲಾಗಿದ್ದು, ಶಿವನನ್ನು ಪೂಜಿಸಲು ಇದು ಅತ್ಯುತ್ತಮ ತಿಂಗಳು. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಯು 108 ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಹಾಗಾದ್ರೆ ಬನ್ನಿ, ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ:

1.ಸಂಪತ್ತು ಸಮೃದ್ಧಿ:

1.ಸಂಪತ್ತು ಸಮೃದ್ಧಿ:

ನಿಜವಾದ ಭಕ್ತಿ ಮತ್ತು ಸಮರ್ಪಣೆಯೊಂದಿಗೆ ಶಿವ ಪೂಜೆಯನ್ನು ಮಾಡುವುದರಿಂದ ಶನಿ ದೋಷ ಸೇರಿದಂತೆ ಅನೇಕ ದೋಷಗಳಿಂದ ಗ್ರಹ ದೋಷದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಶ್ರಾವಣ ಸೋಮವಾರಗಳಲ್ಲಿ ರುದ್ರಾಭಿಷೇಕ ಪೂಜೆಯನ್ನು ಮಾಡುವುದರಿಂದ ಉತ್ತಮ ದೈಹಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಪಡೆಯಬಹುದು. ಜೇನುತುಪ್ಪ, ತುಪ್ಪ ಮತ್ತು ಕಬ್ಬಿನಂತಹ ವಸ್ತುಗಳಿಂದ ರುದ್ರಾಭಿಷೇಕ ಮಾಡುವುದು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರಬಹುದು.

2. ಉತ್ತಮ ವೈವಾಹಿಕ ಜೀವನ:

2. ಉತ್ತಮ ವೈವಾಹಿಕ ಜೀವನ:

ಶಿವನನ್ನು ಆದರ್ಶ ಪುರುಷ ಎಂದು ಪರಿಗಣಿಸಲಾಗಿದ್ದು, ಅವಿವಾಹಿತ ಮಹಿಳೆಯರು ಆತನಂತಹ ಗಂಡನನ್ನು ಪಡೆಯಲು ಶಿವನನ್ನು ಪೂಜಿಸುತ್ತಾರೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘ ಆಯುಷ್ಯಕ್ಕಾಗಿ ಪೂಜಿಸುತ್ತಾರೆ. ಶಿವ ಪುರಾಣದ ಪ್ರಕಾರ, ಶ್ರಾವಣ ಮಾಸದಲ್ಲಿ ಉಪವಾಸ ಮಾಡುವವರು ಶಿವನ ಅನುಗ್ರಹ ಪಡೆದು, ತಮ್ಮೆಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ. ವಿವಾಹದ ಅಡೆತಡೆಗಳನ್ನು ನಿವಾರಿಸಲು ಪೂಜೆಯನ್ನು ಮಾಡಬೇಕು.

3.ಆರೋಗ್ಯ ಭಾಗ್ಯ:

3.ಆರೋಗ್ಯ ಭಾಗ್ಯ:

ಶಿವ ಪೂಜೆಯನ್ನು ಮಾಡುವವರು ಆರೋಗ್ಯದಲ್ಲಿ ತೀವ್ರ ಬದಲಾವಣೆಗಳನ್ನು ಕಾಣಬಹುದು ಏಕೆಂದರೆ ಈ ಪೂಜೆಯು ಅವರ ಆರೋಗ್ಯವನ್ನು ಸುಧಾರಿಸಲು ಮತ್ತು ಮಾರಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಈ ತಿಂಗಳಲ್ಲಿ ಪಿತ್ರ ದೋಷ ನಿವಾರಣಾ ಪೂಜೆ, ಕಾಳಸರ್ಪ ನಿವಾರಣಾ ಪೂಜೆ, ಮಂಗಳ ದೋಷ ನಿವಾರಣಾ ಪೂಜೆಯನ್ನು ಕೂಡ ಮಾಡಲು ಉತ್ತಮ.

4. ಅಪಾಯದಿಂದ ಪಾರು:

4. ಅಪಾಯದಿಂದ ಪಾರು:

ಓಂ ನಮಃ ಶಿವಾಯ ಮತ್ತು ಮಹಾ ಮೃತ್ಯುಂಜಯ ಮಂತ್ರಗಳನ್ನು ಪಠಿಸುವುದರಿಂದ ಅಪಾಯದಿಂದ ಮತ್ತು ಅಕಾಲಿಕ ಮರಣದಿಂದ ಪಾರಾಗಬಹುದು. ರುದ್ರಾಕ್ಷಿ ಧರಿಸಿಕೊಂಡು ಶಿವನ ಆರಾಧನೆಯು ತುಂಬಾ ಪ್ರಯೋಜನಕಾರಿಯಾಗಿದೆ.

5. ಮೋಕ್ಷ ಪ್ರಾಪ್ತಿ:

5. ಮೋಕ್ಷ ಪ್ರಾಪ್ತಿ:

ದಂತಕಥೆಗಳ ಪ್ರಕಾರ, ಈ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಮೋಕ್ಷ ಪ್ರಾಪ್ತಿಯಾಗಬಹುದು. ಆರೋಗ್ಯಕರ ಮತ್ತು ಶ್ರೀಮಂತ ಜೀವನವನ್ನು ಪಡೆಯಲು ಪೂಜೆಯನ್ನು ಶ್ರಾವಣ ಮಾಸದಲ್ಲಿ ಮಾಡಲಾಗುತ್ತದೆ.

6. ಬಯಕೆಗಳ ಈಡೇರಿಕೆ:

6. ಬಯಕೆಗಳ ಈಡೇರಿಕೆ:

ನಂಬಿಕೆಯ ಪ್ರಕಾರ, ಸೋಮವಾರ ಉಪವಾಸ ಮಾಡುವವರಿಗೆ ಸಂತೋಷ ಮತ್ತು ಪ್ರಪಂಚದ ಎಲ್ಲ ಆನಂದಗಳು ಸಿಗುತ್ತವೆ. ಅವರ ಎಲ್ಲಾ ಆಸೆಗಳು ಈಡೇರುತ್ತವೆ. ಈ ದಿನ ಮಾಡುವ ದಾನ-ಧರ್ಮವು ಜ್ಯೋತಿರ್ಲಿಂಗಕ್ಕೆ ಭೇಟಿ ನೀಡುವ ಫಲವನ್ನು ನೀಡುತ್ತದೆ.

7. ತೀರ್ಥಯಾತ್ರೆಯ ಫಲ:

7. ತೀರ್ಥಯಾತ್ರೆಯ ಫಲ:

ಶ್ರಾವಣ ಸೋಮವಾರದಂದು ಶಿವನಿಗೆ ಬಿಲ್ವ ಪತ್ರೆ ಅರ್ಪಿಸುವುದು ಜೊತೆಗೆ ಆ ಮರವನ್ನು ಪೂಜಿಸುವುದು ಉತ್ತಮವಾಗಿದೆ. ಏಕೆಂದರೆ ಶಿವನಿಗೆ ಆ ಪತ್ರೆ ಪ್ರಿಯವಾಗಿದ್ದು, ಅದರ ಬೇರುಗಳಲ್ಲಿ ಶಿವ ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ. ಆದ್ದರಿಂದ, ಈ ಪೂಜೆಯು ಯಾವುದೇ ತೀರ್ಥಯಾತ್ರೆಯ ಭೇಟಿಗೆ ಸಮನಾದ ಫಲಿತಾಂಶಗಳನ್ನು ಒದಗಿಸುತ್ತದೆ.

8.ದೋಷ ನಿವಾರಣೆ:

8.ದೋಷ ನಿವಾರಣೆ:

ಶ್ರಾವಣ ಮಾಸ ಅಥವಾ ಶ್ರಾವಣ ಶನಿವಾರಗಳು ಶನಿ ದೇವರ ಪೂಜೆಗೆ ಉತ್ತಮ ದಿನಗಳಾಗಿವೆ. ಶನಿ ದೇವಾಲಯಗಳಲ್ಲಿ ಶನಿದೇವನಿಗೆ ತೈಲಾಭಿಷೇಕವನ್ನು ಮಾಡುವುದರಿಂದ ಶನಿ ದೋಷದ ಪರಿಣಾಮಗಳನ್ನು ನಿವಾರಿಸಬಹುದು.

ಶ್ರಾವಣ ಮಾಸದಲ್ಲಿ ಉತ್ತಮ ಫಲಕ್ಕಾಗಿ ಉಪವಾಸವನ್ನು ಆಚರಿಸಲು ಎರಡು ಮಾರ್ಗಗಳು :

ಶ್ರಾವಣ ಮಾಸದಲ್ಲಿ ಉತ್ತಮ ಫಲಕ್ಕಾಗಿ ಉಪವಾಸವನ್ನು ಆಚರಿಸಲು ಎರಡು ಮಾರ್ಗಗಳು :

1.ಕಠಿಣವಾದ ಉಪವಾಸ: ಈ ರೀತಿಯ ಉಪವಾಸದಲ್ಲಿ, ಒಬ್ಬ ವ್ಯಕ್ತಿಯು ನೀರನ್ನು ಹೊರತುಪಡಿಸಿ ಇಡೀ ದಿನ ಏನನ್ನೂ ತಿನ್ನುವುದಿಲ್ಲ. ಸೂರ್ಯಾಸ್ತದ ನಂತರ ಸಂಜೆ ಉಪವಾಸವನ್ನು ಮುರಿದು,ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ನಿಯಮಿತ ಆಹಾರವನ್ನು ಸೇವಿಸಬೇಕು.

2. ಭಾಗಶಃ ಉಪವಾಸ: ಭಾಗಶಃ ಉಪವಾಸದಲ್ಲಿ ಹಣ್ಣುಗಳು ಮತ್ತು ಕೆಲವೊಂದು ಆಹಾರಗಳನ್ನು, ಜೊತೆಗೆ ಡ್ರೈ ಫ್ರೂಟ್ ಹಗಲಿನಲ್ಲಿ ತಿನ್ನಬಹುದು ಮತ್ತು ರಾತ್ರಿ ಒಂದು ಬಾರಿ ಊಟ ಮಾಡಬಹುದು.

English summary

Benefits of Shiv Pooja in Shravan Month in Kannada

Here we talking about Benefits of Shiv Pooja in Shravan Month, shiv pooja in shravan, benefits of shiv pooja
X
Desktop Bottom Promotion