Just In
Don't Miss
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿತೃಕರ್ಮಕ್ಕೆ ಪ್ರಸಿದ್ಧಿಯಾಗಿರುವ ಆಷಾಢ ಅಮಾವಾಸ್ಯೆ, ಈ ವರ್ಷ ಯಾವಾಗ ಬರಲಿದೆ ಗೊತ್ತಾ?
ಜುಲೈ ತಿಂಗಳೆಂದರೆ ಅದು ಆಷಾಢ ತಿಂಗಳು. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಿಷಿದ್ಧ. ಧಾರ್ಮಿಕ ದೃಷ್ಟಿಕೋನದಿಂದ ಆಷಾಢ ತಿಂಗಳಲ್ಲಿ ಬರುವ ಅಮಾವಾಸ್ಯೆಯು ಬಹಳ ಮಹತ್ವದ್ದಾಗಿದೆ. ಈ ವರ್ಷ ಆಷಾಢ ಅಮಾವಾಸ್ಯೆ ಜುಲೈ 9 ಶುಕ್ರವಾರ ಬರುತ್ತಿದೆ. ಪಿತೃ ದೋಷ ನಿವಾರಣೆಗಾಗಿ ಹೆಸರುವಾಸಿಯಾಗಿರುವ ಈ ಅಮಾವಾಸ್ಯೆಯ ಮುಹೂರ್ತ, ಪೂಜಾವಿಧಾನ ಹಾಗೂ ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಆಷಾಢ ಅಮಾವಾಸ್ಯೆಯ ದಿನಾಂಕ, ಮುಹೂರ್ತ, ಪೂಜಾವಿಧಾನ ಹಾಗೂ ಮಹತ್ವವನ್ನು ಈ ಕೆಳಗೆ ನೀಡಲಾಗಿದೆ:
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ದಿನಾಂಕವನ್ನು ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಆಷಾಧ ಮಾಸದ ಅಮಾವಾಸ್ಯೆಯನ್ನು ಹಲಹರಿ ಅಮಾವಾಸ್ಯ ಕರಾವಳಿ ಪ್ರದೇಶಗಳಲ್ಲಿ ಆಟಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿನದಂದು ನೇಗಿಲು ಒಳಗೊಂಡಂತೆ ಇತರ ಕೃಷಿ ಉಪಕರಣಗಳನ್ನು ಪೂಜಿಸಲಾಗುತ್ತದೆ. ನೇಗಿಲನ್ನು ಪೂಜಿಸುವ ಮೂಲಕ ಸಮೃದ್ಧ ಬೆಳೆ ಸಿಗಲೆಂದು ರೈತರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಇದರೊಂದಿಗೆ ಅಮಾವಾಸ್ಯೆಯ ದಿನವು ಪೂರ್ವಜರಿಗೆ ಶ್ರಾದ್ಧ ಮಾಡಲು ಬಹಳ ಶುಭ ದಿನವಾಗಿದೆ.
ಆಷಾಢ ಅಮಾವಾಸ್ಯೆ ಮುಹೂರ್ತ:
ಅಮಾವಾಸ್ಯೆ ತಿಥಿ ಜುಲೈ 9 ರಂದು ಬೆಳಿಗ್ಗೆ 05:16 ರಿಂದ ಪ್ರಾರಂಭವಾಗಲಿದ್ದು, ಜುಲೈ 10 ರಂದು ಬೆಳಿಗ್ಗೆ 06:46 ಕ್ಕೆ ಕೊನೆಗೊಳ್ಳಲಿದೆ.
ಅಮಾವಾಸ್ಯೆ ಪೂಜಾ ವಿಧಾನ:
ಅಮಾವಾಸ್ಯೆಯ ದಿನದಂದು ಮುಂಜಾನೆ ಬೇಗ ಎದ್ದೇಳಿ.
ಈ ದಿನ, ಬ್ರಾಹ್ಮಿ ಮುಹೂರ್ತ ಸಮಯದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ.
ಸೂರ್ಯೋದಯವಾಗುವಾಗ ಸೂರ್ಯದೇವನಿಗೆ ನೀರನ್ನು ಅರ್ಪಿಸಿ.
ಈ ದಿನ ನಿಮ್ಮ ಪೂರ್ವಜರ ಆತ್ಮ ಶಾಂತಿಗಾಗಿ ಪೂಜೆಗಳನ್ನು ಮಾಡಿ.
ಪೂರ್ವಜರ ಆತ್ಮಗಳ ಶಾಂತಿಗಾಗಿ ಉಪವಾಸವಿರಿ.
ಅಗತ್ಯವಿರುವವರಿಗೆ ದಾನ ಮಾಡಿ.
ಬ್ರಾಹ್ಮಣರಿಗೆ ಆಹಾರವನ್ನು ನೀಡಿ.
ಆಷಾಢ ಅಮಾವಾಸ್ಯೆಯ ಮಹತ್ವ:
ಧರ್ಮಗ್ರಂಥಗಳಲ್ಲಿ ಈ ದಿನ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಈ ದಿನ ಅನೇಕ ಶುಭ ಆಚರಣೆಗಳನ್ನು ನಡೆಸಲಾಗುತ್ತದೆ. ಅನೇಕರು ತಮ್ಮ ಪೂರ್ವಜರನ್ನು ಮೆಚ್ಚಿಸಲು ಅಮಾವಾಸ್ಯೆ ತಿಥಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೆ. ಈ ದಿನ, ಪಿತ್ರ ತರ್ಪಣ, ನದಿ ಸ್ನಾನ ಮತ್ತು ದಾನ ಇತ್ಯಾದಿಗಳನ್ನು ಮಾಡುವುದು ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಇದು ಮಾತ್ರವಲ್ಲ, ಈ ದಿನಾಂಕವನ್ನು ಪಿತೃ ದೋಷ ತೊಡೆದುಹಾಕಲು ಸಹಾಯಕವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿನಾಂಕವನ್ನು ಪಿತೃ ಕರ್ಮಕ್ಕೆ ಬಹಳ ಶುಭವೆಂದು ಪರಿಗಣಿಸಲಾಗಿದೆ.