Just In
Don't Miss
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರು ಬಸವನಗುಡಿಯಲ್ಲಿ ಸ್ಪೆಷಲ್ ಸಂಕ್ರಾಂತಿ
ಸಾಮಾನ್ಯಕ್ಕೆ, ಬಸವನಗುಡಿ ಅಂತ ಯಾಕೆ ಹೆಸರು ಇಡ್ತಾರಪ್ಪಾ ಅಂದರೆ ಅದಕ್ಕೂ ಮುನ್ನ... ಹುಟ್ಟಿಸಿದ ದೇವರು ಹುಲ್ಲು ಮೇಯಿಸೋಲ್ವಾ ಎಂದು ಬದುಕು ಕಟ್ಟಿಕೊಳ್ಳಲು 20 ವರ್ಷಗಳ ಹಿಂದೆ ಬೆಂಗಳೂರಿನ ಬಸವನಗುಡಿಗೆ ಬಂದೆ. ಆಗ ಬಸವನಗುಡಿ ಬಡಾವಣೆಗೆ ಪ್ರದಕ್ಷಿಣೆ ಹಾಕಿದಾಗ ದಾರಿಯುದ್ದಕ್ಕೂ 'ಬಸವನಗುಡಿಗೆ ಯಾಕೆ ಈ ಹೆಸರು ಬಂತು' ಎಂಬ ಪ್ರಶ್ನೆ ನನಗೆ ಸಾಥ್ ನೀಡಿತ್ತು.
ಆಮೇಲೆ ಅನಿಸಿದ್ದು, ಬೆಂಗಳೂರಿನ ಈ ಬಡಾವಣೆಗೆ ಬಸವನಗುಡಿ ಎಷ್ಟು ಅರ್ಥಪೂರ್ಣವಾಗಿದೆ ಎಂದು! ಏಕೆಂದರೆ ಎಲ್ಲೆಂದರಲ್ಲಿ, ಹೌದು ನಡುರಸ್ತೆಗಳಲ್ಲೂ ನಡುಚಾಚಿ ಮಲಗಿರುವ ಗೋವುಗಳನ್ನು ಕಂಡಾಗ ನಿಜಕ್ಕೂ ನನ್ನ ಹಳ್ಳಿ ವಾತಾವರಣ ನೆನಪಿಗೆ ಬಂದಿತ್ತು.
ಆಮೇಲಾಮೇಲೆ ಕಾಲ ಬದಲಾಗುತ್ತಾ ಬಂತು. ಅದೇನೋ Y2K ಅಂತ ಬಂದಮೇಲಿನ ಕಾಲಘಟ್ಟದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಪರಿವರ್ತನೆಯಾಗಿದ್ದೇ ಬಂತು, ಅದುವರೆಗೂ ಬಸವನಗುಡಿಯ ಕಾಲಬುಡಲದಲ್ಲಿ ಮಲಗಿದ್ದ ಜಾನುವಾರು ಸಂತತಿಗೆ ಸಾಫ್ಟ್ ವೇರುಗಳ ಬೈಕು, ಕಾರು ಬಾರಿನ ಆರ್ಭಟದಲ್ಲಿ ಗರಬಡಿದಂತಾಯಿತು.
ಬಸವನಗುಡಿ ಆಸುಪಾಸು ಹೊಲಗದ್ದೆಗಳು ಇದ್ದವಂತೆ. ಇಲ್ಲಿ ಗೌಳಿಗರು ಹೆಚ್ಚಾಗಿ ನೆಲೆಸಿದ್ದರಂತೆ. ಇಲ್ಲಿದ್ದ ಜನಸಂಖ್ಯೆಯಷ್ಟೇ ಹಸು-ಕರು ಎತ್ತುಗಳು ಇದ್ದವಂತೆ. ಇಲ್ಲಿ ಸಂಕ್ರಾಂತಿ ಊರಹಬ್ಬವಾಗಿ ನಡೆಯುತ್ತಿತ್ತು. ಕಡಲೆಕಾಯಿ ಪರಿಶೆಗಿಂತ ಜೋರಾಗಿ ಜನ ಸೇರುತ್ತಿದ್ದರಂತೆ ಎಂಬುದೆಲ್ಲ ಕಾಲಗರ್ಭದಲ್ಲಿ ಅಡಗಿಹೋಗಿದೆ.
ಆದರೂ ದೊಡ್ಡಗಣಪತಿ ದೇವಸ್ಥಾನದ ಬಂಡೆಬಸವ ಇದಕ್ಕೆ ಮೂಕ ಸಾಕ್ಷಿಯಾಗಿ ತಳವೂರಿರುವುದರಿಂದ ಬಸವನಗುಡಿಯಲ್ಲಿ ಸಂಕ್ರಾಂತಿ ಸಂಭ್ರಮವನ್ನು ಇನ್ನೂ ಕಾಣಬಹುದಾಗಿದೆ. ಮನೆಸಂಪ್ರದಾಯ, ಊರಸಂಪ್ರದಾಯ ಎಂದು ಇಲ್ಲಿನ ಗೋಪಾಲಕರು ಈಗಲೂ ತಮ್ಮ ಜಾನುವಾರುಗಳನ್ನು ಸಿಂಗರಿಸಿ, ಸಂಭ್ರಮಿಸುವುದುಂಟು.
ಸಿಂಗರಿಸಿದ ಎತ್ತುಗಳನ್ನು ಒಂದಷ್ಟು ಮೆರವಣಿಗೆ ಮಾಡಿಸಿ, ಮೈದಾನದಲ್ಲಿ ಹಾಕಿರುವ ಕಿಚ್ಚಿನ ಮೇಲೆ ಅವುಗಳನ್ನು ಹಾಯಿಸುವುದೂ ಉಂಟು. ನಶಿಸುತ್ತಿರುವ ಈ ಸಂಪ್ರದಾಯಕ್ಕೆ ಸಾಕ್ಷಿಯಾಗಲು ಈ ಬಾರಿಯಾದರೂ ಬಸವನಗುಡಿ ನೆಟ್ಟಕಲ್ಲಪ್ಪ ಸರ್ಕಲಿಗೆ ಜನವರಿ 14ರಂದು ಬರುತ್ತೀರಲ್ವೇ?