Just In
- 59 min ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 1 hr ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 4 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
Don't Miss
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Shravan Shukravar Vrat : ಶ್ರಾವಣ ಶುಕ್ರವಾರ: ಸಂಪತ್ತು ವೃದ್ಧಿಗಾಗಿ ಪೂಜಾ ವಿಧಿಗಳು ಹಾಗೂ ಮಹತ್ವ
ಶ್ರಾವಣ ಶುಕ್ರವಾರವನ್ನು ಸಂಪತ್ತಿನ ಶುಕ್ರವಾರ ಎಂದು ಕೂಡ ಕರೆಯುತ್ತಾರೆ. ಶ್ರಾವಣ ಮಾಸದ ಎಲ್ಲಾ ಶುಕ್ರವಾರ ಲಕ್ಷ್ಮಿ ದೇವಿ ಅಥವಾ ಗೌರಿ ದೇವಿಯನ್ನು ಪೂಜಿಸಲಾಗುವುದು.
ಶ್ರಾವಣ ಶುಕ್ರವಾರ ವ್ರತವನ್ನು ಮುತ್ತೈದೆಯರು ಮಾಡುತ್ತಾರೆ. ಈ ವ್ರತ ಮಾಡುವುದರಿಂದ ಗಂಡನ ಆಯುಸ್ಸು ಹೆಚ್ಚುವುದು ಹಾಗೂ ಲಕ್ಷ್ಮಿಯ ಕೃಪೆಯಿಂದ ಸಂಪತ್ತು ಕೂಡ ವೃದ್ಧಿಯಾಗುವುದು.
ಶ್ರಾವಣ ಶುಕ್ರವಾರವನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಆಚರಿಸಲಾಗುವುದು.
ಶ್ರಾವಣ ಶುಕ್ರವಾರದ ದಿನಾಂಕಗಳು 2021
ಆಗಸ್ಟ್ 13, 2021
ಆಗಸ್ಟ್ 20, 2021,
ಆಗಸ್ಟ್ 27, 2021
ಸೆಪ್ಟೆಂಬರ್ 3, 2021
ಲಕ್ಷ್ಮಿ ಪೂಜೆಗೆ ಶುಭ ಸಮಯ
ಆಗಸ್ಟ್ 13, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:59ರಿಂದ ಮಧ್ಯಾಹ್ನ 12:50
ಅಮೃತ ಕಾಲ: ಮಧ್ಯಾಹ್ನ 12:49ರಿಂದ ರಾತ್ರಿನ 02:21ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06: 29ರಿಂದ 06:53ರವರೆಗೆ
ಆಗಸ್ಟ್ 20, 2021,
ಅಭಿಜಿತ್ ಮುಹೂರ್ತ 11:58ರಿಂದ 12:48ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06:25ರಿಂದ 06:49ರವರೆಗೆ
ಅಮೃತ ಕಾಲ: ಮಧ್ಯಾಹ್ನ 03:21ರಿಂದ ಸಂಜೆ 04:52ರವರೆಗೆ
ಆಗಸ್ಟ್ 27, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:56ರಿಂದ ಮಧ್ಯಾಹ್ನ 12:46ರವೆರೆಗೆ
ಗೋಧೂಳಿ ಮುಹೂರ್ತ: ಸಂಜೆ 06:21ರಿಂದ 06:45ರವರೆಗೆ
ಅಮೃತ ಕಾಲ: ಸಂಜೆ 04:54ರಿಂದ 06:39ರವರೆಗೆ
ಸೆಪ್ಟೆಂಬರ್ 3, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:54ರಿಂದ ಮಧ್ಯಾಹ್ನ 12:44ರವರೆಗೆ
ಗೋಧೂಳಿ ಮುಹೂರ್ತ: ಸಂಜೆ 06:17ರಿಂದ 06:41ರವೆರೆಗ
ಅಮೃತ ಕಾಲ: ಮಧ್ಯಾಹ್ನ 02:08ರಿಂದ 03:51ರವರೆಗೆ
ಶ್ರಾವಣ ಶುಕ್ರವಾರ ಪೂಜೆ ವಿಧಿ-ವಿಧಾನ
* ಬೆಳಗ್ಗೆ ಎದ್ದು ಎಣ್ಣೆ ಸ್ನಾನ ಮಾಡಬೇಕು
* ಬೆಳ್ಳಿ ಅಥವಾ ತಾಮ್ರದ 5 ಗಡಿಗೆ ತೆಗೆದು ಅದರಲ್ಲು ಶಂಖ, ಚಕ್ರ, ಎರಡು ಲಕ್ಷ್ಮಿಯ ಚಿತ್ರ, ಹಸು ಹಾಗೂ ಕರುವಿನ ಚಿತ್ರ, ಆನೆಯ ಚಿತ್ರ ಬಿಡಿಸಬೇಕು.
* ಗಡಿಗೆಯ ಮುಚ್ಚಳದ ಮೇಲೆ ಹೂವಿನ ಚಿತ್ರ ಬಿಡಿಸಿ, ಇದನ್ನು ಸಂಪತ್ತು ಗೌರಿ ಗಡಿಗೆಯೆಂದು ಹೇಳಲಾಗುವುದು.
* ನೀವು ಪ್ರತೀ ಗಡಿಕೆಯಲ್ಲಿ ಅಕ್ಕಿ, ಅರಿಶಿಣ ಕೊಂಬು, ಡ್ರೈ ಫ್ರೂಟ್ಸ್, ವೀಳ್ಯೆದೆಲೆ, ಅಡಿಕೆ ಇಟ್ಟು ಅವುಗಳನ್ನು ಪೂಜಾ ಸ್ಥಾನದಲ್ಲಿ ಇಡಿ.
* ಹಿಟ್ಟಿನಿಂದ ಹಣತೆಯನ್ನು ಮಾಡಿ ತುಪ್ಪದ ದೀಪ ಹಚ್ಚಿ.
* ಈಗ ನೀವು ಲಕ್ಷ್ಮಿ ಮಂತ್ರ ಅಥವಾ ಹಾಡುಗಳನ್ನು ಹೇಳುತ್ತಾ ಅವಳನ್ನು ಗಡಿಗೆಗೆ ಆಹ್ವಾನಿಸಿ, ಗಡಿಗೆಗೆ ಕಮಲದ ಹೂ, ಹೂ, ಹಣ್ಣುಗಳನ್ನು ಅರ್ಪಿಸಿ.
* ಲಕ್ಷ್ಮಿ ಮಂತ್ರಗಳನ್ನು ಹೇಳುತ್ತಾ ಮಂತ್ರಗಳನ್ನು ಪಠಿಸಿ.
* ನಂತರ ಮನೆಗೆ ಸುಮಂಗಲಿರನ್ನು ಕರೆದು ತಾಂಬೂಲ ನೀಡಿ.
ಲಕ್ಷ್ಮಿ ಮಂತ್ರ
"ಓಂ ಹ್ರೀಮ್ ಶ್ರೀಮ್ ಕ್ಲೀಮ್ ಮಹಾಲಕ್ಷ್ಮಿ ನಮಃ"