Just In
- 1 hr ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 3 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 4 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 6 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
Don't Miss
- News ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
- Movies Seetha Raama: ಸಿಹಿ ಹುಟ್ಟಿನ ರಹಸ್ಯ ರಾಮನಿಗೆ ತಿಳಿಯುತ್ತಾ? ಭಾರ್ಗವಿಯ ಆಟ ಶುರು
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆಗೆ ಸಮಸ್ಯೆಯಿದ್ದರೆ ಕಾತ್ಯಾಯಿನಿ ದೇವಿಯನ್ನು ಪೂಜಿಸಿ, ಕಂಕಣ ಭಾಗ್ಯ ಕೂಡಿ ಬರುವುದು
ಸೆಪ್ಟೆಂಬರ್16ರಿಂದ ಕ್ಟೋಬರ್ 5ರವೆರೆಗ ನವರಾತ್ರಿ ಹಬ್ಬವನ್ನು ಭಕ್ತರು ಆಚರಿಸುತ್ತಿದ್ದು ಈ ಸಮಯದಲ್ಲಿ ವಿಶೇಷವಾಗಿ ದುರ್ಗೆಯ ಆರಾಧನೆಯನ್ನು ಮಾಡಲಾಗುತ್ತದೆ. ದೇವಿಯು ಒಂಭತ್ತು ರೂಪಗಳನ್ನು ತಾಳಿ ತಮ್ಮ ಭಕ್ತರನ್ನು ರಕ್ಷಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ನವರಾತ್ರಿಯ ಸಮಯದಲ್ಲಿ ದೇವಿ ಹೆಚ್ಚು ಪ್ರಸನ್ನರಾಗಿರುತ್ತಾರೆ. ಮತ್ತು ಈ ಪ್ರಸನ್ನತೆಯ ಮೂಲಕ ದೇವಿಯು ಭಕ್ತರ ಕಷ್ಟವನ್ನು ದೂರ ಮಾಡುತ್ತಾರೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಪದ್ಧತಿಯಾಗಿದೆ.
ನವರಾತ್ರಿಯ ಒಂಬತ್ತು ದಿನಗಳು ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಭಕ್ತರ ಜೀವನದಲ್ಲಿರುವ ಸಂಕಷ್ಟಗಳನ್ನು ಆದಿ ಶಕ್ತಿ ನಿವಾರಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅಂತೆಯೇ ದೇವಿಯ ಈ ಒಂಭತ್ತು ರೂಪಗಳಲ್ಲಿ ಒಂದು ಶಕ್ತಿಯು ಮದುವೆಗೆ ತಡೆಹಿಡಿಯಲಾಗಿರುವ ಎಲ್ಲಾ ರೀತಿಯ ಸಂಕಷ್ಟಗಳನ್ನು ನಿವಾರಿಸುತ್ತದೆ. ಮಂಗಳಿಕ ದೋಷದಂತಹ ದೋಷವನ್ನು ಶಕ್ತಿಯು ನಿವಾರಿಸುತ್ತಾರೆ. ಕಾತ್ಯಾಯಿನಿ ದೇವಿಯನ್ನು ಪೂಜಿಸುವುದರಿಂದ ಮದುವೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
ಕಾತ್ಯಾಯನನ ಪುತ್ರಿಯಾಗಿರುವ ಕಾತ್ಯಾಯಿನಿಯ ರೂಪದಲ್ಲಿ ದುರ್ಗೆಯು ಧರೆಯಲ್ಲಿ ಪ್ರತ್ಯಕ್ಷಗೊಂಡರು ಆದ್ದರಿಂದ ಅವರಿಗೆ ಕಾತ್ಯಾಯಿನಿ ಎಂಬ ಹೆಸರು ಇದೆ. ತನ್ನ ಎಡಗೈಯಲ್ಲಿ ತಾವರೆ ಮತ್ತು ಕೆಳಗಿನ ಎಡಗೈಯಲ್ಲಿ ಕತ್ತಿಯನ್ನು ಬಲಗೈಯಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹಿಡಿದುಕೊಂಡಿದ್ದಾರೆ. ಹಳದಿ ಬಣ್ಣದ ಸೀರೆಯನ್ನು ಉಟ್ಟು ಸಿಂಹದ ಮೇಲೆ ಅವರು ಕುಳಿತಿದ್ದಾರೆ.
ಕಾತ್ಯಾಯಿನಿ ಮಾತೆಯನ್ನು ಪೂಜಿಸುವುದರಿಂದ ದೊರೆಯುವ ಪ್ರಯೋಜನಗಳೇನು
ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಯನ್ನು ನೆಲೆಗೊಳಿಸುವುದಕ್ಕಾಗಿ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಮದುವೆಗೆ ಸಂಬಂಧಿಸಿದಂತೆ ವ್ಯಕ್ತಿಯು ಸಮಸ್ಯೆಗಳನ್ನು ಹೊಂದಿದ್ದರೆ ಕಾತ್ಯಾಯಿನಿ ಮಾತೆಯನ್ನು ಪೂಜಿಸಿ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಮದುವೆ ಕಾರ್ಯದಲ್ಲಿ ವಿಳಂಬ, ಗಂಡ ಹೆಂಡಿರ ನಡುವೆ ಆಗಾಗ್ಗೆ ಜಗಳಗಳುಂಟಾಗುವುದು, ಅಂತೆಯೇ ಸೂಕ್ತ ಪಾಲುದಾರರನ್ನು ಹೊಂದಲು ಸಮಸ್ಯೆ ಇರುವುದು ಇತ್ಯಾದಿ. ನವರಾತ್ರಿ ಸಮಯದಲ್ಲಿ ವೃತವನ್ನು ಆಚರಿಸುವುದರ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಕಾತ್ಯಾಯಿನಿ ಮಾತೆಯನ್ನು ಶಕ್ತಿ ಸ್ಥೈರ್ಯದ ದೇವತೆ ಎಂದೂ ಕೂಡ ಕರೆಯುತ್ತಾರೆ. ಭಯವನ್ನು ಹೋಗಲಾಡಿಸುವಲ್ಲಿ ಕೂಡ ಕಾತ್ಯಾಯಿನಿ ಮಾತೆ ಪೂಜನೀಯವಾಗಿದ್ದಾರೆ.
12 ನೇ ಮನೆಯಲ್ಲಿ ನೆಲೆಗೊಂಡಿರುವ ಕಾತ್ಯಾಯಿನಿ ಮಾತೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ದೇವಿಯು ಜನ್ಮ ಕುಂಡಲಿಯಲ್ಲಿ ಗುರುವಿನೊಂದಿಗೆ ಸಹಯೋಗವನ್ನು ಹೊಂದಿದ್ದಾರೆ. "ಬ್ರಹ್ಮಮಂಡಲದ ಆದಿಶ್ರಷ್ಟಿ ದೇವಿ' ಎಂಬ ಹೆಸರೂ ದೇವಿಗಿದೆ. ಗೋಕುಲದಲ್ಲಿರುವ ಮಹಿಳೆಯರು ಕೃಷ್ಣನ ಪ್ರೀತಿಯನ್ನು ಪಡೆಯುವುದಕ್ಕಾಗಿ ದೇವಿಗೆ ಪೂಜೆಯನ್ನು ಅರ್ಪಿಸುತ್ತಿದ್ದರು. ಭಾಗವತ್ ಪುರಾಣದಲ್ಲಿ ತಿಳಿಸಿರುವಂತೆ ಮಾತೆ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ದೇವಿಗೆ ವ್ರತವನ್ನು ಮಾಡಿ ಪೂಜೆಯನ್ನು ಸಲ್ಲಿಸುವಾಗ ಶ್ರೀಗಂಧ, ಹೂವುಗಳು ಮತ್ತು ಗಂಧದ ಕಡ್ಡಿಯನ್ನು ಅರ್ಪಿಸುತ್ತಿದ್ದರು.
Most Read:ಈ ವರ್ಷದ ನವರಾತ್ರಿ ಯಾಕೆ ಇಷ್ಟೊಂದು ಮಂಗಳಕರ ಗೊತ್ತೇ? ಇಲ್ಲಿದೆ ಕಾರಣಗಳು
ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ
ಕಾತ್ಯಾಯಿನಿ ಮಹಾಮಯಾ ಮಹಾಯೋಗಿಯಾಯತಿಶ್ವರಿ
ನಂದ ಗೋಪಾಶೂತನ್ ದೇವಿ ಪತಿಯಾಮ್ ಮಿ ನಮ ಕುರುಟೆ
ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ
ಓಂ ಹ್ರಿಂಗ್ ಕಾತ್ಯಾಯಿನಿಯೇ ಸ್ವಾಹಾ, ಹ್ರಿಂಗ್ ಶ್ರಿಂಗ್ ಕಾತ್ಯಾಯನಿಯೇ ಸ್ವಾಹಾ
ಶೀಘ್ರ ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ
ಓಂ ಕಾತ್ಯಾಯಿನಿ ಮಾಹಾಮಾಯೆ, ಮಹಾಯೋಗಿನಿಅದೀಶ್ವರಿ
ನಂದ ಗೋಪಸ್ತುತ ದೇವಿ ಪಾತಿಮ್ ಮೆ ಕುರು ತೆ ನಮಃ
Most Read:ನಿಮಗೆ ತಿಳಿದಿರಲೇಬೇಕಾದ ಅತಿ ಶಕ್ತಿಯುತ ನಾಲ್ಕು 'ದುರ್ಗಾ ಮಂತ್ರಗಳು'
ವಿವಾಹ ವಿಳಂಬವಾಗುತ್ತಿದ್ದರೆ ಮಾ ಕಾತ್ಯಾಯಿನಿ ಮಂತ್ರ
ಹೇ ಗೌರಿ ಶಂಕರ ಅರ್ಧಾಂಗಿ ಯತ ತವಾಮ್ ಶಂಕರ ಪ್ರಿಯ
ತಥ ಮಾ ಕುರು ಕಲ್ಯಾಣಿ ಕಂಟಕಮ್ ಸುದುರ್ಲಭಮ್
ವಿಘ್ನಗಳಿಲ್ಲದ ವಿವಾಹಕ್ಕಾಗಿ
ಹೇ ಗೌರಿ ಶಂಕರ ಅರ್ಧಾಂಗಿ ಯತ ತವಾಮ್ ಶಂಕರ ಪ್ರಿಯ
ತಥ ಮಾ ಕುರು ಕಲ್ಯಾಣಿ ಕಂಟಕಮ್ ಸುದುರ್ಲಭಮ್
ವಿವಾಹ ಕಾರ್ಯ ವಿಳಂಬವಾಗುತ್ತಿದ್ದರೆ ಕಾತ್ಯಾಯಿನಿ ಸೂರ್ಯ ಮಂತ್ರ
ಓಂ ದೇವೇಂದ್ರಾನಿ ನಮಸ್ತುಭ್ಯಮ್ ದೇವೇಂದ್ರಪ್ರಿಯ ಭಾಮಿನಿ
ವಿವಾಹಮ್ ಭಾಗ್ಯಮ್ ಆರೋಗ್ಯಮ್ ಶೀಘ್ರ ಲಾಭಮ್ ಚ ದೇಹಿ ಮಿ
ಇಚ್ಛೆ ಪಟ್ಟ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಪಡೆಯಲು
ಓಂ ದೇವೇಂದ್ರಾನಿ ನಮಸ್ತುಭ್ಯಮ್ ದೇವೇಂದ್ರಪ್ರಿಯ ಭಾಮಿನಿ
ವಿವಾಹಮ್ ಭಾಗ್ಯಮ್ ಆರೋಗ್ಯಮ್ ಶೀಘ್ರ ಲಾಭಮ್ ಚ ದೇಹಿ ಮಿ
ಶುಭಕರವಾದ ವೈವಾಹಿಕ ಜೀವನಕ್ಕಾಗಿ
ಓಂ ಶಂಘ್ ಶಂಕರಾಯ ಸಕಲ ಜನ್ಮಾರ್ಜಿತಾ ಪಾಪ ವಿಧ್ವಂಸನಾಯೆ
ಪುರುಷಾರ್ಥ ಚತುಸ್ತೆ ಲಾಭಾಯ ಚ ಪಾತಿಮ್ ಮೆ ದೇಹಿ ಕುರು ಕುರು ಸ್ವಾಹಾ